Skip to main content

Blog number 1810. ವೃದ್ಧಾಪ್ಯವನ್ನು ಸುಂದರವಾಗಿಸಿಕೊಂಡು ಜೀವನ ಸಾಗಿಸುವುದು ಒಂದು ಕಲೆ

#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಂದರವಾಗಿಸಿಕೊಂಡ_ಇನ್ನೋಂದು_ದಂಪತಿಗಳ_ಪರಿಚಯ.

#ನಿಸರಾಣಿ_ನಾರಾಯಣಮೂರ್ತಿ_ದಂಪತಿಗಳು.

#ನಾವೆಲ್ಲ_ಪರಸ್ಪರ_ಗೆಳೆಯಾರಾಗಲು_ವೇದಿಕೆ_facebook.

#ವೃದ್ದಾಪ್ಯದೆಡೆಗೆ_ಸಾಗುವ_ನಮಗೂ_ಇವರ_ಜೀವನ_ಶೈಲಿ_ಮಾರ್ಗದರ್ಶಕವಾಗಿದೆ.
   ಮಲೆನಾಡು ವೃದ್ದಾಶ್ರಮ ಆಗುತ್ತಿರುವುದು ಸುಳ್ಳಲ್ಲ ಪ್ರತಿ ಕುಟುಂಬದ ಯುವ ಸದಸ್ಯರು ಉದ್ಯೋಗಕ್ಕಾಗಿ ನಗರಗಳಿಗೆ ಹಾಗೂ ವಿದೇಶಗಳಿಗೆ ಹೋಗಿ ನೆಲೆಸಿದ್ದಾರೆ.
  ವೃದ್ಧ ತಂದೆ ತಾಯಿ ಇಬ್ಬರನ್ನೂ ಮಕ್ಕಳು ತಮ್ಮ ಜೊತೆ ನೆಲೆಸಲು ಕರೆದರೂ ತಾವು ಹುಟ್ಟಿ ಬೆಳೆದ ಮನೆ-ಕೃಷಿ ಭೂಮಿ - ಜಾನುವಾರು-ನಾಯಿ - ಬೆಕ್ಕು ಮತ್ತು ಒಡಹುಟ್ಟಿದವರನ್ನು ಗೆಳೆಯರನ್ನು ತೊರೆದು ಹೋಗಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಹಳ್ಳಿಯಲ್ಲೇ ಉಳಿದಿದ್ದಾರೆ.
   ಹಾಗಂತ ಅವರೆಲ್ಲರೂ ನಿರಾಶರಾಗಿದ್ದಾರೆ ಅಥವ ಹತಾಶರಾಗಿದ್ದಾರೆ ಅಂತ ಭಾವಿಸ ಬೇಕಾಗಿಲ್ಲದಂತೆ ಅವರು  ಅವರ ಜೀವನ ಶೈಲಿ ಬದಲಿಸಿಕೊಂಡು ವೃದ್ದಾಪ್ಯದಲ್ಲೂ ಸಂತೋಷವಾಗಿದ್ದಾರೆ.
   ಮಕ್ಕಳು ತಮ್ಮ ದುಡಿಮೆಯಿಂದ ಶ್ರೀಮಂತರಾಗಿದ್ದಾರೆ, ಅವರು ಹಳ್ಳಿ ಬಿಟ್ಟು ಬರದ ತಂದೆ ತಾಯಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ, ಇಂಟರ್ನೆಟ್ ಸಂಪರ್ಕ, ಸಿಸಿ ಕ್ಯಾಮೆರಾ, ತಂದೆ ತಾಯಿ ಓಡಾಡಲು ಹೊಸ ಕಾರು, ಅವರ ರಕ್ಷಣೆಗಾಗಿ ಉತ್ತಮ ತಳಿ ನಾಯಿ, ಆಳು ಕಾಳು ವ್ಯವಸ್ಥೆ ಮಾಡಿ ಅಪ್ಪ ಅಮ್ಮನಿಗೆ ಬಂದುಗಳ ಮನೆಯ ಕಾರ್ಯಕ್ಕೆ ಹೋಗಿ ಬರಲು, ಪ್ರವಾಸ ಮಾಡಲು ಹಣಕಾಸು ಇತ್ಯಾದಿ ವ್ಯವಸ್ಥೆ ಮಾಡುತ್ತಾರೆ.
  ಮೇಲೆ ಹೇಳಿದ ಎಲ್ಲದಕ್ಕೂ ವಿರುದ್ದವಾಗಿ ನಡೆಯುವ ಮಕ್ಕಳು ಕಡಿಮೆ ಇಲ್ಲ ಆದರೆ ಇದನ್ನೆಲ್ಲ ಹೇಳಿಕೊಳ್ಳದೇ ತಮ್ಮ ಕೃಷಿ ಮೂಲದ ಆದಾಯವನ್ನೆ ಹಿತ-ಮಿತವಾಗಿ ಬಳಸಿಕೊಂಡು ಜೀವನ ಮಾಡುತ್ತಾ ಇರುವವರು ನೂರಾರು ಜನ ಇದ್ದಾರೆ.
  ಮೊನ್ನೆ ಬಂದಿದ್ದ ಡಿ.ಎಸ್.ರಾಮಚಂದ್ರ ದಂಪತಿಗಳ ಜೊತೆ ಕೆಲ ಸಮಯ ಕಳೆದಾಗ ಕಳೆದ ಜನವರಿ ತಿಂಗಳ ಕೊನೆಯ 31ನೇ ತಾರೀಖಿನಂದು ಅಂದರೆ ಸುಮಾರು 9 ತಿಂಗಳ ಹಿಂದೆ ಒ0ದು ಸಂಜೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮುಗಿಸಿ ಸೊರಬ ತಾಲೂಕಿನ ನಿಸಾರಣಿಗೆ ಹಿಂದಿರುಗುವಾಗ ನಿಸರಾಣಿ ನಾರಾಯಣ ಮೂರ್ತಿ ದಂಪತಿಗಳು ನನ್ನ ಕಛೇರಿಗೆ ಬಂದಿದ್ದು ನೆನಪಾಯಿತು.
   ನಾರಾಯಣ ಮೂತಿ೯ಯವರಂತೆ ಅವರ ಪತ್ನಿ ಕೂಡ ಪೇಸ್ ಬುಕ್ ಹವ್ಯಾಸಿಗಳು ಆದ್ದರಿಂದ ಇವರಿಬ್ಬರೂ ನನ್ನ ಲೇಖನ ಓದಿ ಲೈಕ್ ಕೊಡುತ್ತಾರೆ.
   ಈಗ ಇವರ ವೃದ್ಧಾಪ್ಯದಲ್ಲಿ ಮಕ್ಕಳು ದೇಶ ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ ಇಲ್ಲಿ ಕೃಷಿ ಇತ್ಯಾದಿ ನೋಡಿ ಕೊಂಡು ಆಗಾಗ್ಗೆ ಶಿವಮೊಗ್ಗದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ ಕೊಳ್ಳುತ್ತಾ, ಹೆಚ್ಚು ಹೆಚ್ಚು ಪ್ರವಾಸ ಮಾಡುತ್ತಾ ಲವಲವಿಕೆಯಿಂದ ಈ ದಂಪತಿಗಳಿದ್ದಾರೆ.
  ನಾರಾಯಣ ಮೂರ್ತಿ ಅವರೇ ಸ್ವತಃ ಡ್ರೈವಿಂಗ್ ಮಾಡುತ್ತಾರೆ ಪತಿ - ಪತ್ನಿ ಇಬ್ಬರೇ ಕಾರಿನಲ್ಲಿ ಒಡಾಡುತ್ತಾ ಸಂಜೆ ಮನೆ ಸೇರಿ ಇವರಿಗೆ ಕಾಯುವ ನಾಯಿ - ಬೆಕ್ಕು - ಜಾನುವಾರುಗಳಿಗೆ ಊಟ ನೀಡುತ್ತಾರಂತೆ.
  ನಾವಿರುವ ಜಾಗವನ್ನೆ, ಪರಿಸರ-ಪರಿಸ್ಥಿತಿಯನ್ನೆ ಸ್ವರ್ಗವಾಗಿಸಿಕೊಂಡು ಬದುಕು ಸಾಗಿಸುವ ಕಲೆ ಎಲ್ಲರಿಗೂ ಸಾಧ್ಯವಿಲ್ಲ ... ಇರುವುದನ್ನು ಬಿಟ್ಟು ಇಲ್ಲದ್ದಕ್ಕೆ ಹಂಬಲಿಸುವ ಮನಸಿನ ನಾಗಾಲೋಟಕ್ಕೆ ಲಗಾಮು ಹಾಕುವುದಿಲ್ಲ ಇದರಿಂದ ಹತಾಷೆ - ನಿರಾಸೆಗಳಲ್ಲೇ ಜೀವನ ನರಕ ಮಾಡಿಕೊಂಡು ಬಿಪಿ - ಶುಗರ್ ಹೆಚ್ಚಿಸಿಕೊಂಡು ನರಳುವ ಅನೇಕ ದಂಪತಿಗಳ ಉದಾಹರಣೆ ನಮ್ಮ ಕಣ್ಣಿನೆದರು ಇದೆ.
  ಅಪರೂಪದ ಈ ದಂಪತಿಗಳು ವೃದ್ಧಾಪ್ಯದಲ್ಲಿರುವವರಿಗೆ ಆದರ್ಶರಾಗಿದ್ದಾರೆ,ವೃದ್ದಾಪ್ಯದ ಹೊಸ್ತಿಲಲ್ಲಿ ಇರುವ ನಮ್ಮಂತವರಿಗೆ ವೃದ್ಧಾಪ್ಯ ಜೀವನ ಸುಖಮಯವಾಗಿ ನಡೆಸಲು ಇಂತವರ ಜೀವನ ಶೈಲಿ ಪ್ರೇರಣೆ ಕೂಡ ಆಗಿದೆ.
   ನಿಸರಾಣಿ ನಾರಾಯಣ ಮೂರ್ತಿ ದಂಪತಿಗಳಿಗೆ ಆಯುರಾರೋಗ್ಯ ಆಯಸ್ಸು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ