Skip to main content

Blog number 1839. ಮಲೆನಾಡು ಪ್ರಾಂತ್ಯದಲ್ಲಿ ಕಂಬಳ ಓಟದ ತಯಾರಿಯಲ್ಲಿ ವಕೀಲರಾದ ಕುಬಟಳ್ಳಿ ರಾಮಚಂದ್ರ ಮತ್ತು ಅವರ ತಂಡ.

#ಕಾಂತಾರ_ಸಿನಿಮಾದಿಂದ_ಜನಪ್ರಿಯವಾದ_ಕರಾವಳಿ_ಕಂಬಳ

#ಈಗ_ಬೆಂಗಳೂರು_ಕಂಬಳದಿಂದ_ಶಿವಮೊಗ್ಗ_ಜಿಲ್ಲೆಯಲ್ಲಿ_ಕಂಬಳ

#ರಿಪ್ಪನಪೇಟೆಯಲ್ಲಿ_ಕಂಬಳ_ಯಶಸ್ವಿ_ಆದೀತಾ?

#ಹಿಂದಿನ_ಆಲೆಮನೆ_ಕಾಲದಲ್ಲಿ_ಘಟ್ಟ_ಹತ್ತಿ_ಬರುತ್ತಿದ್ದ_ಆಲೆ_ಕೋಣ_ಈಗಿಲ್ಲ

#ಬೆಂಗಳೂರು_ಕಂಬಳಕ್ಕಾಗಿ_ಸಕಲೇಶಪುರ_ಘಟ್ಟ_ಹತ್ತಿದ_ಕಂಬಳ_ಕೋಣಗಳು .

#ದೇಶದ_ರಕ್ಷಣಾಸಚಿವ_ಜಾಜ್೯ಪರ್ನಾಂಡೀಸರು_ಬಸ್ರೂರಿನ_ಐ_ಎಂ_ಜಯರಾಂಶೆಟ್ಟರ_ಮನೆಯ_ಕಂಬಳದಲ್ಲಿ_ಬಾಗಿ_ಆಗಿದ್ದರು.

#ತೀರ್ಥಹಳ್ಳಿ_ಹೊಸನಗರ_ಸಾಗರದ_ಮಲೆನಾಡಿನಲ್ಲಿ_ಕಂಬಳ_ತಯಾರಿಯಲ್ಲಿ_ಕುಬಟಳ್ಳಿ_ರಾಮಚಂದ್ರ_ವಕೀಲರ_ತಂಡ

#ಮೊದಲ_ದೇಣಿಗೆಯಾಗಿ_ನನ್ನ_ಹತ್ತು_ಸಾವಿರ_ಘೋಷಿಸಿದ್ದೇನೆ.

#ಪ್ರೋಕಬ್ಬಡಿಯಂತೆ_ಕಂಬಳ_ಪ್ರಸಿದ್ಧಿ_ಪಡೆಯಲಿದೆ.

#ಕಂಬಳದ_ಕೋಣ_ಓಡಿಸುವವರು_ಸ್ಟಾರ್_ಆಟಗಾರರಾಗಲಿದ್ದಾರೆ.

     ಇವತ್ತು ಬೆಳಿಗ್ಗೆ ವಾಕಿಂಗ್ ಮಾಡುವಾಗ ಶಿವಮೊಗ್ಗದಿಂದ ವಕೀಲರಾದ ಕುಬಟಳ್ಳಿ ರಾಮಚಂದ್ರ ಪೋನ್ ಮಾಡಿದ್ದರು ಇವರು ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಉಪಾಧ್ಯಕ್ಷರು, ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರು .
   ಇವರು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ಪಟಮಕ್ಕಿ ರತ್ನಾಕರ್, ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪಗೌಡರ, ಹಿರಿಯ ಸಮಾಜವಾದಿಗಳಾದ ಪಿ.ಪುಟ್ಟಯ್ಯರ ನಿಕಟವರ್ತಿಗಳು ಮತ್ತು ಮಲೆನಾಡಿನ ಬಗರ್ ಹುಕುಂ ರೈತರ ಅರಣ್ಯ ಒತ್ತುವರಿದಾರ ಸಮಸ್ಯೆ ಪರಿಹಾರದ ಬಗ್ಗೆ ಯಾವಾಗಲು ಶ್ರಮಿಸುವ ಜನಾನುರಾಗಿ ಇವರು.
   ಇವರೂ ಮತ್ತು ಇವರ ಗೆಳೆಯರು ಸೇರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕು ಪ್ರಾಂತ್ಯದ ಕಂಬಳ ಸ್ಪರ್ದೆ ಒ0ದನ್ನು ಆಯೋಜಿಸಲು ತೀರ್ಮಾನಿಸಿದ್ದಾರೆಂದು ಇದಕ್ಕಾಗಿ ಈ ಮೂರು ತಾಲ್ಲೂಕಿಗೆ ಕೇಂದ್ರ ಆಗುವ ರಿಪ್ಪನ್ ಪೇಟೆಯ ಮುಖ್ಯ ರಸ್ತೆಯಲ್ಲಿ ಕಂಬಳ ನಡೆಸಲು ಬೋರ್ ವೆಲ್ ನೀರಿನ ವ್ಯವಸ್ಥೆ ಇರುವ ವಿಶಾಲವಾದ ಗದ್ದೆ ಬಯಲಿನ ಜಾಗದ ಮಾಹಿತಿ ಬಯಸಿದ್ದರು ಇದಕ್ಕೆ ಸೂಕ್ತ ವ್ಯಕ್ತಿ ಹುಡುಕಿ ಕೊಡಲು ತಿಳಿಸಿದ್ದಾರೆ.
   ಎಮ್ಮೆ ಮತ್ತು ಕೋಣಗಳ ಬಗ್ಗೆ ಜನರಲ್ಲಿ ತಾತ್ಸಾರವಿದೆ, ಎಮ್ಮೆ ಹಾಲು ತುಪ್ಪಕ್ಕೆ ಬೇಡಿಕೆ ಇದೆ ಗೋ ಸಮ್ಮೇಳನಗಳು ನಡೆಯುತ್ತದೆ ಆದರೆ ಎಮ್ಮೆ ಕೋಣದ ಸಮ್ಮೇಳನ ನಡೆದಿಲ್ಲ ಇಂತಹ ಕಂಬಳಗಳು ಕೋಣಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಮಾವೇಶಗಳಾಗಿದೆ.
    ಉಡುಪಿ ಮಾಜಿ ಸಂಸದರಾಗಿದ್ದ ಐ.ಎಂ. ಜಯರಾಂ ಶೆಟ್ಟರ ಕುಂದಾಪುರ ತಾಲ್ಲೂಕಿನ ಬಸ್ರೂರಿನ ಅವರ ಮನೆಯಲ್ಲಿ ಪ್ರತಿ ವರ್ಷ ಕಂಬಳ ನಡೆಸುತ್ತಾರೆ ಅವರು ಜಾರ್ಜ್ ಪರ್ನಾಂಡಿಸರ #ಸಮತಾ_ಪಾರ್ಟಿ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿದ್ದರು ಆದ್ದರಿಂದ 2002ರಲ್ಲಿ ರಕ್ಷಣಾ ಸಚಿವರಾದ ಜಾರ್ಜ್ ಪರ್ನಾಂಡೀಸರನ್ನು ಉಧ್ಘಾಟನೆಗೆ ಆಮಂತ್ರಿಸಿದ್ದರು.
   ಕೋಟೇಶ್ವರದ ಸರ್ಕಾರಿ ಕಾಲೇಜು ಆವರಣದಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಬಸ್ರೂರಿನ ಐ.ಎಂ.ಜಯರಾಂ ಶೆಟ್ಟರ ಮೂಲ ಮನೆಗೆ ಬಂದು ಊಟ ಮಾಡಿ ನಂತರ ಕಂಬಳದ ಗದ್ದೆಯ ಎದುರಿನ ವೇದಿಕೆಯಲ್ಲಿ ದೀಪ ಬೆಳಗಿಸಿ ಕಂಬಳ ಉದ್ಘಾಟನೆ ಮಾಡಿ ಜಾರ್ಜ್ ಅವರು ಕನ್ನಡದಲ್ಲಿ ಕರಾವಳಿಯ ಕಂಬಳದ ಬಗ್ಗೆ ಅಭಿಮಾನದಿಂದ ಮಾತಾಡಿದ್ದರು ಪಕ್ಕದಲ್ಲೇ ಅವರ ಕನಸಿನ ಕೊಂಕಣ ರೈಲು ಮಾರ್ಗ ನೋಡಿ ಅವರು ಖುಷಿ ಆಗಿದ್ದರು.
   ನಾನು ರಾಜ್ಯ ಸಮತಾ ಪಾರ್ಟಿ ಪ್ರಧಾನ ಕಾರ್ಯದರ್ಶಿ ಆಗಿದ್ದರಿಂದ ರಾಜ್ಯ ಅಧ್ಯಕ್ಷರಾದ ಜಯರಾಂ ಶೆಟ್ಟರ ಆಹ್ವಾನದ ಮೇಲೆ ಭಾಗವಹಿಸಿದ್ದೆ, ಜಾರ್ಜ್ ಫರ್ನಾಂಡೀಸರು ನನ್ನನ್ನು ಕರೆದು ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿಯ ಮೊದಲ ಚುನಾವಣೆಯಲ್ಲಿ ಸಮತಾ ಪಾರ್ಟಿ ಅಭ್ಯಥಿ೯ಗಳು ಸ್ಪರ್ಧೆ ಮಾಡಿದ ಬಗ್ಗೆ ವಿಚಾರಿಸಿದ್ದರು.
 ಆಗ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದವರು ಉಮಾಶಂಕರ್, ಅವರು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಆಗ ಶಿವಮೊಗ್ಗ ಜಿಲ್ಲಾ ಪಂಚಾಯತ್ ಔಷದಿ ಹಗರಣದಲ್ಲಿ ಔಷದಿ ಗೋದಾಮು ಸುಟ್ಟು ಹಾಕಿದ ಪ್ರಕರಣದಲ್ಲಿ ನನ್ನ ಪ್ರತಿಭಟನೆ ದೊಡ್ಡ ಸುದ್ದಿ ಆಗಿತ್ತು ಉಮಾ ಶಂಕರ್ ನನ್ನ ಮೇಲೆ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳಿಸಿದ್ದರು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್. ಪಾಟೇಲರು ಇವರನ್ನು ರಜೆ ಮೇಲೆ ಕಳಿಸಿ ವರ್ಗಾವಣೆ ಮಾಡಿದ್ದರು, ಆಗಿನ ಜಿಲ್ಲಾ ರಕ್ಷಣಾಧಿಕಾರಿಯನ್ನು ವರ್ಗಾಯಿಸಿದ್ದರು.
   ಜಾರ್ಜ್ ಅವರ ಒಡನಾಟ ನೋಡಿ ಜಿಲ್ಲಾಧಿಕಾರಿ ಉಮಾಶಂಕರ್ ನನ್ನನ್ನು ಬಂದು ಮಾತಾಡಿಸಿದ್ದರು ಇವೆಲ್ಲ ಬಸ್ರೂರಿನ ಜಯರಾಂ ಶೆಟ್ಟರ ಮನೆ ಕಂಬಳದ ನೆನಪುಗಳು.
  ನಿನ್ನೆ ಮತ್ತು ಇವತ್ತು (25 & 26 ನವೆಂಬರ್ 2023) ಬೆಂಗಳೂರಿನ ಅರಮನೆ ಆವರಣದಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಕಂಬಳ ಯಶಸ್ವಿ ಆಗಿ ಜನಾಕರ್ಷಕವಾಗಿ ನಡೆಯುತ್ತಿದೆ.
   ಮೊದಲೆಲ್ಲ ಆಲೆ ಶೆಟ್ಟರು ಘಟ್ಟಕ್ಕೆ ಆಲೆಮನೆಗಾಗಿ ಕರಾವಳಿಯ ಆಲೆ ಕೋಣಗಳನ್ನು ಘಟ್ಟ ಹತ್ತಿಸುತ್ತಿದ್ದರು ಈಗ ಕೋಣನ ಅಲೇ ಕಣೆಗಳು ವಿದ್ಯುತ್ ಆಲೇ ಕಣೆಗಳಾಗಿ ಬದಲಾಗಿದ್ದರಿಂದ ಕೋಣಗಳು ಬರುತ್ತಿಲ್ಲ.
  ಈಗ ಕಾಂತಾರ ಸಿನಿಮಾದ ದಣಿ ದೇವೇಂದ್ರ ಸುತ್ತೂರು ಇವರ ಶಿಷ್ಯ ಶಿವು ಕಂಬಳದಿಂದ ಕರಾವಳಿಯಿಂದ ಕಂಬಳದ ಕೋಣಗಳು ಬೆಂಗಳೂರು ಅರಮನೆ ಮೈದಾನಕ್ಕೆ ಸಕಲೇಶಪುರದ ಘಟ್ಟ ಹತ್ತಿ ಬಂದಿದೆ.
   ಮುಂದಿನ ದಿನಗಳಲ್ಲಿ ಪ್ರೋ ಕಬ್ಬಡಿಯಂತೆ ಕಂಬಳ ರಾಜ್ಯ ವ್ಯಾಪ್ತಿಯಲ್ಲಿ ಪ್ರಸಿದ್ಧಿ ಪಡೆಯಬಹುದು, ಕಂಬಳದಲ್ಲಿ ಕೋಣ ಓಡಿಸುವವರು ಸೂಪರ್ ಸ್ಟಾರ್ ಗಳಾಗಿ ಬಿಡುವ ಕಾಲ ಬರಲಿದೆ.
   ಕರಾವಳಿಯಿಂದ ಕೂಲಿಗಾಗಿ ಘಟ್ಟಕ್ಕೆ ವಲಸೆ ಬಂದು ಇಲ್ಲೇ ನೆಲೆಸಿರುವ ಸಾವಿರಾರು ಕುಟುಂಬಗಳು ತೀರ್ಥಹಳ್ಳಿ - ಹೊಸನಗರ - ಸಾಗರ ತಾಲೂಕಿನಲ್ಲಿ ಹೆಚ್ಚಾಗಿರುವುದರಿಂದ ಈ ಪ್ರಾಂತ್ಯದಲ್ಲಿ ನಡೆಯಲಿರುವ ಕಂಬಳ ಯಶಸ್ಸು ಕಾಣಲಿದೆ.
   ಈ ಕಂಬಳಕ್ಕೆ ಪ್ರೋತ್ಸಾಹ ಧನವಾಗಿ ಹತ್ತು ಸಾವಿರ ( 10,000) ನಾನು ದೇಣಿಗೆ ಘೋಷಿಸಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ