Skip to main content

Blog number 1833. ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕ ತ್ಯಾಗರ್ತಿ ಹನುಮಂತಪ್ಪ

https://youtu.be/GNpyBOkOkYk?feature=shared

#ತ್ಯಾಗರ್ತಿ_ಹನುಮಂತಪ್ಪ 

#ನೂತನ_ಗೃಹ_ರೈತಬಂಧು_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು.

#ತ್ಯಾಗರ್ತಿಯ_ಮೂಲ_ನಿವಾಸಿಗಳು_ಇವರ_ವಂಶಸ್ಥರು.

#ಅರವತ್ತೊಂಬತ್ತರ_ವಯೋಮಾನದ_ಚಿರ_ಯುವಕ

#ಬಿಕಾಂ_ಪದವೀದರ_ಎರೆಡು_ಅವಧಿ_ತಾಲೂಕ್_ಪಂಚಾಯತ್_ಸದಸ್ಯರು.

#ಪ್ರೋಪೆಸರ್‌_ನಂಜುಂಡಸ್ವಾಮಿ_ರೈತಸಂಘದ_ಜೈಲ್_ಭರೋ_ಹೋರಾಟದಲ್ಲಿ_ಜೈಲಿಗೆ_ಹೋದವರು.

   ತ್ಯಾಗರ್ತಿ ಹನುಮಂತಪ್ಪ ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರು ಇವರು ರಾಜಕಾರಣದಲ್ಲಿ ಎರೆಡು ಅವಧಿ ತಾಲೂಕು ಪಂಚಾಯತ್ ಸದಸ್ಯರು ಆಗಿದ್ದವರು ಇವರ ಪತ್ನಿ ಎಪಿಎಂಸಿ ಸದಸ್ಯರಾಗಿದ್ದರು.
   ಈ ಕ್ಷೇತ್ರದಲ್ಲಿ ಇವರ ಜಾತಿಯವರದ್ದು ಇವರದ್ದೊಂದೇ ಅಣ್ಣ ತಮ್ಮಂದಿರ ಕುಟುಂಬ ಮಾತ್ರ ಆದರೆ ಇವರು ಚುನಾವಣೆಯಲ್ಲಿ ಗೆಲ್ಲುವುದು ಇವರ ಸಮಾಜ ಸೇವೆಯಿಂದ ಆದ್ದರಿಂದ ಇವರನ್ನು ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರೆಂದೇ ಕರೆಯುವುದು ಸೂಕ್ತ.
  1978ರಲ್ಲಿ ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು ಆಗ ವಿದ್ಯಾರ್ಥಿ ನಾಯಕರಾಗಿದ್ದ ಅಯನೂರು ಮಂಜುನಾಥರ ಸಹಯೋಗಿಗಳು ಇವರು.
  ಆ ಕಾಲದಲ್ಲಿ ನಾಲ್ಕು ರೂಪಾಯಿ ಅಂಚೆ ಚೀಟಿ ಅಂಟಿಸಲು ಸಾಧ್ಯವಾಗದ ಬಡತನ ಇವರಿಗೆ ಸಿಗಲಿದ್ದ ಸರಕಾರಿ ಉದ್ಯೋಗ ಕೈ ತಪ್ಪುತ್ತದೆ.
  1980 ರಲ್ಲಿ ಓರ್ವ ರೈತ ಮಹಿಳೆ 10 ಚೀಲ ಬತ್ತ ಸಾಲವಾಗಿ ನೀಡಿದ್ದೇ ಇವರಿಗೆ 800 ರೂಪಾಯಿ ಬಂಡವಾಳ ಆಗಿ ಸಣ್ಣ ಅಂಗಡಿಯಿಂದ ಪ್ರಾರಂಭವಾದ ಇವರ ಜೀವನದ ಹಾದಿ  ಈಗ ಅಡಿಕೆ ತೋಟ, ತ್ಯಾಗರ್ತಿಗೆ ದೊಡ್ಡ ದಿನಸಿ ಅಂಗಡಿ, ಬಾರ್ & ರೆಸ್ಟೊರಂಟ್, ಟ್ರ್ಯಾಕ್ಟರ್ ಇತ್ಯಾದಿ ಹೊಂದಿರುವ ಈ ಭಾಗದ ಉದ್ಯಮಿ ಆಗಿದ್ದಾರೆ.
  1995 - 2000 ಇಸವಿಯಲ್ಲಿ ನಾನು ಆನಂದಪುರ೦ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ತ್ಯಾಗರ್ತಿ ಗ್ರಾಮ ಪಂಚಾಯತಿ ನನ್ನ ಕ್ಷೇತ್ರವಾಗಿತ್ತು, ನನ್ನ ಯಾವುದೇ ಚುನಾವಣೆಯಲ್ಲಿ ಹನುಮಂತಪ್ಪ ನನ್ನ ಪರವಾಗಿರಲಿಲ್ಲ ಆದರೆ ನನ್ನ ನ್ಯಾಯದ ಪರವಾದ ಎಲ್ಲಾ ಹೋರಾಟಗಳಿಗೆ ಮಾತ್ರ ಹನುಮಂತಪ್ಪ ಬೆಂಬಲಿಸಿದ್ದರು.
  ಆಗ ಈಗಿನಂತೆ ಪ್ರತಿ ಊರಲ್ಲಿ ಶ್ಯಾಮಿಯಾನ ಮೈಕ್ ಇರುತ್ತಿರಲಿಲ್ಲ ಆಗಿನ ಹೋರಾಟಗಳಿಗೆ ಅದು ಅವಶ್ಯವೂ ಆಗಿರಲಿಲ್ಲ ಆದರೆ ಆ ದಿನಗಳಲ್ಲಿ ನಮ್ಮ ಪಾದಯಾತ್ರೆ - ಎತ್ತಿನಗಾಡಿ ಯಾತ್ರೆ - ಯಾವುದೋ ಜನಪರ ಹೋರಾಟದ ಸಭೆ ತ್ಯಾಗರ್ತಿ ವೃತ್ತದಲ್ಲಿ ಇದ್ದಾಗ ಅಲ್ಲಿ ಭಾಷಣ ಮಾಡಲು ಒಂದು ಟೇಬಲ್ ಖುರ್ಚಿ-60 ಕ್ಯಾಂಡಲ್ ಲೈಟ್ ಮತ್ತು ವೈರ್ ಸ್ವತಃ ತಮ್ಮ ಮನೆಯಿಂದ ತಂದು ಹಾಕಿ ಹೋಗುತ್ತಿದ್ದವರು ಈ ತ್ಯಾಗರ್ತಿ ಹನುಮಂತಪ್ಪ ಇದನ್ನ ಮರೆಯುವಂತಿಲ್ಲ.
   ಈ ಭಾಗದ ಬಡವರ ಬಂದು ಈ ಹನುಮಂತಪ್ಪ, ಇಲ್ಲಿನ ಜನ ಸಾಮನ್ಯರ ಕಷ್ಟದಲ್ಲಿ ಬಾಗಿ ಆಗಿ ಅದರ ಪರಿಹಾರಕ್ಕೆ ಕಾರಣರಾಗುತ್ತಿದ್ದವರು ಈಗಲೂ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
  ಮಾತಾಡಲು ಪ್ರಾರಂಬಿಸಿದರೆ ತಡೆ ಇಲ್ಲದ ಮಾತುಗಳು ಹೊಸಬರಿಗೆ ಅರ್ಥ ಆಗುವುದಿಲ್ಲ ಆದರೆ ಇವರನ್ನು ಬಲ್ಲವರಿಗೆ ಇವರು ಅರ್ಥವಾಗುತ್ತಾರೆ.
   ಸಣ್ಣ ಸಮುದಾಯವಾದ ಕ್ಷೌರಿಕ ಸಮಾಜದಿಂದ ಬಂದು ಇಡೀ ಹೋಬಳಿಯಲ್ಲಿ ತನ್ನ ಜನಪರವಾದ ಶಕ್ತಿ ಇಟ್ಟು ಕೊಂಡಿರುವ ತ್ಯಾಗರ್ತಿ ಹನುಮಂತಪ್ಪ #ಬಡವರ_ಬಂಧು ಇವರ ಹೊಸ ಮನೆಯ ಹೆಸರೂ #ರೈತಬಂಧು ಇದೇ ದಿನಾಂಕ 24- ನವೆಂಬರ್ -2023ರ ಶುಕ್ರವಾರ ಹೊಸ ಮನೆಯ ಗ್ರಹ ಪ್ರವೇಶದ ಬೋಜನದ ಆಹ್ವಾನ ನೀಡಲು ಇವತ್ತು ಬಂದಿದ್ದರು.
  ನೂತನ ಗೃಹ ಪ್ರವೇಶ ಕಾರ್ಯಕ್ರಮ ಯಶಸ್ವಿ ಆಗಲಿ ದೇವರು ಇವರಿಗೆ ಮತ್ತು ಇವರ ಕುಟುಂಬಕ್ಕೆ ಆಯುರಾರೋಗ್ಯ ಆಯಸ್ಸು ಐಶ್ವಯ೯ ದಯಪಾಲಿಸಲಿ ಎಂದು ಹಾರೈಸಲು ಈ ಕಾಯ೯ಕ್ರಮಕ್ಕೆ ಹೋಗುವ ಮನಸ್ಸು ಮಾಡಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ