Skip to main content

Blog number 1940. ಭಾಗ 3 ಆನಂದಪುರಂ ವೇದ ನಾರಾಯಣ ಭಟ್ಟರ ಕಿರಿಯ ಪುತ್ರ ಕೆ.ವಿ.ಸುರೇಶರೊಂದಿಗೆ ದ್ವಾರಕಾ ಸಂಶೋಧಿಸಿದ S.R.ರಾವ್ ಇವರ ಮನೆಯಲ್ಲಿ ಜನಿಸಿದ ಬಗ್ಗೆ ಮಾತು ಕತೆ,

#ಆನಂದಪುರಂನ_ವೇದನಾರಾಯಣ_ಭಟ್ಟರ_ಕಿರಿಯ_ಪ್ರತ್ರ_ಕೆ_ವಿ_ಸುರೇಶ್_ಜೊತೆ_ಮಾತುಕಥೆ_ಭಾಗ_3

#ಶ್ರೀಕೃಷ್ಣನ_ಮುಳುಗಿದ್ದ_ದ್ವಾರಕೆ_ಸಂಶೋಧಿಸಿದ್ದ_ಎಸ್_ಆರ್_ರಾವ್_ಜನಿಸಿದ್ದು

#ಆನಂದಪುರಂನ_ಇವರ_ಮನೆಯಲ್ಲೇ

#ಎಸ್_ಆರ್_ರಾವ್_ಪೋಟೋ_ಆನಂದಪುರಂನಲ್ಲಿ_ಅಳವಡಿಸುವ_ಅಭಿಯಾನ_ಆಗಬೇಕಾಗಿದೆ.

#ನಾನು_ಎಸ್_ಆರ್_ರಾವ್_ಬೇಟಿ_ಮಾಡಿದ್ದು_ಅವರು_ಬರೆದ_ಪತ್ರ_ಕಳಿಸಿದ_ಅವರ_ಪುಸ್ತಕ_ನನ್ನ_ಭಾಗ್ಯ.


   ಆನಂದಪುರಂನ ವೇದ ನಾರಾಯಣ ಭಟ್ಟರ ಜ್ಞಾನ ವ್ಯಕ್ತಿತ್ವ ಆ ಕಾಲದಲ್ಲೇ ವಿಶೇಷವಾದದ್ದು ಇವರದ್ದೇ ಮನೆಯಲ್ಲೇ ಬಾಡಿಗೆಗೆ ಇದ್ದವರು ಮುಳುಗಿದ್ದ ದ್ವಾರಕೆ ಸಂಶೋಧಿಸಿದ S.R.ರಾವ್ ತಂದೆ.
  ಈ ಮನೆಯಲ್ಲೇ ಎಸ್. ಆರ್.ರಾವ್ ಜನಿಸುತ್ತಾರೆ ಅವರಿಗೆ ಬಾಣಂತನ ಮಾಡಿದವರು ಆನಂದಪುರಂ ಬ್ರಹ್ಮಪುರಿ ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಪ್ರಾಣೇಶ್ ಆಚಾರ್ ಅಜ್ಜಿ ಭಾಗಿರಥಿ ಬಾಯಿ.
   ಆನಂದಪುರಂನ ಆರಾಧ್ಯ ದೈವ ರಂಗನಾಥನ ಹೆಸರು S.R.ರಾವ್ ಗೆ ಅವರ ತಂದೆ ನಾಮಕರಣ ಮಾಡಲು ಒಂದು ಘಟನೆ ಕಾರಣ ಆಗುತ್ತದೆ ಅದು ಅವರ ಪತ್ನಿಯ ಆಭರಣ ಕಳ್ಳತನ ಆಗುತ್ತದೆ ಆದರೆ ಆ ರಾತ್ರಿ ಕಾರ್ಯನಿಮಿತ್ತ ದೂರದ ಸಾಗರದಲ್ಲಿದ್ದ ಅವರಿಗೆ ಇದೆಲ್ಲ ಕನಸಲ್ಲಿ ಕಾಣುತ್ತದೆ.
   ಬೆಳಿಗ್ಗೆ ಊರಿಗೆ ಬಂದಾಗ ಮನೆಯಲ್ಲಿ ಊರಲ್ಲಿ ಗೌಜುಂಟು ಮಾಡಿದ್ದ ಕಳ್ಳತನದ ಆತಂಕ ಅವರ ಕನಸಿನಲ್ಲಿ ಕಂಡಂತೆ ಆಭರಣದ ಪೆಟ್ಟಿಗೆ ಆ ಜಾಗದಲ್ಲೇ ಸಿಗುವುದು ಮಹದಾಶ್ಚರ್ಯ ಅನ್ನಿಸುತ್ತದೆ ಮತ್ತು ಪವಾಡದಂತೆ ಸುಖಾಂತ್ಯವಾದ ಈ ಪ್ರಕರಣಕ್ಕೆ  ಆನಂದಪುರಂನ ಆರಾಧ್ಯ ದೈವ ಶ್ರೀರಂಗನಾಥನೆ ಕಾರಣ ಅನ್ನಿಸುತ್ತದೆ.
   ಈ ಘಟನೆಯ ಮರುದಿನವೇ ದಿನಾಂಕ 1 - ಜುಲೈ-1922 ರಂದು ಜನಿಸುವ ಗಂಡು ಮಗುವಿಗೆ ರಂಗನಾಥನೆಂದೇ ನಾಮಕರಣ ಮಾಡುತ್ತಾರೆ ಅವರೇ ಪ್ರಖ್ಯಾತರಾದ S.R.ರಾವ್, ದ್ವಾರಕೆ ಸಂಶೋದನೆಗಾಗಿಯೇ ಶ್ರೀರಂಗನಾಥ ಈ ಪವಾಡ ಅವರು ಜನಿಸುವ ಮೊದಲು ಮಾಡಿರಬೇಕು.
   ನನ್ನ ಬಾಗ್ಯ ನಾನು S.R.ರಾವ್ ಭೇಟಿ ಮಾಡಿದ್ದು, ಅವರು ಬರೆದ ಪುಸ್ತಕ ಮತ್ತು ಪತ್ರ ನನ್ನ ಸಂಗ್ರಹದಲ್ಲಿರುವುದು.
  S.R.ರಾವ್ ಪೋಟೋ ಆನಂದಪುರಂನ ರಂಗನಾಥ ಸ್ವಾಮಿ ದೇವಾಲಯದಲ್ಲಿ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮತ್ತು ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಇರಬೇಕು ಪ್ರತಿ ವರ್ಷ ಅವರ ಸ್ಮರಣೆಯ ಕಾರ್ಯಕ್ರಮ ನಡೆಯಬೇಕು.
   ಎಸ್. ಆರ್. ರಾವ್ ಜನನ 1-ಜುಲ್ವೆ -1922 ಆನಂದಪುರಂನಲ್ಲಿ -ಮರಣ 3- ಜನವರಿ-2013 ಬೆಂಗಳೂರಿನಲ್ಲಿ ಅವರಿಗೆ ಅವರ ಹುಟ್ಟೂರು ಆನಂದಪುರಂ ಅಂದರೆ ಅತಿ ಹೆಚ್ಚು ಅಭಿಮಾನ ಹೊಂದಿದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...