ಮಂಗಳೂರಿನ ರೈತ ಸ್ನೇಹಿ ಮೋಣು ಇಕ್ಬಾಲ್ ಸಾಹೇಬರು ಸರಬರಾಜು ಮಾಡುವ ಮೀನು, ಕೋಳಿ ಗೊಬ್ಬರ, ಮೂಳೆ ಪುಡಿ, ಎರೆಹುಳ, ಹರಳೆ ಗೊಬ್ಬರ ಮತ್ತು ಬೇವಿನ ಹಿಂಡಿ ಮಿಶ್ರಣ ಶುಂಠಿ, ಅಡಿಕೆ, ತೆಂಗು ಮತ್ತು ರಬ್ಬರ್ ಗೆ ಸೂಪರ್ ಗೊಬ್ಬರ.
#ಮೀನಿನಪುಡಿ_ಮೂಳೆಪುಡಿ_ಬೇವಿನಹಿಂಡಿ_ಕೋಳಿಗೊಬ್ಬರದ_ಈ_ಮಿಶ್ರಗೊಬ್ಬರದ_ಪಲಿತಾಂಶ_ಅದ್ಬುತ #ಮಂಗಳೂರಿನ_ಮೋನು_ಇಕ್ಬಾಲ್_ಎಂಬ_ರೈತ_ಸ್ನೇಹಿ_ಗೊಬ್ಬರ_ಸರಬರಾಜುದಾರ #ಶುಂಠಿ_ಅಡಿಕೆ_ತೆಂಗು_ಮತ್ತು_ರಬ್ಬರ್_ಬೆಳೆಯಲ್ಲಿ_ಹೆಚ್ಚು_ಇಳುವರಿ_ಸಾಧ್ಯ. #ರಬ್ಬರ್_ಬೇಸಾಯದಲ್ಲಿ_ನನ್ನ_ಸ್ವಂತ_ಅನುಭವ. ಕೆಲ ವರ್ಷದ ಹಿಂದೆ ನಮ್ಮ ಊರ ಸಮೀಪದ ಗೌಡರು ಅಡಿಕೆ ತೋಟಕ್ಕೆ ಮೀನಿನ ಗೊಬ್ಬರ ಹಾಕಿಸಿದರು ಅನ್ನುವುದೇ ದೊಡ್ಡ ಸುದ್ದಿ ಯಾಕೆಂದರೆ ಮಾಂಸಹಾರಿಗಳು ಅಲ್ಲದವರು ಮೀನು ಗೊಬ್ಬರ ಹಾಕಲು ಒಪ್ಪುವುದು ಕಷ್ಟಸಾಧ್ಯ. ಒಂದೆರೆಡು ವರ್ಷದಲ್ಲಿ ಅವರ ಅಡಿಕೆ ಇಳುವರಿ ಹೆಚ್ಚು ಇದೆ, ಮಿಡಿ ಅಡಿಕೆ ಉದುರುವುದು ಕಡಿಮೆ, ಅಡಿಕೆ ತೋಟ ಹಸಿರಾಗಿದೆ ಅಂತೆಲ್ಲ ಸುದ್ದಿಯೂ ಬಂತು ಆದರೆ ಈ ಗೊಬ್ಬರ ಯಾರಲ್ಲಿ ಸಿಗುತ್ತೆ, ಎಲ್ಲಿ ಸಿಗುತ್ತೆ ಅಂತ ಮಾಹಿತಿ ಇರಲಿಲ್ಲ. ನನ್ನ ರಬ್ಬರ್ ಕೃಷಿಗೆ ಸಲಹೆ ಸಹಕಾರ ನೀಡುವ ನಾಗೇಶ್ ಗೌಡರು ಮಂಗಳೂರು ಕೇರಳದಲ್ಲಿ ಮೂಳೆ ಪುಡಿ ಮೀನು ಗೊಬ್ಬರ ಸಿಗುತ್ತೆ ತಂದು ನಿಮ್ಮ ರಬ್ಬರ್ ಗೆ ಹಾಕಿ ರಬ್ಬರ್ ಹಾಲು ಜಾಸ್ತಿ ಬರುತ್ತೆ ಅಂತಲೇ ಇದ್ದರು. ಈ ಗೊಬ್ಬರ ಮಾರಾಟಗಾರರು ಅಂತ ಕೆಲವರಲ್ಲಿ ಸಂಪರ್ಕಿಸಿದೆ ಆದರೆ ಅವರು ಮಾರುವ ಗೊಬ್ಬರ ಗುಣಮಟ್ಟ ಇರಲಿಲ್ಲ, ಹೀಗಿರುವಾಗಲೇ ಒಂದು ದಿನ ಮೋನು ಇಕ್ಬಾಲ್ ಅಂತ ಮಂಗಳೂರಿಂದ ಬಂದು ನಮ್ಮ ಲಾಡ್ಜ್ ನಲ್ಲಿ ಉಳಿದರು ಅವರೇ ನಮ್ಮ ಊರಿನ ಗೌಡರಿಗೆ ...