Skip to main content

Blog number 1832. ಉಡುಪಿಯ ಕಲ್ಪರಸ ರೈತ ಉತ್ಪಾದಕ ಕಂಪನಿಯ ತೆಂಗಿನ ಬೆಳೆಯ ಮೌಲ್ಯವರ್ಧನೆ ಮತ್ತು ಈ ಸಂಸ್ಥೆಯ ಆರೋಗ್ಯಕರ ಉತ್ಪಾದನೆಗಳಾದ ನೀರಾ ಮತ್ತು ನೀರಾದ ಬೆಲ್ಲ.

https://youtu.be/z0LG3BMnHe8?feature=shared

#ಒರಿಜನಲ್_ನೀರಾ_ಬೆಲ್ಲಕ್ಕೆ_ಹುಡುಕುತ್ತಿದ್ದೆ.

#ಉಡುಪಿ_ಕಲ್ಪರಸ_ರೈತ_ಉತ್ಪಾದಕ_ಕಂಪನಿ_ತಯಾರಿಸಿ_ಮಾರಾಟ_ಮಾಡುತ್ತಿದೆ.

#ನೀರಾದಿಂದ_ತಯಾರಿಸಿದ_ಈ_ಬೆಲ್ಲದ_ದರ_ಕೇಜಿಗೆ_ಒಂದು_ಸಾವಿರ.

#ಕಲ್ಪರಸ_ಲೀಟರಿಗೆ_250_ರೂಪಾಯಿ

#ಮದುಮೇಹಿಗಳೂ_ಕುಡಿಯಬಹುದು.

   ಕರಾವಳಿಯಲ್ಲಿ ಒ0ದು ಕಾಲದಲ್ಲಿ ಓಲೆ ಬೆಲ್ಲ / ತಾಳೆ ಬೆಲ್ಲ ಎಂದು ಕರೆಯುವ ಹನಿ ಬಂಡದ ಮರದಿಂದ ತೆಗೆದ ನೀರಾದಿಂದ ಬೆಲ್ಲ ತಯಾರಿಸಿ ಅದನ್ನು ಚಕ್ರಾಕಾರವಾಗಿರುವ ಅಚ್ಚಿನಲ್ಲಿ ಹಾಕಿ ಅದರ ಅಂಚೆಗೆ ತಾಳೆಗರಿ ಸುತ್ತಿ ನಂತರ ಹತ್ತಾರು ಓಲೆ ಬೆಲ್ಲದ ಚಕ್ರಗಳನ್ನು ಈ ಮರದ ಒಣ ಎಲೆಗಳಿಂದ ಮಾಡಿದ ಕೊಟ್ಟಿಯ ಪಟ್ಟಣದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
  ನಂತರ ಈ ಕಾಯಕ ಮಾಡುವವರು ಕಡಿಮೆ ಆದರು, ಮಾರಾಟ ಕೂಡ ಕಡಿಮೆ ಆದ್ದರಿಂದ ಈ ಬೆಲ್ಲ ತಯಾರಿಯೂ ಕಡಿಮೆ ಆಯಿತು ಈ ಜಾಗದಲ್ಲಿ ಕಬ್ಬಿನ ಆಲೆಮನೆ ಬೆಲ್ಲಕ್ಕೇ ಓಲೆ ಬೆಲ್ಲದ ಸಿಂಗಾರದ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ಕೌಶಲ್ಯದ ವ್ಯಾಪಾರದಿಂದ ಅನೇಕರು ಮೋಸ ಹೋದಂತೆ ನಾನೂ ಕೂಡ ಖರೀದಿ ಮಾಡಿ ನಂತರ ಬೇಸರ ಪಟ್ಟಿದ್ದೆ.
  ಈಗ ಕರಾವಳಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸರ್ಕಾರದ ಲೈಸೆನ್ಸ್ ಪಡೆದು ಕಲ್ಪರಸ (ನೀರಾ) ಸಂಸ್ಕರಣೆ ಮಾಡಿ ಮಾರಾಟ ಮಾಡುವ ರೈತ ಉತ್ಪಾದಕ ಕಂಪನಿ ಯಶಸ್ವಿಯಾಗಿ ಅನೇಕ ಕಡೆ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದೆ.
  ಈ ಮೊದಲು ಕುಂದಾಪುರ ಹೋದವರಿಂದ ಕಲ್ಪ ರಸ ತರಿಸುತ್ತಿದ್ದೆ, ಇನ್ನೂರ ಐವತ್ತು ರೂಪಾಯಿಗೆ ಒಂದು ಲೀಟರ್  ನಂತೆ ಮಾರಾಟ ಮಾಡುತ್ತಾರೆ ಇದನ್ನು ಪ್ರಿಜ್ ಲ್ಲಿಟ್ಟು ಬೇಸಿಗೆಯಲ್ಲಿ ಕುಡಿಯಲು ತುಂಬಾ ಚೆನ್ನಾಗಿರುತ್ತದೆ ಇದನ್ನು ಮದುಮೇಹಿಗಳು ಕುಡಿಯಬಹುದೆಂದು ಬಾಟಲ್ ಮೇಲೆ ನಮೂದಿಸಿದ್ದಾರೆ.
   ನಿನ್ನೆ ಕಲ್ಪ ರಸದ ಜೊತೆ ಈ ಸಂಸ್ಥೆ ತಯಾರಿಸಿದ ನೀರಾ ಬೆಲ್ಲ ಕೂಡ ಕುಂದಾಪುರದಿಂದ ನಮ್ಮ ಅಣ್ಣ ತಂದುಕೊಟ್ಟಿದ್ದಾರೆ ಈ ಬೆಲ್ಲದ ಬೆಲೆ ಕಿಲೋಗೆ ಒಂದು ಸಾವಿರ!! .... ನೀರಾದ ಬೆಲ್ಲ ತಯಾರಿ ವೆಚ್ಚ ಹೆಚ್ಚು ಆದ್ದರಿಂದ ಈ ಬೆಲೆ ಇದೆ, ರುಚಿ ಆರೋಮಾ ಆ ಕಾಲದ ಓಲೆ ಬೆಲ್ಲದ ನೆನಪು ತರಿಸಿತು.
  ಸಂಪ್ರದಾಯಿಕ ಚಕ್ರಾಕಾರದ ರೂಪದಲ್ಲಿ ಈ ಬೆಲ್ಲ ಇಲ್ಲ, ಈಗಿನ ಆಧುನಿಕ ಚಾಕಲೇಟ್ ತುಂಬಿರುವಂತ ಡಬ್ಬಗಳಲ್ಲಿ ಬೆಲ್ಲದ ತುಣುಕುಗಳ ತುಂಬಿ ಮಾರಾಟ ಮಾಡುತ್ತಿದ್ದಾರೆ.
  ಏನೇ ಆಗಲಿ ನೀರಾದ ಒರಿಜಿನಲ್ ಬೆಲ್ಲ ಪುನಃ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಸಂತೋಷದ ಸುದ್ದಿ ಮತ್ತು ಕಲ್ಪ ರಸ ರೈತ ಉತ್ಪಾದಕ ಕಂಪನಿಯ ಈ ತೆಂಗು ಮೌಲ್ಯವರ್ಧನೆಯ ಉದ್ಯಮದಿಂದ ತೆಂಗು ಬೆಳೆಗಾರರಿಗೆ ಇದರಿಂದ ಹೆಚ್ಚಿನ ಲಾಭ ಪಡೆಯಲು ಕಾರಣವಾಗಿದೆ.
   ಉಡುಪಿ ಜಿಲ್ಲೆಯ ಕಲ್ಪರಸ ರೈತ ಉತ್ಪಾದಕ ಕಂಪನಿಯ ಉದ್ಯಮಕ್ಕೆ ಅಭಿನಂದಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...