Skip to main content

Blog number 1820. ಕಾಡು ಕೋಳಿಯ ಬಣ್ಣ ಬಣ್ಣದ ಗರಿಗಳ ಕುತ್ತಿಗೆ ಚರ್ಮ ಮತ್ತು ವಿದೇಶದಲ್ಲಿ ದುಭಾರಿ ಸಾಲ್ಮನ್ ಪಿಶ್ ಶಿಕಾರಿಗೂ ಇರುವ ನಂಟಿನ ರಹಸ್ಯ ನೂರಾರು ವರ್ಷದ ನಂತರ ಬಯಲಾಯಿತು.

#ಪತ್ರಕರ್ತ_ಉದಯಸಾಗರ್_ಸಂದರ್ಶನ.

#ಅರಣ್ಯಾಧಿಕಾರಿಯೊಂದಿಗೆ

#ಶಿವಮೊಗ್ಗದಿಂದ_ಕಾಡು_ಕೋಳಿ_ಕುತ್ತಿಗೆ_ಪುಕ್ಕ_ವಿದೇಶಕ್ಕೆ_ಅಂಚೆಯಲ್ಲಿ_ಮಾರಾಟ_ಮಾಡುವ_ಜಾಲ_ಬಯಲಾದ_ಬಗ್ಗೆ

#ನನ್ನ_ಸಣ್ಣ_ಕಥಾ_ಸಂಕಲನ_ಬಿಲಾಲಿ_ಬಿಲ್ಲಿ_ಅಭ್ಯಂಜನದಲ್ಲಿ_ಇದರ_ಕಥೆ_ಇದೆ.

#ವಜ್ರ_ನುಂಗಿದ_ಮೀನಿನ_ಬೇಟೆಗಾರರು.

#ಶತಮಾನಗಳ_ ಇದರ_ಬಳಕೆ_ಬಗ್ಗೆ_ರಹಸ್ಯ_ಯಾಕೆ_ಕಾಪಾಡಿದ್ದು_ಯಾಕೆ?

   ನಮ್ಮ ಊರು ಯಡೇಹಳ್ಳಿ 50 ವಷ೯ದ ಹಿಂದೆ ಸಣ್ಣ ಹಳ್ಳಿ ಕೇವಲ 5 - 6 ಮನೆ ಮಾತ್ರ ಇತ್ತು ಇಲ್ಲಿನ ವೃತ್ತದಲ್ಲಿ ಶಿವಮೊಗ್ಗ - ಸಾಗರ - ತೀರ್ಥಹಳ್ಳಿ - ಹೊಸನಗರದ ಒಟ್ಟು ನಾಲ್ಕು ರಸ್ತೆ ಸೇರುತ್ತದೆ ಈ ನಾಲ್ಕು ರಸ್ತೆಯಲ್ಲೂ ಸಾಲು ಮರಗಳು, ಹಳ್ಳಿಯ ಅಂಚಿನಿಂದ ದಟ್ಟ ಕಾಡು ಈಗಿನ ಆಧುನಿಕ ಊರು ನೋಡಿದರೆ ಯಾರು ನಾನು ಹೇಳಿದ್ದು ನಂಬಲಿಕ್ಕಿಲ್ಲ.
   ಆಗೆಲ್ಲ ಹಕ್ಕಿ ಪಿಕ್ಕಿಯವರನ್ನು ಮೇಲು ಶಿಕಾರಿ ಅಂತ ಕರೆಯುತ್ತಿದ್ದರು ಅವರು ವರ್ಷಪೂರ್ತಿ ಅಲೆಮಾರಿಗಳಾಗಿ ಕಾಡು ಕೋಳಿ- ನವಿಲು - ಕೆರೆ ಹಕ್ಕಿ - ಉಡಗಳನ್ನು ಅವರದ್ದೇ ಮಾದರಿಯ ಹೊಸ ರೀತಿಯ ಉರುಳು ಬಲೆಗಳಿಂದ ಜೀವಂತ ಹಿಡಿದು ಮಾರಾಟ ಮಾಡಿ ಅವರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
   ಊರವರು ತಿನ್ನದ ನರಿ ಮತ್ತು ರಣ ಹದ್ದುಗಳು ಇವರ ಆಹಾರವಾಗಿ ಬಳಸುತ್ತಿದ್ದರು.
   ಆಗಲೂ ಇವರು ಶಿಕಾರಿ ಮಾಡುವ ಕಾಡು ಹುಂಜದ  (grey Jungle fowI) ಕುತ್ತಿಗೆಯ ಬಣ್ಣ ಬಣ್ಣದ ಚಿತ್ತಾರದ ಪುಕ್ಕಗಳಿರುವ ಚರ್ಮವನ್ನು ನಾಜೂಕಾಗಿ ತೆಗೆದುಕೊಂಡು ಕೋಳಿಯ ಮಾಂಸವನ್ನು ಮಾರುತ್ತಿದ್ದರು.
   ಅವರು ನಮ್ಮ ಊರಿನ ಈಗಿನ ಮಸೀದಿ ಜಾಗದಲ್ಲಿ ದೊಡ್ಡ ಗೋಳಿ ಹಣ್ಣಿನ ಮರದ ಬುಡದಲ್ಲಿ ಅವರ ಗುಡಾರ ಹಾಕುತ್ತಿದ್ದರು ಅಲ್ಲಿ ಅವರ ವಿವಿದ ಶಿಕಾರಿ ಬಲೆ, ಶಿಕಾರಿಗೆ ಬಳಸುವ ಎತ್ತು ಇತ್ಯಾದಿ ಇರುತ್ತಿತ್ತು ಅಲ್ಲಿಯೇ ಈ ಕಾಡು ಹುಂಜಗಳ ಕುತ್ತಿಗೆಯ ಸುತ್ತಲ ಬಣ್ಣದ ಪುಕ್ಕದ ತೊಗಲು ಒಣಗಿಸುತ್ತಿದ್ದರು.
  ಇವರಿಗೆ ಇಡೀ ಕಾಡು ಕೋಳಿ ಮಾರಾಟ ಮಾಡಿದ್ದಕ್ಕಿಂತ ಡಬಲ್ ಪಾಯಿದೆ ಇದರ ಕುತ್ತಿಗೆ ಬಣ್ಣ ಮಾರಾಟದಿಂದ ಆ ಕಾಲದಿಂದಲೂ ನಡೆದುಕೊಂಡು ಬಂದಿದೆ.
  ಇದನ್ನು ಊರ ನಾಯಿ ಕಾಗೆ ಹೊತ್ತು ಒಯ್ಯದಂತೆ ಕ್ಯಾಂಪಿನ ಸ್ತ್ರೀಯರು ಮಕ್ಕಳು ಕಾಯುತ್ತಿದ್ದರು ಆಗ ಜನರು ಇದನ್ನು ಏನು ಮಾಡುತ್ತೀರಿ ಅಂದರೆ ಇವರ ಉತ್ತರ ಪಾರಿನ್ ಬಿಳಿ ಹೆಂಗಸರಿಗೆ ದುಡ್ಡಿನ ಚೀಲ (ವ್ಯಾನಿಟಿ ಬ್ಯಾಗ್ ) ಮಾಡಲು ಹೋಗುತ್ತೆ ಅನ್ನುತ್ತಿದ್ದರು.
   ಒಣಗಿಸಿದ ನೂರಾರು ಕಾಡು ಕೋಳಿ ಕುತ್ತಿಗೆ ಬಣ್ಣ ಖರೀದಿಸಲು ಇವರ ಜನಾಂಗದವನೆ ಒಬ್ಬ ಮಧ್ಯವರ್ತಿ ಬರುತ್ತಿದ್ದ ಅವನಿಂದ ಮುಂಬಾಯಿ ಮರ್ವಾಡಿ ಖರೀದಿಸುತ್ತಿದ್ದ ಬಹುಶಃ ಅವರೇ ಅದನ್ನ ಹಡಗಿನಲ್ಲಿ ವಿದೇಶಕ್ಕೆ ರಪ್ತು ಮಾಡುತ್ತಿದ್ದರು.
   ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಮೇಲೆ ಇವುಗಳ ರಪ್ತು ನಿಂತಿದೆ ನಮ್ಮ ದೇಶದ ಪಶ್ಚಿಮ ಘಟ್ಟ ಪ್ರದೇಶದಲ್ಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನದ ದಕ್ಷಿಣ ಭಾಗ ಮತ್ತು ಹಿಮಾಲಯ ತಪ್ಪಲಿನಲ್ಲಿರುವ ಗ್ರೇ ಜಂಗಲ್ ಪೌಲ್ ಎಂಬ ಈ ಕಾಡು ಕೋಳಿ ತಳಿ ಮಾಂಸಕ್ಕಾಗಿ ಮತ್ತು ಅದರ ಕುತ್ತಿಗೆ ಪುಕ್ಕಕ್ಕಾಗಿ ಶಿಕಾರಿ ಮಾಡುವುದರಿಂದ ಅವಸಾನದ ಅಂಚಿನಲ್ಲಿದೆ ಎಂದು I U C N ಸಂಸ್ಥೆ ಕೂಡ ಎಚ್ಚರಿಸಿದೆ.
  ಮರದ ಎತ್ತರಕ್ಕೆ ಹಾರುವ ಸಾಮರ್ಥ್ಯದ ಈ ಕಾಡು ಕೋಳಿ ಆಯಸ್ಸು 10 ವರ್ಷಕ್ಕೂ ಹೆಚ್ಚು.
   ಈ ರೀತಿ ಕಾಡು ಕೋಳಿ ಕುತ್ತಿಗೆ ಬಣ್ಣದ ಪುಕ್ಕ ಖರೀದಿಸುವ ಈಗಿನ ತಲೆಮಾರಿನವರಿಗೆ ಕೂಡ ವಿದೇಶದಲ್ಲಿ ಇದನ್ನು ಯಾವುದಕ್ಕೆ ಬಳಸುತ್ತಾರೆ ಅಂತ ನಿಕರವಾಗಿ ಗೊತ್ತಿಲ್ಲ ಅವರ ಅಂದಾಜಿನಂತೆ ಪಾರನ್ನಲ್ಲಿ ದೂರದ ಸಮುದ್ರದಲ್ಲಿ ವಜ್ರ ನುಂಗಿರುವ ಮೀನು ಹಿಡಿಯಲು ಬಳಸುತ್ತಾರೆ ಎನ್ನುತ್ತಾರೆ.
   ನಾನು ನನ್ನ ಬಿಲಾಲಿ ಬಿಲ್ಲಿ ಕಥಾ ಸಂಕಲನದಲ್ಲಿ ವಜ್ರ ನುಂಗಿದ ಮೀನಿನ ಶಿಕಾರಿ ಎಂಬ ಕಥೆ ಬರೆದಿದ್ದೇನೆ.
   ನಿನ್ನೆ ಶಿವಮೊಗ್ಗದ ಅರಣ್ಯ ಇಲಾಖೆಯಲ್ಲಿ ಶಿವಮೊಗ್ಗದ ಹಕ್ಕಿ ಪಿಕ್ಕಿ ಯುವಕ ಅಂಚೆಯಲ್ಲಿ ವಿದೇಶಕ್ಕೆ ರವಾನಿಸುತ್ತಿದ್ದ ಜಾಲ ಪತ್ತೆ ಮಾಡಿದ್ದನ್ನು ಉದಯೋನ್ಮುಖ ಯುವ ಪತ್ರಕರ್ತ ಉದಯ್ ಸಾಗರ್ ಸಂದರ್ಶನ ಮಾಡಿದ್ದನ್ನು ಅವರ Rain Land ಎಂಬ ಪರಿಸರ ಸಂರಕ್ಷಣೆ ಸಾರುವ ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಓದಿ ಇದೆಲ್ಲ ನೆನಪಾಯಿತು ಈ ಲಿಂಕ್ ಕ್ಲಿಕ್ ಮಾಡಿ ಓದಬಹುದು.
https://fb.watch/ofpUG9icb2/?mibextid=Nif5oz
   ಮಲೆನಾಡಿನ ಹಕ್ಕಿ ಪಿಕ್ಕಿ ಜನ ಶಿಕಾರಿ ಮಾಡಿದ ಕಾಡು ಕೋಳಿಯ ಬಣ್ಣ ಬಣ್ಣದ ಕುತ್ತಿಗೆಯ ಗರಿಯ ಯಾರು ಖರೀದಿಸುತ್ತಾರೆ ಎಂದರೆ ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮನ್‌ ಪಿಶ್ ಗಾಣದಲ್ಲಿ ಶಿಕಾರಿ ಮಾಡುವ ಹವ್ಯಾಸಿಗಳು.
  ಸಾಲ್ಮನ್ ಪಿಶ್ ಉತ್ತರ ಅಮೇರಿಕಾ, ಐಸ್ ಲ್ಯಾಂಡ್, ಗ್ರೀನ್ ಲ್ಯಾಂಡ್, ಯುರೋಪ್ ಮತ್ತು ರಷ್ಯಾದ ಆಳ ಸಮುದ್ರದ ಮೀನಾಗಿದೆ ಈ ಮೀನಿನ ರುಚಿಗಾಗಿ ಇದಕ್ಕೆ ಬೇಡಿಕೆ ಜಾಸ್ತಿ ಇದರ ಬೆಲೆ ಕಿಲೋಗೆ 5 ರಿಂದ 7 ಸಾವಿರ ಇದೆ.
   ಈ ಸಾಲ್ಮನ್‌ ಪಿಶ್ ಹಸಿಯಾಗಿ ಕೂಡ ತಿನ್ನುತ್ತಾರೆ, ಸಾಲ್ಮನ್ ಸುಶಿ ಎಂಬ ಈ ಹಸಿ ಮೀನಿನ ಖಾದ್ಯ ಜಪಾನ್ ನಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ ಇತ್ತೀಚೆಗೆ ಕನ್ನಡದ ಪ್ಲೆಯಿಂಗ್ ಪಾಸ್ ಪೋರ್ಟ್ ದಂಪತಿಗಳ ಜಪಾನ್ ಪ್ರವಾಸದಲ್ಲಿ ಹಸಿ ಹಸಿ ಆದ ಸಾಲ್ಮನ್ ಸುಶಿ ತಿಂದ ಎಪಿಸೋಡ್ ಪೋಸ್ಟ್ ಮಾಡಿದ್ದರು.https://fb.watch/ofrExAN7eq/?mibextid=Nif5oz
  ಸಾಲ್ಮನ್‌ ಮೀನು ಶಿಕಾರಿ ಸುಲಭವಲ್ಲ ಆಳ ಸಮುದ್ರಕ್ಕೆ ಹೋಗಿ ಅಲ್ಲಿ ಬೆಳಗಿನ 10 ಗಂಟೆ ಒಳಗೇ ಈ ಕಾಡು ಕೋಳಿಯ ಕುತ್ತಿಗೆ ಪುಕ್ಕ ಅಳವಡಿಸಿದ ಹಾರುವ ಗಾಣದ ಕೊಕ್ಕೆಗಳನ್ನು ಸಮುದ್ರಕ್ಕೆ ಬಿಡುತ್ತಾರೆ ಗಿರಿ ಗಿರಿ ತಿರುಗುವ ಗಾಣದ ಪುಕ್ಕ ಸಾಲ್ಮನ ಪಿಶ್ ಆಕರ್ಷಿಸಿ ಅವು ಈ ಗಾಣ ಕಚ್ಚಿದಾಗ ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಆಯಾಸ ಗೊಳಿಸಿ ತಮ್ಮ ಬೇಟೆ ಯಶಸ್ವಿ ಮಾಡುವ ಸಂಪ್ರದಾಯಿಕ ಮೀನು ಗಾರರ ಜೊತೆ ಈಗ ಹವ್ಯಾಸಿ ಮೀನುಗಾರರು ಸೇರಿದ್ದಾರೆ ಇದು ಒಂದು ಪಿಶಿಂಗ್ ಟೂರಿಸಂ ಆಗಿ ದೊಡ್ಡ ಮಟ್ಟದಲ್ಲಿ ನೂರಾರು ವರ್ಷದಿಂದ ಸಾಹಸ ಕ್ರೀಡೆಯಂತೆ ಶ್ರೀಮಂತ ಪ್ರವಾಸಿಗಳ ಖಯಾಲಿಯೂ ಆಗಿದೆ.
  ಈಗ ಅನೇಕ ದೇಶಗಳು ಈ ಕಾಡು ಕೋಳಿ ಪುಕ್ಕ ರಪ್ತು ನಿಶೇದ ಮಾಡಿರುವುದರಿಂದ ಈ ತಳಿಯ ಕೋಳಿಗಳನ್ನು ಸಾಕುವ ಖಾಸಾಗಿ ಕೋಳಿ ಪಾರಂಗಳಿದೆ ಆದರೂ ಇದರ ಬಣ್ಣದ ಕುತ್ತಿಗೆ ಪುಕ್ಕಕ್ಕೆ ಬಾರೀ ಬೆಲೆ ಇದೆ ಅಮೇಜಾನ್ ನಲ್ಲಿ ಒಂದು ಇಂತಹ ಪುಕ್ಕದ ಬೆಲೆ 10 ಸಾವಿರ ಇದೆ.
   ಇದನ್ನ ಖರೀದಿಸಿ ಗಾಣಕ್ಕೆ ಪೊಣಿಸಿ ಗ್ರಾಹಕರಿಗೆ ಮಾರುವ ದೊಡ್ಡ ದೊಡ್ಡ ಉದ್ಯಮಗಳು ಅಲ್ಲಿದೆ ಆದ್ದರಿಂದಲೇ ಕಾಡು ಕೋಳಿ ಶಿಕಾರಿ ಮಾಡುವವರು ವಜ್ರ ನುಂಗಿದ ಮೀನು ಹಿಡಿಯಲು ಕಾಡು ಕೋಳಿ ಕುತ್ತಿಗೆ ಬಣ್ಣ ಒಯ್ಯುತ್ತಾರೆ ಅಂತ ಬಾವಿಸಿದ್ದಾರೆ.
  ಇದು ಶತಮಾನಗಳ ಕಾಲ ಈ ಉದ್ದೇಶಕ್ಕಾಗಿ ಕಾಡು ಕೋಳಿ ಶಿಕಾರಿ ಮಾಡುವವರಿಗೆ ಗೊತ್ತೇ ಇರಲಿಲ್ಲ ಬಹುಶಃ ಇಷ್ಟು ಕಾಲ ಇದನ್ನು ರಹಸ್ಯವಾಗಿ ಯಾಕೆ ಇಟ್ಟಿದ್ದರು ಗೊತ್ತಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ