Skip to main content

Blog number 1808. ವೃದ್ಧಾಪ್ಯ ಅನುಭವಿಸಲು ತಯಾರಾಗಬೇಕಾದ ಸಂದರ್ಭದಲ್ಲಿ ಈ ದಂಪತಿಗಳ ಜೀವನೋತ್ಸಾವ ಪ್ರೇರಣೆ ಆಗಲಿದೆ.

#ಹಳ್ಳಿಯಲ್ಲಿ_ವೃದ್ದಾಪ್ಯವನ್ನು_ಸುಖಮಯವಾಗಿಸಿ_ಜೀವನ_ಸಾಗಿಸುವುದು_ಹೇಗೆ?

#ನನಗೆ_ಗೊತ್ತಿಲ್ಲ_ಆದರೆ_ಅಂತಹ_ದಂಪತಿಗಳನ್ನು_ತಮಗೆ_ಪರಿಚಯಿಸ_ಬೇಕೆನ್ನಿಸಿತು.

#ತಾಳಗುಪ್ಪ_ಸಮೀಪದ_ದಿಂಡಿನಕಾರು_ವಾಸಿ_ಡಿ_ಎಸ್_ರಾಮಚಂದ್ರ_ಮತ್ತು_ಅವರ_ಪತ್ನಿ_ಶ್ರೀಮತಿ_ರತ್ನಮ್ಮ

#ಮೊನ್ನೆ_ನನ್ನ_ಅತಿಥಿಗಳು.


   ಮೊನ್ನೆ ಮಧ್ಯಾಹ್ನ ನನ್ನ ಕಛೇರಿ ಒಳಗೆ ಬಂದು " ನಾನು ನಿಮ್ಮ ಪೇಸ್ ಬುಕ್ ಫ್ರೆಂಡ್ " ಅಂದಾಗ ನನಗೆ ಅವರ ಮುಖ ಪರಿಚಯ ಇದೆ ಅನ್ನಿಸಿದರೂ ಇಂತವರೇ ಅಂತ ಹೇಳಲು ಸಾಧ್ಯವಾಗಲಿಲ್ಲ.
  ಅವರು ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ದಿಂಡಿನಕಾರು ವಾಸಿಗಳಾದ ಡಿ.ಎಸ್.ರಾಮಚಂದ್ರ ಮತ್ತು ಅವರ ಪತ್ನಿ ಶ್ರೀಮತಿ ರತ್ನಮ್ಮ ದಂಪತಿಗಳು.
   ಕೋಣಂದೂರಿನ ನಾಟಿ ವೈದ್ಯರಲ್ಲಿ ಔಷಧಿ ತರಲು ಹೋದವರು ವಾಪಾಸು ಬರುವಾಗ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಮಧ್ಯಾಹ್ನದ ಊಟ ಮಾಡಿ ನಾನು ಆಫೀಸಿನಲ್ಲಿ ಇರುವುದು ತಿಳಿದು ಬಂದರು.
   ಡಿ.ಎಸ್.ರಾಮಚಂದ್ರರ ವಯಸ್ಸು 79 ಈ ವಯಸ್ಸಿನಲ್ಲಿ ಕಳೆದ ವರ್ಷ ಹೆಗ್ಗೋಡಿನಲ್ಲಿ ನಡೆದ ಛಾಯ ಚಿತ್ರ ಗ್ರಹಣದ ಶಿಭಿರದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಈ ಶಿಬಿರದ ಜೊತೆಗಾರರೊಂದಿಗೆ ಸೂರ್ಯಾಸ್ತದ ನಂತರದಲ್ಲಿ ನಮ್ಮ ಊರಿನಲ್ಲಿರುವ ಕೆಳದಿ ಅರಸರ ಸ್ಮಾರಕ #ಚಂಪಕ_ಸರಸ್ಸು ಚಿತ್ರಿಕರಣಕ್ಕೆ ಬಂದವರು ಅಂದರೆ ಅರ್ಥವಾದೀತು ಇವರ ಜೀವನೋತ್ಸಾಹ.
  ಇವರ ಪತ್ನಿ ಶ್ರೀಮತಿ ರತ್ನಮ್ಮ ಕೂಡ ಪತಿಯಂತೆ ಅತ್ಯುತ್ಸಾಹದಿಂದ ವೃದ್ಧಾಪ್ಯ ಸುಖಮಯಗೋಳಿಸಿಕೊಳ್ಳುವುದರಲ್ಲಿ ಪತಿಗೆ ಸಾಥ್ ನೀಡಿದ್ದಾರೆ.
  ಇವರು ತಾಳಗುಪ್ಪದ ಒಂದು ಕಾಲದ ಸುಪ್ರಸಿದ್ದ ಹೋಟೆಲ್ ಕೃಷ್ಣಾ ಕೆಫೆ ಮಾಲಿಕರು ಮಗಳು, ಇವರಿಗೆ ಹೋಟೆಲ್ ಉದ್ಯಮವನ್ನು ನೋಡಿದ ಮತ್ತು ಅದರಲ್ಲಿನ ಕಷ್ಟ ಸುಖದ ಅರಿವಿರುವವರು.
  ನಮ್ಮ ಮಲ್ಲಿಕಾ ವೆಜ್ ನ ಮಧ್ಯಾಹ್ನದ ದಕ್ಷಿಣ ಭಾರತೀಯ ಥಾಲಿ ಈ ದಂಪತಿಗಳಿಗೆ ಇಷ್ಟವಾಯಿತಂತೆ, ನಮ್ಮ ಮಲ್ಲಿಕಾ ವೆಜ್ ಥಾಲಿಯಲ್ಲಿ ಉಪ್ಪು - ಉಪ್ಪಿನಕಾಯಿ - ಕೋಸಂಬರಿ - ಹಪ್ಪಳ- ಪಲ್ಯ - ಸಾಗು-ಸಿಹಿ- ಚಪಾತಿ- ಅನ್ನ- ತಿಳಿಸಾರು - ಹುಳಿ - ಎಮ್ಮೆ ಹಾಲಿನ ಮೊಸರು - ಮಜ್ಜಿಗೆ ಮತ್ತು ಫಿಲ್ಟರ್ ನೀರು ಇರುತ್ತದೆ.
   ಟೇಸ್ಟಿಂಗ್ ಪೌಡರ್ - ಆರ್ಟಿಪಿಸಿಯಲ್ ಕಲರ್ ಬಳಸುವುದಿಲ್ಲ- ಪ್ರತಿ ದಿನ ಬೆಳಿಗ್ಗೆ ಹೊಚ್ಚಹೊಸ ಹೊಸ ಎಣ್ಣೆಯಿಂದ ನಮ್ಮ ರೆಸ್ಟೋರೆಂಟ್ ಅಡುಗೆ ಪ್ರಾರಂಭವಾಗುತ್ತದೆ.
  ಈ ದಂಪತಿಗಳ ಮಕ್ಕಳು ವಿದೇಶಗಳಲ್ಲಿದ್ದಾರೆ, ಇವರು ಸಿಂಗಾಪುರದ ಪ್ರವಾಸ ಮಾಡಿದ್ದಾರೆ, ಬೇರೆ ದೇಶಗಳಿಗೆ  ಹೋಗಲು ಇವರಿಗೆ ಅವರು ಕರೆದರೂ ಇವರಿಗೆ ಇಷ್ಟವಿಲ್ಲ ಇವರಿಗೆ ಇವರ ಹುಟ್ಟೂರೇ ಇಷ್ಟವೆಂದರು.  
  58 ವರ್ಷ ದಾಟಿ 59ನೇ ವರ್ಷಕ್ಕೆ ಮುಂದಿನ ವರ್ಷ ಪಾದಾರ್ಪಣ ಮಾಡಲಿರುವ ನನಗೆ ಈ ದಂಪತಿಗಳು ಆದರ್ಶಪ್ರಾಯರಾಗಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...