Skip to main content

Blog number 1963. ನಮ್ಮ ಊರಿನ ವರಸಿದ್ಧಿ ವಿನಾಯಕ ದೇವರ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಅನ್ನ ಸಂತರ್ಪಣೆ

#ನಮ್ಮ_ಊರಿನ_ಜಾತ್ರೆಯಲ್ಲಿ_ಹೋಳಿಗೆ_ತುಪ್ಪದ_ಅನ್ನಸಂತರ್ಪಣೆ

#ಭಕ್ತರಿಗೆ_ಮದುವೆ_ಮನೆ_ರೀತಿ_ಊಟೋಪಚಾರ

#ಬಫೆ_ಪದ್ದತಿ_ಇಲ್ಲ

#ಇದಕ್ಕೆ_ಕಾರಣ_ಇದೆ....
  ಮಳೆ ನಿಂತರೂ ಮಳೆಯ ಹನಿಗಳು ನಿಂತಿಲ್ಲ ಎಂಬಂತೆ
ನಮ್ಮೂರ ಜಾತ್ರೆಯ ಝುಲಕುಗಳು....
     ನಮ್ಮ ಊರಾದ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಏಕೈಕ #ಶ್ರೀವರಸಿದ್ಧಿವಿನಾಯಕ_ಸ್ವಾಮಿ ದೇವಸ್ಥಾನ ಇರುವುದು ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿದೆ.
  ಈ ವರ್ಷದ ಜಾತ್ರೆ ಮತ್ತು ರಥೋತ್ಸವ 18ನೆ ವರ್ಷದ್ದು (13- ಪೆಬ್ರುವರಿ- 2024 ಮಂಗಳವಾರ)  ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಅನ್ನ ಸಂತರ್ಪಣೆ ದೇವಾಲಯದ ಆವರಣದಲ್ಲೇ ಕುಳ್ಳಿರಿಸಿ ಟೇಬಲ್ ಊಟ ನೀಡಲಾಗುತ್ತಿದೆ.
  ಇದಕ್ಕೂ ಮೊದಲಿನ ವರ್ಷಗಳಲ್ಲಿ ಬಫೆ ಸಿಸ್ಟಮ್ ನಲ್ಲಿ ದೇವಾಲಯದಿಂದ ದೂರದಲ್ಲಿ ಅನ್ನಸಂತರ್ಪಣೆ ನಡೆಸುತ್ತಿದ್ದೆವು,ಇದು ತುಂಬಾ ಸುಲಭವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಆಗುತ್ತಿತ್ತು ಆದರೆ ಅನ್ನಪ್ರಸಾದ ಸ್ವೀಕರಿಸುವವರಿಗೆ ಇದು ತುಂಬಾ ಕಷ್ಟವಾಗುತ್ತಿತ್ತು ಅದರಲ್ಲೂ ವಯೋವೃದ್ದರಿಗೆ ಮತ್ತು ಮಕ್ಕಳ ಜೊತೆಗೆ ಬಂದ ಸ್ತ್ರೀಯರಿಗೆ ಹೊಟ್ಟೆ ತುಂಬಾ ಊಟ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.
   ಊಟದ ತಟ್ಟೆಯಲ್ಲಿ ಎಲ್ಲವನ್ನು ಬಡಿಸುತ್ತಿದ್ದರು ಇದೊಂದು ರೀತಿ ಅಯೋಮಯ ಅನ್ನ ಸಂತರ್ಪಣೆ ಆಗುತ್ತಿತ್ತು.
   ಪ್ರತಿ ವರ್ಷ ರಥೋತ್ಸವದ ದಿನ ಬಂದು ಭಾಗವಹಿಸುವ ಸಾಗರದ ಸಿದ್ಧ ಸಮಾಧಿ ಯೋಗ ಸಂಸ್ಥೆಯ ಶಿಕ್ಷಕರಾದ ಶ್ರೀಯುತ ಗಣೇಶ್ ಗುರೂಜಿ ಮಧ್ಯಾಹ್ನದ ಅನ್ನಸಂತರ್ಪಣೆ ಸಮಯದಲ್ಲಿ ಅನೇಕ ಭಜನೆಗಳನ್ನು ಹಾಡಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ವಿಶೇಷವಾಗಿ ಭಕ್ತಿಯ ಭಾವ ಲಹರಿಗೆ ಒಯ್ಯುತ್ತಾರೆ.
   ಅವರು ಪ್ರಖ್ಯಾತ ಸಿದ್ಧ ಸಮಾಧಿ ಗುರುಗಳಾದ ಪ್ರಭಾಕರ್ ಗುರೂಜಿಯ ಶಿಷ್ಯರು ಅವರು ನಮಗೆ ನೀಡಿದ ಸಲಹೆ ಏನೆಂದರೆ, ನೀವು ಬಫೆ ಸಿಸ್ಟಮ್ ಅನ್ನು ನಿಲ್ಲಿಸಿ ದೇವಾಲಯದ ಆವರಣದಲ್ಲಿ ಎಷ್ಟೇ ಜನ ಬಂದರೂ ಅವರಿಗೆ ಕುಳಿತು ಸಮಾಧಾನದಿಂದ ಊಟ ಮಾಡಿ ಸಂತೃಪ್ತಿಯನ್ನು ಮಾಡಬೇಕು ಎಂಬುದು.
   ಇದೆ ಪ್ರಕಾರವಾಗಿ ನಮ್ಮ ದೇವಾಲಯದಲ್ಲಿ ಅವರ ಕೋರಿಕೆಯಂತೆ ಎಲ್ಲಾ ಅನ್ನಸಂತರ್ಪಣೆಗೆ ಭಾಗವಹಿಸುವ ಭಕ್ತರಿಗೆ ಕುಳ್ಳಿರಿಸಿ ಟೇಬಲ್ ಊಟದ ವ್ಯವಸ್ಥೆ ಮಾಡಲಾಗುತ್ತದೆ,ಟೇಬಲ್ ಮೇಲೆ ಪೇಪರ್ ರೋಲ್ ಹಾಸಿ, ಬಾಳೆ ಎಲೆಯಲ್ಲಿ- ಉಪ್ಪು- ಉಪ್ಪಿನಕಾಯಿ- ಹಪ್ಪಳ -ಕೋಸಂಬರಿ- ಪಲ್ಯ -ಚಿತ್ರನ್ನ -ಹೋಳಿಗೆ- ತುಪ್ಪ -ಅನ್ನ- ಹುಳಿ -ತಿಳಿಸಾರು- ಪಾಯಸ -ಮಜ್ಜಿಗೆ ಬಡಿಸಲಾಗುತ್ತದೆ, ಕುಡಿಯಲು ಶುದ್ಧ ಕ್ಯಾನ್ ನೀರುಗಳನ್ನು ಬಳಸಲಾಗುತ್ತದೆ.ಇದೊಂದು ರೀತಿ ಮದುವೆ ಮನೆಯ ರೀತಿ ಊಟೋಪಚಾರ.
   ರಥೋತ್ಸವದ ದಿನದ ಅನ್ನ ಸಂತರ್ಪಣೆಯಲ್ಲಿ ಹೋಳಿಗೆ ತುಪ್ಪ ತಪ್ಪಿಸಬಾರದೆಂಬ ನನ್ನ ಸಂಕಲ್ಪ ಇಲ್ಲಿ ತನಕ ದೇವರ ಕೃಪೆಯಿಂದ ನಿರಂತರವಾಗಿ ನಡೆದಿದೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಭಕ್ತರ ಸಂಖ್ಯೆಯಿಂದ ಕೆಲವು ವರ್ಷದ  ಹಿಂದೆ ಕೊನೆಯ ಪಂಕ್ತಿಯ ಕೆಲವರಿಗೆ ಹೋಳಿಗೆ ತುಪ್ಪ ಸಿಗುತ್ತಿರಲಿಲ್ಲ.
  ಆ ವರ್ಷ ಗೆಳೆಯ ಸ್ನೇಕ್ ಪ್ರಭಾಕರ್ ಗೆ ಹೋಳಿಗೆ ತುಪ್ಪ ಸಿಗಲಿಲ್ಲ ಮತ್ತು ಅವರ ಎದುರು ಸಾಲಿನಲ್ಲಿ ಊಟಕ್ಕೆ ಕುಳಿತಿದ್ದ ತುಂಬು ಬಸುರಿ ಹೆಣ್ಣು ಮಗಳಿಗೂ ಸಿಗಲಿಲ್ಲ ಅದರಿಂದ ನೊಂದ ಆ ಹೆಣ್ಣು ಮಗಳು, ಯಡೇಹಳ್ಳಿಯ ಗಣಪತಿ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಊಟ ಮಾಡುವ ಆಸೆಯಿಂದ ಬಂದಿದ್ದು ನಿರಾಸೆ ಆಯಿತು ಅಂದ ಮಾತು ನನ್ನ ಹೃದಯಕ್ಕೆ ತಟ್ಟಿತ್ತು... ಆ ಹೆಣ್ಣು ಮಗಳಿಗೆ ಮನೆಯಿಂದ ಹೋಳಿಗೆ ತರಿಸಿ ಕೊಡುವ ತೀರ್ಮಾನ ಮಾಡಿ ಅವರನ್ನ ಹುಡುಕಿದರೆ ಸಿಗಲಿಲ್ಲ.
  ಆ ನಂತರದ ವರ್ಷಗಳಿಂದ ನಮ್ಮ ಅವಶ್ಯಕತೆಗಿಂತ ಹೆಚ್ಚು ಹೋಳಿಗೆ ನಮ್ಮ #ಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ನಲ್ಲಿ ತಯಾರಿಸುತ್ತೇವೆ ರಥೋತ್ಸವದ ದಿನದ ನಮ್ಮ ಮನೆಯ ಅನ್ನ ಸಂತರ್ಪಣೆಯಲ್ಲಿ ಯಾರಿಗೂ ಹೋಳಿಗೆ ತುಪ್ಪ ಸಿಗಲಿಲ್ಲ ಎನ್ನುವಂತಿಲ್ಲ ಮತ್ತು ಅವತ್ತು ಉಳಿಯುವ ಹೆಚ್ಚುವರಿ ಹೋಳಿಗೆ ಮರುದಿನದ ದೇವಾಲಯದ ವತಿಯ ಅನ್ನ ಸಂತರ್ಪಣೆ ಯಲ್ಲಿ ಬಡಿಸುತ್ತಾರೆ.
   ಈ ವರ್ಷದ ರಥೋತ್ಸವದ ದಿನದ ಅನ್ನ ಸಂತರ್ಪಣೆಯಲ್ಲಿ ವಿಶೇಷ ಅತಿಥಿಗಳಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಸಿಂದನೂರಿನ  ಹನುಮನಗೌಡ ಬೆಳಕುರ್ಕಿ ಜೊತೆ ಆಗಮಿಸಿದ್ದ  ಸಾಗರದ ಪತ್ರಕರ್ತ U.P. ಜೋಸೆಫ್, ರೈತ ಮುಖಂಡರಾದ  ಎನ್.ಡಿ.ವಸಂತ ಕುಮಾರ್ , ಗುಳ್ಳಳ್ಳಿ ಬಸವರಾಜ ಗೌಡರು, ಜೇಡಿಸರದ ರಾಜಶೇಖರ ಗೌಡರು ಮುಂತಾದವರು ನಮ್ಮ ದೇವಾಲಯದ ಜಾತ್ರಾ ರಥೋತ್ಸವದ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದು ನಮಗೆಲ್ಲ ಸಂತೋಷ ತರಿಸಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...