Skip to main content

ಹುಕ್ಕಾ ಕಂಡು ಹಿಡಿದು 450 ವರ್ಷ ಆಯಿತು ಅಕ್ಬರ್ ಸಾಮ್ರಾಟರ ಖಾಸಾಗಿ ಪಿಸಿಷಿಯನ್ ಹಕೀಂ ಅಬುಲ್-ಪಥಾ - ಗಿಲಾನಿ ಪತೇಪುರ್ ಸಿಕ್ರಿಯಲ್ಲಿ ಇದನ್ನು ಮೊದಲು ತಯಾರಿಸಿ ಬಳಕೆ ಮಾಡುತ್ತಾರೆ.

#ಹುಕ್ಕಾ_ಖಯಾಲಿ

#ಹುಕ್ಕಾ_ಶ್ರೀಮಂತಿಕೆಯ_ಪ್ರದರ್ಶನ_ಆಗಿತ್ತು.

#ಹುಕ್ಕಾ_ಕಂಡುಹಿಡಿದು_450ವಷ೯_ಆಯಿತು.

#ಭಾರತಕ್ಕೆ_ತಂಬಾಕು_ಬಂದಿದ್ದು_ಹದಿನೇಳನೇ_ಶತಮಾನದಲ್ಲಿ.

#ಅದಕ್ಕೂ_ಮೊದಲು_ಬಳಕೆಇದ್ದಿದ್ದು_ಗಾಂಜಾ 

    ಉತ್ತರ ಭಾರತದ ಹಳ್ಳಿಗಳಿಗೆ ಹೋದಾಗ ಅಲ್ಲಿಯೂ ನಮ್ಮ ಹಳ್ಳಿಗಳಲ್ಲಿ ಇರುವಂತ ಸೋಮಾರಿ ಕಟ್ಟೆಗಳಲ್ಲಿ ಊರ ಪಂಚಾಯ್ತಿ ಗಾಸಿಪ್ ಗಳ ಚರ್ಚೆ ನಡೆಯುತ್ತಿರುತ್ತದೆ ಅವರ ಮಧ್ಯ ಹುಕ್ಕಾ ಒಂದು ಹೊಗೆಯಾಡುತ್ತಿರುತ್ತದೆ.
   ಸುಮಾರು 15 ವರ್ಷದ ಹಿಂದೆ ಹತ್ತು ಪೈಸೆಯ ತಂಬಾಕು ಕಡ್ಡಿಪುಡಿ ಹಾಕಿದರೆ 10 ಜನ ತಮ್ಮ ದೂಮಪಾನ ಸಂತೃಪ್ತಿ ಪಡೆಯುತ್ತಿದ್ದರು ಆದ್ದರಿಂದಲೇ ಇದು ಮಿತವ್ಯಯದ ಸಾಮೂಹಿಕ ದೂಮಪಾನದ ಹುಕ್ಕಾ ಆಗಿ ಪ್ರಸಿದ್ದಿ ಆಗಿರಬೇಕೆಂದು ಅನ್ನಿಸಿತ್ತು.
  ಆಗಲೇ ನನಗೂ ಒ೦ದು ಹುಕ್ಕಾ ಖರೀದಿಸುವ ಹುಕಿ ಬಂದಿತ್ತು.
  ಬಾಲ್ಯದಲ್ಲಿ ಒಂದು ಬಾರೀ ಆಸೆ ಇತ್ತು, ದೊಡ್ಡವನಾಗಿ ಸ್ವಂತ ದುಡಿಮೆ ಶುರು ಮಾಡಿದಾಗ ಟೆರಿಲಿನ್ ಅಂಗಿ ಧರಿಸಿ ಅದರ ಎದರು ಜೇಬಲ್ಲಿ ದುಬಾರಿ ಸಿಗರೇಟು ಪ್ಯಾಕ್ ಇಟ್ಟು ಕೊಳ್ಳಬೇಕು ಜೊತೆಯಲ್ಲಿ ದುಬಾರಿ ವಿದೇಶಿ ಲೈಟರ್ ನಿಂದ ಕಿಡಿ ತಾಗಿಸಿ ಹೊಗೆ ಬಿಡಬೇಕಂತ ಕನಸು ಆದರೆ ಅದನ್ನು ಜಾರಿಗೊಳಿಸಲು ನನ್ನ ಆರೋಗ್ಯ ಬಿಡಲೇ ಇಲ್ಲ ಸಿಗರೇಟು ಹೊಗೆ ಆಗಿ ಬರಲೇ ಇಲ್ಲ, ಹೊಗೆ ಮತ್ತು ದೂಳಿನ ಅಲರ್ಜಿ ಕೂಡ.
  ಆದರೂ ಈಗಲೂ ವಿವಿಧ ದೂಮಪಾನದ ಸಾಮಗ್ರಿಗಳ ನೋಡಲು ಆಸಕ್ತಿ ಹಾಗಾಗಿ ಸುಮಾರು ಹತ್ತು ವರ್ಷದ ಹಿಂದೆ ಮುಂಬಯಿ೦ದ ತಂದ ಗಾಜಿನ ಹುಕ್ಕಾ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಜೋಪಾನ ವಾಗಿ ಪ್ಯಾಕ್ ಮಾಡಿ ಇಟ್ಟಿದ್ದೆ, ಅಲ್ಲಿ೦ದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಾಗಾಟದಲ್ಲಿ ಒಡೆದು ಹೋಗಿರಬೇಕೆಂದು ಬಾವಿಸಿದ್ದೆ, ಮೊನ್ನೆ ತೆರೆದರೆ ಹೊಚ್ಚ ಹೊಸದು ಪಳಪಳಾ ಅಂತಾ ಇದೆ.
  ಹುಕ್ಕಾ ಎನಿದರ ಚರಿತ್ರೆ ಅಂತ ಗೂಗಲ್ ತಡಕಾಡಿದರೆ ಅನೇಕ ಆಸಕ್ತಿಕರ ವಿಚಾರಗಳೆ ತೆರೆದುಕೊಂಡಿತು.
  ಅಕ್ಬರ್ ಸಾಮ್ರಾಟರ ಆಸ್ಥಾನದಲ್ಲಿ ಪರ್ಶಿಯಾದ ಹಕೀಂ ಅಬುಲ್- ಪಥಾ - ಗಿಲಾನಿ ಎಂಬುವವರು ಅಕ್ಬರ್ ರಾಜನ ಖಾಸಾ ಪಿಷಿಸಿಯನ್ ಆಗಿರುತ್ತಾರೆ (1542-1605) ಇವರು ಮೊಗಲ್ ಇಂಡಿಯಾದ ಪತೇಪುರ್ ಸಿಕ್ರಿಯಲ್ಲಿ ಈ ಹುಕ್ಕಾ - ಶೀಷಾ - ನೀರಿನ ಪೈಪ್ ಎಂದು ಕರೆಯುವ ಉಪಕರಣ ಕಂಡು ಹಿಡಿಯುತ್ತಾರೆ ಇದು ಇಲ್ಲಿಂದ ಪರ್ಶಿಯಾಗೆ ಹೋಗಿ ಅಲ್ಲಿ ಅಲ್ಪ ಸ್ವಲ್ಪ ಆದುನಿಕರಣಗೊಂಡು ವಿಶ್ವ ದಾದ್ಯಂತ ಪಸರಿತಂತೆ.
  ಆ ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು ಹುಕ್ಕಾ ತಮ್ಮ ಶ್ರೀಮಂತಿಕೆಯ ಪ್ರತೀಕವಾಗಿ ಸೇಯುತ್ತಿದ್ದರಂತೆ, ಇದರಲ್ಲಿ ತಂಬಾಕು, ಗಾಂಜಾ ಬಳಸುತ್ತಿದ್ದರಂತೆ ಅಂದರೆ ಹುಕ್ಕಾ ಬಳಕೆಗೆ 450 ವರ್ಷ ಆಗಿರಬಹುದು.
  ಇನ್ನೊಂದು ವಿಶೇಷ ಭಾರತಕ್ಕೆ ತಂಬಾಕು ಪರಿಚಯ ಆಗುವುದು 17ನೇ ಶತಮಾನದಲ್ಲಿ ಅದಕ್ಕೂ ಮೊದಲು ಭಾರತೀಯರ ದೂಮಪಾನ ಬಾಂಗ್ ಅಥವ ಗಾಂಜಾ ಆಗಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...