Skip to main content

Posts

Showing posts with the label Arunprasad Blog number 359

Blog number 859, ಪ್ರಸಕ್ತ ರಾಜಕಾರಣದ ಒಳಗುಟ್ಟು

ನನಗೆ ನಾನೇ ಅಂದು ಕೊಂಡು ಆಚರಿಸುತ್ತಿರುವ ಚುನಾವಣಾ ವಿಷಯ ಏನೆಂದರೆ,  1.ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಬಳಸುವ ಮಾಗ೯ ಒಂದೇ. 2.ಆದಿಕಾರ ಪಡೆದರೆ ಹಣ ಮಾಡಲು ಪೋಷಿಸುವ ಬ್ರಷ್ಟಾಚಾರದ ಪ್ರಮಾಣವೂ ಒಂದೇ. 3.ಅಧಿಕಾರಾವಧಿಯಲ್ಲಿ ಅಲ್ಲಿ ನಿರಂತರ ಗೌರವ ಸ್ಥಾನಮಾನ ಸಿಗುವುದು ಕೂಡ ಹಣ ಹೊಂಚಿಸುವ ಮದ್ಯವತಿ೯ಗಳಿಗೆ ಮಾತ್ರ. 4. ಕನ್ನಡ ಭಾಷೆ, ಪರಿಸರ, ಶುದ್ದ ಆಡಳಿತ, ಅಹ೯ತೆಗೆ ಅವಕಾಶ ಖಂಡಿತಾ ಅಲ್ಲಿ ಇರುವುದಿಲ್ಲ 5. ಬುದ್ದಿವಂತಿಕೆಯಿ೦ದ ಜಾತಿ, ಪತ್ರಕತ೯ರು, ಹೋರಾಟಗಾರರುಗಳನ್ನ ಒಲೈಸಿ ಬೊಕ್ಕಸ ಲೂಟಿ ಮಾಡುವುದೇ ಅವರ ಅಜೆಂಡ, ಇದು ಗೊತ್ತಿದ್ದು ಅಥವ ಗೊತ್ತಿಲ್ಲದೆ ಇವರನ್ನ ಬೆಂಬಲಿಸುವ ಅಥವ ವಿರೋದಿಸುವುದರಲ್ಲಿ ನಮ್ಮ ತನು ಮನ ಧನ ಕಳೆದುಕೊಳ್ಳುವುದಷ್ಟೆ ನಮ್ಮ ಕತ೯ವ್ಯ ಆಗಿದೆ.  ಇದನ್ನ ಬದಲಿಸಿಕೊಳ್ಳದಿದ್ದರೆ ನಾವೆಲ್ಲ ಏನು?