Skip to main content

Posts

Showing posts from July, 2020

ಗಟಾರಿ ಅಮಾವಾಸ್ಯೆ ಎಂದು ಮರಾಠಿ ಬಾಷಿಗರು ಕರೆಯುವ ಈ ಭೀಮನ ಅಮಾವಾಸ್ಯೆ ಗಟಾರ್ ಅಮಾವಾಸ್ಯೆ ಆಗಿದ ಕಥೆ ಸ್ವಾರಸ್ಯವಿದೆ.

#ಮಹಾರಾಷ್ಟ್ರದಲ್ಲಿ_ಬೀಮನಅಮವಾಸ್ಯೆ_ಗಟಾರ್_ಆಮವಾಸ್ಯೆ_ಏಕೆ?    ನಾಳೆ ಸೋಮವಾರ (20-ಜುಲೈ-2020)ಆಷಾಡದ ಕೊನೆ ದಿನ ಅಮವಾಸ್ಯೆ. ಈ ಅಮವಾಸ್ಯೆಗೆ ಭೀಮನ ಅಮವಾಸ್ಯೆ ಅಂತ ಹೆಸರಿದೆ, ನಾಡಿದ್ದು ಮಂಗಳವಾರದಿಂದ ಶ್ರಾವಣ ಮಾಸ ಪ್ರಾರಂಭ.   ಶಿವನ ಆರಾದನೆಗಾಗಿ ಇಡೀ ಒಂದು ತಿಂಗಳು ಮಹಾರಾಷ್ಟ್ರಿಯನ್ನರು ಸಸ್ಯಹಾರ ಮಾತ್ರ ಸೇವಿಸುವುದು, ದಿನಕ್ಕೆ ಒ0ದೇ ಊಟ, ದೇವಾಲಯ ದಶ೯ನ ಪೂಜೆ ಹೀಗೆ ಸಾತ್ವಿಕ ಆಹಾರ ಆಚರಣೆ ಕಡ್ಡಾಯ.   ಮಾಂಸ ಹಾರ ಮತ್ತು ಮಧ್ಯಪಾನ ಕೂಡ ನಿಶೇದವಿದೆ ಹಾಗಾಗಿ ಶ್ರಾವಣ ಪ್ರಾರಂಭದ ಹಿಂದಿನ ದಿನ ಮಾಂಸಹಾರಿಗಳಿಗೆ ಮತ್ತು ಮಧ್ಯಪಾನಿಗಳಿಗೆ ಫುಲ್ ಪ್ರೀಡಂ ಯಾಕೆಂದರೆ ಒಂದು ತಿಂಗಳು ಗೌರಿ ಗಣೇಶನ ಹಬ್ಬದ ತನಕ ಇವುಗಳನ್ನು ಮುಟ್ಟುವಂತಿಲ್ಲ.   ಶ್ರಾವಣ ಪ್ರಾರಂಭದ ಹಿಂದಿನ ದಿನದ ಅಮವಾಸ್ಯೆ ಇಡೀ ಮಹಾರಾಷ್ಟ್ರದಲ್ಲಿ ತಡ ರಾತ್ರಿ ತನಕ ಮೋಜು ಮಸ್ತಿಯ ಕಾಲ ಆಗಿರುತ್ತದೆ ಹಾಗಾಗಿ ಹೆಚ್ಚು ಕುಡಿದು ತಿಂದು ಕೆಲವರು ಪ್ಲಾಟ್ ಆಗಿ ಗಟಾರದಲ್ಲಿ ಬೀಳುವುದರಿಂದ ಈ ಅಮವಾಸ್ಯೆಗೆ ಗಟಾರ್ ಅಮಾವಾಸ್ಯೆ ಅಥವ ಮರಾಠಿಗರ ಬಾಯಲ್ಲಿ ಗಟಾರಿ ಅಮಾವಾಸ್ಯೆ ಆಗಿದೆ.   ಈ ವರ್ಷ ಮಹಾರಾಷ್ಟ್ರದಲ್ಲಿ ಕೊರಾನಾ ವಿಪರೀತ ಹಾವಳಿಯಿಂದ ಜನ ಹೋಟೆಲ್/ಬಾರ್ ತೆರೆಯದರಿಂದ ಮನೇನಲ್ಲೇ ಆಚಾರಿಸಬೇಕಾಗಿದೆ ಹಾಗಾಗಿ ಗಟಾರ್ ದಲ್ಲಿ ಬೀಳುವ ಸಂಭವ ಕಡಿಮೆ.   ಇನ್ನೊಂದು ವಿಶೇಷ ಅಂದರೆ ಈ ವರ್ಷ ಗಟಾರ್ ಅಮಾವಸ್ಯೆ 20 ನೇ ತಾರೀಖು ಸೋಮವಾರ ಆದರೂ ಮಹಾರಾಷ್ಟ್ರಿಯನ್ನರ

ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಏನಿಲ್ಲ? ಏನಿದೆ? ಆದರೆ ಅದನ್ನೆಲ್ಲ ಬಿಟ್ಟು ಪಾಸ್ಟ್ ಪುಡ್ ಕಡೆ ಮುಖ ಮಾಡುವ ನಮ್ಮ ಯುವ ಜನಾ೦ಗ ಬದಲಾಗಬೇಕು, ಮಲೆನಾಡ ಆರೋಗ್ಯಕರ ರುಚಿಕರ ಮತ್ತು ಮಿತವ್ಯಯದ ಮಲೆನಾಡ ಸಾಂಪ್ರದಾಯಿಕ ಆಹಾರ ತಯಾರಿ ಮತ್ತು ಬಳಕೆ ಹೆಚ್ಚು ಮಾಡಬೇಕು.

#ಸಬ್ಬಸ್ಸಿಗೆ_ಸೊಪ್ಪಿನ_ಅಕ್ಕಿ_ರೊಟ್ಟಿ_ಬದನೆಕಾಯಿ_ಎಣ್ಣೆಗಾಯಿ_ಎಮ್ಮೆ_ಬೆಣ್ಣೆ    ಇದು ಯಾವ ಪಿಜ್ಜಾಗೆ ಕಡಿಮೆ? ಮನೇನಲ್ಲೆ ತಯಾರಿಸಿ ತಿನ್ನಬಹುದಾದ ರುಚಿಕರ ಉಟೋಪಚಾರ ನೂರಾರು ಇದೆ ಆದರೆ ತಯಾರಿಸುವ ಮನಸ್ಸು ತಾಳ್ಮೆ ಮನೆಯೊಡತಿಯರಿಗೆ ಇರಬೇಕು ಮತ್ತು ಮಾಡಿದ್ದನ್ನ ಸವಿಯುವ ಮನೆ ಮಂದಿಯ ಪ್ರೋತ್ಸಾಹವೂ ಬೇಕು.   ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಆರೋಗ್ಯಕರವಾದ, ಕಲಬೆರಕೆ ಇಲ್ಲದ ರಾಸಾಯನಿಕ ಬಣ್ಣ ಹಾಕದ ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ ಅಕ್ಕಿ ರೊಟ್ಟಿಯಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿಸಲು ಸಾಧ್ಯವಿದೆ.   ಇವತ್ತಿನ ನನ್ನ ಬೆಳಗಿನ ಉಪಹಾರ ಇದು.

ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಏನಿಲ್ಲ? ಏನಿದೆ? ಆದರೆ ಅದನ್ನೆಲ್ಲ ಬಿಟ್ಟು ಪಾಸ್ಟ್ ಪುಡ್ ಕಡೆ ಮುಖ ಮಾಡುವ ನಮ್ಮ ಯುವ ಜನಾ೦ಗ ಬದಲಾಗಬೇಕು, ಮಲೆನಾಡ ಆರೋಗ್ಯಕರ ರುಚಿಕರ ಮತ್ತು ಮಿತವ್ಯಯದ ಮಲೆನಾಡ ಸಾಂಪ್ರದಾಯಿಕ ಆಹಾರ ತಯಾರಿ ಮತ್ತು ಬಳಕೆ ಹೆಚ್ಚು ಮಾಡಬೇಕು.

#ಸಬ್ಬಸ್ಸಿಗೆ_ಸೊಪ್ಪಿನ_ಅಕ್ಕಿ_ರೊಟ್ಟಿ_ಬದನೆಕಾಯಿ_ಎಣ್ಣೆಗಾಯಿ_ಎಮ್ಮೆ_ಬೆಣ್ಣೆ    ಇದು ಯಾವ ಪಿಜ್ಜಾಗೆ ಕಡಿಮೆ? ಮನೇನಲ್ಲೆ ತಯಾರಿಸಿ ತಿನ್ನಬಹುದಾದ ರುಚಿಕರ ಉಟೋಪಚಾರ ನೂರಾರು ಇದೆ ಆದರೆ ತಯಾರಿಸುವ ಮನಸ್ಸು ತಾಳ್ಮೆ ಮನೆಯೊಡತಿಯರಿಗೆ ಇರಬೇಕು ಮತ್ತು ಮಾಡಿದ್ದನ್ನ ಸವಿಯುವ ಮನೆ ಮಂದಿಯ ಪ್ರೋತ್ಸಾಹವೂ ಬೇಕು.   ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಆರೋಗ್ಯಕರವಾದ, ಕಲಬೆರಕೆ ಇಲ್ಲದ ರಾಸಾಯನಿಕ ಬಣ್ಣ ಹಾಕದ ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ ಅಕ್ಕಿ ರೊಟ್ಟಿಯಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿಸಲು ಸಾಧ್ಯವಿದೆ.   ಇವತ್ತಿನ ನನ್ನ ಬೆಳಗಿನ ಉಪಹಾರ ಇದು.

ಕೊರಾನಾ ಲಾಕ್ ಡೌನ್ ಗಾಗಿ ತಾತ್ಕಾಲಿಕವಾಗಿ ಊರಿಗೆ ಮರಳುವವರಿಗೆ ಬೇಕಾಗಿದೆ ಆತ್ಮವಿಶ್ವಾಸದ ಬೆನ್ನು ತಟ್ಟುವ ಮಾತುಗಳು ಈಗ ಸಾಗರದ ಶಾಸಕರಾದ ಹರತಾಳು ಹಾಲಪ್ಪ ರ ಈ ಪತ್ರಿಕಾ ಹೇಳಿಕೆ ನಿಜಕ್ಕೂ ಹೃದಯಸ್ಪಷಿ೯.

#ಇಂತಹ_ಮಾತುಗಳೇ_ನಿರಾಸೆ_ಹೊಡೆದೋಡಿಸುವ_ಮತ್ತು_ಆತ್ಮವಿಶ್ವಾಸ_ಹೆಚ್ಚಿಸುವುದು #ಬೆಂಗಳೂರಿಂದ_ಬರುವವರಿಗೆ_ಹೃದಯಸ್ಪಷಿ೯_ಬೆಂಬಲ_ಸಹಕಾರ_ನೀಡಿದ_ಸಾಗರದ_ಶಾಸಕರಾದ_ಹರತಾಳುಹಾಲಪ್ಪನವರು    ಮಲೆನಾಡಿನಿಂದ ರಾಜಧಾನಿಗೆ ತಮ್ಮ ಭವಿಷ್ಯ ಹುಡುಕಿ ಹೋಗುವ ಯುವಕ/ಯುವತಿಯರೆಲ್ಲ ನಮ್ಮ ಸಹೋದರ ಸಹೋದರಿಯರೆ, ರೈತರು ಮತ್ತು ಕೃಷಿ ಕಾಮಿ೯ಕ ಕುಟುಂಬದವರೆ.   ಅವರೆಲ್ಲರ ಕನಸು ಹೆತ್ತವರಿಗೆ ಅಥಿ೯ಕ ಸಹಾಯ ಮಾಡಿ ಮನೆಯಲ್ಲಿನ ಕೃಷಿ ಅಭಿವೃದ್ದಿ, ಹೊಸ ಮನೆ ಕಟ್ಟುವುದು, ಸಹೋದರ / ಸಹೋದರಿಯರ ವಿದ್ಯಾಬ್ಯಾಸ ಅವರ ಮದುವೆ, ಮನೇನಲ್ಲಿ ಕಾಯಿಲೆ ಇದ್ದವರಿಗೆ ಚಿಕಿತ್ಸೆ, ಮನೆಯಲ್ಲಿ ಮಾಡಿದ ಬ್ಯಾಂಕ್ ಅಥವ ಖಾಸಾಗಿ ಸಾಲ ತೀರುಸುವುದು ಮತ್ತು ಹಳ್ಳಿಯಲ್ಲಿ ತಮ್ಮ ಕುಟುಂಬಕ್ಕೆ ಒಂದು ಐಡೆಂಟಿಟಿ ಸಿಗುವಂತೆ ಮಾಡುವುದು.    ಆದರೆ ಇದರಲ್ಲಿ ಎಷ್ಟು ಜನ ಯಶಸ್ವಿ ಆಗುತ್ತಾರೆ ಎನ್ನುವುದು ಅವರವರ ಪ್ರಯತ್ನ ಮತ್ತು ಅದೃಷ್ಟದ ಮೇಲೆ ಅವಲಂಬಿಸಿದೆ.   ಈಗ ಬಂದಿರುವ ಕೊರಾನಾ ಗಂಡಾಂತರದಿಂದ ಲಾಕ್ ಡೌನ್ ಗಳಿಂದ ಇಡಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿಮಾ೯ಣ ಆಗಿದೆ ಇದರಿಂದ ತಾತ್ಕಾಲಿಕವಾಗಿ ಇದು ನಿಯ೦ತ್ರಣಕ್ಕೆ ಬರುವಷ್ಟು ದಿನ ಊರಿಗೆ ಮರಳಿ ಕೃಷಿಯ ಈ ದಿನದಲ್ಲಿ ಮನೆಯವರಿಗೆ ಸಹಕಾರ ಮಾಡುವ ಉದ್ದೇಶ ಮತ್ತು ಮನೆಯವರ ಆತಂಕ ಕಡಿಮೆ ಮಾಡಲಿಕ್ಕಾಗಿ ಊರಿಗೆ ಮರಳುತ್ತಿದ್ದಾರೆ.    ಬೆಂಗಳೂರಿಂದ ಊರಿಗೆ ಬಂದವರು 14 ದಿನ ಸ್ವಯಂ ಕೊರಂಟೈನ್ ನಲ್ಲಿ ಇರಬೇಕು ಎಲ್ಲೂ ಓ

ಹಳ್ಳಿಯನ್ನ ಕೇಂದ್ರ ಮಾಡಿಕೊಂಡು ತಮ್ಮ ಸಂಸ್ಥೆಯ ವಾಹನದಲ್ಲಿ ಪ್ರಯಾಣ ಮಾಡುವ ಗ್ರಾಹಕರ ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್ ಪೇಟೆ ಶಿವಕುಮಾರ್ ಯಶಸ್ವಿ ಟೂರ್ಸ್ & ಟ್ರಾವೆಲ್ಸ್ ನ ಕಥನ

ಕೊರಾನಾ ಸಮಯದಲ್ಲಿ ಇಂತಹ ಪ್ರವಾಸಿ ವಾಹನ ಮಾತ್ರ ಸೂಕ್ತ     ಕೊರಾನಾ ವೈರಸ್ ಹರಡುವ ಈ ದಿನದಲ್ಲಿ  ಟ್ಯಾಕ್ಸಿ ಮತ್ತು ಬಸ್ ಗಳ ಪ್ರಯಾಣ ತುಂಬಾ ಅಪಾಯಕಾರಿ ಯಾಕೆಂದರೆ ವಾಹನ ಮಾಲಿಕರು ಸೋಪಿನಿಂದ ಕಾರಿನ ಹೊರಭಾಗ ತೊಳೆಯುತ್ತಾರೆ ಆದರೆ ದೀಘ೯ ಪ್ರಯಾಣ ಮಾಡಿದ ಒಳಬಾಗದ ಸೀಟ್ ಗಳು, ಡೋರ್ ಮತ್ತು ಒಳ ಮೇಲ್ಚಾವಣೆಗಳು ತೊಳೆಯಲು ಸಾಧ್ಯವಿಲ್ಲ ಆದರೆ ಅದನ್ನು ಡಿಸ್ ಇನ್ಪೆಕ್ಟ್ (ಸೊಂಕು ರಹಿತ) ಮಾಡ ಬಹುದು.   ಆದರೆ ಇದನ್ನ ಎಷ್ಟು ಜನ ಟ್ಯಾಕ್ಸಿ ಮಾಲಿಕರು ಮಾಡುತ್ತಾರೆ ಅಂತ ವಿಚಾರಿಸಿದರೆ ನಿಜಕ್ಕೂ ನಿರಾಶೆ ಆಗುತ್ತದೆ.    ಬಹಳ ಜನ ಟ್ಯಾಕ್ಸಿ ಮಾಲಿಕರು ಪ್ರತಿ ಟ್ರಿಪ್ ಹೋಗಿ ಬಂದ ಮೇಲೆ ತೊಳೆಯುತ್ತೇವೆ ಎನ್ನುತ್ತಾರೆ, ಒಳ ಭಾಗ ಹೇಗೆ ಅಂದರೆ ಸ್ಯಾನಿಟೈಸರ್ ಇಟ್ಟಿರುತ್ತೇವೆ ಅನ್ನುತ್ತಾರೆ ಆದರೆ ಇದು ಅನಾಹುತಕಾರಿ, ಆರೋಗ್ಯವಂತ ಪ್ರಯಾಣಿಕ ಇಂತಹ ಟ್ಯಾಕ್ಸಿ ಅಥವ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ (ಮೊದಲು ಯಾರಾದರ ರೋಗ ಪೀಡಿತರು ಪ್ರಯಾಣಿಸಿದ್ದರೆ) ಮಾತ್ರ ಕೊರಾನಾ ರೋಗ ಪೀಡಿತರಾಗುವುದರಲ್ಲಿ ಅನುಮಾನ ಇಲ್ಲ.    ಆರೋಗ್ಯ ಇಲಾಖೆ ದೃಡೀಕರಿಸಿದ ಪ್ರಕಾರ ಸೋಡಿಯಂ ಹೈಪೋಕ್ಲೋರೈಡ್ 1ರಿಂದ 2 ಶೇ. ಮಿಶ್ರಣ ದ್ರವ ಸಿಂಪರಣೆ ಮಾಡಬೇಕು ಅದು ಅದುನಿಕ ಕೋಲ್ಡ್ ಪಾಗರ್ ನಿಂದ ಸಿಂಪರಣೆ ಮಾಡಿದರೆ ಡಿಸ್ ಇನ್ಪೆಕ್ಟ್ 100% ಗ್ಯಾರಂಟಿ.   ಇದನ್ನು ಪ್ರತಿ ಬಸ್ ನವರೂ ಮಾಡಬೇಕು ಆದರೆ ಮಾಡುವವರು ತುಂಬಾ ಕಡಿಮೆ.   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲುಕಿನ ರಿಪ್

ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇವತ್ತಿಗೆ (13 -ಜುಲೈ-2020) ಎರೆಡು ಕೊರಾನಾ + Ve ದಾಖಲಾಗಿದೆ, ಎರೆಡು ಭಾಗದಲ್ಲಿ ಸೀಲ್ಡ್ ಡೌನ್ ಆಗಿದೆ ಈಗ ಜನ ಜಾಗೃತರಾಗುತ್ತಿದ್ದಾರೆ.

         ಕೊರಾನಾ ಎಲ್ಲಾ ಸುಳ್ಳು ಅಂತ ಮಾಸ್ಕ್ ಧರಿಸದ, ಅಂತರ ಕಾಯದೆ ಎಲ್ಲಿ ಬೇಕಲ್ಲಿ ಸುತ್ತುತ್ತಿದ್ದ ಶಿವಮೊಗ್ಗ ಜಿಲ್ಲೆಯ ಆನಂದಪುರಂ ನಮ್ಮ  ಊರಿನ ಜನರಿಗೆ ಪರಿಚಯಿಸಿ ಕೊಳ್ಳಲು ಕೊರಾನಾ ಈಗ ನಮ್ಮ ಊರಿಗೆ ಪ್ರವೇಶ ಮಾಡಿದೆ!?    ಕೇರಳ ಮೂಲದ  ಗೆಳೆಯ ಬೇಬಿ ಮಾಸ್ಕ್ ಹಾಕಿದ್ದ ನನ್ನ ನೋಡಿ ಗೇಲಿ ಮಾಡಿ ಕೋರಾನ ಗಿರಾನ ಎಲ್ಲಾ ಸುಳ್ಳು ಅಂತ ವಾದ ಮಾಡಿದ್ದ.    ರಿಪ್ಪನ್ ಪೇಟೆಯ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಾನು ಯಾವ ಕಾರಣದಲ್ಲೂ ಮಾಸ್ಕ್ ದರಿಸುವುದಿಲ್ಲ ಕೊರಾನಾ ಎಲ್ಲಾ ಸುಳ್ಳು ಸೃಷ್ಟಿ ಅಂದಿದ್ದರು.    ಶಿವಮೊಗ್ಗ ಸೊಮಿನಕೊಪ್ಪದ ಗ್ರಾನೈಟ್ ಸರಬರಾಜು ಸಾಹೇಬರು ಕೊರಾನಾ ಎಲ್ಲಾ ಸುಳ್ಳು ಅಂತನೆ ಪ್ರತಿಪಾದಿಸಿದ್ದರು.    ನಮ್ಮ ಕೆಲಸದವರು ಮತ್ತು ಪರಿಚಿತರು ನನ್ನ ಎದರು ಬರುವಾಗ ಮಾತ್ರ ಮಾಸ್ಕ್ ದರಿಸುತ್ತಿದ್ದರು (ನಾನು ಬೈಯುತ್ತೇನೆ ಅಂತ ).   ನಮ್ಮ ಊರ ಯಾವ ಅಂಗಡಿಯಲ್ಲೂ ಗಿರಾಕಿಗಳು ಅಂತರ ಕಾಪಾಡಲಿಲ್ಲ ಮಾಲಿಕರೂ ಒತ್ತಾಯಿಸಿಲ್ಲ, ಹಳ್ಳಿಗಳಲ್ಲಿ ಮದುವೆ ಹಬ್ಬ ಭರದಲ್ಲಿ ನಡೆದವು.    ನಮ್ಮ ಊರ ಯುವಕರು ದಾರಿಯಲ್ಲಿ ಸಿಕ್ಕವರಿಗೆ ಬೈಕ್ ಲ್ಲಿ ಡ್ರಾಪ್ ಮಾಡುವುದು, ಪರಸ್ಪರ ಅಪ್ಪಿಕೊಳ್ಳುವುದು ಎಲ್ಲಾ ಮಾಡುತ್ತಿದ್ದರು ಈಗ ನಮ್ಮ ಊರಲ್ಲಿ ಎರೆಡು ಕೊರಾನ + Ve ಬಂದಿದೆ ಆ ಬೀದಿಗಳನ್ನ ಸೀಲ್ಡ್ ಡೌನ್ ಮಾಡಿದ್ದಾರೆ.    ಈಗ ಎಲ್ಲರೂ ಅಲಟ್೯ ಆಗುತ್ತಿದ್ದಾರೆ, ಮಕ್ಕಳನ್ನ ಮನೆ ಹೊರಗೆ

ಡಾಕ್ಟರ್ ಎಂ.ಸಿ. ಮೋದಿ ಮಹಾತ್ಮಾ ಗಾಂದೀಜಿಯಿಂದ ಪ್ರೇರಿತರಾಗಿ ಕುಗ್ರಾಮಗಳಲ್ಲಿ ಉಚಿತವಾಗಿ ಮಾಡಿರುವ ಕಣ್ಣಿನ ಆಪರೇಷನ್ ಗಳು ಯಾರೂ ಅಳಿಸಲಾರದ ವಿಶ್ವ ದಾಖಲೆ

ಡಾಕ್ಟರ್ ಎಂ.ಸಿ.ಮೋದಿ ಕಣ್ಣಿನ ಆಪರೇಷನ್ ಮುರಿಯಲಾಗದ ಸವ೯ಕಾಲಿಕ ದಾಖಲೆ    ಹೌದು ಡಾ.ಎಂ.ಸಿ. ಮೋದಿಯವರ ದಾಖಲೆ ಯಾರೂ ಮುರಿಯಲು ಸಾಧ್ಯವಿಲ್ಲ, 1968 ರಲ್ಲಿ ತಿರುಪತಿಯಲ್ಲಿ ಸತತ 14 ಗಂಟೆ ಕಣ್ಣಿನ ಚಿಕಿತ್ಸೆ ಮಾಡಿದ್ದರು.   ಒಂದೇ ದಿನ 833 ಜನರ ನೇತೃ ಶಸ್ತ್ರಚಿಕಿತ್ಸೆಗಾಗಿ1986 ರಲ್ಲಿ ಇವರ ಹೆಸರು ಗಿನ್ನೆಸ್ ದಾಖಲೆಯಲ್ಲಿದೆ.   ಒಮ್ಮೆಗೆ 4 ಜನರ೦ತೆ ಗ೦ಟೆಗೆ 40 ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು.    ಇವರು ಮಾಡಿರುವ ಒಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ 5 ಲಕ್ಷದ 79 ಸಾವಿರ, ತಪಾಸಣೆ ಮಾಡಿದ ಸಂಖ್ಯೆ 50 ಲಕ್ಷ, 45 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.    ಇವರ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ಸಿನ ಶೇಕಡವಾರು 99.5%.    ಇದಕ್ಕಾಗಿ ಇವರಿಗೆ ಬಂದ ದೇಶ ವಿದೇಶಗಳ ಪ್ರಶಸ್ತಿ ಅಸಂಖ್ಯ, ಪದ್ಮಶ್ರೀ, ಪದ್ಮಭೂಷಣ, ಹೆಲೆನ್ ಕೆಲರ್ ಹೀಗೆ ಆ ಪಟ್ಟಿ ದೊಡ್ಡದಿದೆ.   ಆದರೆ ಡಾ.ಎಂ.ಸಿ.ಮೋದಿ ಗ್ರಾಮೀಣ ಪ್ರದೇಶದ ಬಡ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅವರು ಮುಂದಾಗಲು ಕಾರಣ ಮಹಾತ್ಮಾ ಗಾಂದೀಜಿ.   1942 ರಲ್ಲಿ ಮುಂಬೈನಲ್ಲಿ ನಡೆದ ಕ್ರಿಟ್ ಇಂಡಿಯಾ ಚಳವಳಿಯ ಸಮಾವೇಶದಲ್ಲಿ ಗಾಂದೀಜಿ ಪ್ರೇರಣೆಯಿಂದ ಡಾ.ಮೋದಿ ಕನಾ೯ಟಕದ ಹಳ್ಳಿಗಳ ಬಡ ಜನರ ನೇತೃ ಚಿಕಿತ್ಸೆಗೆ ತೀಮಾ೯ನ ಮಾಡುತ್ತಾರೆ.  ಪ್ರಾರಂಭದ ದಿನದಲ್ಲಿ ತಮ್ಮ ಚಿಕಿತ್ರೆಯ ಬ್ಯಾಗ್ ನೊಂದಿಗೆ ಬಸ್ಸು, ಎತ್ತಿನಗಾಡಿ ಮತ್ತು ಸೈಕಲ್ ನಲ್ಲಿ ಹಳ್ಳಿ

ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಡೇರೆ ಹೂವಿನದ್ದೇ ಸಂಭ್ರಮ.ಡೇರೆ ಹೂವಿನ ಮೂಲ ಅಮೆರಿಕಾ, ಮೆಕ್ಸಿಕನ್ ದೇಶದ ರಾಷ್ಟ್ರ ಪುಷ್ಪ, ಒಂದು ಅಡಿ ವ್ಯಾಸದದ ಊಟದ ತಟ್ಟೆಗಾತ್ರದ ಹೂವು ಆಗುತ್ತದೆ.

#ಡೇರೆ_ಏನು_ನಿನ್ನ_ಗಾತ್ರ!  ಮಳೆಗಾಲ ಬಂತೆಂದರೆ ಮಲೆನಾಡಿನ ಹಳ್ಳಿಗಳಲ್ಲಿ ಡೇರೆ ಹೂವಿನ ಸಂಭ್ರಮ, ಹೂವು ನೋಡಿದ ಮೇಲೆ ಅದರ ರೆಂಬೆ ಸಂಗ್ರಹಿಸಿ ತಮ್ಮ ಮನೆಯ ಹೂ ತೋಟದಲ್ಲಿ ಅದಕ್ಕೆ ಸ್ಥಳ ಮೀಸಲಿಡುವ  ಗಡಿ ಬಿಡಿ ಗೃಹಿಣಿಯರಿಗೆ.   ಮೂಲ ಗೆಡ್ಡೆ ಸಂಗ್ರಹಿಸಿ ಇಟ್ಟುಕೊಂಡರೆ ಉತ್ತಮ ಆದರೆ ಬಹಳ ಜನ ಡೇರೆ ಹೂವು ಬಿಡುವ ಕಾಲದ ನಂತರ ಗಿಡದ ಬುಡದ ಗೆಡ್ಡೆ ಮಣ್ಣಲ್ಲೇ ಬಿಡುತ್ತಾರೆ ಅದು ಮುಂದಿನ ಮಳೆಗಾಲದಲ್ಲಿ ಗಿಡವಾಗಿ ಹೂವಾಗಿ ಬರಲು.   ಆದರೆ ಒರಲೆ ಈ ಗೆಡ್ಡೆ ತಿಂದರೆ ಮುಂದಿನ ವರ್ಷ ಈ ತಳಿ ನಾಪತ್ತೆ!    DALIYA/DAHLIA ಎಂಬ ಮೂಲ ಹೆಸರಿನ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕಾ ಈ ಹೂವಿನ ತವರಿನ ಮೂಲ, ಅಲ್ಲಿನ ಮೂಲ ನಿವಾಸಿಗಳಾದ ಅಜೆಟಿಕ್ ಜನಾ೦ಗದವರು ಆಹಾರಕ್ಕಾಗಿ ಇದರ ಗೆಡ್ಡೆ ಬಳಸುತ್ತಿದ್ದರಂತೆ ನಂತರ ಸ್ಪಾನಿಷ್ ರ ಆಗಮನದಿಂದ ಈ ಜನಾಂಗ ನಾಶವಾಯಿತು ಮತ್ತು ಆಹಾರಕ್ಕಾಗಿ ಬಳಸುವುದು ಇಲ್ಲವಾಯಿತು.   ಯುರೋಪಿನಲ್ಲಿ ಇದನ್ನ ಆಹಾರಕ್ಕಾಗಿ ಬಳಸುವ ಪ್ರಯತ್ನವೂ ವಿಫಲವಾಯಿತಂತೆ.    ಈ ಪುಷ್ಪ ಮೆಕ್ಸಿಕನ್ ದೇಶದ ರಾಷ್ಟ್ರೀಯ  ಪುಷ್ಪ ಆಗಿದೆ.   2 ಇಂಚು ಕನಿಷ್ಟ ಗಾತ್ರದಿಂದ 1 ಅಡಿ ವ್ಯಾಸದ ಹೂವು 6ರಿಂದ 8 ಅಡಿ ಎತ್ತರದ ಗಿಡದಲ್ಲಿ ದೊರೆಯುತ್ತದೆ.   ಬಣ್ಣ ಮತ್ತು ವಿನ್ಯಾಸದಲ್ಲಿ ಲೆಖ್ಖವಿಲ್ಲ ಆದರೆ ಬೇರೆ ಹೂವಿನಂತೆ ಸುವಾಸನೆ ಇರುವುದಿಲ್ಲ.   ಇವತ್ತು ಬೆಳಿಗ್ಗೆ ಪರಿಚಿತರು ತಂದು ಕೊಟ್ಟ ಈ ಡೇರೆ ಹೂವು 8 ಇಂಚಿನಷ್ಟು ದೊಡ

ಗಾಂಧಾರಿ / ಜೀರಿಗೆ / ಸೂಜಿ / ಸಣಮೆಣಸು/ಚೂರು ಮೆಣಸು ಎಂದೆಲ್ಲ ಪ್ರಾದೇಶಿಕ ಬಿನ್ನ ಹೆಸರಲ್ಲಿ ಗುರುತಿಸುವ ಪಶ್ಚಿಮ ಘಟ್ಟದ ದೇಶಿ ಮೆಣಸು,

#ಸೂಜಿ_ಮೆಣಸು_ಗಾಂಧಾರಿ_ಚೂರು_ಜೀರಿಗೆ_ಸಣ್ಣಮೆಣಸು  ಹೀಗೆ ತರಹಾವಾರಿ ಪ್ರಾದೇಶಿಕ ಹೆಸರಲ್ಲಿ ಕರೆಯುವ ಅತಿ ಖಾರದ ಆದರೆ ದೇಹಕ್ಕೆ ತ೦ಪು ಆಗುವ ಈ ಮೆಣಸು ಈಗಲೂ ಅವರವರ ಮನೆ ಬಳಕೆಗೆ ಅಷ್ಟೆ ಬೆಳೆಸಿ ಕೊಳ್ಳುವಂತ ಅಭ್ಯಾಸ ಇದೆ.   ಇತ್ತೀಚಿನ ದಿನದಲ್ಲಿ ಇದನ್ನು ವಾಣಿಜ್ಯ ಉದ್ದೇಶಕ್ಕಾಗಿ ಕೆಲವರು ಬೆಳೆಸಿ ಒಣಗಿಸಿ ಮಾರಾಟ ಮಾಡುತ್ತಾರೆ.    ಇದನ್ನು ಕೊಯ್ದು ತರುವುದೇ ಕಷ್ಟದ ಕೆಲಸ, ಅತಿ ಚಿಕ್ಕ ಗಾತ್ರದ ಈ ಮೆಣಸು ಒ೦ದೊ೦ದೆ ಕೊಯ್ಯಲು ತಾಳ್ಮೆ ಬೇಕು ಹಾಗಾಗಿ ಇದನ್ನು ಬೆಳಸಿ ಫಸಲು ಕೊಯ್ದು ಒಣಗಿಸಿ ಸಂಗ್ರಹಿಸಲು ಹೆಚ್ಚು ಮನುಷ್ಯ ಶಕ್ತಿ ಮತ್ತು ಸಮಯ ಬೇಕಾದ್ದರಿಂದ ಇದರ ಬೆಳೆ ಮತ್ತು ಸಂಸ್ಕರಣೆ ಅಷ್ಟಾಗಿ ಇಲ್ಲ.    ಆದರೆ ಇದರ ಬಳಕೆ ರುಚಿ ಗೊತ್ತಿದ್ದವರು ಬೆಲೆ ಎಷ್ಟಾದರೂ ಖರೀದಿಸುತ್ತಾರೆ ಇತ್ತೀಚೆಗೆ ಪೇಸ್ ಬುಕ್ ನಲ್ಲಿ ಬಾನು ಪ್ರಕಾಶ್ ಎಂಬುವವರು ಈ ಮೆಣಸು ಮತ್ತು ಅನೇಕ ಸಾವಯುವ ಬೆಳೆಗಳು ಮಾರಾಟಕ್ಕಿದೆ ಅಂತ ಬರೆದಿದ್ದರು, ಇವರು ನಮ್ಮ ಊರಿಗೆ 25 ಕಿ.ಮಿ.ದೂರದ ಹುಂಚಾದವರು ಇವರ ಬ್ಯಾಂಕ್ ಅಕೌ೦ಟ್ ಗೆ 685 ರೂಪಾಯಿ ಕಳಿಸಿ ಅರ್ಧ ಕೆಜಿ ಈ ಜೀರಿಗೆ ಅಥವ ನನ್ನ ಊರಲ್ಲಿ ಕರೆಯುವ ಚೂರು ಮೆಣಸಿಗೆ ಆಡ೯ರ್ ಮಾಡಿದ್ದೆ.     ಆದರೆ ಇದು ಅಂಚೆ ಇಲಾಖೆ ತಪ್ಪಿನಿಂದ ಆಂಧ್ರ ಪ್ರದೇಶದ ಅನಂತಪುರ ನೋಡಿಕೊಂಡು ನಿನ್ನೆ ಬಂತು, ಕೊರಾನಾ ಮುಂಜಾಗೃತೆ ಎಲ್ಲಾ ಮುಗಿಸಿ ಇವತ್ತು ಪಾಸೆ೯ಲ್ ತೆರೆದಿದ್ದೇನೆ ನಿಜಕ್

ಹಳ್ಳಿ ಹಳ್ಳಿಗಳ ಮೂಲೆ ತಲುಪುತ್ತಿರುವ ಕೊರಾನಾ ವೈರಸ್ !? ಮುಂದಿನ ದಿನಗಳು ಹೇಗಿರಲಿದೆ?

#ಕೊರಾನಾ_ಲಾಕ್_ಡೌನ್_ಡೈರಿ_2020  ಲೆಟರ್ ನಂಬರ್- 50.    ದಿನಾ೦ಕ: 04- ಜುಲೈ -2020. #ಹಳ್ಳಿ_ಹಳ್ಳಿಗಳನ್ನ_ತಲುಪಿದ_ಕೊರಾನಾ_ಸೊಂಕು. ದೂರದ ಪಟ್ಟಣದಲ್ಲಿ ಕೇಳುತ್ತಿದ್ದ ಸೀಲ್ ಡೌನ್ ಮನೆ ಪಕ್ಕದಲ್ಲೇ.      ಯಾರ ಮನೆಗೂ ಹೋಗದ ಯಾರಲ್ಲೂ ಯಾವತ್ತೂ ಬೆರೆಯದ ಆ ಮನೆಯ ಯಜಮಾನರಿಗೆ ಪಾಸಿಟೀವ್ !? ಹೇಗೆ?.    ಕೊರಾನಾಗಾಗಿ ಎಲ್ಲಾ ರೀತಿಯ ಮುಂಜಾಗೃತೆ ತೆಗೆದುಕೊಂಡಿದ್ದ ಆ ಮನೆಯ ಯಜಮಾನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ ಈ ಸೊಂಕು ತಗುಲಿದೆ!     ಎಲ್ಲಿಂದಲೋ ಬಂದ ಗೆಳೆಯ ನಾಲ್ಕು ದಿನ ಮನೇಲಿ ತಂಗಿದ್ದು ಹೋಗಿದ್ದವನಿಗೆ ಪಾಸಿಟೀವ್ ! ಈಗ ಅತಿಥ್ಯ ನೀಡಿದ ಇವರಿಗೂ ಪಾಸಿಟೀವ್ ಮನೆ ಮತ್ತು ಇವರ ಬೀದಿ ಸೀಲ್ ಡೌನ್.    ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಸಹೋದರ ಊರಿಗೆ ಬಂದಿದ್ದಾನೆ ಅವನಿಗೆ ಪಾಸಿಟೀವ್ ಮತ್ತು ಮನೇಲಿದ್ದ ಅವನ ಸಹೋದರಿಗೆ ಪಾಸಿಟೀವ್ !     ಇಲ್ಲಿ ತನಕ ನಮ್ಮ ಹಳ್ಳಿಗೆ ಮಾತ್ರ ಕೊರಾನಾ ಬರೋಲ್ಲ ಅನ್ನೋ ದೃಡ ನಂಬಿಕೆಯಿಂದ ಸಾಮಾಜಿಕ ಅಂತರ, ಮಾಸ್ಕ್ ಇತ್ಯಾದಿ ಮುಂಜಾಗರುಕತೆ ಪಾಲಿಸದೆ ಗುಂಪಾಗಿ ಕೃಷಿ, ಮದುವೆ ಮತ್ತು ಹಬ್ಬದಲ್ಲಿ ತೊಡಗಿದ್ದ ಹಳ್ಳಿಗಳಲ್ಲಿ ಕ್ರಮೇಣ ಭಯ ಪ್ರಾರ೦ಭ ಆಗಿದೆ.    ಪುಡ್ ಕಿಟ್ ಇತ್ಯಾದಿ ದಾನ ಪಡೆಯದೆ ಕೃಷಿ ಸ್ವಾವಲಂಬನೆಯಿಂದ ನಿರ್ಬೀತಿಯಿ೦ದ ಇದ್ದವರಿಗೆ ಈಗ ಕೊರಾನಾ ಆಲಾರಂ ನೀಡುತ್ತಿದೆ.

ಪಶ್ಚಿಮ ಘಟ್ಟದಲ್ಲಿ ಬಿದಿರು ಪುನಾರಾರಂಭಗೊಂಡಿದೆ.

 ಬಿದಿರು ಪಶ್ಚಿಮ ಘಟ್ಟದಲ್ಲಿ ಮತ್ತೆ ಚಿಗುರುತ್ತಿದೆ.1-August-2020    ಕಳಲೆಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ       ಬಿದಿರಕ್ಕಿ ಬಂದು ಮೂರು ವರುಷ ಬಿದಿರು ಸಂಪೂಣ೯ ನಾಶವಾಗಿತ್ತು, ಬಿದಿರು ಸಂತಾನವೇ ಇರಲಿಲ್ಲ.    ಪ್ರತಿ ವರ್ಷ ಎಳೆ ಬಿದಿರಿನ ಕಳಲೆಯ ಪಧಾಥ೯ಗಳನ್ನ ರೊಟ್ಟಿ/ದೋಸೆ/ಇಡ್ಲಿ / ಅನ್ನದೊಡನೆ ಸವಿಯುವ ಮತ್ತು ಕಳಲೆ ಉಪ್ಪಿನಕಾಯಿ ನಂಚಿಕೊಳ್ಳುವ ಅಭ್ಯಾಸ ಇದ್ದವರಿಗೆ ನಿಜಕ್ಕೂ ರಸಭಂಗ ಆಗಿತ್ತು.    ಈಗ ಪುನಃ ಬಿದಿರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಹಾಗಾಗಿ ಕಳಲೆ ಪ್ರಿಯರ ಆಸೆ ನೆರವೇರುತ್ತಿದೆ.   ಈ ಬಾರಿಯ ಕಳಲೆ ಮತ್ತು ಕಳಲೆ ಪಲ್ಯ, ಅಕ್ಕಿ ರೊಟ್ಟಿ ಮತ್ತು ಬೆಣ್ಣೆಯ ಚಿತ್ರ ನಿಮಗಾಗಿ.