Skip to main content

Posts

Showing posts from February, 2024

Blog number 1978. ಕೆ. ಶಿವರಾಂ ನೆನಪು ಭಾಗ-1. ಕನ್ನಡದಲ್ಲಿ ಐಎಎಸ್ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಕೆ.ಶಿವರಾಂ ಅಸ್ತಂಗತ

#ಕೆ_ಶಿವರಾಂ_ನೆನಪು_ಭಾಗ_1 #ನನ್ನ_ಅತ್ಯಂತ_ಆಪ್ತ_ಕನ್ನಡದ_ಐಎಎಸ್ #ಕೆ_ಶಿವರಾಂ_ಅಸ್ತಂಗತ #ಅವರ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ಪ್ರಾರ್ಥಿಸುತ್ತೇನೆ #ಸಂತಾಪ_ಸೂಚಿಸುತ್ತಾ_ಅವರ_ನೆನಪಿನ_ಕೆಲ_ಕಂತುಗಳ_ಲೇಖನ.    ಮೊನ್ನೆ ರಾತ್ರಿ ಅವರ ಅಳಿಯ ಮಾಧ್ಯಮದವರಿಗೆ ತಿಳಿಸುತ್ತಿದ್ದದ್ದು ನೋಡಿದೆ,71 ವರ್ಷದ ಶಿವರಾಂ ಅವರು ಫೆಬ್ರವರಿ ಮೂರನೆ ತಾರೀಕು ಸಣ್ಣ ಆಪರೇಷನ್ಗಾಗಿ ಆಸ್ಪತ್ರೆಗೆ ದಾಖಲಾದವರು ಸತತ ಆರೋಗ್ಯದ ಏರುಪೇರಿನಿಂದ ಚೇತರಿಸಿಕೊಳ್ಳಲೇ ಇಲ್ಲ.   ಅದೇ ದಿನ ಹೃದಯಾಘಾತಕ್ಕೆ ಒಳಗಾದರೂ ಅವರ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಎಂದಾಗಲೇ ನನಗೆ ಅನುವಾನವಾಗಿತ್ತು.     ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಯಿಂದ ಚಾಮರಾಜನಗರದ ಅಭ್ಯರ್ಥಿಯನ್ನಾಗಿ ಮಾಡುವ ಯೋಜನೆ ಯಡಿಯೂರಪ್ಪನವರದಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಸೇರಿದ ಶ್ರೀನಿವಾಸ್ ಪ್ರಸಾದರಿಗಾಗಿ ಶಿವರಾಂ ಟಿಕೆಟ್ ವಂಚಿತರಾದರು ಆದರೂ ಶ್ರೀನಿವಾಸ ಪ್ರಸಾದರ ಪರವಾಗಿ ದೊಡ್ಡ ಕ್ಯಾಂಪೈನ್ ಮಾಡಿದ್ದರು.   ಆಗ ಶ್ರೀನಿವಾಸ್ ಪ್ರಸಾದರು ಅವರಿಗೆ ನೀಡಿದ ಭರವಸೆ ಮುಂದಿನ ಬಾರಿ ನಾನು ವಯಸ್ಸಿನ ಮತ್ತು ಆರೋಗ್ಯ ಕಾರಣದಿಂದ ಸ್ಪರ್ಧಿಸುವುದಿಲ್ಲ ಶಿವರಾಂ ಅವರೆ ಈ ಕ್ಷೇತ್ರದ ಮುಂದಿನ ಅಭ್ಯರ್ಥಿ ಎಂದಿದ್ದರು.    ಆದರೆ ಇತ್ತೀಚೆಗೆ ಶ್ರೀನಿವಾಸ್ ಪ್ರಸಾದರು ತಮ್ಮ ಇಬ್ಬರೂ ಅಳಿಯಂದಿರಲ್ಲಿ ಯಾರಿಗಾದರೂ ಒಬ್ಬರಿಗೆ ತಮ್ಮ ನಂತರದ ಅಭ್ಯರ್ಥಿ ಮಾಡುವ ಯೋಜನೆ ಘೋಷಿಸಿದರು.

Blog number 1977. ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದಿಂದ ಬಿಡುಗಡೆಗೆ ನಾಳೆ ಐದು ವರ್ಷ ಆದರೆ ಸಾರ್ವಜನಿಕರ ನೆನಪು ಕ್ಷಣಿಕ

#ಭಾರತೀಯ_ರಾಜಕಾರಣದಲ್ಲಿ_ಆಸಕ್ತಿ_ಇರುವರು_ತಪ್ಪದೆ_ಓದಿ. #ಕೇವಲ_90_ಸೆಕೆಂಡ್_ಕಾಲದ_ರೋಚಕ_ವಾಯುದಾಳಿ #ಸಾವ೯ಜನಿಕರ_ನೆನಪು_ಕ್ಷಣಿಕ  #ಭಾರತದ_ಹೀರೋ_ಅಭಿನಂದನ್_ವರ್ತಮಾನ್ #ಪಾಕಿಸ್ತಾನದಿಂದ_ಬಿಡುಗಡೆ_ಆಗಿ_ಬಂದು_ನಾಳೆಗೆ_ಐದು_ವಷ೯ #ಶಾಲಿನಿ_ಹೂಲಿ_ಅವರ_ಆಕೃತಿ_ಕನ್ನಡದಲ್ಲಿ #ವಿಂಗ್_ಕಮ್ಯಾಂಡರ್_ಸುದರ್ಶನ್_ಬರೆದ_ಲೇಖನ_ಇಲ್ಲಿ_ಇನ್ನೊಮ್ಮೆ.    ಐದು ವಷ೯ದ ಹಿಂದೆ 28- ಪೆಬ್ರವರಿ -2019 ಇದೇ ದಿನ ರಾತ್ರಿ ಇಡೀ ಬಾರತ ದೇಶವಾಸಿಗಳದ್ದು ಒಂದೇ ಪ್ರಾಥ೯ನೆ ನಮ್ಮ ಹೆಮ್ಮೆಯ ದೇಶ ರಕ್ಷಕ ಅಭಿನಂದನ್ ಯಾವುದೇ ತೊಂದರೆ ಆಗದೇ ಪಾಕಿಸ್ತಾನದಿಂದ ಬಿಡುಗಡೆ ಆಗಿ ಬರಲಿ ಎಂಬುದು ಆಗಿತ್ತು.   ಮಾಚ೯ 1 ರ ಸಂಜೆವರೆಗೆ ಪಂಜಾಬ್ ನ ವಾಘಾ ಬಾಡ೯ರ್ ನಲ್ಲಿ ಅಭಿನಂದನ್ ಬಿಡುಗಡೆ ಕ್ಲೈಮಾಕ್ಸ್ ಇಡೀ ದೇಶವನ್ನ  ಕೊನೆ ಬಾಲ್ 4ರನ್ ಗೆ ದೇಹ ಮನಸ್ಸು ಕೈಯಲ್ಲಿ ಹಿಡಿದು ಕುಳಿತಂತೆ ಕಾದಿತ್ತು.   ಅಂತೂ ತಡವಾಗಿ ಆಗಿಯೂ ಬಿಡುಗಡೆ ಆಗಿದ್ದು ಇಡೀ ದೇಶ ನಿಟ್ಟುಸಿರು ಬಿಟ್ಟ0ತೆ ಆಯಿತು.   ನಂತರದ್ದು ಇತಿಹಾಸ... ದೇಶದ ಸಾವ೯ತ್ರಿಕ ಚುನಾವಣೆಯಲ್ಲಿ ಜನಸಾಮಾನ್ಯರು ಅಭಿನಂದನ್ ಬಿಡುಗಡೆಗಾಗಿ ಬಿಜೆಪಿಗೆ ಬೆಂಬಲಿಸುವುದಾಗಿ ಚುನಾವಣಾ ಪೂವ೯ ಸಮೀಕ್ಷೆಗಳಲ್ಲಿ ನೇರವಾಗಿ ಹೇಳಿದರು.