Skip to main content

SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ಧಿ ಪ್ರೇರಕರು. ಹಾಗಂತ ನಾನು ಬರೆದ ಲೇಖನ.

      ಅವರನ್ನ ನಮ್ಮ ಬಾಲ್ಯದಲ್ಲಿ ದೂರದಿಂದಲೇ ನೋಡಿದ್ದೆ ಆದರೆ ಅವರ ಜೊತೆ ಕುಳಿತು ಮಾತಾಡಿದ್ದು ಇತ್ತೀಚಿಗೆ, ಅವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಂದಭ೯ ಸಂಪಾದಕರಾದ ಎಸ್.ಎಂ.ಗಣಪತಿ ನನ್ನದೊಂದು ಲೇಖನ ಕೇಳಿದ್ದರು, ಆಗ ನಾನು ನನ್ನ ಅಣ್ಣ ಮತ್ತು ಅಕ್ಕಂದಿರಿಗೆ ಅವರು ಗುರುಗಳು,ನಾನು ಆ ವಯಸ್ಸಿಗೆ ಬರುವಾಗ ವಗ೯ವಾಗಿದ್ದರು ಅಂದೆ ಪರವಾ ಇಲ್ಲ ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು SRK ಬಗ್ಗೆ ನಿಮ್ಮ ಅನುಭವ ಬರೆಯಿರಿ ಅಂದರು.
        ನಾನು ಒಂದು ಲೇಖನ ಬರೆದೆ, ಅದರಲ್ಲಿ ನಮ್ಮ ಬಾಲ್ಯದಲ್ಲಿ ಅವರು ಯಾವ ರೀತಿ ಪ್ರೇರಣೆ ಆದರು ಮತ್ತು ಅವರು ಕರೆಸುತ್ತಿದ್ದ ವಿಷೇಷ ಸಾದಕರನ್ನ ನೋಡಿ ಅವರ ಮಾತು ಕೇಳಿ ನಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆ ಆಯಿತು ಹಾಗು ಇಡೀ ಆನಂದಪುರ ಆ ಕಾಲದಲ್ಲಿ ಸಣ್ಣ ಹಳ್ಳಿ ಇಲ್ಲಿನ ಬದರಿನಾರಾಯಣ್ ಅಯ್ಯOಗಾರ ಕುಟುಂಬ ದೊಡ್ಡ ಇನಾಂದಾರರು, ಅವರು ಶಾಸಕರು, ಸಂಸದರು ಮತ್ತು ವಿದ್ಯಾಮಂತ್ರಿಗಳಾದವರು, ಅವರ ಕುಟುಂಬಕ್ಕೆ ಶೃಂಗೇರಿ ಮಠಕ್ಕೆ ವಷ್೯ಕ್ಕೆ 2 ಟನ್ ಗಂದದ ಮರ ಹೋಮ ಹವನಗಳಿಗೆ ನೀಡಲೆಂದೆ 2000 ಎಕರೆ ಕಾಡು ಮೈಸೂರು ಅರಸರು ನೀಡಿದ್ದರು.ಕಾಲ ಬದಲಾದಂತೆ ಅವರಿಗೆ ಆನಂದಪುರಂ ಅಭಿವೃದ್ಧಿಗೆ SRK ಯವರಂತ ಒಬ್ಬ ಗುರಿಕಾರ ಆ ಸಂದಭ೯ದಲ್ಲಿ ಬೇಕಿತ್ತು ಹಾಗಾಗಿ ಇವರ ದೂರದಶಿ೯ ಚಿಂತನೆ ಅಯ್ಯOಗಾರರ ಅಧಿಕಾರ ಸೇರಿ ಆನಂದಪುರಂ ಇವತ್ತು ಮಾದರಿ ಗ್ರಾಮವಾಗಿದೆ ಅನ್ನುವ ಅಥ೯ದ ಲೇಖನ ಬರೆದಿದ್ದೆ ಮತ್ತು ಅದನ್ನ ಸಂಬ೦ದ ಪಟ್ಟವರಿಗೆ ಕಳಿಸಿ ಮರೆತಿದ್ದೆ.
          ಈ ಲೇಖನ ಅವರಿಗೆ ಹಿಡಿಸಿತಂತೆ ಹಾಗಾಗಿ ಅವರು ನನ್ನ ಭೇಟಿ ಮಾಡಲು ನನ್ನ ಕಛೇರಿಗೆ ಬಂದಾಗ ನನಗೆ ಏನು ಹೇಳಬೇಕು ಅಂತ ತೊಚಲಿಲ್ಲ, ಅವರ ಕಾಲಿಗೆ ನಮ್ಮಣ್ಣ, ಅವರ ಅನೇಕ ಶಿಷ್ಯರು ಕಾಲಿಗೆ ಬಿದ್ದು ಆಶ್ರೀವಾದ ಬೇಡಿದಾಗ ಅವರಲ್ಲಿ ನಾನೊಬ್ಬನಾಗಿದ್ದೆ.
        ಇದೇ ಜನವರಿ 29ಕ್ಕೆ 2017ಕ್ಕೆ ಅಭಿನಂದನಾ ಗ್ರಂಥ ಬಿಡುಗಡೆ ಅಂತ ಕರೆಯೋಲೆ ಬಂದಿದೆ ಜೊತೆಯಲ್ಲಿ ಅಭಿನಂದನಾ ಗ್ರಂಥ ಅದರಲ್ಲಿ ನನ್ನ ಲೇಖನ 9ನೆ ಪುಟದಲ್ಲಿ ಅಗ್ರ ಲೇಖನವಾಗಿ ಪ್ರಕಟಿಸಿದ್ದಾರೆ.
         ಈ ಗ್ರಂಥದಲ್ಲಿ ಆನಂದಪುರಂನಲ್ಲಿನ ಅವರ ಅನುಭವ ದಾಖಲಿಸಿದ್ದಾರೆ ನನಗೂ ಗೊತ್ತಿರಲಿಲ್ಲದ ವಿಷಯ ಆದರಲ್ಲಿದೆ, ಭಾರತದ ಮೊದಲ ಒನ್ ಮ್ಯಾನ್ ಬ್ಯಾಂಕ್ ಆನಂದಪುರಂಗೆ ಮಂಜೂರಾಗಿತ್ತು ಅದರ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಬಂದಿದ್ದರು ಅಂತ.
         ಇನ್ನೂ ಅನೇಕ ವಿಷಯ ಅದರಲ್ಲಿದೆ ಅವರ ಬಲ್ಲವರು ಮತ್ತು ಆನಂದಪುರಂನ ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು ಈ ಪುಸ್ತಕ ಖರೀದಿಸಿ ಓದಬಹುದು, ನಾನು 10 ಪುಸ್ತಕ ಖರೀದಿ ಮಾಡಿದ್ದೇನೆ ಎಲ್ಲಾ ಪ್ರಸ್ತಕದಲ್ಲೂ ಅವರು ಸಹಿ ಮಾಡಿದ್ದಾರೆ ಅವರ ವಿದ್ಯಾಥಿ೯ಗಳಾದವರಿಗೆ ಕಳಿಸಿ ಕೊಟ್ಟಿದ್ದೆನೆ.
       ಈ ಅಭಿನಂದನಾ ಗ್ರಂಥದಲ್ಲಿ ನಾ ಬರೆದ ಲೇಖನ ಮತ್ತು ಅವರು ಬರೆದ ಆನಂದಪುರದಲ್ಲಿನ ಅವರ ಅನುಭವದ ಲೇಖನ ಲಗತ್ತಿಸಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...