ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.
ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.
ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಬೇಟಿಗೆ ಬಂದಿದ್ದರು, ಜೈನ ಪ್ರಮುಖರಾದ ದಮ೯ ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಸಿಕ್ಕಿಲ್ಲ ಅಂತ ಮಹಾರಾಷ್ಟ್ರದ ಸತಾರದ ಜೈನ ಪ್ರಮುಖರು ಹೇಳಿದರು.
ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.
ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ್ರೀವಾದ ಮಾಡಿ ಹೋಗುತ್ತಾರೆ.
ನನ್ನ ತಂದೆ ಕೃಷ್ಣಪ ಮತ್ತು ತಾಯಿ ಸರಸಮ್ಮರ ಸ್ಮರಣಾಥ೯ ನಿಮಿ೯ಸಿರುವ "ಕೃಷ್ಣ ಸರಸ ಕನ್ವೆನ್ಷನ್ ಹಾಲ್" ನ ಮಹಿಮೆ ಅಂತ ಬಾವಿಸುತ್ತೇನೆ.
ಹಿಂದಿನ ದಿನ ಸಾಗರದ ಜೈನ ಮುಖಂಡರಾದ ರಾಜ್ ಕುಮಾರ್ ಜೈನ್ ಮತ್ತು ವಿ.ಟಿ.ಸ್ವಾಮಿ ಬಂದು ನಾಳೆ ಒಬ್ಬ ಸಂತರು ಬರುತ್ತಾರೆ ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು ಅದರಂತೆ ಮರುದಿನ ಬಂದವರು ಜಂಗಲ್ ವಾಲೆ ಬಾಬ.
ಅವರು ಬಂದು ವಿರಾಜಮಾನರಾದ ನಂತರ ಮಾಲಿಕರನ್ನ ಕರೆಯಿರಿ ಅಂದರಂತೆ ಅವರಾಗಿ ಕರೆದದ್ದರಿಂದ ಹೋಗಿ ದಶ೯ನ ಪಡೆದು ಅವರನ್ನ ಮಾತಿಗೆ ಎಳೆದೆ, ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಗೆ ಅವರ ಅನುಮತಿಯಿಂದ ಸಂದಶ೯ನ ಮಾಡಿದೆ, ಅವರು 3000ಕ್ಕೂ ಹೆಚ್ಚು ನಕ್ಸಲೈಟ್ಸ್ ರನ್ನ ಮುಖ್ಯ ವಾಹಿನಿಗೆ ತಂದವರು, ಹೆಚ್ಚಾಗಿ ಅರಣ್ಯ ಮತ್ತು ಅರುಣ್ಯವಾಸಿಗಳಂದಿಗೆ ಇರುವುದರಿಂದ ಇವರಿಗೆ ಜಂಗಲ್ ವಾಲೆ ಬಾಬ ಅಂತ ಹೆಸರಾಗಿದೆ.
2015 ಮತ್ತು 2016 ರ ವರೆಗೆ ಕನಾ೯ಟಕದ ಪ್ರಮುಖ ಜೈನ ಕೇಂದ್ರ ಸಂದಶಿ೯ಸಿ ಈಗ ಕನಾ೯ಟಕ ದಾಟಿ ಹೋಗಿದ್ದಾರೆ, ಈ ಅವದಿಯಲ್ಲಿ ಎರೆಡು ಚಾತುಮಾ೯ಸ ಕನಾ೯ಟಕದಲ್ಲಿ ಮಾಡಿದ್ದಾರೆ ಒಂದು ಖಾನಾಪುರ ಮತ್ತು ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ.
ದಮ೯ಸ್ಥಳದಲ್ಲಿ ಇವರಿಗೆ ವಿರೇಂದ್ರ ಹೆಗ್ಗಡೆಯವರು ನೀಡಿದ ಸ್ವಾಗತ ನಂತರ ಇವರು ಹೋದಲ್ಲೆಲ್ಲ ಇವರನ್ನ ಬೇಟಿ ಮಾಡಿದ ಗಣ್ಯರ ಮಾಹಿತಿ ಟ್ವಿಟರ್ ನಲ್ಲಿ ಮತ್ತು ಅಂತರ್ಜಾಲದಲ್ಲಿ ನೋಡಿದಾಗ ನಮ್ಮ ಆತಿಥ್ಯ ಸ್ವೀಕರಿಸಿದವರು, ಸಂದಶ೯ನಕ್ಕೆ ಅವಕಾಶ ನೀಡಿದವರು ಮತ್ತು ಆಶಿ೯ ವದಿಸಿದವರು ಇವರೇಯೆ ? ಎಂಬ ಅನುಮಾನ ಉಂಟಾಗುತ್ತೆ, ಇಂತಹ ರಾಷ್ಟ್ರ ಸಂತರ ಸಂದಶಿ೯ಸಿದ ಹೆಮ್ಮೆ ನನ್ನದು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment