Skip to main content

Blog number 1953. ಶುಂಠಿ ಬಗ್ಗೆ ಸಂಶೋದನಾ PHD ಮಾಡುವವರು ಮಾಹಿತಿಗಾಗಿ ನನ್ನ ಕಛೇರಿಗೆ ಬಂದಿದ್ದಾಗ.

#ಶುಂಠಿ_ಬಗ್ಗೆ_ಪಿ_ಹೆಚ್_ಡಿ_ಮಾಡುತ್ತಿರುವವರು_ಬಂದಿದ್ದರು.

#ನಮ್ಮ_ಆನಂದಪುರಂ_ಶುಂಠಿ_ಟ್ರೇಡಿಂಗ್_ಹಬ್

#ಈ_ಉತ್ಸಾಹಿ_ಸಂಶೋದಕರನ್ನು_ಕಳಿಸಿದ್ದು_ಪ್ರಜಾವಾಣಿ_ಬ್ಯೂರೋ_ಚೀಪ್_ಆಗಿದ್ದ_ಪ್ರಕಾಶ್_ಕುಗ್ವೆ

#ಸುಮಾರು_ಒಂದೂವರೆ_ಗಂಟೆ_ವಿಡಿಯೋ_ಸಂದರ್ಶನ_ಅವರ_ಸಂಶೋದನೆಗೆಷ್ಟು_ಎಟುಗುತ್ತದೋ?

#ನಮ್ಮ_ಊರ_ಜಾತ್ರೆಯಲ್ಲಿ_ಒಟ್ಟಾಗಿ_ಕುಳಿತು_ಅನ್ನಸಂತರ್ಪಣೆ_ಪ್ರಸಾದ_ಸ್ವೀಕರಿಸಿದೆವು

#ಅವರ_ಸಂಶೋಧನಾ_ವರದಿ_2025ರಲ್ಲಿ_ಬರಲಿದೆ

#ಅವರ_ಶ್ರಮಕ್ಕೆ_ತಕ್ಕ_ಯಶಸ್ಸು_ಸಿಗಲಿ_ಎಂದು_ಹಾರೈಸಿ_ಬಿಳ್ಕೊಟ್ಟೆ.
    ಮೊನ್ನೆ ಮಂಗಳವಾರ 13 - ಪೆಬ್ರವರಿ -2024 ಸೋಮವಾರ ನಮ್ಮ ವರಸಿದ್ದಿ ವಿನಾಯಕ ದೇವರ ರಥೋತ್ಸವ ಮುಗಿಸಿ ಅವರಣದ ಮೂಲ ದೇವರುಗಳಾದ ಕೆಂಡದ ಮಾಸ್ತಿಯಮ್ಮ ದೇವರಿಗೆ ಜಾತ್ರಾ ಸಮಿತಿ ಮತ್ತು ಗ್ರಾಮಸ್ಥರ ಪರವಾಗಿ ಪೂಜೆ ಸಲ್ಲಿಸಿ, ರಥೋತ್ಸವದ ದಿನದ ಅನ್ನ ಸಂತರ್ಪಣೆಗೆ ಹೋಳಿಗೆ ತುಪ್ಪದ ಊಟ ನಮ್ಮ ಕುಟುಂಬದಿಂದ ನೀಡುವ ಪದ್ದತಿ ಆದ್ದರಿಂದ ಅಡುಗೆ ಮನೆಯಲ್ಲಿ ಅರ್ಚಕರಿಂದ ಅನ್ನಪೂರ್ಣೇಶ್ವರಿ ಪೂಜೆ ಮುಗಿಸಿ, ಅನ್ನ ಸಂತರ್ಪಣೆ ಪ್ರಾರಂಬಿಸಿದೆವು.
   ಪ್ರತಿ ವರ್ಷದಂತೆ ಈ ಸಂದರ್ಭದಲ್ಲಿ ಸಾಗರದ ಸಿದ್ಧ ಸಮಾದಿ ಸಂಸ್ಥೆ ಗುರುಗಳಾದ ಶೀ ಗಣೇಶ್ ಗುರೂಜಿ ಭಜನೆ ಪ್ರಾರಂಬಿಸಿದಾಗ ಒಂದು ಕಾಲದ ಪ್ರಜಾವಾಣಿ ಬ್ಯೂರೋ ಚೀಪ್ ಆಗಿದ್ದ ಯುವ ಪತ್ರಕರ್ತ ಪ್ರಕಾಶ್ ಕುಗ್ವೆ ಪೋನ್ ಬಂದಿತು.
  ಅತಿ ಸಣ್ಣ ವಯಸ್ಸಲ್ಲೇ ಅತಿ ದೊಡ್ಡ ವೃತ್ತಿ ಜೀವನಕ್ಕೆ ತಲುಪಿದ ಪ್ರಕಾಶ್ ಕುಗ್ವೆ ವಯೋವೃದ್ಧ ತಂದೆ ತಾಯಿ ಜೊತೆ ಇರಲು ಮತ್ತು ಅವರ ಕೃಷಿ ಭೂಮಿ ನೋಡಿಕೊಳ್ಳಲು ವೃತ್ತಿಜೀವನ ತೊರೆದು ಅವರ ಸಾಗರ ಪಟ್ಟಣ ಸಮೀಪದ ಕುಗ್ವೆಗೆ ಬಂದು ನೆಲೆಸಿದ್ದಾರೆ.
   ನನ್ನ ಸಣ್ಣ ಕಥಾ ಸಂಕಲನ ಬಿಡುಗಡೆಯಲ್ಲಿ ಇವರು ಮಾತಾಡಿದ ವಿಡಿಯೋ ನನ್ನ ಸಂಗ್ರಹದಲ್ಲಿದೆ, ಜಾತ್ರೆಯ ಗೌಜಿನಲ್ಲಿ ನಮ್ಮಿಬರ ಸಂಭಾಷಣೆ ನಮ್ಮಿಬ್ಬರಿಗೂ ಕೇಳಲೇ ಇಲ್ಲ.
    ಬುಧವಾರ ಬೆಳಗ್ಗೆ ಮಾತಾಡಿಕೊಂಡಾಗ PHD ಸಂಶೋದನಾ ವಿದ್ಯಾರ್ಥಿಗಳು ನಿಮ್ಮಲ್ಲಿಗೆ ಕಳಿಸುತ್ತೇನೆ, ಅವರು ಶುಂಠಿ ಬೆಳೆ ಬಗ್ಗೆ, ಬಗರ್ ಹುಕುಂ ಪರಿಸರ ಇತ್ಯಾದಿಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ ನಿಮಗೆ ಸಮಯ ಇದೆಯಾ? ಅಂದರು,ನನ್ನ ಅದ್ಯತೆಗೆ ತಕ್ಕ ಹಾಗೆ ನಾನು ಸಮಯ ಹೊಂದಿಸುವ ಅಭ್ಯಾಸ ಆದರೆ ದೂರದ ಮೈಸೂರು ಬೆಂಗಳೂರಿಂದ ಬಂದ ಸಂಶೋದಕರಿಗೆ ಅದರಲ್ಲೂ ರಾಜ್ಯದ ಮೊದಲ ಬಗರ್ ಹುಕುಂ ಹಕ್ಕುಪತ್ರ ನೀಡಿದ ನಮ್ಮ ಊರು ಈಗ ಶುಂಠಿ ಮಾರಾಟದಲ್ಲಿ ದೇಶದ ದೊಡ್ಡ ಕೇಂದ್ರವಾಗಿದೆ ಆದ್ದರಿಂದ ಬಂದಿದ್ದ ಭರತ್ ಮತ್ತು ವೈಶಾಕ್ ಸಿಂಹ ಹಾಗೂ ಅವರ ಕ್ಯಾಮರಾ ಸಹಾಯಕ ಸೇರಿದ ಸಂಶೋದಕ ತಂಡಕ್ಕೆ ಅವರು ಬಯಸಿದ ಮಾಹಿತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿದ್ದು ಸುಮಾರು ಒಂದೂವರೆ ಗಂಟೆ ಸಮಯ ಕಳೆದಿತ್ತು.
  ಸಂಶೋದನೆ ಪೇಪರ್ ಜೊತೆ ಈ ಬಗ್ಗೆ ಡಾಕ್ಯುಮೆಂಟರಿ ಕೂಡ ಮಾಡುವ ದೂರದ ಆಲೋಚನೆ ಇವರದ್ದು ಅದಕ್ಕಾಗಿ ಈ ಸಂದರ್ಶನದ ಚಿತ್ರಿಕರಣ ಮಾಡಿದ್ದಾರೆ, ನಂತರ ಕೊನೆಯ ದಿನದ ಜಾತ್ರೆಗೆ ಹೋಗಿ ಅನ್ನಪ್ರಸಾದ ಸ್ಟೀಕರಿಸಿ ಅವರಿಗೆ ಶುಭ ಹಾರೈಸಿ ಬೀಳ್ಕೊಟ್ಟೆ.
  ಈ ವಿಚಾರ ಪ್ರಕಾಶ್ ಕುಗ್ವೆ ಹತ್ತಿರ ಮಾತಾಡುವಾಗ ಮುಂದೊಂದು ದಿನ ಶುಂಠಿ ಬೋರ್ಡ್ ರಚನೆ ಆಗಿ ಬಿಳಿಯಾನೆ ಸಾಕುವ ಸಂದರ್ಭವೂ ಬಂದೀತಾ... ಎಂದು ತಮಾಷೆಯ ನಗುವಿನೊಂದಿಗೆ ಪೋನ್ ಮುಕ್ತಾಯ ಮಾಡಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...