Skip to main content

Blog number 1969. ಎಪ್ಪತ್ತೆರೆಡು ದಿನ ದಾರಿ ತಪ್ಪಿ ಆನಂದಪುರಂ ಸುತ್ತಮುತ್ತ ಆತಂಕ ಮೂಡಿಸಿದ್ದ ಐದು ಕಾಡಾನೆಗಳು ಸುರಕ್ಷಿತವಾಗಿ ಭದ್ರಾ ಅಭಯಾರಣ್ಯ ಸೇರಲಿ ಮತ್ತು ಈ ಭಾಗದಲ್ಲಿ ಯಾವುದೇ ಜೀವಹಾನಿ ಆಗದಿರಲಿ ಎಂಬ ನಮ್ಮ ಹರಕೆಯ108 ಕಾಯಿಗಳನ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರಲ್ಲಿ ಸಮರ್ಪಿಸಿದ್ದು,

https://youtu.be/3lsizhoTxL8?feature=shared

#ಜಾತ್ರೆ_ಮುಗಿದರೂ.....

#ನಮ್ಮೂರ_ಸಮೀಪ_ದಾರಿ_ತಪ್ಪಿದ್ದ_ಕಾಡಾನೆ_ಸುರಕ್ಷಿತ_ವಾಪಾಸಾತಿಗಾಗಿ

#ನೂರಾ_ಎಂಟು_ಕಾಯಿ_ಒಡೆಯುವ_ಹರಕೆ

#ಶ್ರೀವರಸಿದ್ದಿ_ವಿನಾಯಕ_ಸ್ವಾಮಿಗೆ_ಹರಕೆ_ಕಾಯಿ_ಸಮರ್ಪಿಸುವ_ಸಮಯಕ್ಕೆ

#ಆಗಮಿಸಿದ_ಮಾಜಿ_ಮಂತ್ರಿ_ಹರತಾಳು_ಹಾಲಪ್ಪನವರು

#ಭಕ್ತಿ_ಪೂರ್ವಕವಾಗಿ_ಹರಕೆ_ತೀರಿಸಿದೆವು.

   ನಮ್ಮ ಭಾಗದಲ್ಲಿ ಕಾಡಾನೆ ಯಾವಾಗಲೂ ಬಂದೇ ಇಲ್ಲ 16 ಅಕ್ಟೋಬರ್ 2023 ರಂದು ಸಂಜೆ ರಿಪ್ಪನ್ ಪೇಟೆ ಸಮೀಪದ ಕೆಂಚನಾಲು ಭಾಗದಲ್ಲಿ ಒಂದು ತಾಯಿ ಆನೆ ತನ್ನ ಮರಿ ಜೊತೆ ಕಾಣಿಸಿಕೊಂಡಿದ್ದು ಚಿತ್ರ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಹರಡಿತ್ತು.
  ನಂತರ ಇನ್ನೆರೆಡು ಗಂಡಾನೆ ಮತ್ತು ಇನ್ನೊಂದು ಪ್ರಾಯಕ್ಕೆ ಬರುತ್ತಿರುವ ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಾ ಗಿಳಾಲಗುಂಡಿ - ಲಕ್ಕವಳ್ಳಿ -ಪತ್ರೆಹೊಂಡ- ಕೊಲ್ಲಿ ಬಚ್ಚಲು ಡ್ಯಾಂ - ಉದನೂರು- ಹಿರೆಯರಕರ- ಬೈರಾಪುರ ಮಾಗ೯ವಾಗಿ ಅಂಬ್ಲಿಗೊಳ ಜಲಾಶಯ, ಕಣ್ಣೂರಿಗೂ ಅಲ್ಲಿನ ಮಲ್ಡಿ (ಘಾಟಿಯಿಂದ) ಇಳಿದು ಬಂದಿತ್ತು.
  ಈ ಭಾಗದ ರೈತರು ಆತಂಕಕ್ಕೆ ಈಡಿಗಿದ್ದರು ಸುಗ್ಗಿ ಕಾಲದ ಡಿಸೆಂಬರ್ ನಲ್ಲಿ ತಮ್ಮ ಜಮೀನಿಗೆ ಹೋಗುಲು ಜನ ಹೆದರುವಂತಾಗಿತ್ತು, ಆನೆಗಳು ತಾವು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದೆ ಆದರೆ ತಮ್ಮ ಮನೆ- ತೋಟದ ರಕ್ಷಣೆಗಾಗಿ ಅರಣ್ಯ ಇಲಾಖೆ ನೀಡಿದ ಪಟಾಕಿ ರೈತರು ಸ್ಪೋಟಿಸುವುದರಿಂದ ಆನೆ ವಾಪಾಸು ಹೋಗಲು ಸಾಧ್ಯವಾಗದೆ ಸುಮಾರು 72 ದಿನ ನಮ್ಮ ಭಾಗದಲ್ಲೇ ಸಂಚರಿಸುತ್ತಿದ್ದವು.
   ಆಹಾರ ನೀರು ನಿದ್ದೆ ಸರಿಯಾಗಿ ಸಿಗದೆ ಭಯದಿಂದ ದಾರಿ ತಪ್ಪಿದ್ದ ಈ ಕಾಡಾನೆ ಯಾರಿಗಾದರೂ ಜೀವ ಹಾನಿ ಮಾಡಿದರೆ ಎಂಬ ಭಯ ಇತ್ತು ಕಾರಣ ಆವಿನಹಳ್ಳಿ ಸಮೀಪದ ಗಿಣಿವಾರದಲ್ಲಿ ಕೆಲ ವರ್ಷಗಳ ಹಿಂದೆ ಆ ಗ್ರಾಮದವರು ಕಾಡಾನೆ ಊರಿಗೆ ಬಂದ ಬಗ್ಗೆ ಮುಂಜಾಗ್ರತೆಗಾಗಿ ಜನಜಾಗೃತಿ ಸಭ ಹಮ್ಮಿಕೊಂಡಿದ್ದರು ಆ ಸಭೆಗೆ ಹೊರಟಿದ್ದ ಗೃಹಣಿಯನ್ನು ಕಾಡಾನೆ ತುಳಿದು ಕೊಂದಿತ್ತು.
   ಅಥವ ಕಾಡಾನೆ ಹಿಂಡಿನ ಮರಿಯಾನೆ ರೈತರ ಪಟಾಕಿಗೆ ಹೆದರಿ ಗುಡ್ಡ ಕಮರಿಗೆ ಬಿದ್ದು ಜೀವ ಕಳೆದು ಕೊಂಡರೆ ಎಂಬ ಆತಂಕವೂ ಇತ್ತು.
  ಅಂತಹ ಸಂದರ್ಭದಲ್ಲಿ ಒಂದು ಮಧ್ಯರಾತ್ರಿ 25-ಡಿಸೆಂಬರ್ -2023  ದುಸ್ವಪ್ನ ಒಂದು ನನಗೆ ಭಯ ಉಂಟುಮಾಡಿತ್ತು ಆಗಲೇ ನಾನು ನಮ್ಮ ಊರಿನ ಆನಂದಪುರಂ ಹೋಬಳಿಯ ಏಕೈಕ ಶ್ರೀವರಸಿದ್ದಿ ವಿನಾಯಕ ಸ್ವಾಮಿಗೆ ಈ ಕಾಡಾನೆಗಳು ಸುರಕ್ಷಿತ ಮಾಗ೯ ಕಲ್ಪಿಸಿ ಅವುಗಳ ಮೂಲ ನೆಲೆ ಭದ್ರಾ ಅಭಯರಣ್ಯಾಕ್ಕೆ ಕಳಿಸು.... ಈ ಭಾಗದ ಯಾವುದೇ ನಾಗರೀಕ ಜೀವ ಹಾನಿ ಆಗದಂತೆ ರಕ್ಷಿಸೆಂದು ಆ ರಾತ್ರಿ ದೇವರಲ್ಲಿ ಪ್ರಾಥಿ೯ಸಿ ನಮ್ಮ ಊರ ಜಾತ್ರೆಯಂದು 108 ತೆಂಗಿನ ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಹೊತ್ತಿದ್ದೆ.
  28 - ಡಿಸೆಂಬರ್- 2023ರ ಬೆಳಗಿನ ಜಾವ ಈ ಆನೆಗಳು ಅರಸಾಳು ರಿಪ್ಪನ್ ಪೇಟೆ ಮಾರ್ಗ ಮಧ್ಯೆ ದಾಟಿ ಮುಗುಡ್ತಿ ಅರಣ್ಯ ಸೇರಿ ಅಲ್ಲಿಂದ ಭದ್ರಾ ಅಭಯಾರಣ್ಯ ಸೇರಿದ ಸುದ್ದಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಿಳಿದು ಸಂತೋಷ ಆಗಿತ್ತು ಮತ್ತು ನೂರು ವರ್ಷದ ಹಿಂದೂ ಈ ಭಾಗದಲ್ಲಿ ಕಾಡಾನೆ ಸಂಚರಿಸಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ದಾರಿ ತಪ್ಪಿ 72 ದಿನ ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಪ್ರಕರಣ ಸುಖಾಂತ್ಯವಾಗಿತ್ತು.
  13 - ಪೆಬ್ರವರಿ- 2024ರ ಮಂಗಳವಾರ ನಮ್ಮ ಊರಿನ ವರಸಿದ್ದಿ ವಿನಾಯಕ ಸ್ವಾಮಿ ದೇವರ 18 ನೇ ವರ್ಷದ ರಥೋತ್ಸವದ ಹಿಂದಿನ ಸಂಜೆ ಈ ಹರಕೆಯ 108 ಕಾಯಿ ದೇವರಿಗೆ ಸಮರ್ಪಿಸಲು ತಯಾರಿ ನಡೆಸುವಾಗಲೇ ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪನವರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೊನಗೋಡು ರತ್ನಾಕರ ದೇವರ ದರ್ಶನಕ್ಕೆ ಆಗಮಿಸಿದರು ಅವರಿಗೆ ಜಾತ್ರಾ ಸಮಿತಿಯಿಂದ ಗೌರವ ಸಲ್ಲಿಸಿದರು.
  ಅವರಿಗೆ ಕಾಡಾನೆಯ ಸುರಕ್ಷಿತ ವಾಪಾಸಾತಿ ಬಗ್ಗೆ 108 ತೆಂಗಿನಕಾಯಿ ಸಮರ್ಪಣೆಯ ಹರಕೆಯ ಮಾಹಿತಿ ತಿಳಿಸಿ ಅವರಿಂದ ಮೊದಲ ಹರಕೆಯ ಕಾಯಿ ಒಡೆಸಿ ನಂತರ ಎಲ್ಲರೂ ಸೇರಿ 108 ಕಾಯಿ ದೇವರಿಗೆ ಅರ್ಪಿಸಿದೆವು.
  ಈ ರೀತಿ ಕಾಡಾನೆಗಾಗಿ ಮಾಡಿದ ಗಣಪತಿ ಹರಕೆ ನಮ್ಮ ಊರಿನ ಜಾತ್ರೆಯ ನೆನಪಾಗಿ ಉಳಿಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ