Skip to main content

ಮೈಸೂರಿನ ಪ್ರಾಂತ್ಯದ ಬರಗಾಲದಿಂದ ಆದ ವಲಸೆ, ವೈವಾಹಿಕ ಸಂಬಂದಗಳ ವ್ಯಥೆ, ರಾಜರು ನಿರ್ಮಿಸಿದ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿ ಆಣೆಕಟ್ಟಿಂದ ಆದ ಪುನಶ್ಚೇತನ.

#ಇಂತಹ_ಕಾಲ_ಬಂದಿತ್ತಾ_ಅವರಿಗೆ

#ಹೆಣ್ಣು_ಮಕ್ಕಳನ್ನು_ಮಲೆನಾಡಿಗೆ_ತಂದು_ಮದುವೆ_ಮಾಡಿ_ಕೊಟ್ಟು_ಹೋಗುತ್ತಿದ್ದರು.

#ಈಗಲೂ_ಎಷ್ಟೋ_ಕುಟುಂಬಗಳು_ತಮ್ಮ_ಮೂಲ_ಹುಡುಕಲಾಗಲಿಲ್ಲ.

#ಮೈಸೂರಿನ_ಕುಂಬಾರ_ಕನ್ಯೆಯರನ್ನು_ಮಲೆನಾಡಿಗೆ_ತ೦ದು_ಮದುವೆ_ಮಾಡಿ_ಬಿಟ್ಟು_ಹೋಗುತ್ತಿದ್ದರು

   ನಮ್ಮೂರ ಸಮೀಪದ ಹರತಾಳು ಎಂಬ ಗ್ರಾಮದ ಕುಂಬಾರ ದಂಪತಿಗಳು 1970 ರಿಂದ 1995 ರ ವರೆಗೆ ಆನಂದಪುರ೦ನ ಸಂತೆ ಮಾರ್ಕೆಟ್ ನಲ್ಲಿ ಮಣ್ಣಿನ ಮಡಿಕೆಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದರು.
  ದೀಪಾವಳಿ ಅಂತ ಹಬ್ಬದ ಸಂಭ್ರಮದಿಂದ ಹಿಡಿದು ಸಾವಿನ ಶೋಕದ ಮನೆಯವರೆಗೆ ಅವರ ಅಂಗಡಿ ಅನಿವಾರ್ಯ ಆಗಿತ್ತು.
  ವಾರಕ್ಕೊ ಹತ್ತು ದಿನಕ್ಕೊ ಒಮ್ಮೆ ಹಳ್ಳಿಯ ತಮ್ಮ ಮನೆಗೆ ಹೋಗಿ ಕೃಷಿ ಇತ್ಯಾದಿ ಕೆಲಸ ಮತ್ತು ಮಡಿಕೆ ತಯಾರಿ ಮಾಡಿಕೊಂಡು ಎತ್ತಿನಗಾಡಿಯಲ್ಲಿ ಪುನಃ ವಾಪಾಸು ಬರುತ್ತಿದ್ದರು.
 ಕುಂಬಾರ ದಂಪತಿಗಳಿಗೆ ಸಂತಾನ ಭಾಗ್ಯ ಇಲ್ಲದ್ದರಿಂದ ತುಂಬಾ ದುಃಖ ವ್ಯಕ್ತಪಡಿಸುತ್ತಿದ್ದರು ಆಗ ನಮ್ಮದು ಸಣ್ಣ ಅಕ್ಕಿ ಮಾಡುವ ಮುಂಬಾಯಿಯ ಥಾನೆಯಿಂದ ತಂದ ಅಕ್ಕಿಗಿರಣಿ ನಮ್ಮ ತಂದೆ ಪ್ರಾರಂಭಿಸಿದ್ದರು ಈ ಯಂತ್ರದಲ್ಲಿ 5 kg ಭತ್ತ ಕೂಡ ಅಕ್ಕಿ ಮಾಡಬಹುದಾಗಿತ್ತು (ದೊಡ್ಡ ರೈಸ್ ಮಿಲ್ ನಲ್ಲಿ ಕನಿಷ್ಟ 50 kg ಯಿಂದ ಪ್ರಾರಂಭ) ಹಾಗಾಗಿ ಅನೇಕ ಸಣ್ಣ ರೈತರು ಮತ್ತು ಈ ರೀತಿ ಭತ್ತ ಪಡೆದು ಮಡಿಕೆ ಮಾರುವವರು, ಕ್ಷೌರದ ಕೂಲಿ ಆಗಿ ಭತ್ತ ಪಡೆಯುವ ಕೌರಿಕರು, ದನ ಕಾಯುವವರು, ಮೀನು ಮಾರಾಟ ಮಾಡುವವರು, ವರ್ತನೆಯ ವೀಳ್ಯದೆಲೆ ತಂಬಾಕು ನೀಡುವವರು ನಮ್ಮ ಅಕ್ಕಿ ಗಿರಣಿಗೆ ಖಾಯಂ ಗಿರಾಕಿ ಮತ್ತು ಒಂದು ವರ್ಷ SSLC ಪರೀಕ್ಷೆ ಬರೆಯದೆ ಮುಂದೂಡಿದ ನನಗೆ ನಾನೇ ಪ್ರಾರಂಬಿಸಿದ ದಿನಸಿ ಅಂಗಡಿ ಜೊತೆ ಈ ಅಕ್ಕಿ ಗಿರಣಿ ಡ್ರೈವರ್ ಹುದ್ದೆ ಬೋನಸ್ (ಶಿಕ್ಷೆ😂) ಆಗಿ ಬಂದಿತ್ತು.
  ಆಗೆಲ್ಲ ಈ ಕುಂಬಾರಮ್ಮನ ಬಾಲ್ಯದ ಕಥೆ ಕೇಳುವುದು ಅವರ ದುಃಖಾಂತ್ಯದ ಕಥೆಯಲ್ಲಿ ಕಣ್ಣೀರಾಗುತ್ತಿದ್ದೆ.
  ಇವರ ತಂದೆಗೆ ಐದು ಜನ ಹೆಣ್ಣು ಮಕ್ಕಳು ಆಗೆಲ್ಲ ಮೈಸೂರು ಭಾಗದಲ್ಲಿ ವಿಪರೀತ ಬರಗಾಲದ ಕಪ್ಪದ ದಿನಗಳು, ಜನ ವಲಸೆ ಹೋಗುತ್ತಿದ್ದರು ಆದರೆ ಕೃಷಿ ಭೂಮಿ, ಕುಂಬಾರಿಕೆ ಮತ್ತು ಜಾನುವಾರುಗಳಿದ್ದ ಇವರ ಕುಟುಂಬ ಹೋಗುವುದಾದರೂ ಎಲ್ಲಿಗೆ? ಇನ್ನು ಈ ಭಾಗದಲ್ಲಿ ಮದುವೆ ಸಂಬಂದ ಬೆಳೆಸುವುದಾದರೂ ಯಾರು? ಈ ಚಿಂತೆಯಲ್ಲಿದ್ದಾಗಲೇ ಇವರಿಗೆ ಗೊತ್ತಾಗಿದ್ದು ದೂರದ ಮಲೆನಾಡಿನಲ್ಲಿ ಇರುವ ಇವರ ಸ್ವಜಾತಿ ಕುಂಬಾರರ ಕುಟುಂಬದಲ್ಲಿ ಕನೈಯರ ಕೊರತೆ ಇದೆ ಆದರೆ ಅವರು ಇಷ್ಟು ದೂರ ಬಂದು ಸಂಬಂದ ಮಾಡುವುದಿಲ್ಲ ನಾವೇ ಕನ್ಯೆ ಅವರ ಮನೆ ಬಾಗಿಲಿಗೆ ಒಯ್ದು ತೋರಿಸಿ ಒಪ್ಪಿಗೆ ಆದರೆ ಮದುವೆ ಮಾಡಿ ಬರಬಹುದು ಆದರೆ ಮುಂದೆ ಅಷ್ಟು ದೂರ ಬಂದು ಹೋಗಲಾಗದೆ ಸಂಬಂದ ಉಳಿಯಲಾರದು ಆದರೆ ಮದುವೆ ಇಲ್ಲದೆ ಮೈಸೂರಿನ ಕುಂಬಾರ ಕನ್ಯೆ ಜೀವನ ಮಾಡುವುದು ತಪ್ಪಿಸ ಬಹುದೆಂಬ ಸಲಹೆ.
  ತಮ್ಮ ಹೆತ್ತ ಕರಳ ಕುಡಿ ಎಲ್ಲೋ ಬಿಟ್ಟು ಬರುವ ಈ ಕ್ರೌರ್ಯ ಒಪ್ಪದ ಕುಟುಂಬ ಕೆಲ ವರ್ಷ ಸ್ಥಳಿಯವಾಗಿ ವರಾನ್ವೇಷಣೆ ಮಾಡಿಯೂ ವಿಫಲರಾದಾಗ, ವರ್ಷದಿಂದ ವರ್ಷಕ್ಕೆ ಮಳೆ ಇಲ್ಲದೆ ಬೆಳೆ ಇಲ್ಲದೆ ಹೈರಾಣಾದ ಇವರ ಕುಟುಂಬ ಎತ್ತಿನಗಾಡಿಯಲ್ಲಿ ದಾರಿ ಮಧ್ಯದ ಖರ್ಚು ವೆಚ್ಚಕ್ಕಾಗಿ ಮಣ್ಣಿನ ಮಡಿಕೆ ಹೇರಿ ಅದರ ಮದ್ಯ ಇವರಿಬ್ಬರು ಅಕ್ಕ ತಂಗಿಯರನ್ನು ಕೂರಿಸಿ ಕೊಂಡು ಬಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹರತಾಳಿನಲ್ಲಿದ್ದ ಕುಂಬಾರರ ಕ್ಯಾಂಪಿನಲ್ಲಿ ಕನ್ಯೆ ತೋರಿಸಿ ಮದುವೆ ಮಾಡಿದರು, ಇನ್ನೂ ಉಳಿದ ತಂಗಿಯನ್ನು ಮದುವೆ ಹೀಗೆ ಒಳ್ಳೇ ಜಾಗ ನೋಡಿ ಮದುವೆ ಮಾಡಿ ಊರಿಗೆ ಹೋಗಿ ಮುಂದಿನ ವರ್ಷ ತಾಯಿ, ತಮ್ಮಂದಿರು ಮತ್ತು ತಂಗಿಯರನ್ನು ಕರೆತರುವುದಾಗಿ ಕಣ್ಣಲ್ಲಿ ಬಂದ ಕಣ್ಣೀರು ಮರೆ ಮಾಚಿಕೊಂಡು ಹೋದ ಅಪ್ಪ ತಂಗಿಗಾಗಿ 60 ವರ್ಷದಿಂದ ಕಾಯುತ್ತಾ ಇದೀನಿ ಕಾಣಪ್ಪ! ಅಂತ ಕಣ್ಣೀರಿಟ್ಟಾಗೆಲ್ಲ ನಾನೂ ಕಣ್ಣೀರಾಗದೆ ನನ್ನ ವೇದನೆ ಕಡಿಮೆ ಆಗುವುದಾದರೂ ಹೇಗೆ?
  ಆಗ ನನಗೆ 16 ವರ್ಷ ಆಗಲೇ ನಾನು ತೀರ್ಮಾನ ಮಾಡಿದ್ದೆ ದೊಡ್ಡವನಾಗಿ ನನ್ನ ಸ್ವಂತ ದುಡಿಮೆ ಪ್ರಾರಂಭ ಮಾಡಿದಾಗ ಈ ಕುಂಬಾರಮ್ಮನ ಕುಟುಂಬದ ಪುನರ್ಮಿಲನ ಮಾಡಿಸಬೇಕೆಂದು ಈ ನನ್ನ ತೀರ್ಮಾನ ಕೇಳಿದಾಗೆಲ್ಲ ಕುಂಬಾರಮ್ಮ ತನ್ನ ಎರೆಡೂ ಕೈ ಬೆರಳಿಂದ ನನ್ನ ಮುಖ ಸವರಿ ಲಟಿಕೆ ಚಟಚಟಂತ ತೆಗೆದು "ನನ್ನ ರಾಜಕುಮಾರ ನಿನಗೆ ನಂಜನ ಗೂಡಿನ ನಂಜುಂಡೇಶ್ವರ ದೇವರು ಎಲ್ಲಾ ಶಕ್ತಿ ನೀಡಲಿ " ಅಂತ ಆಶ್ರೀ ವಾದ ಮಾಡುತ್ತಿದ್ದರು.
 ಆ ಕಾಲ ಬಂತು 1993ರಿಂದ 1995ರಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾದಾಗ ನಮ್ಮ ಗ್ರಾಮ ಪಂಚಾಯತ್ ಗೆ ಸೇರಿದ ಇರುವಕ್ಕಿ(ಈಗ ಕೃಷಿ ವಿಶ್ವವಿದ್ಯಾಲಯ ಇಲ್ಲಿ ಆಗಿದೆ.) ಯಲ್ಲಿ ಕುಂಬಾರರ ದೊಡ್ಡ ಕ್ಯಾಂಪಲ್ಲಿ ಈ ಬಗ್ಗೆ ಮಾಹಿತಿಗಾಗಿ ಚರ್ಚಿಸಿದಾಗ ಅಲ್ಲೂ ಕೆಲ ಮೈಸೂರಿನ ಕನ್ಯೆಯರ ಸಂಬಂದ ಆದ ಬಗ್ಗೆ ಗೊತ್ತಾಯಿತು.
  ನಂಜನಗೂಡಿನ ಪ್ರಸಿದ್ದ ಔಷದ ಕಾರ್ಖಾನೆಯಲ್ಲಿ ಮುಖ್ಯ ಸೆಕ್ಯುರಿಟಿ ಅಧಿಕಾರಿ ಆಗಿದ್ದ ನನ್ನ ಬಂಧು ರಾದಾಕೃಷ್ಣರ ನೆರವು ಪಡೆದೆ, ಅವರೂ ಈ ಪುನರ್ಮಿಲನ ಕಾರ್ಯಕ್ಕೆ ಕೈ ಜೋಡಿಸಿ ಅವರ ವಾರದ ರಜೆಯಲ್ಲಿ ಹುಡುಕಾಟ ಮಾಡಿದರು.
  ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಬರಗಾಲದಿಂದ ಜನ ಎಷ್ಟು ಸತಾವಣೆಗೊಂಡಿದ್ದರೆಂದರೆ 1875-76 ರಲ್ಲಿ ಒಂದೇ ಹನಿ ಭೂಮಿಗೆ ಬಿದ್ದಿರಲಿಲ್ಲ, ಮೈಸೂರು ರಾಜ್ಯದ ಐದನೇ ಒಂದು ಭಾಗದ ಜನ ಬರಗಾಲದಿಂದ ರಾಜ್ಯದಿಂದಲೇ ವಲಸೆ ಹೋದಾಗ ರಾಜರು 1911 ರಲ್ಲಿ ಕಾವೇರಿ ನದಿ ಮತ್ತು ಅದರ ಜೊತೆಯ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳಿಗೆ ಆಣೆಕಟ್ಟು ಕಟ್ಟಿ 1932 ರಲ್ಲಿ ನೀರು ಹರಿಸುವ ತನಕ ಈ ವಲಸೆ ಮುಂದುವರಿದಿತ್ತು.
 81 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಣ್ಣ ಮಿಶ್ರಿತ ಗಚ್ಚುಗಾರೆಯಿಂದ ನಿರ್ಮಾಣವಾದ ಬೃಹತ್ ನೀರಾವರಿ ಡ್ಯಾಂ ಕೃಷ್ಣರಾಜ ಸಾಗರದಿಂದ ಸುಮಾರು ಹತ್ತು ಸಾವಿರ ಜನ ನಿರ್ವಸಿತರಾದರು ಸರ್.ಎಂ.ವಿಶ್ವೇಶ್ವರಯ್ಯರ ಹೆಸರು ಅಜರಾಮರ ಆಯಿತು, ಸರ್ ಮಿರ್ಜಾ ಇಸ್ಮಾಯಿಲರ ಆಸಕ್ತಿಯಿಂದ ನಿರ್ಮಾಣ ಆದ ಬೃಂದಾವನ ಈಗ ವಿಶ್ವ ವಿಖ್ಯಾತ ಪ್ರವಾಸಿ ತಾಣ ಆಗಿದೆ.
  ಈ ಕುಂಬಾರ ಕುಟುಂಬದ ಪುನರ್ಮಿಲನದ ಶೋದದಲ್ಲಿ ಬೇರೆ ಕೆಲ ಕುಟುಂಬಗಳ ಪುನರ್ಮಿಲನ ಆಯಿತು ಅವರ ಪೋಷಕರು ಜೀವ೦ತ ಇರಲಿಲ್ಲ ಆದರೆ ಅವರ ಸಹೋದರ ಸಂಬಂದಿ ಕಳ್ಳುಬಳ್ಳಿಗಳು ಸಿಕ್ಕಿದರು ಎರೆಡೂ ಕಡೆ ಕಳೆದು ಹೋದ ಮೈಸೂರು ಪ್ರಾಂತ್ಯದ ಬರಗಾಲ ಸಂಬಂದಿ ಸಂಬಂದ ಪುನರ್ ಪ್ರಾರಂಭ ಆಗಿ ಹಾಲು ಜೇನಿನಂತಾಯಿತಾದರೂ ನಾನು ಶೋದ ಮಾಡಲು ಮೂಲ ಕಾರಣವಾದ ಕುಂಬಾರಮ್ಮನ ಕುಟುಂಬ ಮಾತ್ರ ಸಿಗಲಿಲ್ಲ ಇದು ನನಗೆ ತುಂಬಾ ಬೇಸರದ ವಿಷಯ ಆಗಿತ್ತು.
  ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಕುಂಬಾರಮ್ಮ ದಂಪತಿಗಳೂ ಇಹ ಲೋಕ ತ್ಯಜಿಸಿದ್ದಾರೆ ಅವರ ಸಾಕು ಮಗನ ಕುಟುಂಬ ಹಳ್ಳಿಯಲ್ಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...