Skip to main content

Blog number 1938. ನನ್ನ ಹಳೇ ಶಿಷ್ಯ, ನನ್ನ ಕಥಾ ಸಂಕಲದ ಒಂದು ಕಥೆಯ ಕಥಾ ನಾಯಕ ಹೋರಿ ಮಂಜ ಆಲಿಯಾಸ್ ಮೀಸೆ ಮಂಜ ನನ್ನ ಅತಿಥಿ.

#ಹೋರಿ_ಮಂಜ_ಅಲಿಯಾಸ್_ಮೀಸೆ_ಮಂಜ.

#ನನ್ನ_ಒಂದು_ಕಾಲದ_ಶಿಷ್ಯ

#ಅಡೂರಿನ_ರಾಯರ_ಪರಮಾಪ್ತ_ಕೆಲಸಗಾರ

#ನನ್ನ_ಕಥಾ_ಸಂಕಲನ_ಬಿಲಾಲಿ_ಬಿಲ್ಲಿ_ಪುಸ್ತಕದಲ್ಲಿ_ಇವನದ್ದೇ_ಒಂದು_ಕಥೆ_ಇದೆ

#ಅದರ_ಶಿರ್ಷಿಕೆ_ಹೋರಿ_ಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ.

#ಆರು_ವರ್ಷದ_ನಂತರ_ನಿನ್ನೆ_ಬಂದಿದ್ದಾನೆ.

#ಕಥಾ_ಸಂಕಲನ_ಓದಲು_ಕೊಟ್ಟಿದ್ದೇನೆ.

https://youtu.be/BmjSQIo-BXE?feature=shared


 ನಮ್ಮ ಆಫೀಸಿನ ಗಾಜಿನ ಬಾಗಿಲ ಹಿಂಭಾಗದಿಂದ ಒಂದು ಮುಖ ಗೋಚರಿಸಿತು ಇದು ನನ್ನ ಒಂದು ಕಾಲದ ಶಿಷ್ಯ ಹೋರಿ ಮಂಜ,ಒಳಗೆ ಬರಬಹುದಾ?  ಎಂದ ಬಾರೋ ಒಳಗೆ ಅಂದೆ.
  ಇವನು ನನ್ನ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನದ ಪುಸ್ತಕದಲ್ಲಿ ಒಂದು ನಿಜ ಕಥೆಯ ಕಥಾನಾಯಕ ಅದರ ಶಿರ್ಷಿಕೆ #ಹೋರಿಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ.
   2012ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ನಡೆಸಿದ #ಎತ್ತಿನ_ಗಾಡಿ_ಯಾತ್ರೆಯಲ್ಲಿ ಗಾಡಿ ಎತ್ತುಗಳಿಗೆ ಆಯಾಸ ಆಗ ಬಾರದೆಂದು ಸಂಜೆ ಗಾಡಿಯವರು ಕುಡಿಸುತ್ತಿದ್ದ ಬ್ರಾಂಡಿ ಮಂಜನೆ ಕುಡಿದು ಟೈಟಾಗಿ ಮಾಡಿದ ಎಡವಟ್ಟಿನ ಕಥೆ ಇದು.
   ಈ ಕಥಾ ಸಂಕಲನ ಕಥಾನಾಯಕನಿಗೆ ಕೊಡಬೇಕಾಗಿತ್ತು. ಆದರೆ ಹೋರಿ ಮಂಜ ಸಿಗದೇ ಆರು ವರ್ಷ ಆಗಿತ್ತು ನಿನ್ನೆ ಈ ಪುಸ್ತಕವನ್ನು ಅವನಿಗೆ ಕೊಟ್ಟಿದ್ದೇನೆ, ಎಂಟು- ಒಂಬತ್ತನೇ ಕ್ಲಾಸ್ ಓದಿದ್ದಾನೆ ಆದ್ದರಿಂದ ಓದಬಹುದು ಎನ್ನುವ ನಂಬಿಕೆ ನನ್ನದು.
  ಹೋರಿ ಮಂಜ .. ಮೀಸೆ ಮಂಜ ..ಎಂದು ಜನ ಪ್ರೀತಿಯಿಂದ ಕರೆಯುವ ಇವನು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಆಡೂರಿನ ಕರಿ ಸೀನಣ್ಣನ ಮಗ ಇವನ ಆಸಲಿ ಹೆಸರು ಮಂಜುನಾಥ ಹಾಗಂತ ಮಂಜುನಾಥ ಅಂತ ಕರೆದರೆ ಇವನು ಓ ಅನ್ನುವುದಿಲ್ಲ " ಮಂಜ " ಅಂದರೆ ತಕ್ಷಣ ಪ್ರತಿಕ್ರಿಯಿಸುವಷ್ಟು ಇವನ ಅಸಲಿ ಹೆಸರು ಚಾಲ್ತಿ ಕಳೆದು ಕೊಂಡಿದೆ.
   ಈಗ ಬೋರ್ವೆಲ್ ಹೊಡಿಸಿ ಅಡಿಕೆ ತೋಟ ಮಾಡಿರುವುದಾಗಿ,ಓಡಾಡಲು ಮೋಟಾರ್ ಬೈಕ್ ಇಟ್ಟುಕೊಂಡಿರುವುದಾಗಿ,ಮರ ಕತ್ತರಿಸುವ ಯಂತ್ರ ಕೂಡ ಹೊಂದಿದ್ದಾಗಿ ತಿಳಿಸಿದ.
  ಈಗ ಕುಡಿಯುವುದು ಬಿಟ್ಟು ಆರು ವರ್ಷ ಆಯಿತು ಎಂದು ಹೇಳಿದ ಆದರೆ ಗಮ್ ಎನ್ನುವ ಮಧ್ಯದ ವಾಸನೆ ಯಾರದ್ದು?.. ಎಂದರೆ ನನ್ನ ಕಚೇರಿಯಲ್ಲಿ ಕುಳಿತಿದ್ದ ಗಣ್ಯರ ಮುಖವನ್ನು ಅವಲೋಕಿಸಿದ ಅಂದರೆ ಅವರು ಯಾರೋ ಕುಡಿದು ಬಂದಿರಬೇಕು ಎನ್ನುವಂತ ನೋಟ ಅವನದ್ದು !?. . .
  ಇಂತದೇ ನಿತ್ಯವೂ ಕುಡಿಯುವ ರಂಪಾಟ ಮಾಡುವ ರಗಳೆ ಮಾಡುವ ನನ್ನ ಹಳೆಯ ಶಿಷ್ಯ ಮೀಸೆ ಮಂಜ ಒಂದು ಚೂರು ಬದಲಾಗಿಲ್ಲ ಅವನ ವಿಡಿಯೋ ಸಂದರ್ಶನ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...