Skip to main content

ಹಳ್ಳಿಯನ್ನ ಕೇಂದ್ರ ಮಾಡಿಕೊಂಡು ತಮ್ಮ ಸಂಸ್ಥೆಯ ವಾಹನದಲ್ಲಿ ಪ್ರಯಾಣ ಮಾಡುವ ಗ್ರಾಹಕರ ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆ ಹೊಸನಗರದ ರಿಪ್ಪನ್ ಪೇಟೆ ಶಿವಕುಮಾರ್ ಯಶಸ್ವಿ ಟೂರ್ಸ್ & ಟ್ರಾವೆಲ್ಸ್ ನ ಕಥನ

ಕೊರಾನಾ ಸಮಯದಲ್ಲಿ ಇಂತಹ ಪ್ರವಾಸಿ ವಾಹನ ಮಾತ್ರ ಸೂಕ್ತ
  
 ಕೊರಾನಾ ವೈರಸ್ ಹರಡುವ ಈ ದಿನದಲ್ಲಿ  ಟ್ಯಾಕ್ಸಿ ಮತ್ತು ಬಸ್ ಗಳ ಪ್ರಯಾಣ ತುಂಬಾ ಅಪಾಯಕಾರಿ ಯಾಕೆಂದರೆ ವಾಹನ ಮಾಲಿಕರು ಸೋಪಿನಿಂದ ಕಾರಿನ ಹೊರಭಾಗ ತೊಳೆಯುತ್ತಾರೆ ಆದರೆ ದೀಘ೯ ಪ್ರಯಾಣ ಮಾಡಿದ ಒಳಬಾಗದ ಸೀಟ್ ಗಳು, ಡೋರ್ ಮತ್ತು ಒಳ ಮೇಲ್ಚಾವಣೆಗಳು ತೊಳೆಯಲು ಸಾಧ್ಯವಿಲ್ಲ ಆದರೆ ಅದನ್ನು ಡಿಸ್ ಇನ್ಪೆಕ್ಟ್ (ಸೊಂಕು ರಹಿತ) ಮಾಡ ಬಹುದು.
  ಆದರೆ ಇದನ್ನ ಎಷ್ಟು ಜನ ಟ್ಯಾಕ್ಸಿ ಮಾಲಿಕರು ಮಾಡುತ್ತಾರೆ ಅಂತ ವಿಚಾರಿಸಿದರೆ ನಿಜಕ್ಕೂ ನಿರಾಶೆ ಆಗುತ್ತದೆ.
   ಬಹಳ ಜನ ಟ್ಯಾಕ್ಸಿ ಮಾಲಿಕರು ಪ್ರತಿ ಟ್ರಿಪ್ ಹೋಗಿ ಬಂದ ಮೇಲೆ ತೊಳೆಯುತ್ತೇವೆ ಎನ್ನುತ್ತಾರೆ, ಒಳ ಭಾಗ ಹೇಗೆ ಅಂದರೆ ಸ್ಯಾನಿಟೈಸರ್ ಇಟ್ಟಿರುತ್ತೇವೆ ಅನ್ನುತ್ತಾರೆ ಆದರೆ ಇದು ಅನಾಹುತಕಾರಿ, ಆರೋಗ್ಯವಂತ ಪ್ರಯಾಣಿಕ ಇಂತಹ ಟ್ಯಾಕ್ಸಿ ಅಥವ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ (ಮೊದಲು ಯಾರಾದರ ರೋಗ ಪೀಡಿತರು ಪ್ರಯಾಣಿಸಿದ್ದರೆ) ಮಾತ್ರ ಕೊರಾನಾ ರೋಗ ಪೀಡಿತರಾಗುವುದರಲ್ಲಿ ಅನುಮಾನ ಇಲ್ಲ.
   ಆರೋಗ್ಯ ಇಲಾಖೆ ದೃಡೀಕರಿಸಿದ ಪ್ರಕಾರ ಸೋಡಿಯಂ ಹೈಪೋಕ್ಲೋರೈಡ್ 1ರಿಂದ 2 ಶೇ. ಮಿಶ್ರಣ ದ್ರವ ಸಿಂಪರಣೆ ಮಾಡಬೇಕು ಅದು ಅದುನಿಕ ಕೋಲ್ಡ್ ಪಾಗರ್ ನಿಂದ ಸಿಂಪರಣೆ ಮಾಡಿದರೆ ಡಿಸ್ ಇನ್ಪೆಕ್ಟ್ 100% ಗ್ಯಾರಂಟಿ.
  ಇದನ್ನು ಪ್ರತಿ ಬಸ್ ನವರೂ ಮಾಡಬೇಕು ಆದರೆ ಮಾಡುವವರು ತುಂಬಾ ಕಡಿಮೆ.
  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲುಕಿನ ರಿಪ್ಪನ್ ಪೇಟೆಯ ಉತ್ಸಾಹಿ ಯುವ ಉದ್ದಿಮೆದಾರ ಶಿವಕುಮಾರ್ ಮಾತ್ರ ಇಂತಹ ವಿಚಾರದಲ್ಲಿ ಪಕ್ಕಾ.
  ಇವರ ಹತ್ತಿರ 3 ಮಿನಿ ಬಸ್ ಗಳು ಮತ್ತು ಅನೇಕ ಟ್ಯಾಕ್ಸಿ ಇದೆ, ಮನೆಯಲ್ಲೇ ಸ್ವಂತ ಸವಿ೯ಸ್ ಸ್ಟೇಷನ್ ಮಾಡಿಕೊಂಡಿದ್ದಾರೆ ಅಲ್ಲಿ ಸಕಾ೯ರದ ಆರೋಗ್ಯ ಇಲಾಖೆಯ ನಿರ್ದೇಶನದ ಪ್ರಕಾರ ಪ್ರತಿ ಪ್ರಯಾಣ ಮಾಡಿ ಬಂದ ವಾಹನ ಡಿಸ್ ಇನ್ಪೆಕ್ಟ್ ಮಾಡಿ ಮುಂದಿನ ಪ್ರಯಾಣಕ್ಕಾಗಿ ತಯಾರು ಮಾಡುತ್ತಾರೆ.
  ಇವರ ಎಲ್ಲಾ ವಾಹನಕ್ಕೆ GPS ಅಳವಡಿಸಿದ್ದಾರೆ ಇದರಿ೦ದ ಪ್ರತಿ ವಾಹನದ ಮೇಲೆ ನಿಗಾವಹಿಸುತ್ತಾರೆ, ಮಿತಿ ಮೀರಿದ ವೇಗದಲ್ಲಿ ಚಲಿಸಿದ ವಾಹನದ ಮಾಹಿತಿ ಇವರ ಸೆಲ್ ಫೋನ್ ಅಲಾರಾಂ ಮಾಡುತ್ತದೆ.
  ಇವೆಲ್ಲದರಿಂದ ಇವರ ಸಂಸ್ಥೆ ಟ್ಯಾಕ್ಸಿ ಮತ್ತು ಬಸ್ ಗಳನ್ನ ಸುರಕ್ಷಿತ, ಸುಖಕರ ಪ್ರಯಾಣಕ್ಕೆ ಅನೇಕರು ಇವರನ್ನೇ ಅವಲಂಬಿಸಿದ್ದಾರೆ.
  ಇವರ ಸಂಸ್ಥೆ ಸಿಬ್ಬಂದಿಗಳು ಕೂಡ ಪ್ರಯಾಣಿಕರಿಗೆ ಸಹಕರಿಸುವ ಸೌಮ್ಯ ಸ್ವಭಾವದವರೆ ಆಗಿರುವುದು ಕೂಡ ಈ ಪ್ರವಾಸಿ ವಾಹನ ಸಂಸ್ಥೆಯ ಹಿರಿಮೆ.
  ನಮ್ಮ ಲಾಡ್ಜ್ ನ ಟ್ರಾವೆಲ್ ಡೆಸ್ಕ್ ನಿವ೯ಹಣೆ ಇದೇ ಸಂಸ್ಥೆಗೆ ವಹಿಸಿದ್ದೇನೆ ಇವರು ಅನೇಕ ವಷ೯ ಬೆಂಗಳೂರಲ್ಲಿ ದೊಡ್ಡ ಟ್ಯಾಕ್ಸಿ ಸವಿ೯ಸ್ ನಡೆಸಿದ ಅನುಭವ ಹೊಂದಿದ್ದಾರೆ.
  ಒಮ್ಮೆ ಇವರ ಸೇವೆ ಪಡೆದವರು ಪುನಃ ಇವರನ್ನೆ ಖಂಡಿತಾ ಹುಡುಕುತ್ತಾರೆ.
   ನಾವು ಮಾಡುವ ಉದ್ಯಮದಲ್ಲಿ ಶ್ರದ್ದೆ ಮತ್ತು ಗ್ರಾಹಕರ ಹಿತಚಿಂತನೆಗೆ ಮೊದಲ ಪ್ರಾಶಸ್ತ್ಯ ನೀಡಿದರೆ ಸಣ್ಣ ಹಳ್ಳಿಯಿಂದ ಕೂಡ ದೊಡ್ಡ ಉದ್ಯಮ ಯಶಸ್ವಿ ಆಗಿ ನಡೆಸಬಹುದೆಂಬುದಕ್ಕೆ ರಿಪ್ಪನ್ ಪೇಟೆ ಶಿವಕುಮಾರ್ ಒ0ದು ಮಾದರಿ ಆಗಿದ್ದಾರೆ.
  ಇವರ ಸೆಲ್ ನಂಬರ್ 9448681367

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...