Skip to main content

Blog number 1844. ಕನಕದಾಸರು ಸುಮಾರು 500 ವರ್ಷದ ಹಿಂದೆ ಬಳಸಿದ್ದ ಮರದ ಬಿಕ್ಷಾ ಪಾತ್ರೆ ಮತ್ತು ಶಂಖಾ ಕಾಗಿನೆಲೆಯಲ್ಲಿ ಸಂರಕ್ಷಿಸಿಡಲಾಗಿದೆ.

https://youtu.be/IX_IT_hz_1g?feature=shared

#ಕನಕ_ದಾಸರ_ಜಯಂತಿ

#ಕನಕದಾಸರ_ಮರದ_ಬಿಕ್ಷಾಪಾತ್ರೆ

#ಅವರು_ಬಳಸಿದ_ಶಂಖಾ

#ಕಾಗಿನೆಲೆಯಲ್ಲಿ_ಸಂರಕ್ಷಿಸಿಡಲಾಗಿದೆ.

#ಹುಟ್ಟೂರು_ಹಾವೇರಿ_ಜಿಲ್ಲೆಯ_ಶಿಗ್ಗಾಂವಿ_ತಾಲ್ಲೂಕಿನ_ಬಾಡಾ.

#ಸಮಾದಿ_ಸ್ಥಳ_ಹಾವೇರಿ_ಜಿಲ್ಲೆಯ_ಬ್ಯಾಡಗಿ_ತಾಲ್ಲೂಕಿನ_ಕಾಗಿನೆಲೆ

#ಉಡುಪಿಯ_ಕನಕನ_ಕಿಂಡಿ

#ಕನಕದಾಸರ_ಸ್ಮಾರಕ_ಸ್ಥಳಗಳಾಗಿದೆ.

   18-ಆಗಸ್ಟ್ -2016ರಂದು ಅಂದರೆ ಸುಮಾರು 7 ವರ್ಷದ ಹಿಂದೆ ಕಾಗಿನೆಲೆ ತಲುಪಿ ಕನಕದಾಸರ ಸಮಾದಿ ಸಂದರ್ಶಿಸುವಾಗಲೇ ಸಂಜೆ ಆಗಿತ್ತು ಅಲ್ಲಿಂದ ನರಸಿಂಹ ಸ್ವಾಮಿ ದೇವಸ್ಥಾನ ತಲುಪಿದಾಗ ಸ್ವಲ್ಪ ತಡವಾಗಿತ್ತು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ದೇವಾಲಯ ಪುನರ್ ನಿರ್ಮಾಣವಾಗುತ್ತಿದ್ದರಿಂದ ದೇವಾಲಯ ಬೇಗನೇ ಬಾಗಿಲು ಹಾಕಿದ್ದರು.
   
    ಪಕ್ಕದಲ್ಲೇ ಇರುವ ಮಸೀದಿಯವರು ಈಗಷ್ಟೇ ಭಟ್ಟರು ಮನೆಗೆ ಹೋಗಿದ್ದಾರೆ ಅನ್ನುವಾಗಲೇ ಟಿ.ವಿ.ಎಸ್.ನಲ್ಲಿ ಅಲ್ಲಿಗೆ ಬಂದ ಪುರೋಹಿತರು ನಾವು ಎಲ್ಲಿಂದ ಬಂದಿದ್ದಾಗಿ ವಿಚಾರಿಸಿ ನಂತರ ದೇವಾಲಯದ ಬೀಗ ತೆಗೆದು ದೇವರ ದಶ೯ನದ ಜೊತೆ ಸ್ಥಳ ಪುರಾಣವನ್ನು ತಿಳಿಸಿದರು.
   ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಅಧಿಕ ದಾಸರಲ್ಲಿ ಕನಕದಾಸರೊಬ್ಬರೆ ಕೆಳ ಪಂಗಡದವರು ಆದ್ದರಿಂದಲೇ ಉಡುಪಿ ಕೃಷ್ಣ ಮಠದಲ್ಲಿ ಅವರಿಗೆ ಅವಮಾನ ಮಾಡಿ ಹೊರದೂಡಲಾಗಿತ್ತು ಆಗ ಸಾಕ್ಷಾತ್ ಶ್ರೀಕೃಷ್ಣ ದೇವಾಲಯದ ಗೋಡೆಯನ್ನೆ ಒಡೆದು ಕಿಂಡಿ ಮೂಲಕ ಕನಕದಾಸರಿಗೆ ದರ್ಶನ ನೀಡಿದ ಕನಕನ ಕಿಂಡಿ ಅಲ್ಲಿದೆ.
   2004 ರಲ್ಲಿ ಕರ್ನಾಟಕ ಸರ್ಕಾರ ಕನಕದಾಸರಿಗೆ ಸೇರಿದ ಎಲ್ಲಾ ದಾಖಲೆ ಸ್ಮಾರಕ ಸಂರಕ್ಷಿಸಲು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ, ಪ್ರಾದಿಕಾರ ಈ ದೇವಾಲಯದ ನವೀಕರಣ ಮಾಡುವುದರಿಂದ ಈ ದೇವಾಲಯದಲ್ಲಿ ಕನಕದಾಸರು ಸ್ವತಃ ಬಳಸಿದ ಮರದ ಬಿಕ್ಷಾಪಾತ್ರೆ ಮತ್ತು ಶಂಖವನ್ನು ಸುರಕ್ಷಿತವಾಗಿ ಬೇರೆ ಭಾಗದಲ್ಲಿ ತೆಗೆದಿಡಲಾಗಿತ್ತು.
 
 ನನ್ನ ಆಸಕ್ತಿಗಾಗಿ ಪುರೋಹಿತರು ಕನಕದಾಸರ ಶಂಖ ತೋರಿಸಿದರು, ಕನಕದಾಸರು ಕಾಗಿನೆಲೆಗೆ ಬಂದು ನರಸಿಂಹ ಸ್ವಾಮಿ ದೇವಾಲಯದಲ್ಲಿ ಶಂಖ ಊದಿದಾಗ ಶಂಖಾನಾದ ಸುತ್ತಲಿನ ಏಳು ಹಳ್ಳಿಗಳಿಗೆ ಕೇಳಿ ಜನ ದೇವಾಲಯಕ್ಕೆ ಬಂದಿದ್ದರಂತೆ ( 500 ವರ್ಷದ ಹಿಂದಿನ ಘಟನೆ) ಈ ಶಂಖ ಈಗಲೂ ಅದೇ ಸುಸ್ಥಿತಿಯಲ್ಲಿದೆ.
  ಕನಕದಾಸರು ಬಳಸಿದ ಮರದ ಬಿಕ್ಷಾಪಾತ್ರೆ ಕೂಡ ಅಲ್ಲಿದೆ . 
 ಇವುಗಳ ದರ್ಶನ ಭಾಗ್ಯ ನನಗೆ ಮತ್ತು ನನ್ನ ಕುಟುಂಬಕ್ಕೆ ದೊರೆತಿದ್ದೆ ನನ್ನ ತಂದೆ ತಾಯಿಯ ಪುಣ್ಯದಿಂದ ಎಂದು ಬಾವಿಸಿದ್ದೇನೆ.
    ಇವತ್ತು ಕನಕದಾಸರ ಜಯಂತಿಯಲ್ಲಿ 7 ವರ್ಷದ ಹಿಂದಿನ ಆ ಘಟನೆ ನೆನಪಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ