Skip to main content

Blog number 1939. ಮಹಾನ್ ರೈತ ನಾಯಕ ನಂಜುಂಡ ಸ್ವಾಮಿ ಅವರ 20 ನೇ ಪುಣ್ಯ ತಿಥಿಯ ಸ್ಮರಣೆಗಳು

#ಇವತ್ತು_ಪ್ರೋಫೆಸರ್_ನಂಜು೦ಡಸ್ವಾಮಿಯವರ_20ನೇ_ಪುಣ್ಯತಿಥಿ

#ಪ್ರೊ_ಮಹಾಂತ_ದೇವರು_ನಂಜುಂಡಸ್ವಾಮಿ_ಜನನ_13_ಫೆಬ್ರವರಿ_1936_ಮರಣ_3_ಫೆಬ್ರವರಿ_2004

 #ಒಬ್ಬ_ಗಾಂಧಿವಾದಿ_ನಾಯಕ_ರೈತ_ಮುಖಂಡ,

#ಬಂಡಿ_ಯಾತ್ರೆಯಲ್ಲಿ_ಆವಿನಳ್ಳಿಯಲ್ಲಿ_ಎತ್ತಿನಗಾಡಿಯಲ್ಲಿ_ಒಟ್ಟಿಗೆ_ಕುಳಿತಿದ್ದು

#ಕೊನೆಯ_ಬೇಟಿಯಲ್ಲಿ_ಅವರು_ನನಗೆ_ನೀಡಿದ_ಬೀಡಿ_ಕಟ್ಟು

#ಇವತ್ತಿಗೆ_20_ವರ್ಷದ_ಹಿಂದೆ_ಮಧ್ಯರಾತ್ರಿ_ಅವರ_ಅಂತಿಮ_ದರ್ಶನಕ್ಕೆ
 #ಸಾಗರದಿಂದ_ಬೆಂಗಳೂರಿನ_ರಾಜರಾಜೇಶ್ವರಿ_ನಗರದ_ಅವರ_ಮನೆ_ತಲುಪಿದ್ದೆವು.

#ನಮ್ಮ_ತಂದೆ_ಇವರ_ಜೈಲ್_ಭರೋ_ಕರೆಯಿಂದ_ಜೈಲಿಗೆ_ಹೋದವರು.

#ಅಗ್ನಿ_ಶ್ರೀಧರ್_ಬೆಂಗಳೂರಿನ_ಅಂಬೇಡ್ಕರ್_ಭವನದಲ್ಲಿ_ಪ್ರೋಪೆಸರ್_ನಡಿನಮನ_ಕಾರ್ಯಕ್ರಮದಲ್ಲಿ

#ನನಗೆ_ನುಡಿ_ನಮನ_ಅರ್ಪಿಸುವ_ಅವಕಾಶ_ನೀಡಿದ್ದರು.
#ಇವತ್ತು_ಪ್ರೋಫೆಸರ್_ನಂಜು೦ಡಸ್ವಾಮಿಯವರ_20ನೇ_ಪುಣ್ಯತಿಥಿ

#ಪ್ರೊ_ಮಹಾಂತ_ದೇವರು_ನಂಜುಂಡಸ್ವಾಮಿ_ಜನನ_13_ಫೆಬ್ರವರಿ_1936_ಮರಣ_3_ಫೆಬ್ರವರಿ_2004

 #ಒಬ್ಬ_ಗಾಂಧಿವಾದಿ_ನಾಯಕ_ರೈತ_ಮುಖಂಡ,

#ಬಂಡಿ_ಯಾತ್ರೆಯಲ್ಲಿ_ಆವಿನಳ್ಳಿಯಲ್ಲಿ_ಎತ್ತಿನಗಾಡಿಯಲ್ಲಿ_ಒಟ್ಟಿಗೆ_ಕುಳಿತಿದ್ದು

#ಕೊನೆಯ_ಬೇಟಿಯಲ್ಲಿ_ಅವರು_ನನಗೆ_ನೀಡಿದ_ಬೀಡಿ_ಕಟ್ಟು

#ಇವತ್ತಿಗೆ_20_ವರ್ಷದ_ಹಿಂದೆ_ಮಧ್ಯರಾತ್ರಿ_ಅವರ_ಅಂತಿಮ_ದರ್ಶನಕ್ಕೆ
 #ಸಾಗರದಿಂದ_ಬೆಂಗಳೂರಿನ_ರಾಜರಾಜೇಶ್ವರಿ_ನಗರದ_ಅವರ_ಮನೆ_ತಲುಪಿದ್ದೆವು.

#ನಮ್ಮ_ತಂದೆ_ಇವರ_ಜೈಲ್_ಭರೋ_ಕರೆಯಿಂದ_ಜೈಲಿಗೆ_ಹೋದವರು.

#ಅಗ್ನಿ_ಶ್ರೀಧರ್_ಬೆಂಗಳೂರಿನ_ಅಂಬೇಡ್ಕರ್_ಭವನದಲ್ಲಿ_ಪ್ರೋಪೆಸರ್_ನಡಿನಮನ_ಕಾರ್ಯಕ್ರಮದಲ್ಲಿ

#ನನಗೆ_ನುಡಿ_ನಮನ_ಅರ್ಪಿಸುವ_ಅವಕಾಶ_ನೀಡಿದ್ದರು.
   ಮಹಾನ್ ರೈತ ನಾಯಕರಾದ ಪ್ರೋಪೆಸರ್ ಎನ್. ಡಿ. ನಂಜುಂಡ ಸ್ವಾಮಿ ಅವರು 1999 ರಲ್ಲಿ ನನ್ನ ಮನೆಗೆ  ಬಂದದ್ದು ನನಗಿOತ ನನ್ನ ತಂದೆಗೆ ತುಂಬಾ ಸಂತೋಷ ಆಗಿತ್ತು, ಪ್ರೋಪೆಸರ್ ನಂಜುಂಡ ಸ್ವಾಮಿ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಇವರನ್ನು ಅವತ್ತು ಕರೆ ತಂದವರು ಗೆಳೆಯರಾದ ರೈತ ಹೋರಾಟ ದಿನಪತ್ರಿಕೆ ಸಂಪಾದಕರಾಗಿದ್ದ ಎನ್ ಡಿ ವಸಂತ ಕುಮಾರ್.
 ಇವರ ಬಾಷಣ ಜಿಲ್ಲೆಯಲ್ಲಿ ಎಲ್ಲೇ ಇದ್ದರೂ ನಮ್ಮ ತಂದೆ ಹೋಗುತ್ತಿದ್ದರು, ಇವರ ಜೈಲ್ ಬರೋ ಕರೆಯಿಂದ ನಮ್ಮ ತಂದೆ ಜೈಲಿಗೂ ಹೋಗಿ ಬಂದವರು.
   ಅವತ್ತು ಪ್ರೋಫೆಸರ್ ಗೆ ನಮ್ಮ ತಂದೆ ಹೂವಿನ ಹಾರ ಹಾಕಿದರು ಯಾರಿಂದಲೂ ಹಾರ ಸ್ವೀಕರಿಸದ ಅವರು ನಮ್ಮ ತಂದೆಯ ಅನಾರೋಗ್ಯ, ವಯಸ್ಸು ಮತ್ತು ಅಭಿಮಾನಕ್ಕಾಗಿ ಹಾರ ಹಾಕಿಸಿಕೊಂಡೆ ಎಂದು ನಗು ಬೀರಿದರು ಅವರಿಗೆ ಕಾಫಿ ಸಿಗರೇಟಿನ ಆತಿಥ್ಯ ನೀಡಿದ್ದು ನಮ್ಮ ಮನೆಯ ಸೌಭಾಗ್ಯ.
    ಒಮ್ಮೆ ಮೈಸೂರಿಗೆ ಹೋಗುವಾಗ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಮತ್ತು ನಾನು ಪ್ರೊಫೆಸರ್ ವಾಸಿಸುತ್ತಿದ್ದ ರಾಜರಾಜೇಶ್ವರಿ ನಗರದ ಅವರ ಮನೆಗೆ ಹೋಗಿದ್ದೆವು, ತುಂಬಾ ಕೆಮ್ಮು ಕಾಡುತ್ತಿತ್ತು ಅವರಿಗೆ ಟೀಪಾಯಿ ಮೇಲೆ ಬೀಡಿ ಕಟ್ಟು ಇಟ್ಟುಕೊಂಡಿದ್ದರು, ಸಿಗರೇಟು ಬಿಟ್ಟಿರಾ?....ಎಂದೆ ಅದಕ್ಕೆ ಅವರು ತುಂಬಾ ಕೆಮ್ಮು ಅದಕ್ಕೆ ಈ ತಂಬಾಕು ಇಲ್ಲದ ನೀಲಗಿರಿ ಸೊಪ್ಪಿನ ಬೀಡಿ ಸೇಯುತ್ತಾ ಇದ್ದೇನೆ ಅಂದರು.
   ವಾಪಾಸು ನಾವು ಹೊರಟಾಗ ನನಗೆ ಒಂದು ಕಟ್ಟು ಬೀಡಿ ಕೊಟ್ಟರು, ನಾನು ದೂಮಪಾನ ಮಾಡುವುದಿಲ್ಲ ಆದರೆ ಅದೇನು ಹೇಳದೆ ಅವರು ನೀಡಿದ ಬೀಡಿ ಕಟ್ಟು ಸಂತೋಷದಿಂದ ಸ್ಟೀಕರಿಸಿದೆ, ಆ ಬೀಡಿ ಹೆಸರು #ವದ೯ಮಾನ_ಬೀಡಿ ಎಂದು ನೆನಪು.
   ಅವರ ಬಂಡಿ ಯಾತ್ರೆ (ಕನ್ಯಾಕುಮಾರಿಯಿ೦ದ ಮು೦ಬೈ ವರೆಗೆ ಗ್ಯಾಟ್ ಒಪ್ಪಂದ ವಿರೋದದ ಜನ ಜಾಗೃತಿ ಯಾತ್ರೆ) ಸಾಗರ ತಾಲ್ಲೂಕಿಗೆ ಬಂದಾಗ ನನ್ನ ಮನೆ ಯಡೇಹಳ್ಳಿಯ ವೃತ್ತದಿಂದ ಸ್ವಾಗತಿಸಿ,ಸಭೆ ನಡೆಸಿ ಸಾಗರದವರೆಗೆ ನಾನು, ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಸಾಗರದ ಹಿರಿಯ ರೈತ ನಾಯಕ ಚೆನ್ನಬಸಪ್ಪ ಗೌಡರ ಜೀಪಿನಲ್ಲಿ ಆವಿನಳ್ಳಿ ಸಭೆ ಮುಗಿಸಿ ಸಾಗರದ ಸಭೆಗೆ ಹೋಗಿದ್ದು ಒಂದು ನೆನಪು.
   ಅವತ್ತು ಆವಿನಳ್ಳಿಯಲ್ಲಿ ಎತ್ತಿನ ಗಾಡಿ ಮೆರವಣಿಗೆ, ರೈತ ನಾಯಕ ಪ್ರೊಪೆಸರ್ ನಂಜುಂಡ ಸ್ವಾಮಿ, ನಾನು ಮತ್ತು ಗಣಪತಿಯಪ್ಪ ಒಂದೇ ಗಾಡಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಆವಿನಳ್ಳಿಯಲ್ಲಿ ಬೀದಿಯಲ್ಲಿ ಸಾಗಿದ್ದು ಜೀವಮಾನದಲ್ಲಿ ಮರೆಯದ ನೆನಪು ಅದನ್ನು ಇವತ್ತು ನೆನಪಿಸಿಕೊಂಡರೂ ಸಂತೋಷ ಉಂಟು ಮಾಡುತ್ತದೆ.
  ನೀರಾ ಚಳವಳಿಯಲ್ಲಿ ರಿಪ್ಪನ್ ಪೇಟೆಯಲ್ಲಿ ಪ್ರೋಪೆಸರ್ ಸಭೆಯಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರ ಜೊತೆ ಭಾಗವಹಿಸಿದ್ದು ಎಲ್ಲಾ ಈಗ ನೆನಪುಗಳು.
    3 ಪೆಬ್ರುವರಿ 2004ರ ಮಧ್ಯಾಹ್ನ ಮಹಾನ್ ರೈತ ನಾಯಕ ಪ್ರೋಪೆಸರ್ ಎಂ. ಡಿ. ನಂಜುಂಡ ಸ್ವಾಮಿ ಇಹ ಲೋಕ ತ್ಯಜಿಸಿದ ಸುದ್ದಿ ಕೇಳಿ ಸಾಗರದ ರೈತ ಮುಖಂಡರಾದ ಚೆನ್ನಬಸಪ್ಪ ಗೌಡರು, ವಸಂತ ಕುಮಾರ್, ಗುಳಳ್ಳಿ ಬಸವರಾಜ ಗೌಡರು,ಸೇನಾಪತಿಗೌಡರು ಮತ್ತು ಅನೇಕರು ನನ್ನ ಮನೆಗೆ ಬಂದು ನಾವೆಲ್ಲರೂ ಒಂದಾಗಿ ತರಾತುರಿಯಿಂದ ಹೊರಟು ಮಧ್ಯರಾತ್ರಿ ಬೆಂಗಳೂರು ತಲುಪಿ ಅಲ್ಲಿ ಗೆಳೆಯರು ತಂಗಿದ್ದ ಲಾಡ್ಜ್ ನಲ್ಲಿ ಸ್ನಾನ ಇತ್ಯಾದಿ ಪೂರೈಸಿ  ಬೆಳಗಿನ ಜಾವವೇ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪ್ರೋಸೆಸರ್ ರ ಮನೆ ತಲುಪಿದ್ದೆವು.
   ಅಲ್ಲಿ ಕೆಲವರು ರೈತಗೀತೆ ಹಾಡುತ್ತಿದ್ದರು, ಮಹಾನ್ ರೈತ ನಾಯಕರ ಚೇತನ ಚಿರನಿದ್ರೆಯಲ್ಲಿ ಮಲಗಿತ್ತು ರಾಜ ರಾಜೇಶ್ವರಿ ನಗರದ ಮುಖ್ಯ ರಸ್ತೆಯ ನೀರವ ಮಧ್ಯರಾತ್ರಿಯಲ್ಲಿ ನಾವೆಲ್ಲ ಅವರ ಸುತ್ತ ಕುಳಿತು ಅವರ ಮತ್ತು ನಮ್ಮ ಒಡನಾಟದ ಹಳೆಯ ನೆನಪುಗಳ ಸ್ಮರಿಸುತಾ ಇದ್ದೆವು.
   ಬೆಳಗಾಗುತ್ತಿದ್ದ೦ತೆ ಸಾವಿರಾರು ರೈತರು, ಅವರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಅಲ್ಲಿಗೆ ಬಂದು ಸೇರಿದರು, ರೈತ ಮುಖ೦ಡ ಪುಟ್ಟಣ್ಣಯ್ಯನವರು ಅಂತಿಮ ದಶ೯ನಕ್ಕೆ ಬಂದಾಗ ಪ್ರೊಫೆಸರರ ಮಗ ವಿರೋದ ವ್ಯಕ್ತಪಡಿಸಿದ್ದು ಮಾತ್ರ ಆ ಕ್ಷಣದಲ್ಲಿ ನಮಗೆಲ್ಲ ಸರಿ ಅನ್ನಿಸಲಿಲ್ಲ.
   ರಾಜ್ಯ ಸಕಾ೯ರದ ಪರವಾಗಿ ಮಂತ್ರಿ ಕಾಗೋಡು ತಿಮ್ಮಪ್ಪ ಅಂತಿಮ ಗೌರವ ಸಲ್ಲಿಸಿದರು ನಂತರ ರೈತ ನಾಯಕರ ಅಂತ್ಯ ಸಂಸ್ಕಾರ ನಡೆಯುವ ಸ್ಥಳ ಮೈಸೂರಿಗೆ ರೈತ ನಾಯಕ ಪ್ರೋಪೆಸರ್ ನಂಜುಂಡ ಸ್ವಾಮಿ ಅವರ ಅಂತಿಮ ಯಾತ್ರೆ ಪ್ರಾರಂಭವಾಯಿತು.
   ಕೆಲ ದಿನದ ನಂತರ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅಗ್ನಿ ಶ್ರೀಧರ್ ಪ್ರೋಪೆಸರ್ ನಂಜುಂಡಸ್ವಾಮಿ ಅವರಿಗೆ ನುಡಿ ನಮನ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು, ಆ ಸಭೆಯಲ್ಲಿ ನನಗೂ ನುಡಿ ನಮನ ಅರ್ಪಿಸುವ ಅವಕಾಶ ನೀಡಿದ್ದರು ನಾನು ಅಲ್ಲಿ ನನ್ನ ಮತ್ತು ಪ್ರೋಪೆಸರ್ ಅವರ ಬೇಟಿಯ ನೆನಪುಗಳ ಜೊತೆ ಅವರು ಅವತ್ತು ಅವರ ರಾಜ ರಾಜೇಶ್ವರಿ ನಗರದ ಮನೆಯಲ್ಲಿ ನೀಡಿದ ನೀಲಗಿರಿ ಸೊಪ್ಪಿನ ಬೀಡಿ ಕಟ್ಟು ನೀಡಿದ ವಿಚಾರ ನುಡಿ ನಮನದಲ್ಲಿ ನುಡಿದಿದ್ದೆ.
    20 ವಷ೯ ಕಳೆದರೂ ಪ್ರೊಪೆಸರರ ವಿಚಾರಗಳು ರಾಜ್ಯದ ಜನ ಮನದಿಂದ ಮಾಸಿಲ್ಲ ಆದರೆ ಅದರ ನವೀಕರಣ ಆಗುತ್ತಿದ್ದರೆ ಮಾತ್ರ ಮುಂದಿನ ಜನಾಂಗಕ್ಕೆ ತಲುಪಬಹುದು.

 ನೆನಪು/ಬರಹ: ಕೆ.ಅರುಣ್ ಪ್ರಸಾದ್.
ಮಾಜಿ ಜಿ.ಪಂ ಸದಸ್ಯ.
ಆನಂದಪುರಂ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ