Skip to main content

Posts

Showing posts from January, 2017

ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಶೃ೦ಗೇಶ್ ಸಾದನೆ.

     ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 13ನೇ ವಷ೯ಕ್ಕೆ ಕಾಲಿಟ್ಟಿದ್ದಾರೆ.     ಅನೇಕ ಜನಪರ ಹೋರಾಟಗಳಿಗೆ ಧ್ವನಿಯಾಗಲು ಹೋಗಿ ಅನೇಕ ತೊಂದರೆ ಅನುಭವಿಸಿದ್ದಾರೆ, ನ್ಯಾಯದ ಪರವಾಗಿ ಇರುವವರಿಗೆ ಗೆಳೆಯರಾಗಿ ತಪ್ಪು ಮಾಡುವವರಿಗೆ ಇವರೊಂದು ರೀತಿ ಶತ್ರು ರೀತಿ ಕಾಣುತ್ತಾರೆ.       ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ

ಕೆ.ವಿ.ಸುಬ್ಬಣ್ಣ ಹೆಸರಲ್ಲಿ ರಂಗಮಂದಿರ ನಿಮಿ೯ಸಿದ್ದು ಒಂದು ಅನುಭವ.

   ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಖ್ಯಾತ ಕೆ.ವಿ. ಸುಬ್ಬಣ್ಣ ರಂಗಮಂದಿರ.         ಸಾಗರ ತಾಲ್ಲೂಕಿನ ಖ್ಯಾತ ರಂಗ ಕಮಿ೯, ಬರಹಗಾರ, ಚಿಂತಕ, ವಿಚಾರವಾದಿ, ಪರಿಸರವಾದಿ, ಸಮಾಜವಾದಿ ಮತ್ತು ಅಂತರಾಷ್ಟ್ರ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹೆಗೋಡಿನ ಕೆ.ವಿ. ಸುಬ್ಬಣ್ಣ ತಮ್ಮ ಊರಲ್ಲಿ ಪ್ರಖ್ಯಾತ ಸಾಹಿತಿ, ಪರಿಸರವಾದಿ, ಯಕ್ಷಗಾನ ತಜ್ಞ ಡಾಕ್ಟರ್ ಶಿವರಾಮ ಕಾರಂತರ ಹೆಸರಲ್ಲಿ ರಂಗ ಮಂದಿರ ಕಟ್ಟಿದ್ದಾರೆ, ನೀನಾಸಂ ಹೆಸರಲ್ಲಿ ಇದು ದೇಶ ಅಂತರ್ ದೇಶದಲ್ಲಿ ಹೆಸರುವಾಸಿ ಆಗಿದೆ.         ಹೆಗೋಡಿನಲ್ಲಿ ಅವರು ನಿಮಿ೯ಸಿದ ರಂಗಮಂದಿರಕ್ಕೆ ಶಿವರಾಮ ಕಾರಂತರ ಹೆಸರಿಡಲು ಆವರು ನಡೆಸಿದ ಪತ್ರ ಸಂವಾದ ಸುಬ್ಬಣ್ಣರ ಪುಸ್ತಕದಲ್ಲಿ ನಮೂದಿಸಿದ್ದಾರೆ, ಇವರು ಶಿವರಾಮ ಕಾರ೦ತರ ಹೆಸರಿಡಲು ತೀಮಾ೯ನಿಸಿ ಅವರ ಒಪ್ಪಿಗೆ ಗಾಗಿ ಪತ್ರಿಸುತ್ತಾರೆ ಅದಕ್ಕೆ ಕಾರಂತರ ಉತ್ತರ ಪ್ರತ್ಯುತ್ತರ ಆ ಪುಸ್ತಕದಲ್ಲಿದೆ.          ಜಿಲ್ಲಾ ಪಂಚಾಯತ ಸದಸ್ಯನಾದ ನಂತರ ಅವರ ಒಡನಾಟ ಕಾಗೋಡು ಹೋರಾಟದ ನೇತಾರ ಗಣಪತಿಯಪರಿಂದ ಹೆಚ್ಚಾಯಿತು ಅದಕ್ಕೂ ಮೊದಲು ಸುಬ್ಬಣ್ಣರ ಬಗ್ಗೆ ಓದಿ ತಿಳಿದಿದ್ದೆ, ಕೇಳಿ ಅರಿತಿದ್ದೆ ಹಾಗೂ ದೂರದಿಂದ ನೋಡಿ ಬಲ್ಲಿದ್ದೆ.       ಒಮ್ಮೆ ಸಾಗರದಿಂದ ಆನಂದಪುರಕ್ಕೆ ರಾತ್ರಿ ಹೋಗುವಾಗ ಆ ಬಸ್ಸಲ್ಲಿ ಸುಬ್ಬಣ್ಣ ಇದ್ದರು ಎದರು ಸೀಟಿನಲ್ಲಿ ಒಬ್ಬ ಪ್ರಯಾಣಿಕ ಸಿಗರೇಟು ಸೇದಿ ಹೋಗೆ ಬಿಡುತ್ತಿದ್ದ ಈ ಘಟನೆ 1985 ರಲ್ಲಿ ನಡೆದಿದ್ದು ಬಸ್ ಲ್ಲಿ ಇದ್ದವರು ಅವನನ್ನ ತಡೆಯಲು ಪ

ನಮ್ಮ ಊರಿಗಾಗಿ ವರಸಿದ್ಧಿ ವಿನಾಯಕ ದೇವಸ್ಥಾನ ಕಟ್ಟಿಸಿದ್ದು.

    ಅದೊಂದು ಅಕಸ್ಮಿಕವಾದ ಅವಕಾಶ, ಈಗ ಯೋಚಿಸಿದರೆ ಹೀಗೂ ಆಯಿತಾ ಅನ್ನಿಸುತ್ತೆ.     ತಿಳಿದವರು ಇದಕ್ಕಾಗಿ ಹೇಳುತ್ತಾರೆ ಜನ್ಮಾoತರವಾದ ಯಾವುದೊ ಸಂಪಕ೯ ಕಾರಣ ಹಾಗೂ ತಂದೆ, ತಾಯಿ ಆಶ್ರೀ ವಾದ ಕಾರಣ ಅಂತ ಇದು ಸರಿ ಅಂತ ಬಾವಿಸುತ್ತೇನೆ, ಹಣ, ಆಸ್ತಿ ಅಧಿಕಾರಕ್ಕಾಗಿ ಹೋರಾಡುವ ಮನಸ್ಸಿನ ಶಾಶ್ವತ ಗುಣಗಳನ್ನ ಮೆಟ್ಟಿ ಊರಿಗಾಗಿ, ಪಾರಮಾಥಿ೯ಕ ನೆಮ್ಮದಿಗಾಗಿ ಹಣ ವಿನಿಯೋಗಿಸುವ ಮನಸ್ಸು ನನಗೆ ಬಂದಿದ್ದಾರು ಹೇಗೆ? ಇದೆ ಅಲ್ಲವೆ ಆಗೋಚರ ಶಕ್ತಿಯ ಕಾರಣ? ಇದನ್ನೆ ದೇವರು ಅನ್ನಲೆ?     ಒಮ್ಮೆ ಯಡೇಹಳ್ಳಿಯ ಶಾಂತಿ ನಗರದ ಲಾರಿ ಡ್ರೈವರ್ ಸೋಮ ಶೇಖರ್ (ಈಗ 2 ಲಾರಿ ಮಾಲಿಕರು ಹಾಗು ನಮ್ಮ ದೇವಾಲಯದ ಪ್ರಧಾನ ಪಾರುಪತ್ತೆದಾರರು) ಬಂದು ನಮ್ಮ ಊರಲ್ಲಿ ಹಿಂದು ದಮ೯ದವರಿಗೆ ಪ್ರಾಥ೯ನೆಗೆ ದೇವಾಲಯವಿಲ್ಲ, ಮುಸ್ಲಿ೦ ಜನಾ೦ಗದವರು ಮಸೀದಿ ಕಟ್ಟಿದ್ದಾರೆ, ಕ್ರಿಶ್ಚಿಯನ್ನರು 2 ಚಚ್೯ ಕಟ್ಟಿದ್ದಾರೆ ಹಾಗಾಗಿ ನಾವೆಲ್ಲ ಸೇರಿ ಒಂದು ಗಣಪತಿ ದೇವಸ್ಥಾನ ಕಟ್ಟಿಸ ಬೇಕೆಂದು ತೀಮಾ೯ನಿಸಿದ್ದೇವೆ, ನೀವು ದಾರಾಳವಾಗಿ ಸಹಾಯ ಮಾಡಬೇಕಾಗಿ ಕೇಳಿದರು.      ಆಗ ನನ್ನ ಪರಿಸ್ಥಿತಿ ಆಥಿ೯ಕವಾಗಿ ಹೀನಾಯ ಸ್ಥಿತಿಗೆ ಬಂದಿತ್ತು.ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದಾಗ (1995) ಇದ್ದ ಕಾರು, ಬೈಕ್ 2000ನೆ ಇಸವಿಗೆ ಇರಲಿಲ್ಲ, ಇದ್ದ ರೈಸ್ ಮಿಲ್ ಸಾಲ ಪಾವತಿ ಮಾಡಲಾಗದೆ ಕೆ.ಎಸ್.ಎಫ್.ಸಿ ಗೆ ಹರಾಜಿಗೆ ಬಂದಿತ್ತು.      ಆದರೂ ಒಂದು ಭರವಸೆ ನೀ

ನನ್ನ ರಬ್ಬರ್ ಕೃಷಿ

    1972ರಲ್ಲಿ ನಮ್ಮ ತಂದೆಗೆ ದರಕಾಸ್ತುನಲ್ಲಿ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ತಾವರೇಹಳ್ಳಿ ಗ್ರಾಮದ ಸ.ನಂ.44ರಲ್ಲಿ 6 ಎಕರೆ ಖುಷ್ಕಿ ಜಮೀನು ಮಂಜೂರಾಗಿತ್ತು, ಆ ಸ್ಥ೪ದ ಹೆಸರು ಜೇಡಿ ಸರ ಯಾಕೆಂದರೆ ಅಲ್ಲಿನ ಮಣ್ಣಿನಲ್ಲಿ ಜೇಡಿ ಜಾಸ್ತಿ ಹಾಗಾಗಿ ಇದು ಫಲವತ್ತಾದ ಜಮೀನಲ್ಲ ಬೇರೆ ಕಡೆ ಜಮೀನು ಮಂಜೂರು ಮಾಡಿ ಅಂತ ನಮ್ಮ ತಂದೆ ಮತ್ತು ಅನೇಕರು ಸಕಾ೯ರಕ್ಕೆ ಅಜಿ೯ ಸಲ್ಲಿಸಿ ಈ ಜಮೀನು ಬೇಡ ಅಂತ ತೀಮಾ೯ನಿಸಿದ್ದರು.        ಸಕಾ೯ರ ಇವರ ಅಜಿ೯ ಪುರಸ್ಕರಿಸಲಿಲ್ಲ, ನಾನು ಚಿಕ್ಕವನಿದ್ದಾಗ ಈ ಜಮೀನು ಖರೀದಿಸಲು ಆನಂದಪುರದ ಟಿಂಬರ್ ಕಂಟ್ರಾಕ್ಟರ್ ಚಂದ್ರಹಾಸ ಶೇಟ್ ಮತ್ತು ಮಧ್ಯಸ್ಥಿಕೆಗಾಗಿ ಗ್ರಾಮ ಪಂಚಾಯತ್ ನೌಕರರಾದ ಪ್ರತಾಪ್ ಸಿಂಗ್ ಮತ್ತು ಬಳೆಗಾರ್ ಸುಬ್ಬಣ್ಣ ಬಂದಿದ್ದರು.        ಒಳಗಿನ ಕೋಣೆಯಲ್ಲಿ ಮಾರಾಟದ ಮಾತುಕಥೆ ಅಂತಿಮ ಹಂತಕ್ಕೆ ಬರುತ್ತಿತ್ತು. ಹೊರಗಿನ ಕೋಣೆಯಲ್ಲಿ ಬುಗುರಿಯನ್ನ ಗಾಳಿಯಲ್ಲಿ ಹಾರಿಸಿ ಅಂಗೈ ಮೇಲೆ ತಿರುಗಿಸುತ್ತಾ ಒಳಗಿನ ವ್ಯವಹಾರ ಆಲೈಸುತ್ತಿದ್ದೆ.            ಎಕರೆಗೆ ಅಂತಿಮವಾಗಿ ನಮ್ಮ ತಂದೆ 2500 ರಂತೆ 6 ಎಕರೆಗೆ 15000 ಕೇಳುತ್ತಿದ್ದರು ಆದರೆ ಚಂದ್ರಹಾಸ ಶೇಟ್ರವರು 12000ಕ್ಕೆ ಪಟ್ಟು ಹಿಡಿದಿದ್ದರು ಅಷ್ಟರಲ್ಲಿ ಒಳಕ್ಕೆ ಇಣುಕಿದ ನಾನು ಅಪ್ಪಯ್ಯ ಆ ಜಮೀನು ನನಗೆ ಇರಲಿ ಅಂದೆ, ನನಗೆ ಬೇಕೆ ಬೇಕು ಎನ್ನುವ ಹಟವಾಗಲಿ ಅಥವ ಇನ್ನಾವುದೆ ಉದ್ದೇಶವಿರಲಿಲ್ಲ, ಆದರೆ ನಮ್ಮ ತಂದೆ ಈ ವ್ಯವಹಾರ ಅಲ್ಲಿಗೆ ತುಂಡರಿಸಿದರು

SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ಧಿ ಪ್ರೇರಕರು. ಹಾಗಂತ ನಾನು ಬರೆದ ಲೇಖನ.

      ಅವರನ್ನ ನಮ್ಮ ಬಾಲ್ಯದಲ್ಲಿ ದೂರದಿಂದಲೇ ನೋಡಿದ್ದೆ ಆದರೆ ಅವರ ಜೊತೆ ಕುಳಿತು ಮಾತಾಡಿದ್ದು ಇತ್ತೀಚಿಗೆ, ಅವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಂದಭ೯ ಸಂಪಾದಕರಾದ ಎಸ್.ಎಂ.ಗಣಪತಿ ನನ್ನದೊಂದು ಲೇಖನ ಕೇಳಿದ್ದರು, ಆಗ ನಾನು ನನ್ನ ಅಣ್ಣ ಮತ್ತು ಅಕ್ಕಂದಿರಿಗೆ ಅವರು ಗುರುಗಳು,ನಾನು ಆ ವಯಸ್ಸಿಗೆ ಬರುವಾಗ ವಗ೯ವಾಗಿದ್ದರು ಅಂದೆ ಪರವಾ ಇಲ್ಲ ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು SRK ಬಗ್ಗೆ ನಿಮ್ಮ ಅನುಭವ ಬರೆಯಿರಿ ಅಂದರು.         ನಾನು ಒಂದು ಲೇಖನ ಬರೆದೆ, ಅದರಲ್ಲಿ ನಮ್ಮ ಬಾಲ್ಯದಲ್ಲಿ ಅವರು ಯಾವ ರೀತಿ ಪ್ರೇರಣೆ ಆದರು ಮತ್ತು ಅವರು ಕರೆಸುತ್ತಿದ್ದ ವಿಷೇಷ ಸಾದಕರನ್ನ ನೋಡಿ ಅವರ ಮಾತು ಕೇಳಿ ನಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆ ಆಯಿತು ಹಾಗು ಇಡೀ ಆನಂದಪುರ ಆ ಕಾಲದಲ್ಲಿ ಸಣ್ಣ ಹಳ್ಳಿ ಇಲ್ಲಿನ ಬದರಿನಾರಾಯಣ್ ಅಯ್ಯOಗಾರ ಕುಟುಂಬ ದೊಡ್ಡ ಇನಾಂದಾರರು, ಅವರು ಶಾಸಕರು, ಸಂಸದರು ಮತ್ತು ವಿದ್ಯಾಮಂತ್ರಿಗಳಾದವರು, ಅವರ ಕುಟುಂಬಕ್ಕೆ ಶೃಂಗೇರಿ ಮಠಕ್ಕೆ ವಷ್೯ಕ್ಕೆ 2 ಟನ್ ಗಂದದ ಮರ ಹೋಮ ಹವನಗಳಿಗೆ ನೀಡಲೆಂದೆ 2000 ಎಕರೆ ಕಾಡು ಮೈಸೂರು ಅರಸರು ನೀಡಿದ್ದರು.ಕಾಲ ಬದಲಾದಂತೆ ಅವರಿಗೆ ಆನಂದಪುರಂ ಅಭಿವೃದ್ಧಿಗೆ SRK ಯವರಂತ ಒಬ್ಬ ಗುರಿಕಾರ ಆ ಸಂದಭ೯ದಲ್ಲಿ ಬೇಕಿತ್ತು ಹಾಗಾಗಿ ಇವರ ದೂರದಶಿ೯ ಚಿಂತನೆ ಅಯ್ಯOಗಾರರ ಅಧಿಕಾರ ಸೇರಿ ಆನಂದಪುರಂ ಇವತ್ತು ಮಾದರಿ ಗ್ರಾಮವಾಗಿದೆ ಅನ್ನುವ ಅಥ೯ದ ಲೇಖನ ಬರೆದಿದ್ದೆ ಮತ್ತು ಅದನ್ನ ಸಂಬ೦ದ ಪಟ್ಟವರಿಗೆ ಕಳಿ

ಜಂಗಲ್ ವಾಲೆ ಬಾಬರ ಸಂದಶ೯ನದ ಸುಯೋಗ .

      ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.     ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.       ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಬೇಟಿಗೆ ಬಂದಿದ್ದರು, ಜೈನ ಪ್ರಮುಖರಾದ ದಮ೯ ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಸಿಕ್ಕಿಲ್ಲ ಅಂತ ಮಹಾರಾಷ್ಟ್ರದ ಸತಾರದ ಜೈನ ಪ್ರಮುಖರು ಹೇಳಿದರು.        ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.       ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ