Skip to main content

Blog number 1817. ನನ್ನ 7ನೇ ತರಗತಿ ಕ್ಲಾಸ್ ಟೀಚರ್ ಜಯಂತಿ ವಾಲ್ಮೀಕಿ ಆಳ್ವಾರ್ 46 ವರ್ಷದ ನಂತರ ಬೇಟಿ ಮತ್ತು ಗುರುಕಾಣಿಕೆ ಸಮಪ೯ಣೆ.

#ನಲವತ್ತಾರು_ವರ್ಷದ_ನಂತರ_ಬೇಟಿ

#ನನಗೆ_ಏಳನೆ_ತರಗತಿಯಲ್ಲಿ_ಕ್ಲಾಸ್_ಟೀಚರ್

#ಶ್ರೀಮತಿ_ಜಯಂತಿ_ಆಳ್ವಾರ್ 

#ಇವತ್ತು_ಅವರ_ಇಡೀ_ಕುಟುಂಬ_ನಮ್ಮ_ಅತಿಥಿಗಳು.

#ಇವತ್ತಿನ_ದಿನ_ನನಗೆ_ಅತ್ಯಂತ_ಸಂತೃಪ್ತಿಯ_ದಿನ.

  ನನ್ನ ಏಳನೇ ತರಗತಿಯ ಕ್ಲಾಸ್ ಟೀಚರ್ ಶ್ರೀಮತಿ ಜಯಂತಿ ವಾಲ್ಮಿಕಿ ಆಳ್ವಾರ್, ಇವರ ಸರ್ಕಾರಿ ಶಾಲಾ ಶಿಕ್ಷಕ ವೃತ್ತಿ ಆನಂದಪುರಂನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 1976 ರಲ್ಲಿ ನಾವು 6ನೇ ತರಗತಿಯಲ್ಲಿ ಇದ್ದಾಗ ಪ್ರಾರಂಭ ಆಯಿತು, 1977 ರಲ್ಲಿ ನಾವೆಲ್ಲ 7 ನೇ ತರಗತಿಗೆ ಬಂದಾಗ ನಮಗೆ ಕ್ಲಾಸ್ ಟೀಚರ್ ಇವರು.
  ಪಬ್ಲಿಕ್ ಪರೀಕ್ಷೆಯಲ್ಲಿ 7ನೇ ತರಗತಿಯಲ್ಲಿ ಎಲ್ಲರೂ ತೇರ್ಗಡೆ ಆಗಲೇ ಬೇಕೆಂಬ ಗುರಿ ಇವರದ್ದು ಆದ್ದರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಜೆ ಎಲ್ಲಾ ಸಬ್ಜೆಕ್ಟ್ ಗಳ ಟ್ಯೂಷನ್ ಆನಂದಪುರಂನ ಇತಿಹಾಸ ಪ್ರಸಿದ್ಧ ರಂಗನಾಥ ದೇವಾಲಯದ ಆವರಣದಲ್ಲಿ ನಡೆಸುತ್ತಿದ್ದರು.
   ಈ ದೇವಾಲಯದ ಅರ್ಚಕರು ಇವರ ತಂದೆ ಶ್ರೀ ವಾಲ್ಮೀಕಿ ಆನಂದ ಆಳ್ವಾರ್ ಇವರೆಲ್ಲ ಹುಟ್ಟಿ ಬೆಳೆದದ್ದು ಇಲ್ಲೇ, ಇವರ ತಂದೆ ಮಣ್ಣಾಗಿದ್ದೂ ಆನಂದಪುರಂನಲ್ಲಿ.
  ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ ಓದಿ
 https://arunprasadhombuja.blogspot.com/2021/05/7-sr.html
  ಆ ವರ್ಷ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ  ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು ಎಲೆ ಬೀಮಣ್ಣರ ಮಗಳು ರಾಧಾ (ಸ್ಟಾಪ್ ನರ್ಸ್ ಆಗಿದ್ದಾರೆ), ಹೊಸೂರು ಪಂಚಾಯ್ತಿಯ ಚಿಪ್ಪಳಿ ಅಶೋಕ (ಎಲ್ ಬಿ ಕಾಲೇಜ್ ಉಪನ್ಯಾಸಕರಾಗಿದ್ದರು ಈಗ ಇಹ ಲೋಕ ತ್ಯಜಿಸಿದ್ದಾರೆ), ಆಸ್ಪತ್ರೆ ಮಂಜಪ್ಪರ ಪುತ್ರ ರವೀಂದ್ರ (ಈಗ KSRTC ಯಿಂದ VRS ಪಡೆದಿದ್ದಾರೆ), ಆನಂದಪುರಂನ ರಂಗನಾಥ ಭಟ್ಟರ ಅಣ್ಣರ ಮಗ ಮಹೇಶ ಮತ್ತು ನಾನು.
 7ನೇ ತರಗತಿಯ ವಾರ್ಷಿಕೋತ್ಸವದಲ್ಲಿ ರಾಣಿ ರತ್ನಾಜಿ ನಾಟಕದಲ್ಲಿ ನನ್ನದು ಕುಮಾರ ರಾಮನ ಪಾತ್ರ ನಿರ್ದೇಶನ ರಾಜಪ್ಪ ಮಾಸ್ತರದ್ದು, ನಿರ್ವಹಣೆ ಜಯಂತಿ ಮೇಡಂ ಅವರದ್ದು.
  ಜಿಲ್ಲಾ ಮಟ್ಟದ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆ ಶಿವಮೊಗ್ಗದ ಡಿಡಿಪಿಐ ಕಛೇರಿ ಆವರಣ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಾಗ ನಾನೋಬ್ಬನೆ ಉತ್ತೀರ್ಣನಾಗಿ 8-9- 10 ನೆ ತರಗತಿಯಲ್ಲಿ ಓದುವಾಗ ಪ್ರತಿ ವರ್ಷ 500 ರೂಪಾಯಿ ಸಿಗುತ್ತಿತ್ತು ಇದು ಆ ಕಾಲದಲ್ಲಿ 2 ಜೊತೆ ಬಟ್ಟೆ ಹವಾಯಿ ಚಪ್ಪಲಿ ಕೊಡಿಸಿಯೂ ನನ್ನ ಅಣ್ಣನ ಹತ್ತಿರ ಹಣ ಉಳಿಯುತ್ತಿತ್ತು.
  1977 ರ 7ನೇ ತರಗತಿ ನಂತರ ಸಾಗರದ ಮುನ್ಸಿಪ್ ಹೈಸ್ಕೂಲ್ ಇಂಗ್ಲೀಷ್ ಮೀಡಿಯಂಗೆ ಸೇರಿದ್ದರಿಂದ ನಂತರದ ಹೈಸ್ಕೂಲು ಓದು ಆಗಿನ ಜೀವನ ಜಂಜಾಟದಿಂದ 1982ರಲ್ಲಿ ಆನಂದಪುರಂ ತೊರೆದ ಕ್ಲಾಸ್ ಟೀಚರ್ ಜಯಂತಿ ಮೇಡಂ ಅವರ ಸಂಪರ್ಕ ಕಳೆದು ಕೊಂಡಿದ್ದೆ.
  ಅದು ಪುನಃ ಸಂಪರ್ಕ ಆಗಿದ್ದು ಕೇವಲ ಎರೆಡು ವರ್ಷದ ಹಿಂದೆ ಸಾಮಾಜಿಕ ಜಾಲ ತಾಣದಿಂದ (ಪೇಸ್ ಬುಕ್) ಅವರು ನಿವೃತ್ತಿ ಹೊಂದಿದ್ದರು ಮತ್ತು ನನಗೆ 56 ವರ್ಷ ದಾಟಿತ್ತು.
  ಇವತ್ತು ಇವರ ತಂಗಿ ಶ್ರೀಮತಿ ಪುಷ್ಪಾ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇಡೀ ಕುಟುಂಬ ಇವರು ಹುಟ್ಟಿ ಬೆಳೆದ ಊರಾದ ಆನಂದಪುರ೦ಗೆ ಬಂದು ಇವರ ತಂದೆ ಸುಮಾರು 40 ವರ್ಷ ಅರ್ಚಕರಾಗಿದ್ದ ಶ್ರೀರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು.
  ನಾನು ಮಧ್ಯಾಹ್ನ 12ರ ನಂತರ ಇವರ ಬೇಟಿ ನಿಗದಿ ಆಗಿತ್ತು , ನಮ್ಮ ಮಲ್ಲಿಕಾ ವೆಜ್ ಬೆಳಗಿನ ಉಪಹಾರ ಬೆಳ್ಳುಳ್ಳಿ ಬಳಸದ ಚಟ್ನಿ - ಸಾಂಬರ್ ಇವರಿಗಾಗಿ ವ್ಯವಸ್ಥೆ ಮಾಡಿಸಿದ್ದೆ ಇವರೆಲ್ಲರೂ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಡ್ಲಿ ವಡೆ - ಮಲೆನಾಡಿನ ವಿಶೇಷವಾದ ಹಲಸಿನ ಎಲೆ ಕೊಟ್ಟೆ ಕಡಬು - ಖಾಲಿ ದೋಸೆ - ಪಿಲ್ಟರ್ ಕಾಫಿ ಸೇವಿಸಿ ಬಿಲ್ ಪಾವತಿಸಲೇ ಬೇಕೆಂಬ ಅವರ ಒತ್ತಾಯ ನಾನು ನಿರಾಕರಿಸಿದೆ.
  ಮಧ್ಯಾಹ್ನ ಇಡೀ ಆಳ್ವಾರ್ ಕುಟುಂಬ ಬಂದಾಗ ನನಗೆ ಸಂಭ್ರಮ ಆಯಿತು, 46 ವರ್ಷದ ನಂತರ ಬೇಟಿ ಆದ ನನ್ನ ಮಾದ್ಯಮಿಕ ಶಾಲಾ ಕ್ಲಾಸ್ ಟೀಚರ್ ಗೆ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅವರ ಪಾದ ಸ್ಪರ್ಷಿಸಿ ಆಶ್ರೀವಾದ ಪಡೆದ ನನ್ನ ಜೀವನ ಧನ್ಯ ಅನ್ನಿಸಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...