Skip to main content

Blog number 1815. ಅಜಿನೊಮೊಟೋ, ಟೇಸ್ಟಿಂಗ್ ಪೌಡರ್, ಚೈನಿಸ್ ಸಾಲ್ಟ್ ನಮ್ಮ ನಿತ್ವದ ಆಹಾರದಲ್ಲಿ ನಮ್ಮ ದೇಹ ಸೇರುವ ನಿದಾನ ವಿಷ.

#ಚೈನೀಸ್_ಸಾಲ್ಟ್_ಎಂಬ_ಹೆಸರಿನ_ಅಜಿನೋಮೊಟೊ 

#ಚೈನೀಸ್_ಪುಡ್_ದಾಟಿ_ದಕ್ಷಿಣಭಾರತೀಯ_ಸಾಂಬಾರ್_ತಿಳಿಸಾರು_ತಲುಪಿದೆ

#ಭಾರತ_ಸರ್ಕಾರದ_ಪುಡ್_ಅಂಡ್_ಡ್ರಗ್_ಅಡ್ಮಿನಿಸ್ಟ್ರೇಷನ್_ಇದರ_ಬಳಕೆಗೆ_ಅನುಮತಿ_ನೀಡಿದೆ.

#ನಾಲಿಗೆಗೆ_ರುಚಿ_ಆರೋಗ್ಯಕ್ಕೆ_ಹಾನಿಕರ

#ಅಜಿನೋಮೊಟೋ_ಅಥವ_MSG

#ಟೇಸ್ಟಿಂಗ್_ಪೌಡರ್_ಎಂಬ_ಹೆಸರು_ಬಳಕೆಯಲ್ಲಿದೆ.

#ಈಗ_ಎಲ್ಲಾ_ಹೋಟೆಲ್_ಬೇಕರಿಗಳಲ್ಲಿ_ಭರಪೂರ_ಬಳಕೆ.

#ಈ_ಮನುಷ್ಯನನ್ನು_ಕೊಲ್ಲೂವ_ನಿದಾನ_ವಿಷ_ಬೇಕಾ?

#ಎಲ್ಲಾ_ಆಹಾರ_ಉತ್ಪಾದಕರು_ಅಡುಗೆಯವರು_ಇದನ್ನು_ಬಳಸಬಾರದು.

#ಹೋಟೆಲ್_ಮಾಲಿಕರಲ್ಲಿ_ಇದರ_ಬಗ್ಗೆ_ಪಾಪ_ಪ್ರಜ್ಞೆ_ಬರಲಿ.
   ಸಕ್ಕರೆಯ ಹರಳಿನಂತಹ ಈ ಅಜಿನೋ ಮೋಟೋ ಅಥವ MSG ಅಥವ ಟೇಸ್ಟಿಂಗ್ ಪೌಡರ್ ಬಳಸದ ಹೋಟೆಲ್ ವಿರಳ ಇದನ್ನು ಬಳಸದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅಡುಗೆ ಭಟ್ಟರು ಬಂದಾಗಿದೆ.
  ಇದನ್ನು ಬಳಸಿದರೆ ಅಡುಗೆಯಲ್ಲಿ ಹೇಗೆ ಕೊರತೆ ಆದರೂ ಇದು ನೀಡುವ ವಿಶೇಷ ರುಚಿ - ಖಾರಾ - ಪರಿಮಳದಿಂದ ಊಟ ತಿಂಡಿ ನಾಲಿಗೆಗೆ ಕ್ಷಣಿಕವಾಗಿ ರುಚಿ ನೀಡುತ್ತದೆ, ಪದೇ ಪದೇ ತಿನ್ನಲೇ ಬೇಕೆಂಬ ವಾಂಚೆ ಮೂಡಿಸುತ್ತದೆ.
 ಇದನ್ನು ಹೆಚ್ಚು ಬಳಸುವ ಸ್ಥಳಕ್ಕೆ ಹೆಚ್ಚು ಗ್ರಾಹಕರು ಬರುತ್ತಾರೆ ಆದ್ದರಿಂದ ಅಜಿನೋಮೊಟೋ ಬಳಸದ ಹೋಟೆಲ್ ತುಂಬಾ ಕಡಿಮೆ.
  ಆದರೆ ಅಜಿನೋಮೋಟೋ ನಿರಂತರ ಸೇವನೆಯಿಂದ ಇದು ಮನುಷ್ಯನ ಅಪದಮನಿಗಳನ್ನು ನಿರ್ಬಂಧಿಸುತ್ತದೆ ಇದರಿಂದ ಹೃದಯಾಘಾತಗಳು ಹೆಚ್ಚು.
  ಎದೆ ನೋವು, ಉಸಿರಾಟದ ಸಮಸ್ಯೆ, ಡಯಾಬಿಟಿಸ್, ಹೃದ್ರೋಗ ಮಕ್ಕಳಲ್ಲಿ ಬುದ್ದಿಶಕ್ತಿ ಕುಂಟಿತ ಮತ್ತು ದೈಹಿಕ ಬೆಳವಣಿಗೆಯಲ್ಲಿ ಸ್ಥೂಲಕಾಯಕ್ಕೆ ಕಾರಣ ಆಗುತ್ತಿದೆ.
   ಸಣ್ಣ ವಯಸ್ಸಲ್ಲಿ ಹೃದಯ ಸ್ಥಂಬನದಿಂದ ಮೃತರಾಗುತ್ತಿರುವ ಈಗಿನ ಯುವ ಜನಾಂಗದಲ್ಲಿ ಈ ಅಜಿನೋಮೋಟೋ ಕಾರಣವಾದರೂ ಇದರ ಬಳಕೆಯ ದುಷ್ಪರಿಣಾಮದ ಅರಿವೇ ಇಲ್ಲದ ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಈ ನಿದಾನ ವಿಷ ನಿರಂತರವಾಗಿ ಉಣಬಡಿಸಲಾಗುತ್ತಿದೆ.
   ಅಜಿನೋಮೊಟೋ ಬಳಸುವವರು ಅತಿಯಾಗಿ ಬೆವರುವುದು, ತಲೆ ತಿರುಗುವಿಕೆ ಮತ್ತು ಮೆದುಳಿನ ಪ್ರಾರಂಬಿಕ ಆರೋಗ್ಯ ಸಮಸ್ಯೆಯಿಂದ ಬಳಲುವಾಗಲೇ ಈ ಬಗ್ಗೆ ಜಾಗೃತರಾಗಬೇಕು.
  ಅಜಿನೋಮೋಟೋ ಅಥವ MSG ಎಂಬ ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೋ ಆಮ್ಲದ ಒಂದು ರೂಪ ಇದನ್ನು ಕಬ್ಬು, ಸಕ್ಕರೆ, ಸೋಡಿಯಂ ಅಥವ ಜೋಳದಂತ ಸಸ್ಯ ಆದಾರಿತ ಪದಾರ್ಥಗಳಿಂದ ತಯಾರಿಸುತ್ತಾರೆ ಎನ್ನಲಾಗಿದೆ ಆದರೆ ಇದು ಹಂದಿಯ ಪ್ರಾಣಿ ಜನ್ಯದಿಂದ ತಯಾರಿಸಲಾಗುತ್ತಿದೆ ಎಂದು ಇಂಡೋನೇಷಿಯದಲ್ಲಿ ಬಹಿಷ್ಕಾರವೂ ಹಾಕಲಾಗಿತ್ತು. 
  ಇದನ್ನು ಪ್ರಾರಂಭದಲ್ಲಿ ಚೈನಿಸ್ ಅಡುಗೆ ರೆಸಿಪಿಯಲ್ಲಿ ಕಡ್ಡಾಯವಾಗಿ ಸೂಪ್, ನ್ಯೂಡಲ್ಸ್, ಮಂಚೂರಿಯನ್, ಪ್ರೈಡ್ ಪುಡ್, ಜಂಕ್ ಫುಡ್ ನಲ್ಲಿ ಬಳಸಲು ಪ್ರಾರಂಭವಾಗಿ ಈಗ ದಕ್ಷಿಣ ಭಾರತದ ತಿಳಿಸಾರಿಗೂ ಬಳಸುವ ತನಕ ಪಾಕ ಪ್ರವೀಣರು ಮುಂದಾಗಿದ್ದಾರೆ.
  ಹಾಗಂತ ಅಜಿನೋಮೋಟೋ ಎಂಬ ಜಪಾನ್ ನ ಬಹುರಾಷ್ಟ್ರೀಯ ಕಂಪನಿ 36 ದೇಶದಲ್ಲಿ 33 ಸಾವಿರ ಕಾರ್ಮಿಕರ ಲಕ್ಷಾಂತರ ಕೋಟಿಯ ವಹಿವಾಟು ಕ೦ಪನಿ ಆಗಿದೆ.
  1908 ರಲ್ಲಿ ಜಪಾನಿನ ರಸಾಯನ ಶಾಸ್ತ್ರಜ್ಞ ಕಿಕುನೆ ಇರೆಡ ಇದನ್ನು ಕಂಡು ಹಿಡಿದಿದ್ದು ಇದನ್ನು 1909 ರಿಂದ ವಾಣಿಜ್ಯವಾಗಿ ಉತ್ಪಾದನೆ ಪ್ರಾರಂಬಿಸಿದ್ದು ಜಪಾನಿನ ಅಜಿನೋಮೋಟೋ ಎಂಬ ಬಹುರಾಷ್ಟ್ರೀಯ ಕಂಪನಿ 
  ಇದು ಕ್ಯಾನ್ಸರ್ ಕಾರಕ ಎಂದು ಮುಂದುವರಿದ ರಾಷ್ಟ್ರಗಳು ಜನ ಜಾಗೃತಿ ಮೂಡಿಸುವ ಕೆಲಸ ಪ್ರಾರಂಬಿಸಿದೆ ಆದರೆ ಭಾರತ ಸರ್ಕಾರದ ಪುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಸುರಕ್ಷಿತವೆಂದು ಗುರುತಿಸಿರುವುದು ದುರಂತ.
  ಇದನ್ನು ಹೆಚ್ಚು ಬಳಸುವ ಚೈನಾದಲ್ಲಿ ಕ್ಯಾನ್ಸರ್ ನಿಂದ ಬಳಲುವವರು ಅಮೇರಿಕಾಗಿಂದ ಒಂದೂವರೆ ಪಟ್ಟು ಹೆಚ್ಚು ಮತ್ತು ಜೀರ್ಣಾಂಗದ ಕ್ಯಾನ್ಸರ್ ರೋಗದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಸಮೀಕ್ಷಾ ವರದಿಗಳಿದೆ.
   ನನ್ನ ಆಹಾರ ಉದ್ಯಮದಲ್ಲಿ ಪ್ರಾರಂಭದಿಂದಲೂ ಅಜಿನೋಮೋಟೋ, ಅಪಾಯಕಾರಿ ಕೃತಕ ಬಣ್ಣ ಮತ್ತು ಕೃತಕ ಪ್ಲೇವರ್ ಬಳಕೆ ನಿಷೇದ ಮಾಡಿದ್ದೇನೆ ಇದರಿಂದ ಜನರಿಗೆ ಈ ನಿದಾನ ವಿಷ ಉಣಬಡಿಸುತ್ತಿಲ್ಲ ಎಂಬ ಸಮಾಧಾನವಿದೆ ಆದ್ದರಿಂದ ರುಚಿ ವ್ಯತ್ಯಾಸವಾದರೂ ಪರವಾ ಇಲ್ಲ ಆರೋಗ್ಯಕರ ಆಹಾರ ಶುಚಿಯಾಗಿ ನೀಡುವ ನನ್ನ ಉದ್ದೇಶ 12 ವಷ೯ದಿಂದ ಸಫಲವಾಗಿದೆ.
  ಈ ವಿಧಾನ ವಿಷ ಆಹಾರ ಸೇವಿಸುವವರು ಗೊತ್ತಿಲ್ಲದೇ ಸೇವಿಸುತ್ತಿದ್ದಾರೆ ಆದರಿಂದ ಸಣ್ಣ ವಯಸ್ಸಿನ ಅನೇಕರು ಹೃದಯ ಸಂಬಂದಿ ಸಾವಿಗೆ  ಹೋಟೆಲ್ ಮಾಲಿಕರು ಕಾರಣವಾಗುತ್ತಿರುವುದು ಮತ್ತು ಇದನ್ನು ಆಹಾರದಲ್ಲಿ ಇದನ್ನ ಸೇರಿಸಿ ಆಹಾರ ತಯಾರಿಸುವ ಅಡುಗೆ ಸಿಬ್ಬಂದಿಗಳೂ ಶಾಮೀಲಾಗುತ್ತಿರುವುದು ಅಘಾತಕಾರಿ ವಿಷಯವಾಗಿದೆ.
  ದಿನೇ ದಿನೇ ಭಾರತದಲ್ಲಿ ಅಜಿನೋಮೋಟೋ ಬಳಕೆ ಹೆಚ್ಚಾಗುತ್ತಿರುವುದು ದುರಂತವೇ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ