Blog number 966. ಸಾಹಿತಿಗಳು ಬರಹಗಾರರೂ ಕೃಷಿಕರೂ ಆದ ಸಾಗರ ತಾಲ್ಲೂಕಿನ ಮೂಲದ ಮ.ರಾ.ಹೆಗ್ಗಡೆಯವರು ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ನೆಲೆಸಿದ್ದಾರೆ ಅವರು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದ ವಿಮರ್ಶೆ.
#ಶಿರಾಳಕೊಪ್ಪದ_ಮ_ರಾ_ಹೆಗ್ಗಡೆ_ಸಂಪ ಮೂಲತಃ ಸಾಗರ ತಾಲ್ಲೂಕಿನ ಅರಲಗೋಡು ಭಾಗದವರು, ಶಿರಾಳಕೊಪ್ಪದ ಪ್ರತಿಷ್ಟಿತ M N Picles ನಲ್ಲಿ ವ್ಯವಸ್ಥಾಪಕರಾಗಿದ್ದರು ಈಗ ಅಲ್ಲಿನ ನಿವಾಸಿಗಳಾಗಿ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಇವರು ಅಲ್ಪಜ್ಞ ಎಂಬ ಕಾವ್ಯನಾಮದಲ್ಲಿ ಸಂಸ್ಕೃತದ ಕೆಲವು ವಾಕ್ಯಗಳನ್ನ ಕನ್ನಡದಲ್ಲಿ ತಕ೯ ಬದ್ದವಾಗಿ ಒ0ದಕ್ಷರ ಸ್ಥಳ ವ್ಯತ್ಯಾಸ ಆದರೆ ಆಗುವ ಬೇರೆ ಅಥ೯/ ಅನಥ೯ ಆಗುವುದನ್ನ ಬರೆಯುತ್ತಾರೆ ನಿತ್ಯ ಅದನ್ನು ಓದುವ ಅವರ ಅಭಿಮಾನಿ ನಾನು. ಚಂಪಕಾ ಬಗ್ಗೆ ತಿಳಿದಿದ್ದ ಅವರು ದೂರದಿಂದ ನಮ್ಮ ಮನೆಗೇ ಬಂದು ಪುಸ್ತಕ ಒಯ್ದು ಓದಿ ವಿಮಷೆ೯ ಮಾಡಿದ್ದಾರೆ ನೋಡಿ. ****** #ಸಾಗರ_ತಾಲ್ಲೂಕು_ಆನಂದಪುರದಲ್ಲಿ_ನೆಲೆಸಿರುವ_ಉತ್ಸಾಹೀ_ಉದ್ಯಮಿ_ಹಾಗೂ_ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಮಾಜಿ&ಸದಸ್ಯ ಮಾನ್ಯಶ್ರೀ|| ಅರುಣ್ ಪ್ರಸಾದ ರವರು ಹತ್ತುವರ್ಷಗಳ ಹಿಂದೆಯೇ ಬರೆದು, ಮೊನ್ನೆ ಮೊನ್ನೆಯಷ್ಟೇ ಮುದ್ರಿಸಿ ಪ್ರಕಾಶಿಸಿದ 'ಕಾಲ್ಪನಿಕ ಕಥಾಹಂದರ'ವೆಂಬ ಚೌಕಟ್ಟಿನ #ಬೆಸ್ತರ_ರಾಣಿ_ಚಂಪಕಾ ಹೆಸರಿನ ಐತಿಹಾಸಿಕ ಕಾದಂಬರಿ ಪುಸ್ತಕವನ್ನು 'ಗೌರವ ಪ್ರತಿ' ರೂಪದಲ್ಲಿ ಸ್ವೀಕರಿಸಿ ಓದಿದೆ. ಕೆಳದಿ ಸಾಮ್ರಾಜ್ಯದ ರಾಜಾ ವೆಂಕಟಪ್ಪ ನಾಯಕನ ಸ್ವಚ್ಛ, ಜನಪರ, ನ್ಯಾಯಪರ, ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಆಗಿಹೋಗಿರುವ ಅತ್ಯವಶ್ಯಕವಾಗಿ ದಾಖಲಾಗಲೇಬೇಕಾದ ಐತಿಹಾಸಿ...