Skip to main content

Posts

Showing posts with the label Worst and Bad caste motivated judgement made Dalavayi family Akkamma Mahasati

Blog number 2248.ದಳವಾಯಿ ಲಿಂಗಣ್ಣನ ಮೊಮ್ಮಗಳು ಅಕ್ಕಮ್ಮನನ್ನ ಮಾಸ್ತಿಯಾಗಿಸಿದ ದುಷ್ಟ ಜಾತಿವಾದಿ ಪಂಚಾಯಿತಿದಾರರು.

#ಬಿದನೂರು_ನಗರದ_ಸುದೀಂದ್ರ_ಭಂಡಾರಕರ್_ಬರೆದ_ಕಾದಂಬರಿ #ಸಶೇಷ #ಕೆಳದಿ_ಇತಿಹಾಸದ_ಆಸಕ್ತರು_ಒದಲೇ_ಬೇಕು #ಇದರಲ್ಲಿನ_ದಳವಾಯಿ_ಅಕ್ಕಮ್ಮ_ಮಾಸ್ತಿಯಾದ_ಕಥೆ #ಆಗಿನ_ಕಟ್ಟೆ_ಪಂಚಾಯ್ತಿಯ_ಅಮಾನುಷ_ತೀರ್ಪು #ಲಿಂಗಾಯಿತ_ಅಕ್ಕಮ್ಮ_ದೀವರ_ಮಂಡಾನಿ_ಯುವಕನ_ವಿವಾಹ_ಮಾಡಿಸುತ್ತಾರೆ #ಮರುಕ್ಷಣದ_ತೀರ್ಪು_ದೀವರ_ಮಂಡಾನಿ_ಯುವಕನಿಗೆ_ನೇಣು #ಮರಣದಂಡನೆ_ಜಾರಿ_ಮರುಕ್ಷಣದ_ತೀರ್ಪು_ಅಕ್ಕಮ್ಮನ_ಸಹಗಮನ. ಸಶೇಷ ಕಾದಂಬರಿಯ ಈ ಪುಟಗಳು ಒಮ್ಮೆ ಓದಿ....     ಶೇಷ...ಹಲವೊಮ್ಮೆ ಇತಿಹಾಸದ ಸಂಗತಿಗಳು ,  ಧಾರ್ಮಿಕ ನಡಾವಳಿಗೆ , ಇಂದಿನ ಆರೂಢಪ್ರಶ್ನೆ ಮುಂತಾದಕ್ಕೆ ಒಳಗಾಗಿ ಬದಲಾಗಿ ಹೋಗಿದೆ .ಪ್ರಶ್ನೆಗಳ ಉತ್ತರ ಸರಿಯಾಗಿ ಬಂದರೂ ಅದನ್ನು ಅರ್ಥೈಸುವ ಶಕ್ತಿ ಸೋತಿದೆ . ಇದು ನೋಡು ಅಕ್ಕಮ್ಮನಗುಡಿ .ಪಕ್ಕದಲ್ಲೇ ಅಂದಿನ ಸಾಕ್ಷಿ ಮರಗಳು .ಕೂಗಳತೆಯ ದೂರದ ಶಿವಲಿಂಗನ ಗುಡಿ .ಅಕ್ಕಮ್ಮನ ಗುಡಿಯ ಗಡಿಯಲ್ಲಿ ಮಾಸ್ತಿಕಲ್ಲು . ಅಕ್ಕಮ್ಮ .... ಹಿಂದೆ ಅಳಿದುಹೋದ ದಳವಾಯಿ ಲಿಂಗಪ್ಪನ ವಂಶದವಳು .   ಇದೇ ಕರಿಂಗೋಳಿ ಹೊಸವೆ ಮಾರ್ಗದ ದೇವರಸಲ್ಲಿಕೆಗುಡ್ಡ , ಸಿಡಿಕುಣಿಭೂತದಗುಡಿ , ಕುಂಟಿಗೆ ...ವಾರಂಬಳ್ಳಿ ಹೋಗುವ ಮಾರ್ಗದ ವರಕೋಡು - ಕೋಟೆಕಾನು  ಇದೆ .ಆಚೆ ಕೋಟೆಕಾನು ಹಳ್ಳ . ಅದಾಗ ಟಿಪ್ಪುವಿನ ಅಂತ್ಯವಾಗಿದೆ .ಮೈಸೂರಿನವರ ಆಡಳಿತ ಇದೆ . ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಠರೋ ಆ ಜಮೀನ್ದಾರನದೇ ...