#ಕಾಸರಗೋಡು ಮ೦ಗಳೂರು ರಾ.ಹೆ. ಪ್ರವೇಶ ಬಂದ್ ಮಾಡಿದ್ದು ಸರಿಯೇ? ಸುಪ್ರೀo ಕೋಟ್೯ ತೀಪು೯ ಕಾಸರಗೋಡಿನ ಅಂಬೂಲೆನ್ಸ್ ಗೆ ಮಂಗಳೂರಿನ ಆಸ್ಪತ್ರೆಗೆ ಬರಲು ಅವಕಾಶ ನೀಡುವ ಭರವಸೆಗೆ ಕಾಯುತ್ತಿದ್ದಾರೆ#
#ಕೊರಾನಾ ಲಾಕ್ ಡೌನ್ ಡೈರಿ. #ಲೆಟರ್ ನಂಬರ್- 7 6-ಮಾಚ್೯-2020 #ಕಾಸರಗೋಡು ಜನರ ಸಂಕಷ್ಟ #ಉಭಯ ಸಂಕಟದಲ್ಲಿ ಮುಖ್ಯಮಂತ್ರಿ ಯಡೂರಪ್ಪನವರು. ಕೇರಳದ ಕಾಸರಗೋಡು ಜಿಲ್ಲೆ ಬಹು ಸಂಖ್ಯಾತ ಕನ್ನಡ ಬಾಷಿಕರ ಜಿಲ್ಲೆ ಇಲ್ಲಿ ವಷ೯ ಪೂತಿ೯ ಕನ್ನಡದ ನೂರಾರು ಕಾಯ೯ಕ್ರಮ ನಡೆಯುತ್ತದೆ ಸುಮಾರು 300 ಕ್ಕಿ೦ತ ಹೆಚ್ಚು ಕನ್ನಡ ಶಾಲೆ ಇದೆ. ಕಾಸರಗೋಡು ಕನಾ೯ಟಕಕ್ಕೆ ಸೇರಲಿ ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ ಈ ಜಿಲ್ಲೆಯ ಕನ್ನಡ ಪ್ರೇಮ ಮಲೆಯಾಳ ಬಾಷಿಕರಿಗೆ ಯಾವಾಗಲೂ ಇರಸು ಮುರುಸು, ಕನ್ನಡಿಗರಿಗೆ ಬೆಳಗಾಂನ ಮರಾಠಿ ಹೋರಾಟಗಾರರ ಮೇಲಿರುವಂತಹದೇ ಅಸಹನೆ ಕೇರಳದಲ್ಲಿನ ಮಲೆಯಾಳ ಬಾಷಿಕರಿಗೆ ಕಾಸರಗೋಡು ಕನ್ನಡಿಗರ ಮೇಲೆ ಇದೆ. ಕಳೆದ ತಿಂಗಳಿಂದ ಕೇರಳದಲ್ಲಿ ಕೊರಾನಾ ವೈರಸ್ ಪೀಡಿತರು ಹೆಚ್ಚಾಗಿದ್ದು ಕಾಸರಗೋಡಿನಲ್ಲಿ ಇದರ ಸಂಖ್ಯೆ ಹೆಚ್ಚಾಗಿದೆ ಹೆಚ್ಚು ಸಾವು ನೋವು ವರದಿ ಆಗಿದೆ. ಮಂಗಳೂರಿಂದ 25 ಕಿಮಿ ನಲ್ಲಿ ಕೇರಳ ಬಾಡ೯ರ್ ಇದೆ, ಕಾಸರಗೋಡಿನಿಂದ ಒಂದು ಗಂಟೆ ಪ್ರಯಾಣ ಮOಗಳೂರಿಗೆ, ಆರೋಗ್ಯ ಸಂಬಂದ ಮoಗಳೂರು ಮತ್ತು ಮಣಿಪಾಲ್ ಆಸ್ಪತ್ರೆಗಳನ್ನೆ ಕಾಸರಗೋಡಿನ ಜನತೆ ಯಾವತ್ತೂ ಅವಲಂಬಿಸಿದ್ದಾರೆ. ಮಾಚ್೯ 24ರಿಂದ ಲಾಕ್ ಡೌನ್ ಪ್ರಾರಂಬವಾದ ಕೂಡಲೆ ಮOಗಳೂರಿಗೆ ಸಂಪಕ೯ ಮಾಡುವ 23 ರಸ್ತೆಗಳನ್ನ ಸ್ಥಳಿಯರು ಬಂದ್ ಮಾಡಿದರು, ತುತು೯ ಚಿಕಿತ್ಸೆಗೆ ಬರುತ್ತಿದ್ದ ಅಂಬೂಲೆನ್ಸ್ ಗೆ ಮಾತ್ರ ಪ್ರಾರಂಭದಲ್ಲಿ ಅವಕಾಶ ನೀ...