Skip to main content

Blog number 1840. ಮೆಕ್ಯಾನಿಕ್ - ಡ್ರೈವರ್ ಎಂದೆಲ್ಲ ಜನ ಕರೆಯುವ ನನ್ನ ಹಿರಿಯರು ಆತ್ಮೀಯರೂ ಆದ ನಾಗೇಂದ್ರಪ್ಪನವರು.

https://youtu.be/FVHRkjyFOYQ?feature=shared

#ಶಿಕಾರಿಪುರದ_ನೆಲವಾಗಿಲಿನ_ನಾಗೇಂದ್ರಪ್ಪ

#ಜನ_ಇವರನ್ನು_ಡ್ರೈವರ್_ನಾಗೇಂದ್ರಪ್ಪ_ಮೆಕ್ಯಾನಿಕ್_ನಾಗೇಂದ್ರಪ್ಪ_ಅಂತಲೂ_ಕರೆಯುತ್ತಾರೆ.

#ನಾನೂ_ಇವರೂ_ಹಾಸನ_ಮೈಸೂರು_ಮಂಡ್ಯ_ಕೊಡಗು_ಜಿಲ್ಲೆಗಳಲ್ಲಿ_ಅನೇಕ_ದಿನ_ತಿರುಗಾಡಿದ್ದೆವು 

#ನಿಸ್ವಾರ್ಥಿ_ಪರೋಪಕಾರಿ_ಅನ್ಯಾಯದ_ವಿರುದ್ದ_ಸಿಡಿದೇಳುವ_ಇವರು_ಕಲಾವಿದರೂ_ಹೌದು.

#ನಮ್ಮ_ಊರಿನ_ವರಸಿದ್ದಿ_ವಿನಾಯಕ_ದೇವಸ್ಥಾನದ_ಪಾರುಪತ್ತೆದಾರರು.

  80 ರ ದಶಕದಲ್ಲಿ ನಮ್ಮ ಊರಲ್ಲಿ ರೈಸ್ ಮಿಲ್ ಮೆಕ್ಯಾನಿಕ್ ಆಗಿ ಬಂದ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲಿನ ನಾಗೇಂದ್ರಪ್ಪ ಈಗ ನಮ್ಮ ಊರಿನ ನಿವಾಸಿಗಳು.
   ಇವರು ರೈಸ್ ಮಿಲ್ ಮೆಕ್ಯಾನಿಕ್ ಮಾತ್ರವಲ್ಲ ಅತ್ಯುತ್ತಮ ಡ್ರೈವರ್ ಕೂಡ ಅನೇಕ ವರ್ಷ ಶಿವಮೊಗ್ಗದ ಜಯಪ್ರಕಾಶ್ ಶೆಣೈ ಅವರ ವಿಜಯಾ ಮೋಟಾರ್ಸ್ ಸಂಸ್ಥೆಯ ನಂಬಿಕಸ್ತ ಮತ್ತು ಯಶಸ್ವೀ ಡ್ರೈವರ್ ಆಗಿದ್ದರು, ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರಿಗೂ ಆಪ್ತರಾಗಿದ್ದರು.
  ಕನ್ನಡ ಸಾಹಿತ್ಯದ ಓದು, ಹಾಡುವುದು, ಭಜನೆ, ನಾಟಕಗಳಲ್ಲಿ ಅಭಿನಯಿಸುವುದು ಇವರ ಹವ್ಯಾಸ.
  ಧಾರ್ಮಿಕ-ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ಇವರು ಶ್ರದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ.
 ಅನ್ಯಾಯ ದೌರ್ಜನ್ಯದ ವಿರುದ್ಧ ತಕ್ಷಣ ಸಿಡಿದೇಳುವ ಇವರ ಜೀವನ ಶಿಸ್ತು ಬದ್ದವಾಗಿ ನಡೆದು ಬಂದಿದೆ.
  ಶಿಕಾರಿಪುರದ ಒಂದು ಕಾಲದ ಪ್ರಖ್ಯಾತ ಅಕ್ಕಿ ಉದ್ಯಮಿ ಸಾಲೇಶ್ವರ ರೈಸ್ ಮಿಲ್ಲಿನ ಮಾಲಿಕರಾದ ಮಲ್ಲಪ್ಪನವರು ಇವರ ತಂದೆಯ ತಮ್ಮ (ಇವರಿಗೆ ಚಿಕ್ಕಪ್ಪ).
   ಇವರ ಯೌವನ ಕಾಲದಲ್ಲಿ ವಿಲೇಜ್ ಪಂಚಾಯತ್ ಚುನಾವಣೆಯಲ್ಲಿ ಇವರ ತಂದೆಯ ವಿರೋದದ ಮದ್ಯೆಯೂ ಸ್ಪರ್ಧೆ ಮಾಡಿದ್ದರಿಂದ ಇವರ ಕುಟುಂಬದಲ್ಲಿ ವ್ಯಾಜ್ಯಗಳಿಗೆ ಕಾರಣವಾಗಿ ಇವರು ಇವರ ಆಸ್ತಿ ಮನೆ ಕೃಷಿ ಜಮೀನು ತ್ಯಜಿಸಿ ಬಂದ ಸ್ವಾಭಿಮಾನಿ.
   1988 ರಲ್ಲಿ ನಮ್ಮ ಮಿನಿ ಬಿನ್ನಿ ಮಿಲ್ ನಿಂದ ದೊಡ್ಡ ಪ್ರಮಾಣದ 6 ನೇ ನಂಬರ್ ದಾಂಡೇಕರ್ ರೈಸ್ ಮಿಲ್ ಗೆ ಬದಲಾಗಲು ಹೊಸ ರೈಸ್ ಮಿಲ್ ಕಟ್ಟಡ ಕಟ್ಟಲು ಪ್ರಾರಂಬಿಸಿದಾಗ ನಾನು ಮತ್ತು ಈ ನಾಗೇಂದ್ರಪ್ಪ ಅನೇಕ ದಿನಗಳನ್ನು ಸೆಕೆಂಡ್ ಹ್ಯಾಂಡ್ 6ನೇ ನಂಬರ್ ದಾಂಡೇಕರ್ ರೈಸ್ ಮಿಲ್ ಹುಡುಕಾಡಲು ಕಳೆದಿದ್ದೆವು.
   ಆಗ ನನ್ನ ಯಜ್ಡಿ ಕ್ಲಾಸಿಕ್ - ಡಿ ಬೈಕ್ ನಲ್ಲಿ ಮತ್ತು ಬಸ್ಸಿನಲ್ಲಿ, ಟ್ಯಾಕ್ಸಿಯಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹುಡುಕಾಟ ಮಾಡಿ ಅಂತಿಮವಾಗಿ ಶ್ರೀರಂಗ ಪಟ್ಟಣ ಸಮೀಪದ ನಗುವನಹಳ್ಳಿಯ ಚಾಮರಾಜ ಗೌಡರ ಅಕ್ಕಿ ಗಿರಣಿ ಖರೀದಿಸಿ ತಂದಿದ್ದೆವು.
  ಮೈಸೂರಿನ ರೈಸ್ ಮಿಲ್ ಮೆಕ್ಯಾನಿಕ್ ಹಫೀಜುಲ್ಲಾ ಸಾಹೇಬರು ಮತ್ತು ರಾಮಕೃಷ್ಣ ನಮಗೆ ಸಲಹೆ ಸಹಕಾರ ನೀಡಿದ್ದನ್ನು ಯಾವತ್ತೂ ನಾನು ಮರೆಯಲಾರೆ, ಈ ಸಂದರ್ಭದಲ್ಲಿ ಜೊತೆಗಿದ್ದ ನಾಗೇಂದ್ರಪ್ಪರ ಸಾಂಗತ್ಯದಲ್ಲಿ ಸತ್ಸಂಗವೂ ದೊರೆತಿತ್ತು.
  ಈಗ ತಮ್ಮ 70ರ ಸಮೀಪದ ವಯಸ್ಸಿನಲ್ಲೂ ಸ್ವತಃ ದುಡಿದು ತಿನ್ನುವ ಬದುಕು ಮಾಡಲೇ ಬೇಕೆಂಬ ಶಫಥ ಇವರದ್ದು, ರೈತ ಬಂದು ಸುಬ್ಬಣ್ಣ ನಾಯಕರ ಬೆಳ್ತಂಗಡಿಯ ಶಿವಪುರದಲ್ಲಿ ಇದ್ದವರು ಅಲ್ಲಿ ಸುಬ್ಬಣ್ಣ ನಾಯಕರ ಪತ್ನಿ ಮತ್ತು ಮಕ್ಕಳು ಇವರಿಗೆ ಕೆಲಸ ಕೊಡಬೇಡಿ ಇವರಿಗೆ ಸಂಬಳ ಕೊಡಿ ಸುಬ್ಬಣ್ಣ ನಾಯಕರ ಆತ್ಮೀಯರು ಇವರು ಅಂದಾಗ ಮುಜುಗರದಿಂದ ಕೆಲಸ ಮಾಡದೇ ಸಂಬಳ ಪಡೆಯುವ ಮನಸ್ಸಿಲ್ಲದೆ  ಅಲ್ಲಿ ಕೆಲಸ ಬಿಟ್ಟು ಹೆಬ್ರಿಯ ಶಿವಪುರದ ರಾಮ ಭಟ್ಟರ ಸಂಸ್ಥೆಯಲ್ಲಿ ಸೇರಿದ್ದಾಗಿ ನಿನ್ನೆ ಸಂಜೆ (26- ನವೆಂಬರ್ -2023) ಮೈಸೂರುಪಾಕ್ ತಂದು ಕೊಟ್ಟಾಗ ತಿಳಿಸಿದರು.
   ನಮ್ಮ ಊರಿನ ವರಸಿದ್ಧಿ ವಿನಾಯಕ ದೇವಸ್ಥಾನದ ಪಾರುಪತ್ತೆದಾರರೂ ಆಗಿದ್ದಾರೆ.
  ಮುಂದಿನ ವರ್ಷ 2024ರ ಫೆಬ್ರುವರಿ 13ರ ಮ೦ಗಳವಾರ ನಮ್ಮ ಊರಿನ ಶ್ರೀವರಸಿದ್ಧಿ ವಿನಾಯಕ ದೇವರ ರಥೋತ್ಸವ ಜಾತ್ರೆಗೆ ಒಂದು ವಾರ ಮೊದಲೇ ಬರುವುದಾಗಿ ತಿಳಿಸಿ ಹೋಗಿದ್ದಾರೆ.
   ಇವರು ನಮ್ಮ ಊರಲ್ಲಿ ಉಳಿಯಲು ನಮ್ಮ ತಂದೆ ಕಾರಣ ಅದನ್ನು ಈ ವಿಡಿಯೋದಲ್ಲಿ ಪುನರುಚ್ಚಿಸಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ