Skip to main content

Blog number 1956. ಜಾತ್ರೆ ಲಕ್ಕಿಡಿಪ್ ಊಟರಿಯಲ್ಲಿ ವಾಷಿಂಗ್ ಮೆಷಿನ್ ಬಹುಮಾನ ನಿನಗೇ ಬರುತ್ತೆ ಅಂದಿದ್ದೆ ಡ್ರಾ ನಡೆದಾಗ ಹಾಗೆಯೇ ಆಯಿತು ಇದೊಂದು ಕಾಕತಾಳಿಯ ಆಕಸ್ಮಿಕ ಘಟನೆ ಆದರೆ ನನ್ನ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದೆ.

#ಮಳೆ_ನಿಂತರೂ_ಹನಿ....

#ಎಂಬಂತೆ_ನಮ್ಮ_ಊರಿನ_ಜಾತ್ರೆ_ಪ್ರಸಂಗಳು_ಮುಗಿಯುವುದಿಲ್ಲ

#ಜಾತ್ರಾ_ಸಮಿತಿ_ಯುವಕರು_ಜಾತ್ರೆಗಾಗಿ_ಲಕ್ಕಿಡಿಪ್_ಲಾಟರಿ_ಇಟ್ಟಿದ್ದರು

#ಎಂಬತ್ತರ_ದಶಕದಲ್ಲಿ_ನಮ್ಮ_ರೈಸ್_ವಿಲ್_ಡ್ರೈವರ್_ಆಗಿದ್ದ

#ಬಸವನಹೊಂಡದ_ರಾಜನಾಯ್ಕರ_ಮಗ_ಬಸವಣ್ಣರ_ಮಗ

#ನಾಗರಾಜನಿಗೆ_ಜಾತ್ರೆಯ_ಲಾಟರಿ_ಎರಡನೆ_ಬಹುಮಾನ_ವಾಷಿಂಗ್_ಮೆಷಿನ್

#ಲಾಟರಿಯಲ್ಲಿ_ಎರಡನೆ_ಬಹುಮಾನ_ವಾಷಿಂಗ್_ಮಿಷನ್_ಸಿಗುತ್ತದೆ_ಎಂದಿದ್ದೆ

#ಇದೊಂದು_ಕಾಕತಾಳೀಯ_ಘಟನೆ


   ನಮ್ಮೂರ ಜಾತ್ರೆ ಮೊನ್ನೆ 14 ಫೆಬ್ರವರಿ 2024ಕ್ಕೆ ಮುಗಿಯಿತು ಆದರೂ ಪ್ರತಿ ಜಾತ್ರೆಯಲ್ಲಿನ ನೆನಪುಗಳು ನೂರಾರು... ಇದೊಂದು ರೀತಿ ಮಳೆ ನಿಂತರು ಮಳೆ ಹನಿ ನಿಲ್ಲಲಿಲ್ಲ ಎಂಬಂತೆ.
   ರಥೋತ್ಸವದ ಹಿಂದಿನ ದಿನ ದೇವಾಲಯದಲ್ಲಿ ಹೋಮ ದ್ವಜಾರೋಹಣ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಆಗ ಈ ನಾಗರಾಜ ಬಂದು ಮಾತಾಡಿಸಿದ.
  ಪ್ರತಿ ವರ್ಷ ಜಾತ್ರೆಯಲ್ಲಿ ಈ ರೀತಿ ಸಿಗುತ್ತಾನೆ, ಇವನ ತಂದೆ ಬಸವಣ್ಣ, ಇವನ ಅಜ್ಜನ ಹೆಸರು ರಾಜ ನಾಯಕರು,ಒಂದು ಕಾಲದಲ್ಲಿ ದೊಡ್ಡ ಜಮೀನ್ದಾರರು, ಇವತ್ತಿನ ಭಂಗಿ ಬೂತಪ್ಪ ದೇವಸ್ಥಾನದ ಸಮೀಪ ಇರುವ ಕಲ್ಯಾಣಿ ಬಸವನಹೊ೦ಡದ ಮೇಲಿನ ಫಲವತ್ತಾದ ಸುಮಾರು 12 ಎಕರೆ ಭತ್ತದ ಕೃಷಿ ಮಾಡುವ ಜಮೀನು ಹೊಂದಿದ್ದರು,ಆದರೆ ದುರಾದೃಷ್ಟದಿಂದ ಕಂದಾಯ ಬಾಕಿ ಎಂದು ಆ ಜಮೀನು ಹರಾಜಿನಲ್ಲಿ ಯಾರದ್ದೋ ಪಾಲಾಯಿತು.
     ಕುಟುಂಬದ ಜಮೀನು ಕಳೆದುಕೊಂಡ ಮೇಲೆ ಅಲ್ಲೇ ಅಕ್ಕಪಕ್ಕ ಸರ್ಕಾರಿ ಜಮೀನಿನಲ್ಲಿ ರಾಜನಾಯಕರ ಮಕ್ಕಳಾದ  ರಾಮಣ್ಣ,ಬಸವಣ್ಣ ಮತ್ತು ಮಂಜಪ್ಪ ಗುಡಿಸಲು ಹಾಕಿ ಜೀವನ ಸಾಗಿಸುತ್ತಿದ್ದರು.
  1993ರಲ್ಲಿ ಬಗರು ಹುಕುಂ ಕಾಯ್ದೆ ಜಾರಿಯಾದಾಗ ಈ ಮೂರು ಕುಟುಂಬಕ್ಕೆ ಅನದಿಕೃತ ಸಾಗುವಳಿ ಮಾಡುತ್ತಿದ್ದ ಖುಷ್ಕಿ ಜಮೀನು ದೊರೆಯಿತು, ಇಂತಹ ಜಮೀನಿನಲ್ಲಿ ಬಸವಣ್ಣನ ಮಗ ನಾಗರಾಜ ಅಡಿಕೆ ತೋಟ ಮಾಡಿದ್ದಾನೆ, ಹೊಸ ಪಸಲು ಇನ್ನೆರಡು ವರ್ಷದಲ್ಲಿ ಇವನಿಗೆ ಸಿಗಲಿದೆ.
 ನಾಗರಾಜನ ತಂದೆ ಬಸವಣ್ಣ ಹಮಾಲಿ ಕೆಲಸ ಮಾಡುತ್ತಿದ್ದರು, ನಾನು ಅದನ್ನು ತಪ್ಪಿಸಿ ನಮ್ಮ ರೈಸ್ ಮಿಲ್ ನಲ್ಲಿ ತರಬೇತಿ ನೀಡಿ ರೈಸ್ ಮಿಲ್ ಡ್ರೈವರ್ ಮಾಡಿದ್ದೆ, ಇವರ  ಕುಟುಂಬದಲ್ಲಿ ಎಂತಹದ್ದೊ ಬಿನ್ನಾಭಿಪ್ರಾಯದಿಂದ ಆತ್ಮಹತ್ಯೆ ಮಾಡಿಕೊಂಡರು.
  ಆಗ ನಾಗರಾಜ ಮೂರ್ನಾಲ್ಕು ವರ್ಷದ ಸಣ್ಣ ಮಗು ಇವನು ದೊಡ್ಡವನಾದಾಗ ನನ್ನಲ್ಲಿ ಬಂದು ಕೇಳಿದ್ದು ತನ್ನ ತಂದೆಯ ಫೋಟೋ ಸಿಗುತ್ತದಾ? ..ಎಂದು ನಾನು ಕೇಳಿದ ಮರು ಪ್ರಶ್ನೆ ನಿನ್ನ ತಂದೆಯ ಫೋಟೋ ನಿನ್ನ ಮನೆಯಲ್ಲಿ ಇಲ್ಲವಾ?... ಅವನ ಉತ್ತರ "ತಂದೆ ಫೋಟೋ ಯಾವುದೂ ಇಲ್ಲ ಆದರೆ ನಾನು ಸಣ್ಣವನಿದ್ದಾಗ ತಂದೆಯ ನೋಡಿದ ನೆನಪುಗಳಿವೆ" ಎಂದು.
   ನಂತರ ಎಲ್ಲಾ ಹಳೆಯ ಫೋಟೋಗಳನ್ನು ಹುಡುಕಿ, ಒಂದು ಗ್ರೂಪ್ ಫೋಟೋದಲ್ಲಿ ಬಸವಣ್ಣನ ಮುಖ ಕಂಡೆ ಅದನ್ನು ಎನ್ ಲಾರ್ಜ್ ಮಾಡಿಸಿ ನಾಗರಾಜನಿಗೆ ಫೋಟೋ ಕೊಟ್ಟಿದ್ದೆ, ಅದು ಅವನಿಗೆ ತುಂಬಾ ಸಂತೋಷದ ವಿಚಾರ ಆಗಿತ್ತು.
    ಇದೇ ರೀತಿ ಇನ್ನೊಬ್ಬ ಬಾಲಕನ ಆಸೆ ಈವರೆಗೂ ಈಡೇರಿಸಲಾಗಲಿಲ್ಲ, ಆತ ತನ್ನ ತಂದೆಯ ಫೋಟೋ ಕೇಳಿದಾಗ ಸಿಗಲೇ ಇಲ್ಲ, ನಾವು ಕಾಲಮಿತಿ ಯಕ್ಷಗಾನದ ಕಾರ್ಯಕ್ರಮದಲ್ಲಿ ಆ ಬಾಲಕನ ತಂದೆಗೆ ಸನ್ಮಾನ ಮಾಡಿದ್ದ ಫೋಟೋ ಅವರಿಗೆ ತಲುಪಿಸಲು ಕಳಿಸಿದ್ದೆ ಆದರೆ ಅದು ಅವರಿಗೆ ತಲುಪಲಿಲ್ಲ, ಈಗ ಅವರ ಮನೆಯಲ್ಲಿ ಅವರ ತಂದೆಯ ಯಾವುದೇ ಫೋಟೋ ಇಲ್ಲ, ಇದು ನನ್ನ ಬಾಲ್ಯದ ಶಾಲಾ ಸಹಪಾಠಿ ಕೆಂಜಿಗಾಪುರದ ಕಲಾವಿದ ರಾಮಪ್ಪರ ಮಗನ ಆಸೆ ನೆರವೇರಿಸಲಾಗದ ಒಂದು ಘಟನೆ.
  ಈ ವಷ೯  ದೇವಸ್ಥಾನದಲ್ಲಿ ಊರ ಯುವಕರು ಲಕ್ಕಿಡಿಪ್ ಲಾಟರಿ ಒಂದನ್ನು ಜಾತ್ರಾ ಪ್ರಯುಕ್ತ ಮಾಡಿದ್ದರು ಅದರ ಟಿಕೆಟನ್ನು ಮಾರಲು ನಾಗರಾಜನ ಹತ್ತಿರ ಬಂದಿದ್ದರು ಆದರೆ ನಾಗರಾಜ ಲಾಟರಿ ಟಿಕೇಟ್ ಖರೀದಿಸಲು ನಿರಾಕರಿಸಿದ್ದ ಆದರೆ ಯುವಕರು ಅವರ ಒತ್ತಾಯ ಬಿಡಲಿಲ್ಲ... ಆ ಸಂದರ್ಭದಲ್ಲಿ ನನಗೆ ಏನೋ ಅನಿಸಿತು "ನಾಗರಾಜ ಲಾಟರಿ ಟಿಕೆಟ್ ತೆಗೆದುಕೋ ನಿನಗೆ ವಾಷಿಂಗ್ ಮಿಷನ್ ಬಹುಮಾನ ಬರುತ್ತದೆ" ಎಂದೆ, ಅವನು ನನ್ನ ಮಾತಿಗೆ ಒಪ್ಪಿ ಒಂದು ಟಿಕೆಟ್ ತೆಗೆದುಕೊಂಡ.
  ಜಾತ್ರೆಯ ಕೊನೆಯ ದಿನ ರಾತ್ರಿ ಹನ್ನೆರಡು ಇಪ್ಪತ್ತಕ್ಕೆ ಕಿರಿಯ ಗೆಳೆಯ ಜಾತ್ರಾ ಸಮಿತಿ ಪ್ರದಾನ ಕಾರ್ಯದರ್ಶಿ ಪ್ರಮೋದ್ ಒಂದು ವಾಟ್ಸಾಪ್ ಮೆಸೇಜ್ ಹಾಕಿದ್ದರು ಅದರಲ್ಲಿ #ನೀವು_ಹೇಳಿದಂತೆ_ನಾಗರಾಜನಿಗೆ_ವಾಷಿಂಗ್_ಮಿಷನ್_ಲಾಟರಿಯಲ್ಲಿ_ಬಂದಿದೆ ಅಂತ.
  ಇದರ ಬಗ್ಗೆ ಊರಲ್ಲಿ ಅವರವರಿಗೆ ತೋಚಿದಂತೆ ಮಾತಾಡಿಕೊಂಡಿದ್ದಾರೆ, ನನ್ನ ಜೀವನದಲ್ಲಿ ಇಂತಹ ನೂರಾರು ಘಟನೆಗಳು ನಡೆದಿದೆ, ನನಗೂ ಗೊತ್ತಿಲ್ಲ ಇದು ಹೇಗೆ ಸಾಧ್ಯ? ಅಂತ.
ಇಂತಹ ಅನುಭವಗಳನ್ನು ಬರೆದಿಡುತ್ತಿದ್ದೇನೆ
ಇಲ್ಲಿ ಕ್ಲಿಕ್ ಮಾಡಿ ಇಂತಹ ಇನ್ನೋಂದು ಘಟನೆ ಓದಿ
https://arunprasadhombuja.blogspot.com/2023/05/blog-number-1480-2.html

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ