Skip to main content

Posts

Showing posts from November, 2023

Blog number 1844. ಕನಕದಾಸರು ಸುಮಾರು 500 ವರ್ಷದ ಹಿಂದೆ ಬಳಸಿದ್ದ ಮರದ ಬಿಕ್ಷಾ ಪಾತ್ರೆ ಮತ್ತು ಶಂಖಾ ಕಾಗಿನೆಲೆಯಲ್ಲಿ ಸಂರಕ್ಷಿಸಿಡಲಾಗಿದೆ.

https://youtu.be/IX_IT_hz_1g?feature=shared #ಕನಕ_ದಾಸರ_ಜಯಂತಿ #ಕನಕದಾಸರ_ಮರದ_ಬಿಕ್ಷಾಪಾತ್ರೆ #ಅವರು_ಬಳಸಿದ_ಶಂಖಾ #ಕಾಗಿನೆಲೆಯಲ್ಲಿ_ಸಂರಕ್ಷಿಸಿಡಲಾಗಿದೆ. #ಹುಟ್ಟೂರು_ಹಾವೇರಿ_ಜಿಲ್ಲೆಯ_ಶಿಗ್ಗಾಂವಿ_ತಾಲ್ಲೂಕಿನ_ಬಾಡಾ. #ಸಮಾದಿ_ಸ್ಥಳ_ಹಾವೇರಿ_ಜಿಲ್ಲೆಯ_ಬ್ಯಾಡಗಿ_ತಾಲ್ಲೂಕಿನ_ಕಾಗಿನೆಲೆ #ಉಡುಪಿಯ_ಕನಕನ_ಕಿಂಡಿ #ಕನಕದಾಸರ_ಸ್ಮಾರಕ_ಸ್ಥಳಗಳಾಗಿದೆ.    18-ಆಗಸ್ಟ್ -2016ರಂದು ಅಂದರೆ ಸುಮಾರು 7 ವರ್ಷದ ಹಿಂದೆ ಕಾಗಿನೆಲೆ ತಲುಪಿ ಕನಕದಾಸರ ಸಮಾದಿ ಸಂದರ್ಶಿಸುವಾಗಲೇ ಸಂಜೆ ಆಗಿತ್ತು ಅಲ್ಲಿಂದ ನರಸಿಂಹ ಸ್ವಾಮಿ ದೇವಸ್ಥಾನ ತಲುಪಿದಾಗ ಸ್ವಲ್ಪ ತಡವಾಗಿತ್ತು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ದೇವಾಲಯ ಪುನರ್ ನಿರ್ಮಾಣವಾಗುತ್ತಿದ್ದರಿಂದ ದೇವಾಲಯ ಬೇಗನೇ ಬಾಗಿಲು ಹಾಕಿದ್ದರು.         ಪಕ್ಕದಲ್ಲೇ ಇರುವ ಮಸೀದಿಯವರು ಈಗಷ್ಟೇ ಭಟ್ಟರು ಮನೆಗೆ ಹೋಗಿದ್ದಾರೆ ಅನ್ನುವಾಗಲೇ ಟಿ.ವಿ.ಎಸ್.ನಲ್ಲಿ ಅಲ್ಲಿಗೆ ಬಂದ ಪುರೋಹಿತರು ನಾವು ಎಲ್ಲಿಂದ ಬಂದಿದ್ದಾಗಿ ವಿಚಾರಿಸಿ ನಂತರ ದೇವಾಲಯದ ಬೀಗ ತೆಗೆದು ದೇವರ ದಶ೯ನದ ಜೊತೆ ಸ್ಥಳ ಪುರಾಣವನ್ನು ತಿಳಿಸಿದರು.    ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಅಧಿಕ ದಾಸರಲ್ಲಿ ಕನಕದಾಸರೊಬ್ಬರೆ ಕೆಳ ಪಂಗಡದವರು ಆದ್ದರಿಂದಲೇ ಉಡುಪಿ ಕೃಷ್ಣ ಮಠದಲ್ಲಿ ಅವರಿಗೆ ಅವಮಾನ ಮಾಡಿ ಹೊರದೂಡಲಾಗಿತ್ತು ಆಗ ಸಾಕ್ಷಾತ್ ಶ್ರೀಕೃಷ್ಣ ದೇವಾಲಯದ ಗೋಡೆಯನ್ನೆ ಒಡೆದು ಕಿಂಡಿ ಮೂಲಕ ಕ

Blog number 1843. ಶಿವಮೊಗ್ಗದ ಮಾಜಿ ಸಂಸದರಾಗಿದ್ದ ಕೆ.ಜಿ. ಶಿವಪ್ಪರ ಪುತ್ರ ಪ್ರಶಾಂತ್ ಮತ್ತು ನನ್ನ ಮೊದಲ ಬೇಟಿ.

#ನಿನ್ನೆ_ನನ್ನ_ಅತಿಥಿ_ಮಾಜಿ_ಸಂಸದ_ಕೆಜಿ_ಶಿವಪ್ಪರ_ಪುತ್ರ_ಪ್ರಶಾಂತ್  #ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪ_ಚಿತ್ರ_ನಟ_ರಾಜಕುಮಾರರ_ಸಂಬಂದಿ #ನಮ್ಮ_ಆನಂದಪುರಂನಲ್ಲಿ_ಇವರ_ನವಚೇತನಾ_ವೇದಿಕೆ_ಮಂಗಳೂರಿನ_ಕೆ_ಎಸ್_ಹೆಗ್ಗಡೆ_ಆಸ್ಪತ್ರೆ_ಸಹಯೋಗದ_ಆರೋಗ್ಯ_ಶಿಭಿರ #ರಾಜಕಾರಣದಲ್ಲಿ_ಇವರಿಗೆ_ಇರುವ_ಆಸಕ್ತಿ_ಮುಂದಿನ_ತಲೆಮಾರಿನ_ರಾಜಕಾರಣಕ್ಕೆ_ದಾರಿ.      ನಿನ್ನೆ ಸಂಜೆ ಪ್ರಶಾಂತ್ ಹೊಸಕೊಪ್ಪದ ರಮೇಶ್, ತಳಗೇರಿಯ ವಿಶ್ವನಾಥ ಮತ್ತು ಘಂಟಿನಕೊಪ್ಪದ ನನ್ನ ಮಿತ್ರ ಗಜೇಂದ್ರ ಜೊತೆ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಪ್ರಥಮ ಭೇಟಿ.    ಇವರ ತಂದೆ 1992ರಲ್ಲಿ ಶಿವಮೊಗ್ಗ ಲೋಕ ಸಭಾ ಚುನಾವಣೆಯ ಅಭ್ಯರ್ಥಿ ಆದಾಗ ಮೊದಲ ಚುನಾವಣಾ ಪ್ರಚಾರ ಸಭೆಯ ಉದ್ಘಾಟನೆ ಜ್ಯೂವಲ್ ರಾಕ್ ಹೋಟೆಲ್ ಸಮೀಪದ ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಶಾಲೆ ಮತ್ತು ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೇಸ್ ಹಮ್ಮಿ ಕೊಂಡಿತ್ತು ಆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ನನ್ನದು ಆಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ನನ್ನ ಮಿತ್ರ ಮತ್ತು ಆಗಿನ ಮುಖ್ಯ ಮಂತ್ರಿ ಬಂಗಾರಪ್ಪರ ಕಟ್ಟಾ ಶಿಷ್ಯ ಮಲ್ಲಿಕಾರ್ಜುನ್ ರಾವ್.   ಈ ಚುನಾವಣೆಯ ಪ್ರಚಾರಕ್ಕೆ ರಾಜೀವ್ ಗಾಂಧಿ ಬಂದಿದ್ದರು ಆಗ ಇವರ ಎದರು ಪರಾಭವಗೊಂಡವರು ಬಿಜೆಪಿಯ ಅಭ್ಯರ್ಥಿ ಯಡ್ಯೂರಪ್ಪನವರು.    ಕೆ.ಜಿ. ಶಿವಪ್ಪರ ಕೊನೆಯ ಬೇಟಿ ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟದ ಸತ್

Blog number 1842. ಶಂಭೂರಾಮನಿಗಾಗಿ ಮೊನಿ ಮೇಕ್ಸ್ ಮೆನಿ ಥಿಂಗ್ಸ್ ಗಾಧೆ ಕೊಂಚ ಮಾರ್ಪಾಡು ಮಾಡಿ ಬಿಸ್ಕೀಟ್ ಮೇಕ್ಸ್ ಮೆನಿ ಥಿಂಗ್ಸ್ ಅಂತ ಮಾಡಿದೆ.

https://youtu.be/ghIEwVr6yzI?feature=shared #ಬಿಸ್ಕೀಟ್_ಮೇಕ್ಸ್_ಮೆನಿ_ಥಿಂಗ್ಸ್ #ನಮ್ಮ_ಶಂಭೂರಾಮನಿಗೆ #ಮೊನಿ_ಮೇಕ್ಸ್_ಮೆನಿ_ಥಿಂಗ್ಸ್ #ನಮಗೆ_ನಿಮಗೆ #ಗಾದೆ_ಮಾತು.   ಸಾಕು ನಾಯಿಗಳಿಗೆ ಬಿಸ್ಕೇಟ್ ಗಳ ಬಗ್ಗೆ ವಿಪರೀತ ಆಕರ್ಷಣೆ ಎಷ್ಟರ ಮಟ್ಟಿಗೆ ಅಂದರೆ ನಾಯಿ ಬಿಸ್ಕೇಟ್ ಗಳ ತಯಾರಿ ಮತ್ತು ಮಾರಾಟ ವಿಶ್ವದಾದ್ಯಂತ ಕೆಲವು ಬಿಲಿಯನ್ ಡಾಲರ್ ವಹಿವಾಟು ದಾಟಿದೆ.   ನಾನ್ ವೆಜ್ ಬಿಸ್ಕೇಟ್, ಚಿಕನ್ ಪ್ಲೇವರ್ ಬಿಸ್ಕೇಟ್ ಹೀಗೆ ತರಹಾವಾರಿ ಇದೆ ಹಾಗಂತ ಎಲ್ಲಾ ಬಿಸ್ಕೇಟ್ ಗಳನ್ನು ಸಾಕು ನಾಯಿ ತಿನ್ನುವುದಿಲ್ಲ ಮತ್ತು ಕೆಲ ಕಾಂಬಿನೇಷನ್ ಬಿಸ್ಕೇಟ್ ಕೆಲ ನಾಯಿಗಳ ಆರೋಗ್ಯ ಏರುಪೇರು ಮಾಡುವುದರಿಂದ ಸೂಕ್ತ ಬಿಸ್ಕೇಟ್ ಪೆಟ್ ಡಾಕ್ಟರ್ ಸಜೆಸ್ಟ್ ಮಾಡುತ್ತಾರೆ.   ಈ ಬಿಸ್ಕತ್ತುಗಳಿದ್ದರೆ ಮಾತ್ರ ನಾಯಿ ಮರಿ ಇದ್ದಾಗ ತರಬೇತಿ ಸರಾಗವಾಗುತ್ತದೆ, ಇದೊಂತರ ಲಂಚ ಕೊಟ್ಟು ಅವುಗಳ ತರಬೇತಿ ನೀಡುವ ಪರಿ ಇದು.    ಮುಂದಿನ ಮಾರ್ಚ್ ತಿಂಗಳಿಗೆ 3 ವರ್ಷ ತಲುಪುವ ನಮ್ಮ ಶಂಭೂರಾಮ ನಿತ್ಯ ಬೆಳಿಗ್ಗೆ ನನ್ನ 7000 ಹೆಜ್ಜೆ ಪೂರ್ಣ ಮಾಡುವ ನನ್ನ ವಾಕಿಂಗ್ ಸಾಥಿ ಇದಕ್ಕೆ ಒಂದೂಕಾಲು ಗಂಟೆಯಿಂದ ಒಂದೂವರೆ ಗಂಟೆ ಅವಧಿ ನನ್ನ ಜೊತೆ ಇರುತಾನೆ.    ಪ್ರಾರಂಭದ ಅರ್ದ ಗಂಟೆ ಅವನು ಹೆಚ್ಚಿನ ಜೋಶ್ ಮತ್ತು ಎನರ್ಜಿಯಿಂದ ಕುಣಿಯುವ ಓಡುವ ಅವನು ನಂತರ ಅಲ್ಲಲ್ಲಿ ಕುಳಿತು ನನ್ನ ನಡಿಗೆಯನ್ನು ಮಾನಿಟರಿಂಗ್ ಮಾಡುತ್ತಾನೆ ಏನು ಮಾಡಿದರೂ ಏಳ

Blog number 1841. ಶರಾವತಿ ನದಿ ದಂಡೆಯ ನತದೃಷ್ಟರ ಸಂಕಷ್ಟಗಳು ರಾಜಕೀಯ ಪಕ್ಷಗಳು ಚುನಾವಣೆಯ ದಾಳವಾಗಿ ಬಳಸುತ್ತಿದೆ.

#ಶರಾವತಿ_ಮುಳುಗಡೆ_ಸಂತ್ರಸ್ಥರ_ಪರವಾಗಿ_ಆಯನೂರಿಂದ_ಶಿವಮೊಗ್ಗದವರೆಗೆ #ಕಾಂಗ್ರೇಸ್_ಪಕ್ಷ_ನಡೆಸಿದ_ಜನಾಕ್ರೋಶ_ಯಾತ್ರೆಗೆ_ಒಂದು_ವಷ೯ #ಕಳೆದ_ವಷ೯_28_ನವೆಂಬರ್_2022ರಂದು_ನಡೆದಿತ್ತು. #ಅವತ್ತು_ಈ_ಯಾತ್ರೆಯಲ್ಲಿ_ಭಾಗವಹಿಸಿದ್ದ_ವಿರೋದ_ಪಕ್ಷದ_ನಾಯಕ_ಸಿದ್ಧರಾಮಯ್ಯನವರು_ಡಿಕೆಶಿ, #ಇವತ್ತು_ಮುಖ್ಯಮಂತ್ರಿ_ಉಪಮುಖ್ಯಮಂತ್ರಿ #ಶರಾವತಿ_ನದಿ_ದಂಡೆಯ_ನತದೃಷ್ಟ_ಸಂತ್ರಸ್ಥರು. #ಪ್ರದಾನಿ_ನೆಹರೂಗೆ_ಮನವಿ_ನೀಡಿದಾಗ_ನೆಹರೂ_ವರ್ತನೆ. #ಸಂಸದರಾಗಿದ್ದ_ಕೆಜಿ_ಒಡೆಯರ್_ನೇತೃತ್ವದಲ್ಲಿ_ಶರಾವತಿ_ಮುಳುಗಡೆ_ರೈತರ_ನಿಯೋಗ. #ಅವೈಜ್ಞಾನಿಕ_ಪರಿಹಾರ_ಪುನರ್_ವಸತಿ_ಯೋಜನೆ #ಆರ್ಥಿಕ_ಸಾಮಾಜಿಕವಾಗಿ_ಮೂರು_ತಲೆಮಾರು_ಕಷ್ಟದಲ್ಲಿ_ಕಳೆದಿದೆ. #ಮುಳುಗಡೆ_ರೈತರ_ಕುಟುಂಬಕ್ಕೆ_ಒಂದು_ಉದ್ಯೋಗದ_ಭರವಸೆ_ಈಡೇರಲಿಲ್ಲ. #ಸಾಗರದ_ಸಂಜಯ್_ಪಾಲಿಟೆಕ್ನಿಕ್_ಪಕ್ಕದ_ಶರಾವತಿ_ಸಂತ್ರಸ್ಥರ_ನೂರಾರು_ನಿವೇಶನ_ಯಾರ_ಪಾಲಾಯಿತು? #ಚುನಾವಣೆಗಳು_ಬಂದಾಗ_ಮಾತ್ರ_ಮುನ್ನಲೆಗೆ_ಬರುವ_ಸಂತ್ರಸ್ಥರ_ಬವಣೆಗಳು.    1939 ರಲ್ಲಿ ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ತಾಲ್ಲೂಕಿನ ಕರೂರು - ಬಾರಂಗಿ ಹೋಬಳಿಯ ಮಡೆನೂರು ಹಿರೇಬಾಸ್ಕರ ಡ್ಯಾಂ ನಂತರ ಇಲ್ಲಿ೦ದ 20 ಕಿ ಮಿ ಜೋಗ್ ಸಮೀಪದ ಲಿಂಗನಮಕ್ಕಿಯಲ್ಲಿ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಯಲ್ಲಿ ಮುಳುಗಡೆ ಆದ ಜನವಸತಿ ಕೇಂದ್ರಗಳು ಮತ್ತು ಪಲವತ್ತಾದ ಜಮೀನು ಅಡಿಕೆ ತೋಟಗಳು ಅಪಾರ.    ಮೊದಲ ಮುಳುಗಡೆ ಮಡೆನೂರು ತನಕ ಹೊ

Blog number 1840. ಮೆಕ್ಯಾನಿಕ್ - ಡ್ರೈವರ್ ಎಂದೆಲ್ಲ ಜನ ಕರೆಯುವ ನನ್ನ ಹಿರಿಯರು ಆತ್ಮೀಯರೂ ಆದ ನಾಗೇಂದ್ರಪ್ಪನವರು.

https://youtu.be/FVHRkjyFOYQ?feature=shared #ಶಿಕಾರಿಪುರದ_ನೆಲವಾಗಿಲಿನ_ನಾಗೇಂದ್ರಪ್ಪ #ಜನ_ಇವರನ್ನು_ಡ್ರೈವರ್_ನಾಗೇಂದ್ರಪ್ಪ_ಮೆಕ್ಯಾನಿಕ್_ನಾಗೇಂದ್ರಪ್ಪ_ಅಂತಲೂ_ಕರೆಯುತ್ತಾರೆ. #ನಾನೂ_ಇವರೂ_ಹಾಸನ_ಮೈಸೂರು_ಮಂಡ್ಯ_ಕೊಡಗು_ಜಿಲ್ಲೆಗಳಲ್ಲಿ_ಅನೇಕ_ದಿನ_ತಿರುಗಾಡಿದ್ದೆವು  #ನಿಸ್ವಾರ್ಥಿ_ಪರೋಪಕಾರಿ_ಅನ್ಯಾಯದ_ವಿರುದ್ದ_ಸಿಡಿದೇಳುವ_ಇವರು_ಕಲಾವಿದರೂ_ಹೌದು. #ನಮ್ಮ_ಊರಿನ_ವರಸಿದ್ದಿ_ವಿನಾಯಕ_ದೇವಸ್ಥಾನದ_ಪಾರುಪತ್ತೆದಾರರು.   80 ರ ದಶಕದಲ್ಲಿ ನಮ್ಮ ಊರಲ್ಲಿ ರೈಸ್ ಮಿಲ್ ಮೆಕ್ಯಾನಿಕ್ ಆಗಿ ಬಂದ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲಿನ ನಾಗೇಂದ್ರಪ್ಪ ಈಗ ನಮ್ಮ ಊರಿನ ನಿವಾಸಿಗಳು.    ಇವರು ರೈಸ್ ಮಿಲ್ ಮೆಕ್ಯಾನಿಕ್ ಮಾತ್ರವಲ್ಲ ಅತ್ಯುತ್ತಮ ಡ್ರೈವರ್ ಕೂಡ ಅನೇಕ ವರ್ಷ ಶಿವಮೊಗ್ಗದ ಜಯಪ್ರಕಾಶ್ ಶೆಣೈ ಅವರ ವಿಜಯಾ ಮೋಟಾರ್ಸ್ ಸಂಸ್ಥೆಯ ನಂಬಿಕಸ್ತ ಮತ್ತು ಯಶಸ್ವೀ ಡ್ರೈವರ್ ಆಗಿದ್ದರು, ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರಿಗೂ ಆಪ್ತರಾಗಿದ್ದರು.   ಕನ್ನಡ ಸಾಹಿತ್ಯದ ಓದು, ಹಾಡುವುದು, ಭಜನೆ, ನಾಟಕಗಳಲ್ಲಿ ಅಭಿನಯಿಸುವುದು ಇವರ ಹವ್ಯಾಸ.   ಧಾರ್ಮಿಕ-ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ಇವರು ಶ್ರದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ.   ಅನ್ಯಾಯ ದೌರ್ಜನ್ಯದ ವಿರುದ್ಧ ತಕ್ಷಣ ಸಿಡಿದೇಳುವ ಇವರ ಜೀವನ ಶಿಸ್ತು ಬದ್ದವಾಗಿ ನಡೆದು ಬಂದಿದೆ.   ಶಿಕಾರಿಪುರದ ಒಂದು ಕಾಲದ ಪ್ರಖ್ಯಾತ ಅ

Blog number 1839. ಮಲೆನಾಡು ಪ್ರಾಂತ್ಯದಲ್ಲಿ ಕಂಬಳ ಓಟದ ತಯಾರಿಯಲ್ಲಿ ವಕೀಲರಾದ ಕುಬಟಳ್ಳಿ ರಾಮಚಂದ್ರ ಮತ್ತು ಅವರ ತಂಡ.

#ಕಾಂತಾರ_ಸಿನಿಮಾದಿಂದ_ಜನಪ್ರಿಯವಾದ_ಕರಾವಳಿ_ಕಂಬಳ #ಈಗ_ಬೆಂಗಳೂರು_ಕಂಬಳದಿಂದ_ಶಿವಮೊಗ್ಗ_ಜಿಲ್ಲೆಯಲ್ಲಿ_ಕಂಬಳ #ರಿಪ್ಪನಪೇಟೆಯಲ್ಲಿ_ಕಂಬಳ_ಯಶಸ್ವಿ_ಆದೀತಾ? #ಹಿಂದಿನ_ಆಲೆಮನೆ_ಕಾಲದಲ್ಲಿ_ಘಟ್ಟ_ಹತ್ತಿ_ಬರುತ್ತಿದ್ದ_ಆಲೆ_ಕೋಣ_ಈಗಿಲ್ಲ #ಬೆಂಗಳೂರು_ಕಂಬಳಕ್ಕಾಗಿ_ಸಕಲೇಶಪುರ_ಘಟ್ಟ_ಹತ್ತಿದ_ಕಂಬಳ_ಕೋಣಗಳು . #ದೇಶದ_ರಕ್ಷಣಾಸಚಿವ_ಜಾಜ್೯ಪರ್ನಾಂಡೀಸರು_ಬಸ್ರೂರಿನ_ಐ_ಎಂ_ಜಯರಾಂಶೆಟ್ಟರ_ಮನೆಯ_ಕಂಬಳದಲ್ಲಿ_ಬಾಗಿ_ಆಗಿದ್ದರು. #ತೀರ್ಥಹಳ್ಳಿ_ಹೊಸನಗರ_ಸಾಗರದ_ಮಲೆನಾಡಿನಲ್ಲಿ_ಕಂಬಳ_ತಯಾರಿಯಲ್ಲಿ_ಕುಬಟಳ್ಳಿ_ರಾಮಚಂದ್ರ_ವಕೀಲರ_ತಂಡ #ಮೊದಲ_ದೇಣಿಗೆಯಾಗಿ_ನನ್ನ_ಹತ್ತು_ಸಾವಿರ_ಘೋಷಿಸಿದ್ದೇನೆ. #ಪ್ರೋಕಬ್ಬಡಿಯಂತೆ_ಕಂಬಳ_ಪ್ರಸಿದ್ಧಿ_ಪಡೆಯಲಿದೆ. #ಕಂಬಳದ_ಕೋಣ_ಓಡಿಸುವವರು_ಸ್ಟಾರ್_ಆಟಗಾರರಾಗಲಿದ್ದಾರೆ.      ಇವತ್ತು ಬೆಳಿಗ್ಗೆ ವಾಕಿಂಗ್ ಮಾಡುವಾಗ ಶಿವಮೊಗ್ಗದಿಂದ ವಕೀಲರಾದ ಕುಬಟಳ್ಳಿ ರಾಮಚಂದ್ರ ಪೋನ್ ಮಾಡಿದ್ದರು ಇವರು ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಉಪಾಧ್ಯಕ್ಷರು, ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರು .    ಇವರು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ಪಟಮಕ್ಕಿ ರತ್ನಾಕರ್, ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪಗೌಡರ, ಹಿರಿಯ ಸಮಾಜವಾದಿಗಳಾದ ಪಿ.ಪುಟ್ಟಯ್ಯರ ನಿಕಟವರ್ತಿಗಳು ಮತ್ತು ಮಲೆನಾಡಿನ ಬಗರ್ ಹುಕುಂ ರೈತರ ಅರಣ್ಯ ಒತ್ತುವರಿದಾರ ಸಮಸ್ಯೆ ಪರಿಹಾರದ ಬಗ್ಗೆ ಯಾವಾಗಲು ಶ್ರಮಿಸುವ

Blog number 1838. ಜಗತ್ತು ಆವರಿಸಿರುವ ಟೊಮೋಟೋ ಕಥೆ, ಟೊಮೋಟೋ ಇಲ್ಲದೆ ಅಡುಗೆ ಮಾಡಲಾಗುವುದಿಲ್ಲ ಎಂಬ ಭ್ರಮಾಲೋಕದಲ್ಲಿ...

#ಟೋಮೊಟಾ_ಇಲ್ಲದ_ಅಡುಗೆ_ಸಾಧ್ಯವಿಲ್ಲ_ಎ೦ಬ_ಭ್ರಮೆ #ಹದಿನಾರನೆ_ಶತಮಾನದಲ್ಲಿ_ಪೋರ್ಚುಗೀಸರಿಂದ_ಭಾರತಕ್ಕೆ  #ಐವತ್ತು_ವರ್ಷದ_ಹಿಂದೆ_ನಮ್ಮಲ್ಲಿ_ಬಳಕೆ_ಇರಲಿಲ್ಲ #ಅಮೇರಿಕಾದಲ್ಲಿ_1835ರ_ತನಕ_ಟೊಮೋಟೋ_ವಿಷ_ಎಂಬ_ನಂಬಿಕೆ_ಆಗಿತ್ತು. #ಅಮೇರಿಕಾ_ಕೋರ್ಟ್_1893ರಲ್ಲಿ_ಟೋಮೋಟೋ_ತರಕಾರಿ_ಎಂದು_ತೀರ್ಪು_ನೀಡಿದೆ #ಆಗ_ಅಮೇರಿಕಾದಲ್ಲಿ_ಹಣ್ಣಿಗೆ_ತೆರಿಗೆ_ಮತ್ತು_ತರಕಾರಿಗೆ_ತೆರಿಗೆ_ಇರಲಿಲ್ಲ. #ಹಣ್ಣು_ಮತ್ತು_ತರಕಾರಿ_ಆಗಿ_ಬಳಕೆ.    ಕೆಲವು ಬಾರಿ ಅಕಾಲಿಕ ಮಳೆಯಿಂದ ಟೋಮೋಟೋ ದಾರಣೆ ಕಿಲೋಗೆ ನೂರು ದಾಟಿದೆ, 25 ಕೆ.ಜಿಯ ಟೋಮೋಟೋ ಬಾಕ್ಸ್ 2000 ಕ್ಕೆ ರೈತರಿಂದ ಖರೀದಿ ಆಗುತ್ತದೆ ಮತ್ತೆ ಕೆಲ ಬಾರಿ ಟೋಮೋಟೋ ದಾರಣೆ ಕುಸಿದು ರೈತರು ರಸ್ತೆಗೆ ಟೋಮೋಟೋ ಸುರಿದು ಪ್ರತಿಭಟನೆ ಮಾಡುತ್ತಾರೆ ಆದರೆ ಟೋಮೋಟೋ ಬೇಡಿಕೆ ಮಾತ್ರ ಕಡಿಮೆ ಆಗುವುದಿಲ್ಲ.   50 ವರ್ಷದ ಹಿಂದೆ ನಮ್ಮ ತರಕಾರಿ ಪಟ್ಟಿಯಲ್ಲಿ ಟೋಮೋಟೋ ಇರಲಿಲ್ಲ, ಸ್ಥಳಿಯ ತರಕಾರಿ ಮಾರಾಟಗಾರರ ಬುಟ್ಟಿಯಲ್ಲೂ ಟೋಮೋಟೋ ಇರಲಿಲ್ಲ.   ದಕ್ಷಿಣ ಅಮೇರಿಕಾದ ಆಗ್ನೇಯ ಭಾಗ ಟೋಮೋಟೋ ಮೂಲವಂತೆ, 18ನೇ ಶತಮಾನದ (1835ರ ವರೆಗೆ)  ತನಕ ಟೋಮೋಟೋ ಅಮೇರಿಕಾದಲ್ಲಿ ವಿಷ ಪೂರಿತ ಎಂಬ ಬಾವನೆ ಇತ್ತು, ಸ್ಪಾನಿಷ್ ರಿಂದ ಯುರೋಪಿಗೆ ಪರಿಚಯ ಆಗುತ್ತದೆ.   ಕ್ರಿಶ 700 ರಲ್ಲಿ ಟೋಮೋಟೋ ಮೂಲ ಹೆಸರು ಟೋಮಾಟಿ (Tomati) ಆಗಿತ್ತು.   1887 ರಲ್ಲಿ ಅಮೇರಿಕಾದಲ್ಲಿ ಟೋಮೋಟೋ ಬಗ್ಗೆ ನ

Blog number 1837. ಕಪಾಲಭಾತಿ ಎಂಬ ಯೋಗಾಭ್ಯಾಸ ಮತ್ತು ಅದರಿಂದ ಆರೋಗ್ಯಭಾಗ್ಯದ ವಿವರಗಳು.

#ಕಪಾಲ_ಭಾತಿ_ಎಂಬ_ಉತ್ಕೃಷ್ಟ_ಯೋಗ #ಇಡೀ_ದೇಹದ_ಅಂಗಾಗಗಳಿಗೆ_ಆರೋಗ್ಯ_ವೃದ್ಧಿ #ಸಿದ್ದ_ಸಮಾದಿ_ಯೋಗ_2008ರ_ತರಬೇತಿಯಲ್ಲಿ_ಕಲಿತದ್ದು. #ತರಬೇತಿ_ನೀಡಿದವರು_ದಿವಂಗತ_ಕುಮಾರ್_ಗುರೂಜಿ. #ಭಾರತೀಯ_ಪ್ರಾಚೀನ_ಯೋಗ_ವಿಧ್ಯೆ_ಇದು. #ಭಾರತೀಯ_ಆಯುಷ್_ಸಚಿವಾಲಯ_ಇದರ_ಬಗ್ಗೆ_ಹೆಚ್ಚಿನ_ಮಾಹಿತಿ_ಘೋಷಿಸಿದೆ. https://youtu.be/QqQHGz8xO8s?feature=shared     ಕಪಾಲಭಾತಿ ಎಂಬ ವೇಗದ ಉಸಿರಾಟದ ವ್ಯಾಯಾಮ ಅಥವಾ ಪ್ರಾಣಯಾಮ ಯೋಗಿಗಳು ತಮ್ಮ ಮೆದಳನ್ನು ಸ್ವಚ್ಚಗೊಳಿಸಲು ಅಭ್ಯಾಸ ಮಾಡುತ್ತಾರೆ.   ಕಪಾಲ ಅಂದರೆ ತಲೆ ಬುರುಡೆ ಭಾತಿ ಅಂದರೆ ಹೊಳೆಯುವುದು.    ಕಮ್ಮಾರನ ತಿದಿಯಂತೆ ಉಸಿರಾಟದ ಈ ವ್ಯಾಯಾಮ ಸರಿಯಾದ ತರಬೇತುದಾರರಿಂದಲೇ ಕಲಿಯಬೇಕು ಮತ್ತು ಇದನ್ನು ಅಧಿಕ ರಕ್ತದೊತ್ತಡ ಇರುವವರು, ಮೂಗಿನಲ್ಲಿ ಧೀರ್ಘ ಕಾಲದ ರಕ್ತ ಸ್ರಾವ ಇದ್ದವರು, ಪಾರ್ಶ್ವವಾಯು, ಮೈಗ್ರೇನ್ ಮತ್ತು ಹೊಟ್ಟೆಯಲ್ಲಿ ಹುಣ್ಣು ಇದ್ದವರು ಇದನ್ನು ಮಾಡಬಾರದು.    2008ರಲ್ಲಿ ನಮ್ಮ ಕೃಷ್ಣ ಸರಸ ಕಲ್ಯಾಣಮಂಟಪದಲ್ಲಿ ಸಿದ್ಧ ಸಮಾದಿ ಯೋಗ (ಪ್ರಭಾಕರ ಗುರೂಜಿ ಸಂಸ್ಥೆ )ತರಬೇತಿ ಶಿಭಿರ ನಡೆದಾಗ ನಾನು ನನ್ನ ಪತ್ನಿ ಮಗಳು ಮಗ ಮತ್ತು ನನ್ನಣ್ಣನ ಕುಟುಂಬದ ಎಲ್ಲರೂ ಈ ಕ್ಲಾಸ್ ಗಳಿಗೆ ಸೇರಿ ತರಬೇತಿ ಪಡೆದಿದ್ದೆವು ಆಗ ತರಬೇತಿ ನೀಡಿದ ಸಿದ್ದ ಸಮಾದಿ ಯೋಗದ ಶಿಕ್ಷಕರು ಕುಮಾರ್ ಗುರೂಜಿ (ಇತ್ತೀಚಿಗೆ ಇಹ ಲೋಕ ತ್ಯಜಿಸಿದರು) ಅತ್ಯಂತ ಶಿಸ್ತಿನ ತರಬೇತಿ ನೀಡಿದ್ದರು.   20

Blog number 1836. ಸಾಮಾಜಿಕ ಜಾಲ ತಾಣದ ವ್ಯಾಪ್ತಿ ... ಗೆಳೆಯ ರೈತ ಹೋರಾಟಗಾರ ಎನ್.ಡಿ. ವಸಂತ ಕುಮಾರ್ ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿರುವುದು ಅವರಿಗೆ ಸಿದ್ಧ ಸುಮಾದಿ ಯೋಗದ ತರಬೇತಿಯಿಂದ ಲಭಿಸಿದ ಮಾನಸಿಕ ಸ್ಥಿರತೆ ಮತ್ತು ಮನೋದೈರ್ಯಕ್ಕೆ ಕಾರಣವಾಗಿದೆ.

#ಸಾಮಾಜಿಕ_ಜಾಲ_ತಾಣದ_ವ್ಯಾಪ್ತಿ. #ನಾನು_ಅವರ_ಹೆಸರು_ಬಳಸದೆ_ಲೇಖನ_ಬರೆದೆ #ಅವರೇ_ಪ್ರತಿಕ್ರಿಯಿಸಿ_ಇದು_ನನ್ನದೇ_ಕಥೆ_ನನ್ನ_ಹೆಸರು_ಹೇಳಲು_ಅವಮಾನ_ಇಲ್ಲ_ಎಂದಿದ್ದರು. #ಆದ್ದರಿಂದ_ಗೆಳೆಯ_ಹೋರಾಟಗಾರ_ಎನ್_ಡಿ_ವಸಂತಕುಮಾರ್_ಅವರ_ಪೋಟೋ_ಪ್ರತಿಕ್ರಿಯೆಯೊಂದಿಗೆ. #ಸಿದ್ದ_ಸಮಾದಿ_ಯೋಗದ_ತರಬೇತಿ_ಅವರಿಗೆ_ಈ_ಮಾನಸಿಕ_ಸ್ಥಿರತೆ_ದೈರ್ಯ_ತಂದಿದೆ.  #ಮೊದಲಿಗೆ_ಅವರ_ಪ್ರತಿಕ್ರಿಯೆ_ಓದಿ_ಈ_ಪ್ರತಿಕ್ರಿಯೆಗೆ_ಕಾರಣವಾದ_ನನ್ನ_ಲೇಖನ_ಕೊನೆಯಲ್ಲಿ_ಇದೆ ...      "ನೀವು ಬರೆದದ್ದು ಕಥೆಯಲ್ಲ ಸತ್ಯಕಥೆ. ನಾನೇ ಪೂರ್ಣ ಮರೆತಿರುವ ಒಂದೊಂದು ಶಬ್ದವನ್ನೂ ನೆನಪಿಟ್ಟುಕೊಂಡಿರುವ ನಿಮ್ಮ ಸ್ಮರಣ ಶಕ್ತಿಗೆ  ಹ್ಯಾಟ್ಸಾಪ್."   #ಅರುಣ್_ಪ್ರಸಾದ್_ರವರಿಗೆ_ನಮಸ್ಕಾರಗಳು.  ವ್ಯಕ್ತಿಯ ಹೆಸರು ಹೇಳಲಿಚ್ಚಿಸದ ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು. ಆದರೆ ಆ ವ್ಯಕ್ತಿ ನಾನೇ(#ಎನ್_ಡಿ_ವಸಂತಕುಮಾರ್) ಎಂದು ಹೇಳಿಕೊಳ್ಳಲು ನನಗೆ ಯಾವುದೇ ಅವಮಾನವಿಲ್ಲ. ಏಕೆಂದರೆ ನೀವು ಹೇಳಿರುವುದು ಅಕ್ಷರಷಃ ಸತ್ಯ.  ನಮ್ಮ ಕೊನೆಯ ಮಗ ರಿಷಿಗೆ 3 ತಿಂಗಳಾಗಿರುವಾಗ 2003 ಅಕ್ಟೋಬರ್‌ ತಿಂಗಳಲ್ಲಿ ಸಾಗರದ ಡಾಕ್ಟರ್ ಕೈ ಚಲ್ಲಿದ್ದಾಗ ನನ್ನಲ್ಲಿ ಹಣವಿಲ್ಲದೇ ಪರಿತಪಿಸುತ್ತಾ ಕುಳಿತಿದ್ದಾಗ ನೀವು ಅಕಸ್ಮಾತ್ ದೇವರಂತೆ ಬಂದು ಜೋಬಲ್ಲಿರುವ ಎಲ್ಲಾ ಹಣವನ್ನು ಕೊಟ್ಟು ಶಿವಮೊಗ್ಗಕ್ಕೆ ಕಳಿಸಿದಿರಿ. ಸಂಜಪ್ಪ ಆಸ್ಪತ್ರೆಯಲ್ಲಿ ತುಂಬಾ ಶ್ರಮಪಟ್ಟು ಮಗನನ್ನು ಉಳಿಸಿಕೊಟ್ಟರು. ಈಗ ಅವನಿಗೆ

Blog number 1835. ಅನಿವಾಸಿ ಭಾರತೀಯ ಪ್ರಖ್ಯಾತ ಹವ್ಯಕ ಕನ್ನಡಿಗ ಶಾಂತಾರಾಮ ಹೆಗಡೆ ಕಟ್ಟೆ ಮಾತುಗಳು ಭಾಗ - 2

#ಭಾಗ_2. #ಅನಿವಾಸಿ_ಭಾರತೀಯ #ಪ್ರಖ್ಯಾತ_ಹವ್ಯಕ_ಕನ್ನಡಿಗ #ಶಾಂತಾರಾಮಹೆಗಡೆಕಟ್ಟೆ. #ಹಿಂದಿನ_ಸ್ವರ್ಣವಲ್ಲಿ_ಮಠಾದೀಶರ_ಮಂತ್ರಾಕ್ಷತೆ_ನೀಡುವಾಗ #ತಮ್ಮಾ_ಮಂತ್ರಾಕ್ಷತೆಯಿಂದ_ಏನೂ_ಆಗುವುದಿಲ್ಲ_ನಿನ್ನ_ಪ್ರಯತ್ನದಲ್ಲಿ_ಫಲ_ಪಡೆಯಲು_ಮಂತ್ರಾಕ್ಷತೆ_ಬೇಕು #ಎಂಬ_ಆಶ್ರೀವಾದದ_ನುಡಿಗಳ_ಮರೆಯದ_ಶಾಂತರಾಮರು. #ಸ್ವಜಾತಿ_ಮಠದ_ಅನಾಚಾರ_ವಿರೋದಿಸದ_ಭಯಪಡದವರ_ಪಟ್ಟಿಯಲ್ಲಿ_ನಾನಿಲ್ಲ. #ವಿದ್ಯಾರ್ಜನೆಗಾಗಿ_ಬರುವ_ಬಡ_ಹೆಣ್ಣು_ಮಕ್ಕಳಿಗೆ_ಸ್ವಜಾತಿ_ಮಠದಲ್ಲಿ_ರಕ್ಷಣೆ_ಇಲ್ಲವೆಂದರೆ_ಅದು_ನಂಬಿಕೆದ್ರೋಹ. https://youtu.be/3HN0tE0ABsk?feature=shared     ತಾಯ್ನೆಲದಿಂದ ಪ್ರತಿಬಾವಂತರು ವಿದೇಶಕ್ಕೆ ಹೋಗಿ ನೆಲೆಸಿ ಕಷ್ಟಪಟ್ಟು ಹಣ ಆಸ್ತಿಗಳಿಸುತ್ತಾರೆ ಅಂತವರೆಲ್ಲರಿಗೂ ತನ್ನ ನೆರೆಹೊರೆಯವರಿಗೆ ದೇಶವಾಸಿಗಳಿಗೆ ಏನಾದರೂ ಒಳಿತು ಮಾಡುವ ತವಕ ಇರುತ್ತದೆ ಅಂತವರ ಸಾಲಿನ ಕುಮುಟಾದ ಹೆಗಡೆ ಊರಿನ ಶಾಂತಾರಾಮ ಹೆಗಡೆಕಟ್ಟೆ ಒಬ್ಬರು.   ಹಿಂದೂ ಧರ್ಮದ ಮಠ ಮಂದಿರಗಳು ಜನರ ನಂಬಿಕೆ ದುರುಪಯೋಗ ಮಾಡಿಕೊಂಡು ವಾಮ ಮಾರ್ಗದಲ್ಲಿ ಸಹಸ್ರಾರು ವರ್ಷದ ಭಕ್ತಿಮಾರ್ಗದ ನಿಯಮಗಳನ್ನು ಉಲ್ಲಂಘಿಸಿ ಹಿಂದೂ ಧರ್ಮದ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ರೇಜಿಗೆ ಹುಟ್ಟಿಸುವುದನ್ನು ಸ್ವದಮಿ೯ಯರು ತಮ್ಮ ವಿರೋದ ದಾಖಲಿಸಲು ಹೆದರಿದರೆ !? ....     ಅನಾಚಾರ ನಡೆಸುವ ದಾರ್ಮಿಕ ಮುಖಂಡ,ಅವನ ಸುತ್ತ ಹಾಡಿ ಹೊಗಳುವ ಕ್ಯಾಕ್ಟಸ್ ನಂತ ದುಷ್ಟಕೂಟ ಮತ್ತು ಅವರ ಭ

Blog number 1834.. ಐದು ವರ್ಷ ಪೂರೈಸಿದ ನನ್ನ ವಿಷ್ಣು ಸಹಸ್ರನಾಮ ಪಠಣಕ್ಕೆ ನನ್ನ ಗುರು ಹಿರಿಯರ ಅನುಗ್ರಹ ಆಶ್ರೀವಾದ ಕಾರಣ.

#ಈ_ಆದ್ಯಾತ್ಮಿಕ_ಅಭ್ಯಾಸಕ್ಕೆ_ಇವತ್ತಿಗೆ_5_ವರ್ಷ. #ನಿರಂತರ_ಒಂದು_ದಿನವೂ_ತಪ್ಪದೇ_ಪಠಣ_ಮಾಡಿದೆ. #ವಿಷ್ಣು_ಸಹಸ್ರನಾಮ.    ದಿನಾಂಕ 23- ನವೆಂಬರ್ -2018ರಿಂದ ವಿಷ್ಣು ಸಹಸ್ರನಾಮ  ನಿತ್ಯ ಪಠಣ ಮಾಡುವ ಸಂಕಲ್ಪ ಮಾಡಿ ಪ್ರಾರಂಬಿಸಿದ್ದೆ.   ಈ ಪುಸ್ತಿಕೆ ತಂದು ಕೊಟ್ಟವರು ಖ್ಯಾತ ಜ್ಯೋತಿಷಿಗಳಾದ ಡಾ.ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು ಇದನ್ನು ಮುದ್ರಿಸಿದವರು ಬೆಂಗಳೂರಿನ ಡಾ.ರಾಜಕುಮಾರ್ ರಸ್ತೆಯ ಪ್ರಖ್ಯಾತ ಮುದ್ರಣ ಸಂಸ್ಥೆ ಅಭಿಮಾನಿ ಪ್ರಕಾಶನದ ವೆಂಕಟೇಶ್ ಅವರು.   ಪ್ರಾರಂಭದಲ್ಲಿ ಉಚ್ಚರಿಸಲು ಹೆಚ್ಚು ಶ್ರಮ ಪಡಬೇಕಾಯಿತು (ಸಂಸ್ಕೃತ ಉಚ್ಚಾರಣೆ) ಇದಕ್ಕೆ ಪತ್ನಿ ಗುರುವಾಗಿ ತಿದ್ದಿದ್ದರಿಂದ ಉಚ್ಚಾರಣೆ ಸರಿ ಆಯಿತು.     ಮಹಾ ಭಾರತ ಯುದ್ಧ ಕಾಲದಲ್ಲಿ ಮರಣ ಶಯ್ಯೆಯಲ್ಲಿದ್ದ ಬೀಷ್ಮರಿಗೆ ಯುದಿಷ್ಟರ ಕೇಳಿದ ಆರು ಪ್ರಶ್ನೆಗಳು ... 1. ಈ ಲೋಕದಲ್ಲಿ ಅದ್ವಿತಿಯನಾದ ದೇವರು ಯಾರು ? 2. ಇಡೀ ಲೋಕ ಯಾವ ದೇವನಾಮವನ್ನು ಏಕ ರೂಪವಾಗಿ ಪಾರಾಯಣ ಮಾಡುತ್ತದೆ? 3. ಶುಭವನ್ನು ಹೊಂದಲು ಯಾವ ದೇವರನ್ನು ಅಚಿ೯ಸಬೇಕು? 4. ಶ್ರೇಷ್ಠ ಧರ್ಮ ಯಾವುದು? 5, ಸರ್ವೋನ್ನತ ಸಿದ್ಧಿಗೆ ಯಾವ ಮಂತ್ರ ಮೂಲ ? 6. ಯಾವ ಮಂತ್ರವನ್ನು ಜಪಿಸುತ್ತಾ ಮಾನವನು ಜನ್ಮ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ?.   ಇದಕ್ಕೆ ಬೀಷ್ಮರ ಉತ್ತರ ಇಡೀ ಆಕಾಶ ನಕ್ಷತ್ರಗಳಿಗೆ ಒಬ್ಬನೇ ದೇವರು ಅವನೇ ವಿಷ್ಣು, ಈ ಒಬ್ಬನೇ ದೇವರಿಗೆ ಸಹಸ್ರ ನಾಮಗಳಿದೆ,