Skip to main content

Blog number 1833. ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕ ತ್ಯಾಗರ್ತಿ ಹನುಮಂತಪ್ಪ

https://youtu.be/GNpyBOkOkYk?feature=shared

#ತ್ಯಾಗರ್ತಿ_ಹನುಮಂತಪ್ಪ 

#ನೂತನ_ಗೃಹ_ರೈತಬಂಧು_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು.

#ತ್ಯಾಗರ್ತಿಯ_ಮೂಲ_ನಿವಾಸಿಗಳು_ಇವರ_ವಂಶಸ್ಥರು.

#ಅರವತ್ತೊಂಬತ್ತರ_ವಯೋಮಾನದ_ಚಿರ_ಯುವಕ

#ಬಿಕಾಂ_ಪದವೀದರ_ಎರೆಡು_ಅವಧಿ_ತಾಲೂಕ್_ಪಂಚಾಯತ್_ಸದಸ್ಯರು.

#ಪ್ರೋಪೆಸರ್‌_ನಂಜುಂಡಸ್ವಾಮಿ_ರೈತಸಂಘದ_ಜೈಲ್_ಭರೋ_ಹೋರಾಟದಲ್ಲಿ_ಜೈಲಿಗೆ_ಹೋದವರು.

   ತ್ಯಾಗರ್ತಿ ಹನುಮಂತಪ್ಪ ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರು ಇವರು ರಾಜಕಾರಣದಲ್ಲಿ ಎರೆಡು ಅವಧಿ ತಾಲೂಕು ಪಂಚಾಯತ್ ಸದಸ್ಯರು ಆಗಿದ್ದವರು ಇವರ ಪತ್ನಿ ಎಪಿಎಂಸಿ ಸದಸ್ಯರಾಗಿದ್ದರು.
   ಈ ಕ್ಷೇತ್ರದಲ್ಲಿ ಇವರ ಜಾತಿಯವರದ್ದು ಇವರದ್ದೊಂದೇ ಅಣ್ಣ ತಮ್ಮಂದಿರ ಕುಟುಂಬ ಮಾತ್ರ ಆದರೆ ಇವರು ಚುನಾವಣೆಯಲ್ಲಿ ಗೆಲ್ಲುವುದು ಇವರ ಸಮಾಜ ಸೇವೆಯಿಂದ ಆದ್ದರಿಂದ ಇವರನ್ನು ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರೆಂದೇ ಕರೆಯುವುದು ಸೂಕ್ತ.
  1978ರಲ್ಲಿ ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು ಆಗ ವಿದ್ಯಾರ್ಥಿ ನಾಯಕರಾಗಿದ್ದ ಅಯನೂರು ಮಂಜುನಾಥರ ಸಹಯೋಗಿಗಳು ಇವರು.
  ಆ ಕಾಲದಲ್ಲಿ ನಾಲ್ಕು ರೂಪಾಯಿ ಅಂಚೆ ಚೀಟಿ ಅಂಟಿಸಲು ಸಾಧ್ಯವಾಗದ ಬಡತನ ಇವರಿಗೆ ಸಿಗಲಿದ್ದ ಸರಕಾರಿ ಉದ್ಯೋಗ ಕೈ ತಪ್ಪುತ್ತದೆ.
  1980 ರಲ್ಲಿ ಓರ್ವ ರೈತ ಮಹಿಳೆ 10 ಚೀಲ ಬತ್ತ ಸಾಲವಾಗಿ ನೀಡಿದ್ದೇ ಇವರಿಗೆ 800 ರೂಪಾಯಿ ಬಂಡವಾಳ ಆಗಿ ಸಣ್ಣ ಅಂಗಡಿಯಿಂದ ಪ್ರಾರಂಭವಾದ ಇವರ ಜೀವನದ ಹಾದಿ  ಈಗ ಅಡಿಕೆ ತೋಟ, ತ್ಯಾಗರ್ತಿಗೆ ದೊಡ್ಡ ದಿನಸಿ ಅಂಗಡಿ, ಬಾರ್ & ರೆಸ್ಟೊರಂಟ್, ಟ್ರ್ಯಾಕ್ಟರ್ ಇತ್ಯಾದಿ ಹೊಂದಿರುವ ಈ ಭಾಗದ ಉದ್ಯಮಿ ಆಗಿದ್ದಾರೆ.
  1995 - 2000 ಇಸವಿಯಲ್ಲಿ ನಾನು ಆನಂದಪುರ೦ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ತ್ಯಾಗರ್ತಿ ಗ್ರಾಮ ಪಂಚಾಯತಿ ನನ್ನ ಕ್ಷೇತ್ರವಾಗಿತ್ತು, ನನ್ನ ಯಾವುದೇ ಚುನಾವಣೆಯಲ್ಲಿ ಹನುಮಂತಪ್ಪ ನನ್ನ ಪರವಾಗಿರಲಿಲ್ಲ ಆದರೆ ನನ್ನ ನ್ಯಾಯದ ಪರವಾದ ಎಲ್ಲಾ ಹೋರಾಟಗಳಿಗೆ ಮಾತ್ರ ಹನುಮಂತಪ್ಪ ಬೆಂಬಲಿಸಿದ್ದರು.
  ಆಗ ಈಗಿನಂತೆ ಪ್ರತಿ ಊರಲ್ಲಿ ಶ್ಯಾಮಿಯಾನ ಮೈಕ್ ಇರುತ್ತಿರಲಿಲ್ಲ ಆಗಿನ ಹೋರಾಟಗಳಿಗೆ ಅದು ಅವಶ್ಯವೂ ಆಗಿರಲಿಲ್ಲ ಆದರೆ ಆ ದಿನಗಳಲ್ಲಿ ನಮ್ಮ ಪಾದಯಾತ್ರೆ - ಎತ್ತಿನಗಾಡಿ ಯಾತ್ರೆ - ಯಾವುದೋ ಜನಪರ ಹೋರಾಟದ ಸಭೆ ತ್ಯಾಗರ್ತಿ ವೃತ್ತದಲ್ಲಿ ಇದ್ದಾಗ ಅಲ್ಲಿ ಭಾಷಣ ಮಾಡಲು ಒಂದು ಟೇಬಲ್ ಖುರ್ಚಿ-60 ಕ್ಯಾಂಡಲ್ ಲೈಟ್ ಮತ್ತು ವೈರ್ ಸ್ವತಃ ತಮ್ಮ ಮನೆಯಿಂದ ತಂದು ಹಾಕಿ ಹೋಗುತ್ತಿದ್ದವರು ಈ ತ್ಯಾಗರ್ತಿ ಹನುಮಂತಪ್ಪ ಇದನ್ನ ಮರೆಯುವಂತಿಲ್ಲ.
   ಈ ಭಾಗದ ಬಡವರ ಬಂದು ಈ ಹನುಮಂತಪ್ಪ, ಇಲ್ಲಿನ ಜನ ಸಾಮನ್ಯರ ಕಷ್ಟದಲ್ಲಿ ಬಾಗಿ ಆಗಿ ಅದರ ಪರಿಹಾರಕ್ಕೆ ಕಾರಣರಾಗುತ್ತಿದ್ದವರು ಈಗಲೂ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
  ಮಾತಾಡಲು ಪ್ರಾರಂಬಿಸಿದರೆ ತಡೆ ಇಲ್ಲದ ಮಾತುಗಳು ಹೊಸಬರಿಗೆ ಅರ್ಥ ಆಗುವುದಿಲ್ಲ ಆದರೆ ಇವರನ್ನು ಬಲ್ಲವರಿಗೆ ಇವರು ಅರ್ಥವಾಗುತ್ತಾರೆ.
   ಸಣ್ಣ ಸಮುದಾಯವಾದ ಕ್ಷೌರಿಕ ಸಮಾಜದಿಂದ ಬಂದು ಇಡೀ ಹೋಬಳಿಯಲ್ಲಿ ತನ್ನ ಜನಪರವಾದ ಶಕ್ತಿ ಇಟ್ಟು ಕೊಂಡಿರುವ ತ್ಯಾಗರ್ತಿ ಹನುಮಂತಪ್ಪ #ಬಡವರ_ಬಂಧು ಇವರ ಹೊಸ ಮನೆಯ ಹೆಸರೂ #ರೈತಬಂಧು ಇದೇ ದಿನಾಂಕ 24- ನವೆಂಬರ್ -2023ರ ಶುಕ್ರವಾರ ಹೊಸ ಮನೆಯ ಗ್ರಹ ಪ್ರವೇಶದ ಬೋಜನದ ಆಹ್ವಾನ ನೀಡಲು ಇವತ್ತು ಬಂದಿದ್ದರು.
  ನೂತನ ಗೃಹ ಪ್ರವೇಶ ಕಾರ್ಯಕ್ರಮ ಯಶಸ್ವಿ ಆಗಲಿ ದೇವರು ಇವರಿಗೆ ಮತ್ತು ಇವರ ಕುಟುಂಬಕ್ಕೆ ಆಯುರಾರೋಗ್ಯ ಆಯಸ್ಸು ಐಶ್ವಯ೯ ದಯಪಾಲಿಸಲಿ ಎಂದು ಹಾರೈಸಲು ಈ ಕಾಯ೯ಕ್ರಮಕ್ಕೆ ಹೋಗುವ ಮನಸ್ಸು ಮಾಡಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...