Skip to main content

Posts

Showing posts from November, 2021

ಉಮ್ಮತ್ತದ ಗಿಡದ ಔಷದಿ ಮತ್ತು ಅದರ ಪರಿಣಾಮದ ಸ್ವಾರಸ್ಯಕರ ಘಟನೆಗಳು.

#1960ರ_ಆನಂದಪುರO_ಸಮೀಪದ_ಬ್ಯಾಡರ_ಕೊಪ್ಪದ_ಘಟನೆಗೆ_60ವರ್ಷದ_ನಂತರ_ಉತ್ತರ_ಸಿಕ್ಕಿತು  #ನೆಂಟನೊಬ್ಬ_ಬಿನ್ನಾಭಿಪ್ರಾಯದಿಂದ_ಆದ_ವ್ಯಾಜ್ಯದಿಂದ_ಕೇರಿಯ_ಎಲ್ಲರ_ಬಟ್ಟೆ_ಬಿಚ್ಚಿಸುವ_ಶಪಥ_ಮಾಡಿದ್ದನಂತೆ. #ಉಮ್ಮತ್ತದ_ಗಿಡದಿಂದ_ಆದ_ಘಟನೆ #ಸ್ವತಃ_ಅನುಭವ_ಹಂಚಿಕೊಂಡ_ಪತ್ರಕರ್ತರ_ಪೋಸ್ಟ್        ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ.       1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ ಬಿದಿರ ಬುಟ್ಟಿ,ಬತ್ತದ ಕಣಜ, ಮೀನು ಹಿಡಿಯುವ ಕೂಣಿ ಇತ್ಯಾದಿ ಮಾಡುತ್ತಿದ್ದವರ ಕೇರಿಯಲ್ಲಿ ನಡೆದ ಈ ಘಟನೆ ಮಲೆನಾಡಿನಲ್ಲಿ ದೊಡ್ಡ ಸುದ್ದಿ ಆಗಿತ್ತಂತೆ.    ಅವರನ್ನೆಲ್ಲ ಹಿಡಿದು ಎತ್ತಿನಗಾಡಿಯಲ್ಲಿ ಕಷ್ಟಪಟ್ಟು ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ,ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಮಾತ್ರ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ ವೈದ್ಯರಿಗೂ ಸೋಜಿಗವಾಗಿತ್ತು.  ಆಗ ಊರಿನ ಹಿರಿಯರಾದ ವಿಲೇಜ್ ಪಂಚಾಯತ್ ಚೇರ್ ಮನ್  ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿದರಂತೆ.       ಇದಕ್ಕೆ ಕಾರಣನಾದನನ್ನ ಹಿಡಿಸಿ ಶಿಕ್ಷಿಸಿದರಂತೆ, ಆತ ಈ ಬಿದಿರು ಬುಟ್ಟಿ ಮಾಡುವವರ ಸಂಬಂದಿಯಂತೆ

ದೇಶದ ಉಕ್ಕಿನ ಮಹಿಳೆ ಇಂದಿರಾಗೆ ಕಲ್ಲೆಸೆದು ಘಾಸಿಗೊಳಿದ ಶಿವಮೊಗ್ಗದ ಘಟನೆಗೆ 44 ವರ್ಷ.

#ಉಕ್ಕಿನ_ಮಹಿಳೆ_ಇಂದಿರಾಗೆ_ಕಲ್ಲೆಸೆದ_ಶಿವಮೊಗ್ಗದ_ಕಹಿಘಟನೆಗೆ_44ವರ್ಷ. #ಇವತ್ತು_ಇಂದಿರಾ_104ನೇ_ಹುಟ್ಟುಹಬ್ಬ #ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ.   ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಇಂದಿರಾರ 104 ನೇ ಹುಟ್ಟುಹಬ್ಬ.   19- ನವೆಂಬರ್ -1917 ಇಂದಿರಾರ ಜನ್ಮ ದಿನ.  ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು.   ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು.   ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ತಯಾರಿ ಒ0ದು ನಡೆದಿತ್ತು.   ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ (ಈಗಿನ ಬೈಪಾಸ್ ಸಮೀಪ) ಯುವಕರ ಗುಂಪೊಂದು ಇಂದಿರಾ ವಿರೋದಿ ಘೋಷಣೆಯೊಂದಿಗೆ ಇಂದಿರಾ ಕಾರು ಅಡ್ಡಗಟ್ಟಿ ಕಲ್ಲಿನ ಸುರಿಮಳೆ ನಡೆಸಿತು, ಇಂದಿರಾ ಗಾಂದಿ ಪ್ರಯಾಣಿಸುತ್ತಿದ್ದ ಅಂಬಾಸಿಡರ್ ಕಾರಿನ ಡ್ರೈವರ್ ಚಾಕಚಕ್ಯತೆಯಿಂದ ಆಗಬಹುದಾಗಿದ್ದ

ಶಾಂತವೇರಿ ಗೋಪಾಲಗೌಡರು ಹೇಳಿದ ಒಂದು ಹೋಳಿಗೆ ಕಥೆಯಲ್ಲಿದೆ ಸಮಾಜ ವಿಜ್ಞಾನದ ತತ್ವ ಸಿದ್ಧಾಂತ, ಇದನ್ನು ನೆನಪಿಸಿದ ಕಾಗೋಡು ತಿಮ್ಮಪ್ಪನವರು ಇದರ ಪ್ರೇರಣೆಯಿಂದ ನನ್ನ ಆಚರಣೆ

#ಸಂಸಾರದಲ್ಲಿ_ಪ್ಲಾನಿಂಗ್_ಇಲ್ಲದಿದ್ದರೆ_ಈಗಲೂ_ಹೋಳಿಗೆ_ಮರಿಚಿಕೆ #ಉಳ್ಳವರಿಗೆ_ನಿಕೃಷ್ಟವಾಗಿರಬಹುದಾದ_ಹೋಳಿಗೆಕಥೆ ನನಗೆ ಪ್ರತಿ ವಷ೯ ದೀಪಾವಳಿಯಲ್ಲಿ ನೆನಪಾಗುವ  #ಕಾಗೋಡು_ತಿಮ್ಮಪ್ಪನವರು_ಪುನರುಚ್ಚರಿಸಿದ_ಶಾಂತವೇರಿ_ಗೋಪಾಲಗೌಡರು_ಹೇಳುತ್ತಿದ್ದ_ಹೋಳಿಗೆ_ಕಥೆ     ಬಂಗಾರಪ್ಪನವರು ಜಾರಿಗೆ ತಂದ ಬಗರ್ ಹುಕುಂ ಮಂಜೂರು ಪತ್ರ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಯಲ್ಲಿನ ಬಡ ರೈತರಿಗೆ ಭೂಮಾಲಿಕತ್ವ ತಂದ ಮೊದಲ ದೀಪಾವಳಿ ಆಗಿತ್ತು.   ಹಕ್ಕು ಪತ್ರ ಸಿಗುವ ಸಂದಭ೯ದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪರ ಪದಚ್ಯುತಿ ಆಗಿ ಮೊಯ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಾಗೋಡು ಮಂತ್ರಿ ಆಗಿದ್ದರು.  ರಾಜ್ಯದಲ್ಲಿ ಮೊದಲ ಬಗರ್ ಹುಕುಂ ಪತ್ರಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದ್ದು ಇದಕ್ಕೆ ನನ್ನ ಶ್ರಮ ಕಾಗೋಡರಿಗೆ ತುಂಬಾ ಸಂತೋಷ ಉಂಟು ಮಾಡಿತ್ತು.  ಇದೇ ಸಂದರ್ಭದಲ್ಲಿ ಮಂತ್ರಿಗಳ ಜೊತೆ ನಾನು, ಬೀಮನೇರಿ ಶಿವಪ್ಪ ಮತ್ತು ತೀ.ನಾ. ಶ್ರೀನಿವಾಸ್ ಸಾಗರ ತಾಲ್ಲೂಕಿನ ಆವಿನಳ್ಳಿ ಹೋಬಳಿಯ ಪ್ರವಾಸದಲ್ಲಿ ಜೊತೆಗೆ ಇದ್ದೆವು, ದೀಪಾವಳಿಯ ಬೆಳಗಿನ ಉಪಹಾರ ಆವಿನಳ್ಳಿ ರೈಸ್ ಮಿಲ್ ಮಾಲಿಕರಾದ ಹೆಚ್.ಎಂ.ಬಸವರಾಜ್ ಗೌಡರ ಮನೆಯಲ್ಲಿ ಹೋಳಿಗೆ ಜೊತೆಗೆ ಉಪಹಾರ.   ನಂತರದ ಸಭೆಯೊಂದರಲ್ಲಿ ಕಾಗೋಡು ನನ್ನ ಹೊಗಳಿದ್ದೇ ಹೊಗಳಿದ್ದು ಕಾರಣ ನನ್ನ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿ ಆಗಿ

ಮೈಸೂರಿನ ಪ್ರಾಂತ್ಯದ ಬರಗಾಲದಿಂದ ಆದ ವಲಸೆ, ವೈವಾಹಿಕ ಸಂಬಂದಗಳ ವ್ಯಥೆ, ರಾಜರು ನಿರ್ಮಿಸಿದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿ ಆಣೆಕಟ್ಟಿಂದ ಆದ ಪುನಶ್ಚೇತನ.

#ಇಂತಹ_ಕಾಲ_ಬಂದಿತ್ತಾ_ಅವರಿಗೆ #ಹೆಣ್ಣು_ಮಕ್ಕಳನ್ನು_ಮಲೆನಾಡಿಗೆ_ತಂದು_ಮದುವೆ_ಮಾಡಿ_ಕೊಟ್ಟು_ಹೋಗುತ್ತಿದ್ದರು. #ಈಗಲೂ_ಎಷ್ಟೋ_ಕುಟುಂಬಗಳು_ತಮ್ಮ_ಮೂಲ_ಹುಡುಕಲಾಗಲಿಲ್ಲ. #ಮೈಸೂರಿನ_ಕುಂಬಾರ_ಕನ್ಯೆಯರನ್ನು_ಮಲೆನಾಡಿಗೆ_ತ೦ದು_ಮದುವೆ_ಮಾಡಿ_ಬಿಟ್ಟು_ಹೋಗುತ್ತಿದ್ದರು    ನಮ್ಮೂರ ಸಮೀಪದ ಹರತಾಳು ಎಂಬ ಗ್ರಾಮದ ಕುಂಬಾರ ದಂಪತಿಗಳು 1970 ರಿಂದ 1995 ರ ವರೆಗೆ ಆನಂದಪುರ೦ನ ಸಂತೆ ಮಾರ್ಕೆಟ್ ನಲ್ಲಿ ಮಣ್ಣಿನ ಮಡಿಕೆಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದರು.   ದೀಪಾವಳಿ ಅಂತ ಹಬ್ಬದ ಸಂಭ್ರಮದಿಂದ ಹಿಡಿದು ಸಾವಿನ ಶೋಕದ ಮನೆಯವರೆಗೆ ಅವರ ಅಂಗಡಿ ಅನಿವಾರ್ಯ ಆಗಿತ್ತು.   ವಾರಕ್ಕೊ ಹತ್ತು ದಿನಕ್ಕೊ ಒಮ್ಮೆ ಹಳ್ಳಿಯ ತಮ್ಮ ಮನೆಗೆ ಹೋಗಿ ಕೃಷಿ ಇತ್ಯಾದಿ ಕೆಲಸ ಮತ್ತು ಮಡಿಕೆ ತಯಾರಿ ಮಾಡಿಕೊಂಡು ಎತ್ತಿನಗಾಡಿಯಲ್ಲಿ ಪುನಃ ವಾಪಾಸು ಬರುತ್ತಿದ್ದರು.  ಕುಂಬಾರ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದ್ದರಿಂದ ತುಂಬಾ ದುಃಖ ವ್ಯಕ್ತಪಡಿಸುತ್ತಿದ್ದರು ಆಗ ನಮ್ಮದು ಸಣ್ಣ ಅಕ್ಕಿ ಮಾಡುವ ಮುಂಬಾಯಿಯ ಥಾನೆಯಿಂದ ತಂದ ಅಕ್ಕಿಗಿರಣಿ ನಮ್ಮ ತಂದೆ ಪ್ರಾರಂಭಿಸಿದ್ದರು ಈ ಯಂತ್ರದಲ್ಲಿ 5 kg ಭತ್ತ ಕೂಡ ಅಕ್ಕಿ ಮಾಡಬಹುದಾಗಿತ್ತು (ದೊಡ್ಡ ರೈಸ್ ಮಿಲ್ ನಲ್ಲಿ ಕನಿಷ್ಟ 50 kg ಯಿಂದ ಪ್ರಾರಂಭ) ಹಾಗಾಗಿ ಅನೇಕ ಸಣ್ಣ ರೈತರು ಮತ್ತು ಈ ರೀತಿ ಭತ್ತ ಪಡೆದು ಮಡಿಕೆ ಮಾರುವವರು, ಕ್ಷೌರದ ಕೂಲಿ ಆಗಿ ಭತ್ತ ಪಡೆಯುವ ಕೌರಿಕರು, ದನ ಕಾಯುವವರು, ಮೀನು ಮಾರಾಟ ಮಾಡುವವರು, ವರ್ತನೆ

ತಾಳೆ ಹಣ್ಣು, ನೈಸರ್ಗಿಕವಾದ ಆರೋಗ್ಯವರ್ಧಕ ಗುಣಗಳ ಹಣ್ಣು.

#ತಾಳೆ_ಹಣ್ಣು #ಬಹುಪಯೋಗಿ_ತಾಳೆಮರ #ಮಂಗಳೂರು_ಮುಲ್ಕಿಯ_ಮೋಣು_ಸಾಹೇಬರು_ತಂದುಕೊಟ್ಟ_ಹನಿಬೊಂಡಾ,     ಮಳೆಗಾಲ ಮುಗಿಯುತ್ತಿದ್ದಂತೆ ಕರಾವಳಿ ಪ್ರದೇಶದಲ್ಲಿ ಈ ತಾಳೆ ಮರದ ಹಣ್ಣು ಪ್ರಾರಂಭ ಆಗುತ್ತದೆ, ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಇದರ ಮಾರಾಟವೂ ಪ್ರಾರಂಭ ಆಗುತ್ತದೆ.   ತಾಳೆ ಹಣ್ಣು, ಹನಿ ಬೊಂಡಾ, ತಾಳೆ ಬೊಂಡಾ ಇತ್ಯಾದಿ ಅನೇಕ ಸ್ಥಳಿಯ ಹೆಸರಿದೆ, ಇದರ ಒಳಭಾಗದಲ್ಲಿ ಮೂರು ಕಣ್ಣಿನಂತ ತಿರುಳುಗಳು ಇರುತ್ತದೆ ಇದು ಆರೋಗ್ಯ ವರ್ಧಕ ಅನೇಕ ಕಾಯಿಲೆಗೆ ಮದ್ದು.   ಒಂದಕ್ಕೆ 20 ರಿಂದ 25 ರೂಪಾಯಿ ಬೆಲೆ ಇದೆ.    ಇವತ್ತು ಮುಲ್ಕಿಯಿಂದ ನಮ್ಮಲ್ಲಿಗೆ ಬಂದ ಮೀನು ಗೊಬ್ಬರದ ಮಾರಾಟಗಾರರಾದ ಮೋಣು ಸಾಹೇಬರು ಎರೆಡು ಗೊನೆ ತಾಜಾ ಹನಿ ಬೊಂಡಾ ತಂದಿದ್ದರು.    ಇದರ ತಿರುಳು ಹಾಗೇ ತಿನ್ನಬಹುದು ಮತ್ತು ಇದರ 3 ರಿಂದ 5 ಕಣ್ಣು (ಹಣ್ಣಿನ ತಿರಳು) ಒ0ದು ಗ್ಲಾಸ್ ತಣ್ಣನೆ ಹಾಲಿನಲ್ಲಿ ಮಿಕ್ಸಿ ಮಾಡಿದರೆ ಇದರ೦ತ ಮಿಲ್ಕ್ ಶೇಕ್ ಬೇರೆ ಇರಲಿಕ್ಕಿಲ್ಲ.   ಯಾವುದೇ ಕಲಬೆರಕೆ ಇಲ್ಲದ,ರಾಸಾಯನಿಕ ಸಿಂಪಡನೆ ಇಲ್ಲದ ನೈಸರ್ಗಿಕವಾದ ಹಣ್ಣು ಇದು.   ತಾಳೆ ಮರ ಬಹುಪಯೋಗಿ ಇದರಿಂದ ಈ ಹಣ್ಣು ಜೊತೆಯಲ್ಲಿ ಅನೇಕ ಉಪಯೋಗವಿದೆ, ನೀರಾ ಇಳಿಸುತ್ತಾರೆ, ನೀರಾದಿಂದ ವಾಲೆ ಬೆಲ್ಲ, ತಾಳೆ ಹಿಟ್ಟು (ಗಂಜಿ - ಗಿಣ್ಣು), ಮನೆಯ ಛಾವಣಿಗೆ, ಹಗ್ಗ, ಬೀಸಣಿಕೆ, ಚತ್ರಿ, ಬುಟ್ಟಿ, ಚಾಪೆ ಮತ್ತು ಹಿಂದಿನ ಕಾಲದಲ್ಲಿ ಈಗಿನ ಪೇಪರಂತೆ ತಾಳೆಗರಿ ಉ

ಹುಕ್ಕಾ ಕಂಡು ಹಿಡಿದು 450 ವರ್ಷ ಆಯಿತು ಅಕ್ಬರ್ ಸಾಮ್ರಾಟರ ಖಾಸಾಗಿ ಪಿಸಿಷಿಯನ್ ಹಕೀಂ ಅಬುಲ್-ಪಥಾ - ಗಿಲಾನಿ ಪತೇಪುರ್ ಸಿಕ್ರಿಯಲ್ಲಿ ಇದನ್ನು ಮೊದಲು ತಯಾರಿಸಿ ಬಳಕೆ ಮಾಡುತ್ತಾರೆ.

#ಹುಕ್ಕಾ_ಖಯಾಲಿ #ಹುಕ್ಕಾ_ಶ್ರೀಮಂತಿಕೆಯ_ಪ್ರದರ್ಶನ_ಆಗಿತ್ತು. #ಹುಕ್ಕಾ_ಕಂಡುಹಿಡಿದು_450ವಷ೯_ಆಯಿತು. #ಭಾರತಕ್ಕೆ_ತಂಬಾಕು_ಬಂದಿದ್ದು_ಹದಿನೇಳನೇ_ಶತಮಾನದಲ್ಲಿ. #ಅದಕ್ಕೂ_ಮೊದಲು_ಬಳಕೆಇದ್ದಿದ್ದು_ಗಾಂಜಾ      ಉತ್ತರ ಭಾರತದ ಹಳ್ಳಿಗಳಿಗೆ ಹೋದಾಗ ಅಲ್ಲಿಯೂ ನಮ್ಮ ಹಳ್ಳಿಗಳಲ್ಲಿ ಇರುವಂತ ಸೋಮಾರಿ ಕಟ್ಟೆಗಳಲ್ಲಿ ಊರ ಪಂಚಾಯ್ತಿ ಗಾಸಿಪ್ ಗಳ ಚರ್ಚೆ ನಡೆಯುತ್ತಿರುತ್ತದೆ ಅವರ ಮಧ್ಯ ಹುಕ್ಕಾ ಒಂದು ಹೊಗೆಯಾಡುತ್ತಿರುತ್ತದೆ.    ಸುಮಾರು 15 ವರ್ಷದ ಹಿಂದೆ ಹತ್ತು ಪೈಸೆಯ ತಂಬಾಕು ಕಡ್ಡಿಪುಡಿ ಹಾಕಿದರೆ 10 ಜನ ತಮ್ಮ ದೂಮಪಾನ ಸಂತೃಪ್ತಿ ಪಡೆಯುತ್ತಿದ್ದರು ಆದ್ದರಿಂದಲೇ ಇದು ಮಿತವ್ಯಯದ ಸಾಮೂಹಿಕ ದೂಮಪಾನದ ಹುಕ್ಕಾ ಆಗಿ ಪ್ರಸಿದ್ದಿ ಆಗಿರಬೇಕೆಂದು ಅನ್ನಿಸಿತ್ತು.   ಆಗಲೇ ನನಗೂ ಒ೦ದು ಹುಕ್ಕಾ ಖರೀದಿಸುವ ಹುಕಿ ಬಂದಿತ್ತು.   ಬಾಲ್ಯದಲ್ಲಿ ಒಂದು ಬಾರೀ ಆಸೆ ಇತ್ತು, ದೊಡ್ಡವನಾಗಿ ಸ್ವಂತ ದುಡಿಮೆ ಶುರು ಮಾಡಿದಾಗ ಟೆರಿಲಿನ್ ಅಂಗಿ ಧರಿಸಿ ಅದರ ಎದರು ಜೇಬಲ್ಲಿ ದುಬಾರಿ ಸಿಗರೇಟು ಪ್ಯಾಕ್ ಇಟ್ಟು ಕೊಳ್ಳಬೇಕು ಜೊತೆಯಲ್ಲಿ ದುಬಾರಿ ವಿದೇಶಿ ಲೈಟರ್ ನಿಂದ ಕಿಡಿ ತಾಗಿಸಿ ಹೊಗೆ ಬಿಡಬೇಕಂತ ಕನಸು ಆದರೆ ಅದನ್ನು ಜಾರಿಗೊಳಿಸಲು ನನ್ನ ಆರೋಗ್ಯ ಬಿಡಲೇ ಇಲ್ಲ ಸಿಗರೇಟು ಹೊಗೆ ಆಗಿ ಬರಲೇ ಇಲ್ಲ, ಹೊಗೆ ಮತ್ತು ದೂಳಿನ ಅಲರ್ಜಿ ಕೂಡ.   ಆದರೂ ಈಗಲೂ ವಿವಿಧ ದೂಮಪಾನದ ಸಾಮಗ್ರಿಗಳ ನೋಡಲು ಆಸಕ್ತಿ ಹಾಗಾಗಿ ಸುಮಾರು ಹತ್ತು ವರ್ಷದ ಹಿಂದೆ ಮುಂ

ಕಾಳೇಶ್ವರ ದಮ೯ಪ್ಪ ಸಾಹೇಬರ ಶಿಸ್ತು ಬದ್ದ ಜೀವನ, ದಿನ 20 ಕಿ.ಮಿ. ನಡೆದು ಆನಂದಪುರಂ ನಲ್ಲಿ ಪ್ರೌಡ ಶಿಕ್ಷಣ ಪಡೆದು ಅತ್ಯುನ್ನತ ಸ್ಥಾನಕ್ಕೆ ಹೋದವರು

#ದಮ೯ಪ್ಪ_ಸಾಹೇಬರೆಂದರೆ_ರಾಜಕುಮಾರ್_ಇದ್ದ೦ತೆ.   ಅವರ ಜೀವನ ಅಷ್ಟು ಶಿಸ್ತುಬದ್ದ. ಹಳ್ಳಿಗಾಡಿನಿಂದ ನಡೆದು ಬಂದು ಆನಂದಪುರಂನ ಪ್ರೌಢ ಶಾಲೆಯಲ್ಲಿ ಓದಿ ಅತ್ಯನ್ನತ ಸ್ಥಾನಕ್ಕೆ ತಲುಪಿದವರು.     1978ರಲ್ಲಿ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿ ಇಂಗ್ಲೀಷ್ ಮೀಡಿಯಂ ಗೆ ನನ್ನ ತಂದೆ ಸೇರಿಸಿದ್ದರು, ಅಲ್ಲಿದ್ದ ಮ್ಯಾನೇಜರ್ ನಮ್ಮೂರ ಸಮೀಪದ ನಂದಿಗದ ಗುಂಡಪ್ಪನವರು (ಸಾಗರದ ಗೋಪಾಲರ ದೊಡ್ಡಪ್ಪ) ಬಿಟ್ಟರೆ ಬೇರಾರು ಗೊತ್ತಿರಲಿಲ್ಲ.  7 ನೇ ತರಗತಿ ತನಕ ಇಂಗ್ಲೀಷ್ ಮೀಡಿಯಂ ಓದಿದವರು 8ನೇ ತರಗತಿಗೆ ಇಲ್ಲಿಗೆ ಮತ್ತು ಅನುಕೂಲಸ್ಥರು ಪ್ರಭಾವಿಗಳು ಖಾಸಾಗಿ ಶಾಲೆ ಆದ ಶಿವಲಿಂಗಪ್ಪ ಹೈಸ್ಕೂಲ್ ಗೆ ಸೇರಿಸುತ್ತಿದ್ದರು.   ನಮ್ಮ ಊರಿನ ಹೈಸ್ಕೂಲ್ ಶಿಕ್ಷಕರು ನಮ್ಮ ತಂದೆಗೆ ಸಾಗರದ ಮುನ್ಸಿಪಲ್ ಹೈಸ್ಕೂಲ್ ಸೇರಿಸಲು ಸಲಹೆ ನೀಡಿ ಅವರ ಮಗನನ್ನ ಈ ಖಾಸಾಗಿ ಶಾಲೆಗೆ ಸೇರಿಸಿದ್ದರ ಉದ್ದೇಶ ಅನೇಕ ವರ್ಷದ ನಂತರ ಗೊತ್ತಾಯಿತು.   ಹಳ್ಳಿಯಲ್ಲಿ ಮಾತೃ ಬಾಷೆ ಕನ್ನಡ ಮಾದ್ಯಮದಲ್ಲಿ ಓದಿ ಶಾಲೆಗೆ ಪ್ರಥಮರಾಗುತ್ತಿದ್ದ ನನಗೆ ಸಾಗರದ 8ನೇ ತರಗತಿ ಒಂದು ರೀತಿ ಉಸಿರುಕಟ್ಟಿಸುತ್ತಿತ್ತು, ಇಂಗ್ಲೀಷ್ ಮಾಧ್ಯಮದಲ್ಲೇ ಒಂದನೇ ತರಗತಿಯಿಂದ ಓದಿ ಬಂದವರ ನಡುವೆ 5 ನೇ ತರಗತಿಯಿಂದ ಮಾತ್ರ ಒಂದು ವಿಷಯ ಇಂಗ್ಲೀಷ್ ಕಲಿಯಲು ಪ್ರಾರ೦ಬಿಸಿ 8 ನೇ ತರಗತಿಗೆ ದಿಡೀರ್ ಇಂಗ್ಲೀಷ್ ಮಾಧ್ಯಮಕ್ಕೆ ಬಂದಿದ್ದು ನನಗೆ ಕೀಳರಮಿ ಉಂಟು ಮಾಡಿತ್ತು.  ಮನೆಯ ಆರ್ಥಿಕ ಪರಿಸ

ಭಾರತ ದೇಶದಲ್ಲಿ ದೀಪಾವಳಿಯಲ್ಲಿ ಜನ ಸುಡುವ ಪಟಾಕಿ ಮೂರು ಸಾವಿರ ಕೋಟಿಗೂ ಹೆಚ್ಚಿನ ಮೌಲ್ಯದ್ದು

#ಭಾರತದ_ದೀಪಾವಳಿ_ಪಟಾಕಿ_ವಹಿವಾಟು_ಮೂರುಸಾವಿರಕೋಟಿ_ಮೀರಿದೆ. #ಅಸುರಕ್ಷಿತ_ವಲಯದ_ಬಾಲಕಾಮಿ೯ಕರ_ಬಳಕೆಯ_ಉದ್ದಿಮೆ. #ಪರಿಸರ_ಸಂರಕ್ಷಣೆ_ಮರಿಚಿಕೆ       ಪಟಾಕಿ ಶಬ್ದ ಮಕ್ಕಳ ಬಾಲ್ಯದಲ್ಲಿ ಆಕರ್ಷಕ ಅದಕ್ಕೆ ರಂಗು ರಂಗಿನ ಬೆಳಕಿನ ಚಿತ್ತಾರದ ಚಮತ್ಕಾರವೂ ಸೇರಿಸಿ ಎಲ್ಲಾ ವಯೋಮಾನದವರಿಗೂ ಆಕರ್ಷಿಸುವಂತೆ ಮಾಡಿದ್ದಾರೆ.            ವಿವಿದ ವಿನ್ಯಾಸ ಗುಣಮಟ್ಟಗಳಿಂದ ಇದರ ಬೆಲೆ ಕೂಡ ಹೆಚ್ಚು, ಈಗೆಲ್ಲ ಪಟಾಕಿಗೂ ಕರೆನ್ಸಿಗೂ ನೇರ ಸಂಬಂದ ಇದೆ, ಸಭೆ ಸಮಾರಂಭ ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ಸುಡುತ್ತಾರೆ. ನಿಶ್ವಿತ ವರಮಾನ ಇರುವ ಉದ್ಯೋಗಿಗಳ ಕುಟು೦ಬ, ವಾಣಿಜ್ಯ ಬೆಳೆಯ ರೈತರು, ಲಾಭದಾಯಕ ಉದ್ದಿಮೆ ಇರುವವರೇ ಇದರ ಹೆಚ್ಚಿನ ಗ್ರಾಹಕರು.      ಇಲ್ಲಿ ಸಿಗುವ ಕ್ಷಣಿಕ ಸುಖ ಮತ್ತು ಶಬ್ದ ಹಾಗೂ ಬೆಳಕಲ್ಲಿ ತಮ್ಮ ಅಂತಸ್ತು ಪ್ರದರ್ಶನದ ಸ್ಪರ್ದೆಯಿಂದ ಪರಿಸರ ಸಂರಕ್ಷಣೆ ಗಮನಕ್ಕೆ ಬರುತ್ತಿಲ್ಲ.     ಪಟಾಕಿ ಉದ್ಯಮವೂ ಬಾಲಕಾರ್ಮಿಕರನ್ನೆ ಅವಲಂಬಿಸಿದೆ ಏಕೆಂದರೆ ಪಟಾಕಿ ತಯಾರಕನಿಗೆ ಹತ್ತು ಪೈಸೆ ಸಿಕ್ಕುತದೆ ಅದೇ ಪಟಾಕಿ ಮಾರುವ ಮಧ್ಯವರ್ತಿಗೆ ರೂಪಾಯಿ ಲಾಭ ತರುತ್ತದೆ ಆದ್ದರಿಂದ ಅತ್ಯಂತ ಕಡಿಮೆ ಕೂಲಿಯ ಮತ್ತು ಬಾಲ್ಯವಸ್ಥೆಯ ಮಕ್ಕಳ ಕೈ ಬೆರಳ ಕೌಶಲ್ಯ ಕೂಡ ಬಾಲ ಕಾಮಿ೯ಕ ಬಳಕೆ ಇದಕ್ಕೆ ಕಾರಣವಾಗಿದೆ.   ಪಟಾಕಿಗೆ ಬೇಕಾದ ಕಚ್ಚಾ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳಿಗೆ ತಮ್ಮ ವಸ್ತು ದೊಡ್ಡ ಮಟ್ಟದ ಖರೀದಿದಾರ ಪಟಾಕಿ ಕಾರ್ಖಾನೆ ನಿರಂತರ ನಡೆಯದ

ಇಕ್ಕೇರಿ ಶಮಾ೯ ಅಂತಲೇ ಮಲೆನಾಡಿನಲ್ಲಿ ಸುಪ್ರಸಿದ್ದರಾಗಿದ್ದ ಜನಾನುರಾಗಿ ನಾರಾಯಣ ಶರ್ಮಾರ ಸ್ಮರಣೆ.

    ಇಕ್ಕೇರಿ ನಾರಾಯಣ ಶಮಾ೯ ಸಾಮಾಜಿಕ ವಿಜ್ಞಾನಿ, ಸಂಸ್ಕೃತ ಪಂಡಿತ, ಮಲೆನಾಡಿನ ಜನಾನುರಾಗಿ, ಕಲಾವಿದ, ಸಾಹಸಿ, ಉದ್ಯಮಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ನೈಪುಣ್ಯ ಹೊಂದಿದ ಇವರ ಬಗ್ಗೆ ವಿವರಿಸುವುದು ಬಲು ಕಷ್ಟ#   ಸಿಮೆಂಟ್ ಬಾವಿ ರಿಂಗ್, ಚರಂಡಿ ಪೈಪ್ ಗಳು, ನೀರಿನ ಟ್ಯಾಂಕ್ ಮತ್ತು ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವ ಕ್ಕೆಗಾರಿಕೆ 80 ರ ದಶಕದಲ್ಲೇ ಸಾಗರ ಪಟ್ಟಣ ಸಮೀಪದ ಇಕ್ಕೇರಿಯಲ್ಲಿ ಪ್ರಾರಂಬಿಸಿ ಯಶಸ್ವಿ ಆಗಿದ್ದರು           1995ರಲ್ಲಿ ನಾನು ಆನಂದಪುರದ ಜಿಲ್ಲಾ ಪಂಚಾಯತ್ ಸದಸ್ಯ, ಹೊಸ ಹುಮ್ಮಸ್ಸು ಕ್ಷೇತ್ರದಲ್ಲಿ 100 ತೆರೆದ ಭಾವಿ ಮೊದಲ ವಷ೯ ನಿಮಿ೯ಸ ಬೇಕೆಂಬ ಬಯಕೆ ಇದನ್ನ ವ್ಯಕ್ತ ಪಡಿಸಿದಾಗ ಎಲ್ಲಾ ಸಹ ಸದಸ್ಯರು ಗೇಲಿ ಮಾಡಿ ಜೋಕರ್ ತರ ನನ್ನ ನೋಡಿದರು.  ಇದನ್ನ ಪ್ರತಿಷ್ಟೆಯಾಗಿ ಪರಿಗಣಿಸಿ ಜಿಲ್ಲಾ ಪಂಚಾಯತನ  ಪ್ಲಾನಿOಗ್ ಆಪಿಸರ್, ಮುಖ್ಯ ಅಕೌ೦ಟ್ ಆದೀಕಾರಿಗಳಲ್ಲಿ ಚಚಿ೯ಸಿದಾಗ ಅವರು ಹೇಳಿದ್ದು, ತೆರದ ಬಾವಿ ಹಣ ಮಾಚ್೯ 31 ರ ಒಳಗೆ ಬಳಕೆ ಆಗದೆ ವಾಪಾಸ್ ಹೋಗುತ್ತೆ ನೀವು ಮಾಚ್೯ ನಲ್ಲಿ 100 ಬಾವಿ ನಿಮಿ೯ಸಿದರೆ ಅದಕ್ಕೆ ಹಣ ಹೊಂದಿಸಬಹುದು ಅಂತ.  ಆಗ ಇಕ್ಕೇರಿ ಶಮ೯ ಇಕ್ಕೇರಿ ಬಂಗಾರದ ಗಣಿ ವಿರೋದಿ ಜನಜಾಗೃತಿಗಾಗಿ ತಮ್ಮ ತನು ಮನ ಧನ ದೊ೦ದಿಗೆ ತಮ್ಮ ಜೀಪಿಗೆ ಮೈಕ್ ಆಳವಡಿಸಿ ಪ್ರತಿದಿನ ಸ೦ಜೆ ಜನಜಾಗೃತಿ ಸಭೆಗೆ ಸಹಕರಿಸುತ್ತಿದ್ದರು. ಆಗ ಜಿ.ಪಂ.ಸದಸ್ಯನಾಗಿದ್ದ ನನಗೂ ಮುಖ್ಯ ಬಾಷಣಕಾರನ ಕೆಲಸ ಈ ವಿಶ್ವಾ

ಕುಂಸಿ ಊರಿನ ಲೋಕಲ್ ಜಡ್ಜ್ ಗಳಿವರು. ಸಂಜೀವಪ್ಪ ಮತ್ತು ರಾಮಪ್ಪ

#ಕುಂಸಿ_ಎಂಬ_ಮಿನಿಭಾರತ  #ಸತತ_50_ವಷ೯ದಿಂದ_ಜನರ_ವ್ಯಾಜ್ಯ_ಬಗೆಹರಿಸುವ_ಪಂಚಾಯಿತಿದಾರ_ಜೋಡಿ #ಕುಂಸಿ_ಸಂಜೀವಪ್ಪ_ಮತ್ತು_ರಾಮಪ್ಪ   ಶಿವಮೊಗ್ಗ ಸಾಗರ ಮಾಗ೯ದ ಕುಂಸಿ ಬಗ್ಗೆ ತಿಳಿದಷ್ಟು ಕಡಿಮೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ನಿಲ್ದಾಣ ಹೊಂದಿರುವ ಈ ಊರು ತಾಲ್ಲೂಕ್ ಕೇಂದ್ರ ಆಗಬೇಕೆಂಬ ಬಹುಕಾಲದ ಜನರ ಒತ್ತಾಯ ಇನ್ನೂ ಈಡೇರಿಲ್ಲ.   ಈ ಊರಲ್ಲಿ ಜಾತಿಗೊಂದು ಕೇರಿ ಮತ್ತು ಕೇರಿಗೊಂದು ಜಾತಿಯ ದೇವಾಲಯ ಇದೆ.  ಬಹುಶಃ ಜಾತಿ ವ್ಯವಸ್ಥೆಯ ಊರಿನ ಕೇರಿಗಳು ಉಳಿದಿರುವ ರಾಜರ ಕಾಲದ ಪಳಿಯುಳಿಕೆ ಈ ಊರು.   ಉದಾಹರಣೆ ಉಪ್ಪಾರ ಕೇರಿ ಅಲ್ಲಿ ಆ ಸಮಾಜದ ದುಗ೯ಮ್ಮ ದೇವಾಲಯ,ಕುರುಬರ  ಎರೆಡು ಕೇರಿ  ಅಲ್ಲಿ ಮಾಯಮ್ಮ ಮತ್ತು ಸಿದ್ದೇಶ್ವರ ದೇವಾಲಯ, ಮಡಿವಾಳರ ಕೇರಿ ಅಲ್ಲಿ ಮಾಚಿದೇವರು ಮತ್ತು ಹಳದಮ್ಮ ದೇವಾಲಯ ಇದೆ, ಲಿಂಗಾಯಿತರ ಎರೆಡು ಕೇರಿ ಅಲ್ಲಿ ವೀರಭದ್ರ ಮತ್ತು ಬಸವಣ್ಣ ದೇವಾಲಯ ಇದೆ, ಬ್ರಾಹ್ಮಣರ ಕೇರಿ ಅಲ್ಲಿ ಆಂಜನೇಯ ಮತ್ತು ತಿರುಪತಿ ಶ್ರೀನಿವಾಸ, ಮೈಸೂರು ರಾಜಾಶ್ರಯದ ಜಟ್ಟಿಗಳ ಕೇರಿ ಅಲ್ಲಿ ನಿಂಬುಜಾ ದೇವಿ ದೇವಸ್ಥಾನ, ವಡ್ಡ ಬೋವಿ ಕಾಲೋನಿ ಅಲ್ಲಿ ಗುಳ್ಳಮ್ಮ ಮತ್ತು ದುರ್ಗಮ್ಮ ದೇವಸ್ಥಾನ, ಬ್ಯಾಡರ ಕೇರಿ ಅಲ್ಲಿ ದುರ್ಗಮ್ಮ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ, ಗಂಗಾಮತಸ್ಥರ ಕೇರಿ ಅಲ್ಲಿ ಗಂಗಾ ಪರಮೇಶ್ವರಿ ದೇವಸ್ಥಾನ, ಚೆಲುವಾದಿಯರಕೇರಿ, ಮೇದಾರ ಕೇರಿ, ಹರಿಜನರ ಕೇರಿಯಲ್ಲಿ ಯಾವುದೇ ದೇವಸ್ಥಾನ ಇಲ್ಲ, ಮುಸ್ಲಿಂ ರ ಕೇರ

ನಾಗರ ಹಾವಿನೊಂದಿಗೆ ತೊಟ್ಟಿಲ ಬಾಲ್ಯ ಕಳೆದ ಕಣ್ಣೂರು ಸೀತಾರಾಂ ಪ್ರಕರಣ ಆ ಕಾಲದಲ್ಲಿನ ವಿಸ್ಮಯ ಘಟನೆ.

ತೊಟ್ಟಿಲಲ್ಲಿ ನಾಗರ ಹಾವಿನ ಜೊತೆ ಜೋಗುಳವಾಡಿದ ಕಣ್ಣೂರು ಸೀತಾರಾಂ. #1960ರ_ದಶಕದಲ್ಲಿ_ಇಡೀ_ರಾಜ್ಯಕ್ಕೆ_ವಿಸ್ಮಯವಾಗಿದ್ದ_ಪ್ರಕರಣದ_ವ್ಯಕ್ತಿ_ಇವರು #ಪ್ರಜಾವಾಣಿ_ದಿನಪತ್ರಿಕೆಯಲ್ಲಿ_60_ವಷ೯ದ_ಹಿಂದೆ_ಸುದ್ದಿ_ಆದ_ವ್ಯಕ್ತಿ_ಸಂದಶ೯ನ      ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೊಸಕೊಪ್ಪದಲ್ಲಿನ ಒಂದು ರೈತನ ಮನೇಲಿ ದೊಡ್ಡದಾದ ನಾಗರ ಹಾವು ತೊಟ್ಟಲಲ್ಲಿ ಮಲಗಿರುವ ಶಿಶುವಿನ ಜೊತೆ ಸದಾ ಮಲಗಿರುತ್ತೆ ಎಂಬ ಸುದ್ದಿ ಆ ಕಾಲದಲ್ಲಿ ಜನರಿಂದ ಜನರಿಗೆ ಹರಡಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಸುದ್ದಿ ಆಗಿತ್ತ೦ತೆ.   ಇದು ನಾನು ಸಣ್ಣಕ್ಕಿದ್ದಾಗ ನಮ್ಮ ತಂದೆ ಅವರ ಗೆಳೆಯರ ಜೊತೆ ಇದನ್ನೆಲ್ಲ ಮಾತಾಡುವುದು ಕೇಳಿದ್ದೆ ನ0ತರ ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಾಗರ ಹಾವಿನ ಸಹಪಾಟಿ ಆಗಿ ಸುದ್ದಿ ಆಗಿದ್ದ ವ್ಯಕ್ತಿ ತಲಾಷ್ ಮಾಡಿದ್ದೆ.   ಶ್ರೀಮತಿ ಚೆನ್ನಮ್ಮ ಮತ್ತು ಬಡಿಯಪ್ಪ ದಂಪತಿಗಳು ಹೊಸಗುಂದದಿಂದ ಹೊಸಕೊಪ್ಪ ಎಂಬ ಹಳ್ಳಿಗೆ ವಲಸೆ ಬಂದು ಹುಲ್ಲಿನ ಮಾಡಿನ ಮತ್ತು ಬಿದಿರ ತಟ್ಟಿಯ ಗೋಡೆಯ ಗುಡಿಸಲು ಮಾಡಿ ಬಡತನದಿಂದ ಜೀವಿಸುತ್ತಿದ್ದರು ಅವರಿಗೆ ಒಂದು ಹೆಣ್ಣು ಮಗು ಇತ್ತು.   ಇಲ್ಲಿಗೆ ಬಂದ ಮೇಲೆ ಪುತ್ರ ಸಂತಾನವಾಯಿತು ಮಗುವನ್ನು ಮಾತ್ರ ನಾಗರ ಹಾವು ಬಿಟ್ಟು ದೂರ ಹೋಗುತ್ತಿರಲಿಲ್ಲವಂತೆ, ಹಾಲು ಕುಡಿಸುವಾಗ ಮಾತ್ರ ದೂರ ಇರುತ್ತಿತ್ತಂತೆ ಹಾಗಾಗಿ ಮಗುವಿಗೆ ನಾಗರಾಜ ಅಂತ ಹೆಸರಿಡುತ್ತಾರೆ.   ಪತ್ರಿಕೆಯಲ್ಲಿ ಸ