Skip to main content

Blog number 1810. ವೃದ್ಧಾಪ್ಯವನ್ನು ಸುಂದರವಾಗಿಸಿಕೊಂಡು ಜೀವನ ಸಾಗಿಸುವುದು ಒಂದು ಕಲೆ

#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಂದರವಾಗಿಸಿಕೊಂಡ_ಇನ್ನೋಂದು_ದಂಪತಿಗಳ_ಪರಿಚಯ.

#ನಿಸರಾಣಿ_ನಾರಾಯಣಮೂರ್ತಿ_ದಂಪತಿಗಳು.

#ನಾವೆಲ್ಲ_ಪರಸ್ಪರ_ಗೆಳೆಯಾರಾಗಲು_ವೇದಿಕೆ_facebook.

#ವೃದ್ದಾಪ್ಯದೆಡೆಗೆ_ಸಾಗುವ_ನಮಗೂ_ಇವರ_ಜೀವನ_ಶೈಲಿ_ಮಾರ್ಗದರ್ಶಕವಾಗಿದೆ.
   ಮಲೆನಾಡು ವೃದ್ದಾಶ್ರಮ ಆಗುತ್ತಿರುವುದು ಸುಳ್ಳಲ್ಲ ಪ್ರತಿ ಕುಟುಂಬದ ಯುವ ಸದಸ್ಯರು ಉದ್ಯೋಗಕ್ಕಾಗಿ ನಗರಗಳಿಗೆ ಹಾಗೂ ವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ.
  ವೃದ್ಧ ತಂದೆ ತಾಯಿ ಇಬ್ಬರನ್ನೂ ಮಕ್ಕಳು ತಮ್ಮ ಜೊತೆ ನೆಲೆಸಲು ಕರೆದರೂ ತಾವು ಹುಟ್ಟಿ ಬೆಳೆದ ಮನೆ-ಕೃಷಿ ಭೂಮಿ - ಜಾನುವಾರು-ನಾಯಿ - ಬೆಕ್ಕು ಮತ್ತು ಒಡಹುಟ್ಟಿದವರನ್ನು ಗೆಳೆಯರನ್ನು ತೊರೆದು ಹೋಗಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಹಳ್ಳಿಯಲ್ಲೇ ಉಳಿದಿದ್ದಾರೆ.
   ಹಾಗಂತ ಅವರೆಲ್ಲರೂ ನಿರಾಶರಾಗಿದ್ದಾರೆ ಅಥವ ಹತಾಶರಾಗಿದ್ದಾರೆ ಅಂತ ಭಾವಿಸ ಬೇಕಾಗಿಲ್ಲದಂತೆ ಅವರು  ಅವರ ಜೀವನ ಶೈಲಿ ಬದಲಿಸಿಕೊಂಡು ವೃದ್ದಾಪ್ಯದಲ್ಲೂ ಸಂತೋಷವಾಗಿದ್ದಾರೆ.
   ಮಕ್ಕಳು ತಮ್ಮ ದುಡಿಮೆಯಿಂದ ಶ್ರೀಮಂತರಾಗಿದ್ದಾರೆ, ಅವರು ಹಳ್ಳಿ ಬಿಟ್ಟು ಬರದ ತಂದೆ ತಾಯಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ, ಇಂಟರ್ನೆಟ್ ಸಂಪರ್ಕ, ಸಿಸಿ ಕ್ಯಾಮೆರಾ, ತಂದೆ ತಾಯಿ ಓಡಾಡಲು ಹೊಸ ಕಾರು, ಅವರ ರಕ್ಷಣೆಗಾಗಿ ಉತ್ತಮ ತಳಿ ನಾಯಿ, ಆಳು ಕಾಳು ವ್ಯವಸ್ಥೆ ಮಾಡಿ ಅಪ್ಪ ಅಮ್ಮನಿಗೆ ಬಂದುಗಳ ಮನೆಯ ಕಾರ್ಯಕ್ಕೆ ಹೋಗಿ ಬರಲು, ಪ್ರವಾಸ ಮಾಡಲು ಹಣಕಾಸು ಇತ್ಯಾದಿ ವ್ಯವಸ್ಥೆ ಮಾಡುತ್ತಾರೆ.
  ಮೇಲೆ ಹೇಳಿದ ಎಲ್ಲದಕ್ಕೂ ವಿರುದ್ದವಾಗಿ ನಡೆಯುವ ಮಕ್ಕಳು ಕಡಿಮೆ ಇಲ್ಲ ಆದರೆ ಇದನ್ನೆಲ್ಲ ಹೇಳಿಕೊಳ್ಳದೇ ತಮ್ಮ ಕೃಷಿ ಮೂಲದ ಆದಾಯವನ್ನೆ ಹಿತ-ಮಿತವಾಗಿ ಬಳಸಿಕೊಂಡು ಜೀವನ ಮಾಡುತ್ತಾ ಇರುವವರು ನೂರಾರು ಜನ ಇದ್ದಾರೆ.
  ಮೊನ್ನೆ ಬಂದಿದ್ದ ಡಿ.ಎಸ್.ರಾಮಚಂದ್ರ ದಂಪತಿಗಳ ಜೊತೆ ಕೆಲ ಸಮಯ ಕಳೆದಾಗ ಕಳೆದ ಜನವರಿ ತಿಂಗಳ ಕೊನೆಯ 31ನೇ ತಾರೀಖಿನಂದು ಅಂದರೆ ಸುಮಾರು 9 ತಿಂಗಳ ಹಿಂದೆ ಒ0ದು ಸಂಜೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ಸೊರಬ ತಾಲೂಕಿನ ನಿಸಾರಣಿಗೆ ಹಿಂದಿರುಗುವಾಗ ನಿಸರಾಣಿ ನಾರಾಯಣ ಮೂರ್ತಿ ದಂಪತಿಗಳು ನನ್ನ ಕಛೇರಿಗೆ ಬಂದಿದ್ದು ನೆನಪಾಯಿತು.
   ನಾರಾಯಣ ಮೂತಿ೯ಯವರಂತೆ ಅವರ ಪತ್ನಿ ಕೂಡ ಪೇಸ್ ಬುಕ್ ಹವ್ಯಾಸಿಗಳು ಆದ್ದರಿಂದ ಇವರಿಬ್ಬರೂ ನನ್ನ ಲೇಖನ ಓದಿ ಲೈಕ್ ಕೊಡುತ್ತಾರೆ.
   ಈಗ ಇವರ ವೃದ್ಧಾಪ್ಯದಲ್ಲಿ ಮಕ್ಕಳು ದೇಶ ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ ಇಲ್ಲಿ ಕೃಷಿ ಇತ್ಯಾದಿ ನೋಡಿ ಕೊಂಡು ಆಗಾಗ್ಗೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ ಕೊಳ್ಳುತ್ತಾ, ಹೆಚ್ಚು ಹೆಚ್ಚು ಪ್ರವಾಸ ಮಾಡುತ್ತಾ ಲವಲವಿಕೆಯಿಂದ ಈ ದಂಪತಿಗಳಿದ್ದಾರೆ.
  ನಾರಾಯಣ ಮೂರ್ತಿ ಅವರೇ ಸ್ವತಃ ಡ್ರೈವಿಂಗ್ ಮಾಡುತ್ತಾರೆ ಪತಿ - ಪತ್ನಿ ಇಬ್ಬರೇ ಕಾರಿನಲ್ಲಿ ಒಡಾಡುತ್ತಾ ಸಂಜೆ ಮನೆ ಸೇರಿ ಇವರಿಗೆ ಕಾಯುವ ನಾಯಿ - ಬೆಕ್ಕು - ಜಾನುವಾರುಗಳಿಗೆ ಊಟ ನೀಡುತ್ತಾರಂತೆ.
  ನಾವಿರುವ ಜಾಗವನ್ನೆ, ಪರಿಸರ-ಪರಿಸ್ಥಿತಿಯನ್ನೆ ಸ್ವರ್ಗವಾಗಿಸಿಕೊಂಡು ಬದುಕು ಸಾಗಿಸುವ ಕಲೆ ಎಲ್ಲರಿಗೂ ಸಾಧ್ಯವಿಲ್ಲ ... ಇರುವುದನ್ನು ಬಿಟ್ಟು ಇಲ್ಲದ್ದಕ್ಕೆ ಹಂಬಲಿಸುವ ಮನಸಿನ ನಾಗಾಲೋಟಕ್ಕೆ ಲಗಾಮು ಹಾಕುವುದಿಲ್ಲ ಇದರಿಂದ ಹತಾಷೆ - ನಿರಾಸೆಗಳಲ್ಲೇ ಜೀವನ ನರಕ ಮಾಡಿಕೊಂಡು ಬಿಪಿ - ಶುಗರ್ ಹೆಚ್ಚಿಸಿಕೊಂಡು ನರಳುವ ಅನೇಕ ದಂಪತಿಗಳ ಉದಾಹರಣೆ ನಮ್ಮ ಕಣ್ಣಿನೆದರು ಇದೆ.
  ಅಪರೂಪದ ಈ ದಂಪತಿಗಳು ವೃದ್ಧಾಪ್ಯದಲ್ಲಿರುವವರಿಗೆ ಆದರ್ಶರಾಗಿದ್ದಾರೆ,ವೃದ್ದಾಪ್ಯದ ಹೊಸ್ತಿಲಲ್ಲಿ ಇರುವ ನಮ್ಮಂತವರಿಗೆ ವೃದ್ಧಾಪ್ಯ ಜೀವನ ಸುಖಮಯವಾಗಿ ನಡೆಸಲು ಇಂತವರ ಜೀವನ ಶೈಲಿ ಪ್ರೇರಣೆ ಕೂಡ ಆಗಿದೆ.
   ನಿಸರಾಣಿ ನಾರಾಯಣ ಮೂರ್ತಿ ದಂಪತಿಗಳಿಗೆ ಆಯುರಾರೋಗ್ಯ ಆಯಸ್ಸು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...