#ಪ್ರಸಕ್ತ ರಾಜಕಾರಣದ ಒಳಗುಟ್ಟು ಲೋಕಸಭಾ ಚುನಾವಣ ಅOಕಣ ಭಾಗ -3 (ಕೆ.ಅರುಣ್ ಪ್ರಸಾದ್) ಪಕ್ಷಾಂತರದ ವಿಪಯಾ೯ಸ ಮತ್ತು ಅಪಹಾಸ್ಯ. ದಿನಾಂಕ 4- ಏಪ್ರಿಲ್ -2019. ಲೋಕ ಸಭಾ ಚುನಾವಣಾ ಅಖಾಡ ನಿನ್ನೆ ಸಮ್ಮಿಶ್ರ ಅಭ್ಯಥಿ೯ ನಾಮಪತ್ರದೊಂದಿಗೆ ಅಧಿಕೃತವಾಯಿತು. ಈ ಚುನಾವಣೆಯಲ್ಲಿ ಪಕ್ಷಾ೦ತರ ಪವ೯ ಬೇರೆ ಚುನಾವಣೆಗಿಂತ ಕಡಿಮೆ ಅನ್ನಿಸುತ್ತದೆ. ಅಸಲಿಗೆ ಸ್ಪದೆ೯ಯಲ್ಲಿ ಇರುವವರೆಲ್ಲರೂ ಪಕ್ಷಾಂತರ ಮಾಡಿದವರೆ. ಬಿಜೆಪಿಯ ಅಭ್ಯಥಿ೯ ರಾಘವೇಂದ್ರ ಬಿಜೆಪಿಯಿ೦ದ ಕೆಜೆಪಿಗೆ ಹೋಗಿ ಅಲ್ಲಿಂದ ಬಂದವರು, ಮದು ಬಂಗಾರಪ್ಪ ಕಾಂಗ್ರೇಸ್, ಕೆಸಿಪಿ, ಬಿಜೆಪಿ, ಸಮಾಜವಾದಿಯಿಂದ ಈಗ ಜೆಡಿಎಸ್. ತೀಥ೯ಳ್ಳಿಯಲ್ಲಿ ಮಾಜಿ ಮಂತ್ರಿ ಕಿಮ್ಮನೆಯವರು ಜೆಡಿಎಸ್ ನಿಂದ ಕಾಂಗ್ರೇಸ್ಗೆ ಬಂದವರು, ಮಂಜುನಾಥ ಗೌಡರು ಬಂಗಾರಪ್ಪ, ಜೆ ಹೆಚ್ ಪಟೇಲರ ಪಕ್ಷದಿಂದ ಯಡೂರಪ್ಪರ ಕೆಜೆಪಿಯಿಂದ ಈಗ ಜೆಡಿಎಸ್ ಗೆ ಬಂದಿದ್ದಾರೆ. ಅಯನೂರು ಮಂಜುನಾಥರವರು ಬಿಜೆಪಿಯಿಂದ ಜನತಾ ಪಕ್ಷ, ಕಾಂಗ್ರೇಸ್ ಸೇರಿ ಈಗ ಬಿಜೆಪಿಯಲ್ಲಿದ್ದಾರೆ. ಭದ್ರಾವತಿ ಬಲ್ಕೀಶ್ ಬಾನುರವರು ಜನತಾದಳದಿಂದ ಕಾಂಗ್ರೇಸ್ಗೆ ಬಂದಿದ್ದಾರೆ. ಮಾಜಿ ಮಂತ್ರಿ ಸಿ.ಎಂ.ಇಬ್ರಾಹಿಂರವರು ಜೆಡಿಎಸ್ ನಿಂದ ಕಾಂಗ್ರೇಸ್ ಗೆ ಬಂದಿದ್ದಾರೆ. ಶಿಕಾರಿಪುರದಲ್ಲಿ ಬಳೆಗಾರ್ ಸಮಾಜವಾದಿ ಪಕ್ಷದಿಂದ ಜೆಡಿಎಸ್ ಗೆ , ಗೋಣಿ ಮಾಲ್ತೇಷ್ ಬಂಗಾರಪ್ಪರ ಜೊತೆ ಪಕ್ಷಾ೦ತರ...