Skip to main content

Blog number 1969. ಎಪ್ಪತ್ತೆರೆಡು ದಿನ ದಾರಿ ತಪ್ಪಿ ಆನಂದಪುರಂ ಸುತ್ತಮುತ್ತ ಆತಂಕ ಮೂಡಿಸಿದ್ದ ಐದು ಕಾಡಾನೆಗಳು ಸುರಕ್ಷಿತವಾಗಿ ಭದ್ರಾ ಅಭಯಾರಣ್ಯ ಸೇರಲಿ ಮತ್ತು ಈ ಭಾಗದಲ್ಲಿ ಯಾವುದೇ ಜೀವಹಾನಿ ಆಗದಿರಲಿ ಎಂಬ ನಮ್ಮ ಹರಕೆಯ108 ಕಾಯಿಗಳನ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರಲ್ಲಿ ಸಮರ್ಪಿಸಿದ್ದು,

https://youtu.be/3lsizhoTxL8?feature=shared

#ಜಾತ್ರೆ_ಮುಗಿದರೂ.....

#ನಮ್ಮೂರ_ಸಮೀಪ_ದಾರಿ_ತಪ್ಪಿದ್ದ_ಕಾಡಾನೆ_ಸುರಕ್ಷಿತ_ವಾಪಾಸಾತಿಗಾಗಿ

#ನೂರಾ_ಎಂಟು_ಕಾಯಿ_ಒಡೆಯುವ_ಹರಕೆ

#ಶ್ರೀವರಸಿದ್ದಿ_ವಿನಾಯಕ_ಸ್ವಾಮಿಗೆ_ಹರಕೆ_ಕಾಯಿ_ಸಮರ್ಪಿಸುವ_ಸಮಯಕ್ಕೆ

#ಆಗಮಿಸಿದ_ಮಾಜಿ_ಮಂತ್ರಿ_ಹರತಾಳು_ಹಾಲಪ್ಪನವರು

#ಭಕ್ತಿ_ಪೂರ್ವಕವಾಗಿ_ಹರಕೆ_ತೀರಿಸಿದೆವು.

   ನಮ್ಮ ಭಾಗದಲ್ಲಿ ಕಾಡಾನೆ ಯಾವಾಗಲೂ ಬಂದೇ ಇಲ್ಲ 16 ಅಕ್ಟೋಬರ್ 2023 ರಂದು ಸಂಜೆ ರಿಪ್ಪನ್ ಪೇಟೆ ಸಮೀಪದ ಕೆಂಚನಾಲು ಭಾಗದಲ್ಲಿ ಒಂದು ತಾಯಿ ಆನೆ ತನ್ನ ಮರಿ ಜೊತೆ ಕಾಣಿಸಿಕೊಂಡಿದ್ದು ಚಿತ್ರ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಹರಡಿತ್ತು.
  ನಂತರ ಇನ್ನೆರೆಡು ಗಂಡಾನೆ ಮತ್ತು ಇನ್ನೊಂದು ಪ್ರಾಯಕ್ಕೆ ಬರುತ್ತಿರುವ ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಾ ಗಿಳಾಲಗುಂಡಿ - ಲಕ್ಕವಳ್ಳಿ -ಪತ್ರೆಹೊಂಡ- ಕೊಲ್ಲಿ ಬಚ್ಚಲು ಡ್ಯಾಂ - ಉದನೂರು- ಹಿರೆಯರಕರ- ಬೈರಾಪುರ ಮಾಗ೯ವಾಗಿ ಅಂಬ್ಲಿಗೊಳ ಜಲಾಶಯ, ಕಣ್ಣೂರಿಗೂ ಅಲ್ಲಿನ ಮಲ್ಡಿ (ಘಾಟಿಯಿಂದ) ಇಳಿದು ಬಂದಿತ್ತು.
  ಈ ಭಾಗದ ರೈತರು ಆತಂಕಕ್ಕೆ ಈಡಿಗಿದ್ದರು ಸುಗ್ಗಿ ಕಾಲದ ಡಿಸೆಂಬರ್ ನಲ್ಲಿ ತಮ್ಮ ಜಮೀನಿಗೆ ಹೋಗುಲು ಜನ ಹೆದರುವಂತಾಗಿತ್ತು, ಆನೆಗಳು ತಾವು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದೆ ಆದರೆ ತಮ್ಮ ಮನೆ- ತೋಟದ ರಕ್ಷಣೆಗಾಗಿ ಅರಣ್ಯ ಇಲಾಖೆ ನೀಡಿದ ಪಟಾಕಿ ರೈತರು ಸ್ಪೋಟಿಸುವುದರಿಂದ ಆನೆ ವಾಪಾಸು ಹೋಗಲು ಸಾಧ್ಯವಾಗದೆ ಸುಮಾರು 72 ದಿನ ನಮ್ಮ ಭಾಗದಲ್ಲೇ ಸಂಚರಿಸುತ್ತಿದ್ದವು.
   ಆಹಾರ ನೀರು ನಿದ್ದೆ ಸರಿಯಾಗಿ ಸಿಗದೆ ಭಯದಿಂದ ದಾರಿ ತಪ್ಪಿದ್ದ ಈ ಕಾಡಾನೆ ಯಾರಿಗಾದರೂ ಜೀವ ಹಾನಿ ಮಾಡಿದರೆ ಎಂಬ ಭಯ ಇತ್ತು ಕಾರಣ ಆವಿನಹಳ್ಳಿ ಸಮೀಪದ ಗಿಣಿವಾರದಲ್ಲಿ ಕೆಲ ವರ್ಷಗಳ ಹಿಂದೆ ಆ ಗ್ರಾಮದವರು ಕಾಡಾನೆ ಊರಿಗೆ ಬಂದ ಬಗ್ಗೆ ಮುಂಜಾಗ್ರತೆಗಾಗಿ ಜನಜಾಗೃತಿ ಸಭ ಹಮ್ಮಿಕೊಂಡಿದ್ದರು ಆ ಸಭೆಗೆ ಹೊರಟಿದ್ದ ಗೃಹಣಿಯನ್ನು ಕಾಡಾನೆ ತುಳಿದು ಕೊಂದಿತ್ತು.
   ಅಥವ ಕಾಡಾನೆ ಹಿಂಡಿನ ಮರಿಯಾನೆ ರೈತರ ಪಟಾಕಿಗೆ ಹೆದರಿ ಗುಡ್ಡ ಕಮರಿಗೆ ಬಿದ್ದು ಜೀವ ಕಳೆದು ಕೊಂಡರೆ ಎಂಬ ಆತಂಕವೂ ಇತ್ತು.
  ಅಂತಹ ಸಂದರ್ಭದಲ್ಲಿ ಒಂದು ಮಧ್ಯರಾತ್ರಿ 25-ಡಿಸೆಂಬರ್ -2023  ದುಸ್ವಪ್ನ ಒಂದು ನನಗೆ ಭಯ ಉಂಟುಮಾಡಿತ್ತು ಆಗಲೇ ನಾನು ನಮ್ಮ ಊರಿನ ಆನಂದಪುರಂ ಹೋಬಳಿಯ ಏಕೈಕ ಶ್ರೀವರಸಿದ್ದಿ ವಿನಾಯಕ ಸ್ವಾಮಿಗೆ ಈ ಕಾಡಾನೆಗಳು ಸುರಕ್ಷಿತ ಮಾಗ೯ ಕಲ್ಪಿಸಿ ಅವುಗಳ ಮೂಲ ನೆಲೆ ಭದ್ರಾ ಅಭಯರಣ್ಯಾಕ್ಕೆ ಕಳಿಸು.... ಈ ಭಾಗದ ಯಾವುದೇ ನಾಗರೀಕ ಜೀವ ಹಾನಿ ಆಗದಂತೆ ರಕ್ಷಿಸೆಂದು ಆ ರಾತ್ರಿ ದೇವರಲ್ಲಿ ಪ್ರಾಥಿ೯ಸಿ ನಮ್ಮ ಊರ ಜಾತ್ರೆಯಂದು 108 ತೆಂಗಿನ ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಹೊತ್ತಿದ್ದೆ.
  28 - ಡಿಸೆಂಬರ್- 2023ರ ಬೆಳಗಿನ ಜಾವ ಈ ಆನೆಗಳು ಅರಸಾಳು ರಿಪ್ಪನ್ ಪೇಟೆ ಮಾರ್ಗ ಮಧ್ಯೆ ದಾಟಿ ಮುಗುಡ್ತಿ ಅರಣ್ಯ ಸೇರಿ ಅಲ್ಲಿಂದ ಭದ್ರಾ ಅಭಯಾರಣ್ಯ ಸೇರಿದ ಸುದ್ದಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಿಳಿದು ಸಂತೋಷ ಆಗಿತ್ತು ಮತ್ತು ನೂರು ವರ್ಷದ ಹಿಂದೂ ಈ ಭಾಗದಲ್ಲಿ ಕಾಡಾನೆ ಸಂಚರಿಸಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ದಾರಿ ತಪ್ಪಿ 72 ದಿನ ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಪ್ರಕರಣ ಸುಖಾಂತ್ಯವಾಗಿತ್ತು.
  13 - ಪೆಬ್ರವರಿ- 2024ರ ಮಂಗಳವಾರ ನಮ್ಮ ಊರಿನ ವರಸಿದ್ದಿ ವಿನಾಯಕ ಸ್ವಾಮಿ ದೇವರ 18 ನೇ ವರ್ಷದ ರಥೋತ್ಸವದ ಹಿಂದಿನ ಸಂಜೆ ಈ ಹರಕೆಯ 108 ಕಾಯಿ ದೇವರಿಗೆ ಸಮರ್ಪಿಸಲು ತಯಾರಿ ನಡೆಸುವಾಗಲೇ ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪನವರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೊನಗೋಡು ರತ್ನಾಕರ ದೇವರ ದರ್ಶನಕ್ಕೆ ಆಗಮಿಸಿದರು ಅವರಿಗೆ ಜಾತ್ರಾ ಸಮಿತಿಯಿಂದ ಗೌರವ ಸಲ್ಲಿಸಿದರು.
  ಅವರಿಗೆ ಕಾಡಾನೆಯ ಸುರಕ್ಷಿತ ವಾಪಾಸಾತಿ ಬಗ್ಗೆ 108 ತೆಂಗಿನಕಾಯಿ ಸಮರ್ಪಣೆಯ ಹರಕೆಯ ಮಾಹಿತಿ ತಿಳಿಸಿ ಅವರಿಂದ ಮೊದಲ ಹರಕೆಯ ಕಾಯಿ ಒಡೆಸಿ ನಂತರ ಎಲ್ಲರೂ ಸೇರಿ 108 ಕಾಯಿ ದೇವರಿಗೆ ಅರ್ಪಿಸಿದೆವು.
  ಈ ರೀತಿ ಕಾಡಾನೆಗಾಗಿ ಮಾಡಿದ ಗಣಪತಿ ಹರಕೆ ನಮ್ಮ ಊರಿನ ಜಾತ್ರೆಯ ನೆನಪಾಗಿ ಉಳಿಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...