Skip to main content

Blog number 1945.ಮಹಾತ್ಮಾ ಗಾಂಧೀಜಿ ಜಗತ್ತಿನ ಅಹಿಂಸಾವಾದಿಗಳಿಗೆ ನೀಡಿದ ಹೋರಾಟದ ಅಸ್ತ್ರ ಸತ್ಯಾಗ್ರಹ ಇವತ್ತು ಮಹಾತ್ಮಾ ಗಾಂಧಿ ವಿರೋದಿಸುವರೂ ಬಳಸುವ ಅಸ್ತ್ರ ಈ ಮೂಲಕ ಮಹಾತ್ಮ ಗಾಂಧಿ ದಾರಿಯಲ್ಲಿ ಸಾಗುವ ಅವರ ವಿರೋದಿಗಳು ಇದು ಸತ್ಯಮೇವಾ ಜಯತೆ ಅಲ್ಲವೇ?

#ಮಹಾತ್ಮಾಗಾಂಧೀಜಿ_ಜಗತ್ತಿಗೆ_ನೀಡಿದ_ಪ್ರತಿಭಟನೆಯ_ಅಸ್ತ್ರ

#ಅಹಿಂಸಾ_ಮಾಗ೯ದ_ಸತ್ಯಾಗ್ರಹ_ಇದಕ್ಕೆ_ಕಾರಣವಾಗುವ_ಅವರ_ಜೀವನದ_ಅನೇಕ_ಘಟನೆಗಳು

#ಡರ್ಬಾನ್_ನ್ಯಾಯಾಲಯದಲ್ಲಿ_1893ರ_ಘಟನೆ

#ಗಾಂಧೀಜಿ_ಪೇಟಾ_ಧರಿಸಿದ್ದರಿಂದ_ಕೋರ್ಟ್_ಪ್ರವೇಶ_ನಿರಾಕರಿಸಲಾಗಿತ್ತು

#ಇದನ್ನು_ಪ್ರತಿಭಟಿಸಿ_ಗಾಂಧೀಜಿ_ನ್ಯಾಯಾಲಯದಿಂದ_ಹೊರನಡೆಯುತ್ತಾರೆ.

#ಗಾಂಧೀಜಿ_ವಿರೋಧಿಸುವವರೂ_ಗಾಂಧೀಜಿಯ_ಈ_ಅಸ್ತ್ರ_ಬಳಸಿ_ಗಾಂಧೀ_ಹಾದಿಯಲ್ಲಿ_ನಡೆಯುತ್ತಾರೆ.

#ಇದು_ಸತ್ಯ_ಮೇವ_ಜಯತೆ

#ಗಾಂಧೀಜಿ_ವಿರೋಧಿಸಿ_ಕೆಟ್ಟದಾಗಿ_ಪೋಸ್ಟ್_ಮಾಡಿದ್ದ_ಯುವಕ

#ಗಾಂಧೀಜಿ_ಆತ್ಮಚರಿತ್ರೆ_ಓದೇ_ಇಲ್ಲ

#ಗಾಂಧೀಜಿ_ಇಹಲೋಕ_ತ್ಯಜಿಸಿದ_55_ವರ್ಷದ_ನಂತರ_ಜನಿಸಿದಾತ.
 1893 ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದ ಶ್ರೀಮಂತ ವರ್ತಕರಾದ ದಾದಾ ಅಬ್ದುಲ್ಲಾ & ಕಂಪನಿ ನಟಾಲ್ ಇವರ ವ್ಯಾಜ್ಯ ಬಗೆಹರಿಸಲು ಅವರ ಆಹ್ವಾನದ ಮೇರೆಗೆ ಆಫ್ರಿಕಾಗೆ ಹೋಗುತ್ತಾರೆ.
  ಡರ್ಬಾನ್ ನ ನ್ಯಾಯಾಲಯಕ್ಕೆ ದಾದಾ ಅಬ್ದುಲ್ಲಾರ ಜೊತೆಗೆ ಹೋಗಿ ನ್ಯಾಯಾಲಯದಲ್ಲಿ ವಕೀಲರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಕೊಳ್ಳುತ್ತಾರೆ.
 ಅಲ್ಲಿನ ಮ್ಯಾಜಿಸ್ಟ್ರೇಟರ್ (ಯುರೋಪಿಯನ್ ) ಗಾಂಧೀಜಿಗೆ ನಿಮ್ಮ ಪೇಟಾ (ಟರ್ಬನ್) ಹೊರಗಿಟ್ಟು ಬನ್ನಿ ಅನ್ನುತ್ತಾರೆ, ಗಾಂಧೀಜಿಗೆ ಇದು ತಕ್ಷಣ ಅರ್ಥವಾಗುವುದಿಲ್ಲ, ಮ್ಯಾಜಿಸ್ಟ್ರೇಟರ್ ತಮ್ಮ ಕೈ ಬೆರಳು ಗಾಂಧೀಜಿಗೆ ತೋರಿಸಿ ನಿಮಗೆ ಹೇಳುತ್ತಿರುವುದಾಗಿ ತಿಳಿಸಿದಾಗ ಗಾಂಧೀಜಿ ಸುತ್ತಲೂ ನೋಡುತ್ತಾರೆ ಅಲ್ಲಿ ಮುಸ್ಲಿಂ ಮತ್ತು ಪಾರ್ಸಿ ವಕೀಲರುಗಳು ಅವರವರ ದರ್ಮಾದಾಧಾರಿತ ಟರ್ಬನ್ ಧರಿಸಿ ಕುಳಿತಿರುತ್ತಾರೆ!
  ಗಾಂಧೀಜಿಯವರಿಗೆ ಬ್ರಿಟಿಷರು ಭಾರತೀಯರನ್ನ ಈ ರೀತಿ ಕೂಲಿಯಂತೆ ಕಾಣುವ ಈ ವರ್ಣಬೇದ ನೀತಿ ಸಹಿಸಲಾಗದೆ ತಮ್ಮ ಪ್ರತಿಭಟನೆ ದಾಖಲಿಸಿ ನ್ಯಾಯಾಲಯ ಬಹಿಷ್ಕರಿಸಿ ಹೊರನಡೆಯುತ್ತಾರೆ.
  ನಂತರ ಅಪ್ರಿಕಾದ ಪ್ರೆಸ್ ಗೆ ಸವಿವರವಾಗಿ ಈ ವರ್ಣಬೇದ ನೀತಿ ವಿವರಿಸುತ್ತಾರೆ, ಗಾಂಧೀಜಿ ಅವರ ಈ ಪತ್ರಿಕಾಗೋಷ್ಟಿ ಆ ಕಾಲದಲ್ಲಿ ಡರ್ಬಾನ್ ನ್ಯಾಯಾಲಯದ ಯುರೋಪಿಯನ್ ನ್ಯಾಯಾದೀಶರ ವರ್ಣಬೇದ ನೀತಿಯ ತಾರತಮ್ಯ ಎಂದು ದೊಡ್ಡ ಸುದ್ದಿ ಆಗುತ್ತದೆ.
   ಇಂತಹ ನೂರಾರು ಘಟನೆಗಳು ಮಹಾತ್ಮಾ ಗಾಂಧೀಜಿ ಅವರಿಗೆ ಅಹಿಂಸಾ ಮಾರ್ಗದಲ್ಲಿ ಪ್ರತಿಭಟನೆ ದಾಖಲಿಸುವ ಸತ್ಯಾಗ್ರಹ ಎಂಬ ಸರಳ ಅಸ್ತ್ರ ಕಂಡು ಹಿಡಿಯಲು ಸಾಧ್ಯವಾಯಿತು.
  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗಲೂ ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹ ಧರಣಿಗಳು ಪ್ರಭಲ ಅಸ್ತ್ರವಾಗಿ ಬಳಸಿಕೊಂಡು ಬರುತ್ತಿದ್ದೇವೆ.
   ಇತ್ತೀಚಿಗೆ ಮಹಾತ್ಮಾಗಾಂಧೀ ಅವರನ್ನು ಹಿಗ್ಗಾ ಮುಗ್ಗ ಅತ್ಯಂತ ಕೀಳು ಭಾಷೆಯಲ್ಲಿ ಹೋರಾಟಗಾರ ಯುವಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ... ಮೊನ್ನೆ ಅವನದ್ದೆ ಆದ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಲು ಬಂದಿದ್ದ, ಆಗ ಅವನು ಅವನಿಗೆ ತೊಂದರೆ ಉಂಟು ಮಾಡಿದ ಸದರಿ ಅಧಿಕಾರಿಯ ವಿರುದ್ಧ ದರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ.
   ಆಗ ನಾನು ಮಹಾತ್ಮಾಗಾಂಧೀಜಿ ಅವರ ಆಫ್ರಿಕಾದ ಡರ್ಬಾನಿನ ಬ್ರಿಟೀಷ್ ನ್ಯಾಯಾದೀಶರ ವಿರುದ್ಧವಾಗಿ ಭಾರತೀಯ ಪೇಟಾ ನಿರಾಕರಿಸಿದ್ದಕ್ಕೆ ಯುರೋಪಿಯನ್ ನ್ಯಾಯಾದೀಶರ ವರ್ಣ ಬೇಧ ನೀತಿ ವಿರುದ್ದ ಅವರ ಪ್ರತಿಭಟನೆಯ ವಿವರ ವಿವರಿಸಿದೆ, ಪೆಚ್ಚಾಗಿ ಇದನ್ನು ಕೇಳಿಸಿಕೊಂಡ ಆತನಿಗೆ ನಾನು ಒಂದು ಪ್ರಶ್ನೆ ಕೇಳಿದೆ, ನೀವು ಗಾಂಧೀಜಿ ಆತ್ಮ ಚರಿತ್ರೆ ಓದಿದೀರಾ ?..ಇದಕ್ಕೆ ಉತ್ತರವಾಗಿ ಅಡ್ಡಡ್ಡ ತಲೆ ಆಡಿಸಿದ.
   ಮತ್ಯಾಕೆ ಆ ಪರಿ ಗಾಂಧೀಜಿ ವಿರೋದ? ಅಂದರೆ ಅವನ ಹತ್ತಿರ ಉತ್ತರವಿಲ್ಲ, ಬಹುಶಃ ದರ್ಮಗ್ರಂಥಗಳನ್ನು ಓದದೇ ಅರಿಯದೇ ವೀರಾವೇಷದಿಂದ ಪರಧರ್ಮ ನಿಂದಿಸುವಂತವರ ಸಾಲಿನಲ್ಲಿ ಇಂತವರೇ ಇದ್ದಾರೆ.
  ಗಾಂಧೀಜಿ ವಿರೋದಿಗಳೂ ಗಾಂಧೀಜಿ ಹಾಕಿ ಕೊಟ್ಟ ಅಹಿಂಸಾ ಸತ್ಯಾಗ್ರಹದ ಮಾರ್ಗದಲ್ಲಿ ನಡೆಯುತ್ತಾರೆ ಎಂಬುದು ಸತ್ಯಮೇವ ಜಯತೆ ಅಲ್ಲವೇ?...

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ