Skip to main content

Blog number 1954. ಮಡಿವಾಳನಕಟ್ಟೆ ಕೆಂಪಣ್ಣನ ಕೆರೆ ಕಟ್ಟಿದ ನನ್ನ ಕಥೆ


https://youtu.be/lvIMIR2TiiI?feature=shared

#ಮಡಿವಾಳನಕಟ್ಟೆ_ಕೆಂಪಣ್ಣನ_ಕೆರೆ

#ಸಾಗರ_ತಾಲೂಕಿನ_ಬರೂರು_ಗ್ರಾಮಪಂಚಾಯತಿಯ_ಕುಂದೂರು_ಸಮೀಪ

#ಕೆಂಪಣ್ಣನ_ಜೀವಮಾನದ_ಬೇಡಿಕೆ_ಈ_ಕೆರೆ_ನಿರ್ಮಾಣ

#ನಾನು_ಆನಂದಪುರಂ_ಜಿಲ್ಲಾ_ಪಂಚಾಯಿತಿ_ಸದಸ್ಯನಾಗಿ_ಈಡೇರಿಸಿದ_ಸ0ತೃಪ್ತಿ

#ಕೆಂಪಣ್ಣ_ಈ_ಕೆರೆಗೆ_ಅರುಣಪ್ಪನ_ಕೆರೆ_ಅಂತ_ಕರೆದರೆ

#ನಾನು_ಮಾತ್ರ_ಕೆಂಪಣ್ಣನ_ಕೆರೆ_ಅಂತನೆ_ಕರೆದೆ_ಅದೇ_ಶಾಶ್ವತವಾಗಿದೆ

#ಶಾಲಾ_ಸಹಪಾಟಿ_ಹೊಸಕೊಪ್ಪದ_ನಾಗಪ್ಪ_ಮಾಸ್ಟರ್_ಅಪರೂಪದ_ಪೋಟೋ_ಕಳಿಸಿದ್ದಾರೆ.
  
 ನನ್ನ ಮಾಧ್ಯಮಿಕ ಶಾಲಾ ಸಹಪಾಟಿ ಹೊಸಕೊಪ್ಪದ ನಾಗಪ್ಪ ಮಾಸ್ಟರ್ ಇವತ್ತು ಕಳಿಸಿದ ಪೋಟೋಗಳು 29 ವರ್ಷದ ಹಿಂದಿನ ಕಥೆ ನೆನಪಿಸಿತು.
   1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಗಿದ್ದೆ ಆಗ ಆನಂದಪುರಂ,ಯಡೇಹಳ್ಳಿ, ಆಚಾಪುರ, ಹೊಸೂರು, ಗೌತಮಪುರ, ಹಿರೇಬಿಲಗುಂಜಿ, ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿಗಳು ಸೇರಿತ್ತು.
  ತ್ಯಾಗರ್ತಿ ಭಾಗದ ಚುನಾವಣಾ ಪ್ರಚಾರ ಸ್ಥಳೀಯರಾದ ಕೃಷ್ಣಪ್ಪ, ಗಣಪತಿ, ದಾವೀದ್, ಮೈಲಾರಿಕೊಪ್ಪದ ಹೊಳೆಯಪ್ಪ,ನೀಚಡಿ ವೆಂಕಟೇಶ್ ಹೆಗಡೆ, ಹೊಸಂತೆ ಮಂಜುನಾಥ್, ಕುಮಾರ್ ಗೌಡರು, ಬೆಳಂದೂರು ಲಿಂಗಪ್ಪ, ಬರೂರು ಸದಾಶಿವಪ್ಪ ಗೌಡರು ಮತ್ತು ಅನೇಕರು ಜವಾಬ್ದಾರಿಯಿಂದ ನಡೆಸಿದ್ದರು.
  ಅಂತಹ ಪ್ರಚಾರದ ದಿನ ತ್ಯಾಗರ್ತಿ ಸಂತೆಯಂದು ತ್ಯಾಗರ್ತಿ ಕೃಷ್ಣಪ್ಪ " ಅಲ್ಲಿ ನೋಡಿ ಕೆಂಪು ಶಾಲು ಹಾಕೊಂಡು ಬರತಾ ಇದಾರಲ್ಲ ಅವರು ಮಡಿವಾಳನ ಕಟ್ಟೆಯ ಕೆಂಪಣ್ಣ, ಅವರ ಮನೆಯಲ್ಲಿ 50- 60 ಓಟು ಇದೆ ಆದರೆ ಆ ಮೂಲೆಗೆ ರಸ್ತೆ ಗಿಸ್ತೆ ಇಲ್ಲ ಚುನಾವಣೆ ಮುಗಿದ ಮೇಲೆ ಹೋದರಾಯಿತು, ಇವರದ್ದೊಂದು ಅನೇಕ ವರ್ಷದ ಈಡೇರಿಸಲು ಸಾಧ್ಯವಿಲ್ಲದ ಬೇಡಿಕೆ ಇದೆ ಅದೇನೆಂದರೆ ಹೊಸ ಕೆರೆ ಮಾಡಿಕೊಡಬೇಕು ಅನ್ನೋದು... ನೀವು ಮಾಡಿ ಕೊಡ್ತೀನಿ ಅಂದು ಬಿಡಿ ಅಷ್ಟೆ... ಆದರೆ ಅದೆಲ್ಲ 30-40 ವರ್ಷದಿಂದ ಯಾರಿಂದಲೂ ಸಾಧ್ಯವಾಗಿಲ್ಲ ಅನ್ನುವಾಗಲೇ ಕೆಂಪಣ್ಣ ನಮ್ಮ ಸಮೀಪ ಬಂದಿದ್ದರು.
   ಪರಸ್ಪರ ಪರಿಚಯ ಕೃಷ್ಣಪ್ಪ ಮಾಡಿಸಿದರು ಆಗ ಕೆಂಪಣ್ಣ ಇಟ್ಟ ಬೇಡಿಕೆ "ಏನಾದರೂ ಮಾಡಿ ನಮಗೊಂದು ಕೆರೆ ಮಾಡಿ ಕೊಡಿ ಒಳ್ಳೇ ಜಲದ ಕೋವು ಇದೆ ವರ್ಷ ಪೂರ್ತಿ ನೀರು ಇರುತ್ತೆ... ಅಲ್ಲಿ ಕೆರೆ ಆದರೆ ಕೆಳಗೆ ನೂರಾರು ಎಕರೆ ಅಡಿಕೆ ತೋಟ ಮಾಡಬಹುದು" ಅಂತ ಆಸೆ ಕಣ್ಣಿಂದ ಆ ವಯೋ ವೃದ್ಧರು ಹೇಳುವಾಗ ನನಗೆ ಅವರಿಗೆ ಸುಳ್ಳು ಭರವಸೆ ನೀಡಿ ಅವರ ಕುಟುಂಬದ ಮತ ಪಡೆಯುವ ಬಗ್ಗೆ ಇಷ್ಟ ಅನ್ನಿಸಲಿಲ್ಲ ಆದರೂ ಚುನಾವಣೆ ಸ್ಟರ್ದೆಯಲ್ಲವೇ ಆದ್ದರಿಂದ ಅವರಿಗೆ ಒಂದು ಅಶ್ವಾಸನೆ ನೀಡಿದೆ " ಕೆಂಪಣ್ಣ ನೀವೆಲ್ಲ ಮತ ನೀಡಿ ಗೆಲ್ಲಿಸಿದರೆ ನಾನು ನಿಮ್ಮ ಊರಿಗೇ ಬಂದು ಸ್ಥಳ ನೋಡಿ ನಿಮ್ಮ ಬಹುವರ್ಷದ ಬಯಕೆ ಆಗಿರುವ ಕೆರೆ ಮಾಡಿಸಿ ಕೊಡುತ್ತೇನೆ" ಅಂದೆ.
   ನನ್ನ ಕೈ ಹಿಡಿದು ನನ್ನ ಕಣ್ಣನ್ನೇ ದಿಟ್ಟಿಸಿದ ಮಡಿವಾಳನ ಕಟ್ಟೆ ಕೆಂಪಣ್ಣ ನಾನು ಮಾತು ತಪ್ಪುವುದಿಲ್ಲ ಆದರೆ ಗೆದ್ದ ಮೇಲೆ ನೀವು ಮಾತ್ರ ಮಾತು ತಪ್ಪಬೇಡಿ ಇಲ್ಲಿ ತನಕ ಎಲ್ಲಾ ಚುನಾವಣೆಲಿ ಗೆದ್ದೋರು ನಮ್ಮ ಊರಿಗೆ ಬರಲಿಲ್ಲ ಅಂದರು ಅವರ ಕಣ್ಣ ನೋಟದಲ್ಲಿ ಅರ್ದ ನಂಬಿಕೆ ಮಾತ್ರ ಇತ್ತು.
  ಚುನಾವಣೆಯಲ್ಲಿ ಗೆದ್ದ ನಂತರ ಮೊದಲಿಗೆ ಕುಂದೂರಿಗೆ ಹೋಗಿ ಅಲ್ಲಿಂದ ನಡೆದುಕೊಂಡು ಕಲ್ವಡ್ಡು ಹಳ್ಳದಾಟಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಸೀಮೆಎಣ್ಣೆ ಬಸವರಾಜಪ್ಪನ ಮನೆ ಮುಖಾಂತರ ಮಡಿವಾಳನ ಕಟ್ಟೆ ಕೆಂಪಣ್ಣನ ಮನೆ ತಲುಪಿದ್ದೆ.
   ಶಿಕಾರಿಪುರ ಸಾಗರ ತಾಲೂಕಿನ ಅಂಚಿನ ಅರಣ್ಯ ಭೂಮಿಯ ಕಪ್ಪು ಎರೆ ಮಣ್ಣಿನ ಭೂಮಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಈ ಭಾಗದ ಬಹುತೇಕರು ಬಡವರು ಅವರಿಗೆ ಭೂಮಿ ಹಕ್ಕು ಪತ್ರ ಸಿಕ್ಕರಲಿಲ್ಲ, ರಸ್ತೆ ಸಂಪರ್ಕ ಇಲ್ಲ, ಶಾಲೆ ಇಲ್ಲ, ವಿದ್ಯುತ್ ಸಂಪರ್ಕ ಇರಲಿಲ್ಲ.
   ಕೆಂಪಣ್ಣ ಅವರ ಜೋಳದ ಬೆಳೆ ಬೆಳೆಯುವ ಜಮೀನಿನ ಮೇಲಿನ ಎರಡು ಗುಡ್ಡದ ನಡುವಿನ ಕೋವು ತೋರಿಸಿದರು ಅದು ಸಮೃದ್ದ ಜಲ ಮೂಲದ ವರ್ಷ ಪೂರ್ತಿ ನೀರು ಹರಿಯುವ ಜಾಗ ಆಗಿತ್ತು.
   ಅಲ್ಲಿ ಒಂದು ದಂಡೆ ನಿರ್ಮಿಸಿ ಅದಕ್ಕೆ ತೂಬು ಹಾಕಿದರೆ ಅದರ ಕೆಳಗಿನ ಎಲ್ಲಾ ಭೂಮಿ ಅಡಿಕೆ ತೋಟವೇ ಮಾಡುವಂತಿದ್ದ ಪ್ರದೇಶ ಎಂಬುದು ಅರಿತೇ ಕೆಂಪಣ್ಣ ಅಲ್ಲಿ ನೆಲೆನಿಂತರು ಆದರೆ ಕೆರೆ ಆಗದಿದ್ದರಿಂದ ಜೋಳದ ಬೆಳೆಗೆ ಮಾತ್ರ ತೃಪ್ತಿ ಪಡೆಯುತ್ತಾರೆ, ಸುಮಾರು 50-60 ವರ್ಷದ ಕಾಲಮಾನದಲ್ಲಿ ಕೆಂಪಣ್ಣರಿಗೆ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳಾಗಿ ನೂರಾರು ಜನರ ಕುಟುಂಬ ಆದರೂ ಅವರ ಆಸೆಯ ಕೆರೆ ಆಗಲೇ ಇಲ್ಲ ಎಂಬ ನಿರಾಸೆ ಇತ್ತು.
   1995- 2000 ಅವದಿಯ ಜಿಲ್ಲಾ ಪಂಚಾಯತ್ ನಲ್ಲಿ ಅಂತಹ ಹೊಸ ಕೆರೆ ನಿರ್ಮಿಸುವ ಯಾವುದೇ ಯೋಜನೆ ಸಾಧ್ಯವಿರಲಿಲ್ಲ ಆದರೆ ನಾನು ಛಲ ಬಿಡದ ವಿಕ್ರಮನಂತೆ ಅಂತೂ ಇಂತು ನನ್ನದೇ ಆದ ತಂತ್ರ ಬಳಸಿ ಕೆಂಪಣ್ಣನ ಹಲವು ವರ್ಷಗಳ ನಿರೀಕ್ಷೆಯ ಕೆರೆ ನಿಮಿ೯ಸಿಯೇ ಬಿಟ್ಟೆ.
  ವೃದ್ಧಾಪ್ಯದಲ್ಲಿಯೂ ಕೆಂಪಣ್ಣ ಹೆಸರಿಗೆ ತಕ್ಕ ಕೆಂಪು ಮುಖದಲ್ಲಿ ಮೂಡಿದ ಸಂತೃಪ್ತಿ ನೋಡಿ ನನಗೂ ಅಷ್ಟೇ ಖುಷಿ ನೆಮ್ಮದಿ ಉಂಟಾಗಿತ್ತು, ಅವರ ವೃದ್ಯಾಪ್ಯದಲ್ಲೂ ಸುಂದರಾಂಗರೆ ಆಗಿದ್ದ ಕೆಂಪಣ್ಣ ಬಹುಶಃ ಪ್ರಾಯದ ಕಾಲದಲ್ಲಿ ಇನ್ನೂ ಎಷ್ಟೋ ಸುಂದರರಾಗಿರ ಬೇಕು.
   ಕೆಂಪಣ್ಣ ನನಗೆ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು #ಅರುಣಪ್ಪ ಆದ್ದರಿಂದ ಈ ಕೆರೆಗೆ ಅರುಣಪ್ಪನ ಕೆರೆ ಅಂತ ಅವರು ಕರೆದರು ಆದರೆ ನಾನು ಒಪ್ಪಲಿಲ್ಲ...ಕೆರೆಗೆ ಜಲಮೂಲ ಕಂಡು ಹಿಡಿದು ಕೆರೆಯ ಬೇಡಿಕೆ ಇಟ್ಟುಕೊಂಡು ಇಷ್ಟು ವರ್ಷ ಕಾಯುತ್ತಿದ್ದ ಕೆಂಪಣ್ಣರಿಂದ ಈ ಕೆರೆಗೆ #ಕೆಂಪಣ್ಣನ_ಕೆರೆ ಎಂದೇ ಊರವರು ಕರೆಯ ಬೇಕೆಂದು ವಿನಂತಿಸಿದ್ದರಿಂದ ಇದು ಕೆಂಪಣ್ಣನ ಕೆರೆ ಅಂತಲೇ ಆಯಿತು.
   ಸದಾ ಕೆಂಪಣ್ಣರ ಜೊತೆ ನಮ್ಮ ಊರಿಗೆ ನನ್ನ ಹುಡುಕಿಕೊಂಡು ಬರುತ್ತಿದ್ದ ಅವರ ಪುತ್ರ ಮಂಜಪ್ಪ (ಒಂದು ಕಾಲು ವಿಕಲತೆಯಿಂದ ಸ್ವಲ್ಪ ಕುಂಟುತ್ತಿದ್ದರು) ಇಬ್ಬರೂ ಈಗಿಲ್ಲ ಇವರ ಶ್ರಮದಿಂದ ಈ ಕೆರೆ ನೀರಿನಿಂದ ಅಡಿಕೆಯ ಸಮೃದ್ದ ಪಸಲು ಬರುವ ತೋಟ ಇವರ ವಂಶಸ್ಥರಿಗೆ ಬಂದಿದೆ.
   ಈ ಹಳ್ಳಿಗೆ ಹೊಸ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ಪ್ರಾಥಮಿಕ ಶಾಲೆ ಮಾಡಿಸಿಕೊಟ್ಟಿದ್ದರಿಂದ ಈ ಭಾಗದ ಜನರು ನನಗೆ ಹೆಚ್ಚು ಆಪ್ತರಾದರು.
  ಕೆಂಪಣ್ಣ ವಯೋ ಸಹಜವಾಗಿ ಕಾಯಿಲೆ ಬಿದ್ದಾಗ ಚಿಕಿತ್ಸೆ ಪಡೆಯಲು ಒಪ್ಪಲೇ ಇಲ್ಲ ಮತ್ತು ಅವರ ಜೀವಮಾನದಲ್ಲಿ ಒಮ್ಮೆ ಕೂಡ ಇಂಜೆಕ್ಷನ್ ತೆಗೆದು ಕೊಂಡಿರಲಿಲ್ಲ, ಆದರೆ ನನ್ನ ಮಾತಿಗೆ ಇಂಜೆಕ್ಷನ್ ತೆಗೆದು ಕೊಳ್ಳಲು ಒಪ್ಪಿದರು ಆದ್ದರಿಂದ ತ್ಯಾಗರ್ತಿ ಆಸ್ಟತ್ರೆಯ ಸಿಬ್ಬಂದಿ ಕಂಪೌಡರ್ ಲಿಂಗರಾಜರನ್ನು ಕಳಿಸಿದ್ದೆ ಅವರು ಇಂಜೆಕ್ಷನ್ ನೀಡಿದ್ದರು.
   ಕೊನೆಯ ಕಾಲದಲ್ಲಿ ಉಸಿರೆಳೆಯುವಾಗಲೂ ಅರುಣಪ್ಪನ ನೋಡ ಬೇಕು ಕರೆಯಿರಿ ಅಂತಿದ್ದ ನನ್ನ ಅಪ್ಪ ಅಂತ ಅವರ ಮಗ ಮಂಜಪ್ಪ ಕಣ್ಣೀರಲ್ಲಿ ಹೇಳುವಾಗ ನಾನು ಕಣ್ಣೀರಾಗಿದ್ದೆ.
   ಗೆಳೆಯ ನಾಗಪ್ಪ ಮಾಸ್ಟರ್ ಇವತ್ತು ಕಳಿಸಿದ ಪೋಟೋ ನೋಡಿ ಮತ್ತೆ ಕಣ್ಣೀರಾಗಿ ಈ ನೆನಪು ದಾಖಲಿಸಿದೆ.
  ನಾಗಪ್ಪ ಮಾಸ್ಟರ್ ಗೆ ಕೃತಜ್ಞತೆಗಳು ಈ ಸಂದರ್ಭದಲ್ಲಿ ಸಲ್ಲಿಸಲೇ ಬೇಕು.
   ಈ ಊರಿನವರು ಕರೆದುಕೊಂಡು ಬರಲು ಹೇಳುತ್ತಿದ್ದಾರೆ ಅಂತ ನಾಗಪ್ಪ ಪೋನಿನಲ್ಲಿ ತಿಳಿಸಿದರು, ಮಡಿವಾಳನ ಕಟ್ಟೆಯ ಕೆಂಪಣ್ಣನ ವಂಶಸ್ಥರ ಪ್ರೀತಿಗೆ ನಾನು ಅಭಾರಿ ಆಗಿದ್ದೇನೆ.
ಇಂತಹ ನಾಲ್ಕು ಕೆರೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಿರ್ಮಿಸಿದ್ದು ನೆನಪಾಯಿತು.
  ಕೆಂಪಣ್ಣನ ಚಿತ್ರ ಮನಸ್ಸಿನಲ್ಲಿ ಹಸಿರಾಗೇ ಉಳಿದಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ