Skip to main content

Blog number 1837. ಕಪಾಲಭಾತಿ ಎಂಬ ಯೋಗಾಭ್ಯಾಸ ಮತ್ತು ಅದರಿಂದ ಆರೋಗ್ಯಭಾಗ್ಯದ ವಿವರಗಳು.

#ಕಪಾಲ_ಭಾತಿ_ಎಂಬ_ಉತ್ಕೃಷ್ಟ_ಯೋಗ

#ಇಡೀ_ದೇಹದ_ಅಂಗಾಗಗಳಿಗೆ_ಆರೋಗ್ಯ_ವೃದ್ಧಿ

#ಸಿದ್ದ_ಸಮಾದಿ_ಯೋಗ_2008ರ_ತರಬೇತಿಯಲ್ಲಿ_ಕಲಿತದ್ದು.

#ತರಬೇತಿ_ನೀಡಿದವರು_ದಿವಂಗತ_ಕುಮಾರ್_ಗುರೂಜಿ.

#ಭಾರತೀಯ_ಪ್ರಾಚೀನ_ಯೋಗ_ವಿಧ್ಯೆ_ಇದು.

#ಭಾರತೀಯ_ಆಯುಷ್_ಸಚಿವಾಲಯ_ಇದರ_ಬಗ್ಗೆ_ಹೆಚ್ಚಿನ_ಮಾಹಿತಿ_ಘೋಷಿಸಿದೆ.

https://youtu.be/QqQHGz8xO8s?feature=shared 
   ಕಪಾಲಭಾತಿ ಎಂಬ ವೇಗದ ಉಸಿರಾಟದ ವ್ಯಾಯಾಮ ಅಥವಾ ಪ್ರಾಣಯಾಮ ಯೋಗಿಗಳು ತಮ್ಮ ಮೆದಳನ್ನು ಸ್ವಚ್ಚಗೊಳಿಸಲು ಅಭ್ಯಾಸ ಮಾಡುತ್ತಾರೆ.
  ಕಪಾಲ ಅಂದರೆ ತಲೆ ಬುರುಡೆ ಭಾತಿ ಅಂದರೆ ಹೊಳೆಯುವುದು.
   ಕಮ್ಮಾರನ ತಿದಿಯಂತೆ ಉಸಿರಾಟದ ಈ ವ್ಯಾಯಾಮ ಸರಿಯಾದ ತರಬೇತುದಾರರಿಂದಲೇ ಕಲಿಯಬೇಕು ಮತ್ತು ಇದನ್ನು ಅಧಿಕ ರಕ್ತದೊತ್ತಡ ಇರುವವರು, ಮೂಗಿನಲ್ಲಿ ಧೀರ್ಘ ಕಾಲದ ರಕ್ತ ಸ್ರಾವ ಇದ್ದವರು, ಪಾರ್ಶ್ವವಾಯು, ಮೈಗ್ರೇನ್ ಮತ್ತು ಹೊಟ್ಟೆಯಲ್ಲಿ ಹುಣ್ಣು ಇದ್ದವರು ಇದನ್ನು ಮಾಡಬಾರದು.
   2008ರಲ್ಲಿ ನಮ್ಮ ಕೃಷ್ಣ ಸರಸ ಕಲ್ಯಾಣಮಂಟಪದಲ್ಲಿ ಸಿದ್ಧ ಸಮಾದಿ ಯೋಗ (ಪ್ರಭಾಕರ ಗುರೂಜಿ ಸಂಸ್ಥೆ )ತರಬೇತಿ ಶಿಭಿರ ನಡೆದಾಗ ನಾನು ನನ್ನ ಪತ್ನಿ ಮಗಳು ಮಗ ಮತ್ತು ನನ್ನಣ್ಣನ ಕುಟುಂಬದ ಎಲ್ಲರೂ ಈ ಕ್ಲಾಸ್ ಗಳಿಗೆ ಸೇರಿ ತರಬೇತಿ ಪಡೆದಿದ್ದೆವು ಆಗ ತರಬೇತಿ ನೀಡಿದ ಸಿದ್ದ ಸಮಾದಿ ಯೋಗದ ಶಿಕ್ಷಕರು ಕುಮಾರ್ ಗುರೂಜಿ (ಇತ್ತೀಚಿಗೆ ಇಹ ಲೋಕ ತ್ಯಜಿಸಿದರು) ಅತ್ಯಂತ ಶಿಸ್ತಿನ ತರಬೇತಿ ನೀಡಿದ್ದರು.
  2018 ರಲ್ಲಿ ನನ್ನ ಹೊಕ್ಕುಳಿನಲ್ಲಿ ಹರ್ನಿಯಾ ಆಗಿದ್ದರಿಂದ ಅದರ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಪಾರಸ್ಸು ಮಾಡಿದ್ದರು ಆದರೆ ನನ್ನ ತಂದೆ ಇದಕ್ಕೆ ಸುಲಭ ಚಿಕಿತ್ಸೆ ನೀಡುತ್ತಿದ್ದನ್ನು ನೋಡಿದ್ದೆ ಅದೇನೆಂದರೆ ಹೊಟ್ಟೆ ಸುತ್ತ ಬಿಗಿಯಾಗಿ ಬಟ್ಟೆ ಸುತ್ತುವುದರಿಂದ ಕ್ರಮೇಣ ಹೊಟ್ಟೆಯ ಸ್ನಾಯುಗಳ ಗೋಡೆಯ ಬಿರುಕು ಕೂಡಿಕೊಂಡ ನಂತರ ಹರ್ನಿಯಾ ಇರುವುದಿಲ್ಲ ಆದ್ದರಿಂದ ಈ ಸ್ವಯಂ ಚಿಕಿತ್ಸೆ ನಾಲ್ಕು ವರ್ಷ ನಿರಂತರವಾಗಿ ಮಾಡುತ್ತಿದ್ದ ಕಾಲದಲ್ಲಿ ಕಪಾಲಭಾತಿ ಮಾತ್ರ ನನ್ನ ನಿತ್ಯ ಅಭ್ಯಾಸದಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದೆ ಈಗ ಸಂಪೂರ್ಣ ಗುಣವಾಗಿದ್ದರಿಂದ ಈಗ ಕಳೆದ ವರ್ಷದಿಂದ ಪ್ರಾರಂಬಿಸಿದ್ದೇನೆ ಈಗ ಪ್ರತಿ ದಿನ ನೂರು ಕಪಾಲಭಾತಿ ಮಾಡುತ್ತಿದ್ದೇನೆ ಮೊದಲೆಲ್ಲ 500 ಮಾಡುತ್ತಿದ್ದೆ.
   ಈ ಬಗ್ಗೆ ಯೋಗ ತಜ್ಞ ಡಾಕ್ಟರ್ ಬಸವರಾಜ ಸಿದ್ದಾಶ್ರಮ ಮತ್ತು ಇವರ ಪೂರ್ವಾಶ್ರಮದ ಸಹೋದರ ಯೋಗಿ ಶಾಂತಮುನಿ ಸ್ವಾಮಿಗಳ ಹತ್ತಿರ ಚರ್ಚಿಸಿದ್ದಾಗ ಅವರ ಅಭಿಪ್ರಾಯ ಕಪಾಲಭಾತಿ ಒಂದೇ ನಿರಂತರವಾಗಿ ಮಾಡಿದರೆ ಬೇರಾವ ಯೋಗಾಸನ ವ್ಯಾಯಮ ಬೇಡವೇ ಬೇಡ ಅಷ್ಟು ಪರಿಣಾಮಕಾರಿ ಈ ಭಾರತೀಯ ಪ್ರಾಚೀನ ಯೋಗಾಸನದ ಕಪಾಲಭಾತಿ ಅಂದಿದ್ದರು.
  ಭಾರತೀಯ ಆಯುಷ್ ಸಚಿವಾಲಯ ಕೂಡ ಕಪಾಲಭಾತಿ ನಿತ್ಯ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಏನೇನು ಲಾಭ ಎಂದು ಘೋಷಿಸಿದೆ ನೋಡಿ....
  ಆಂಟಿ ಏಜಿಂಗ್, ಹೊಟ್ಟೆ ಸ್ನಾಯು ಮತ್ತು ಮುಖದ ಸ್ನಾಯು ಬಲ ಪಡಿಸುತ್ತದೆ.
   ಇನ್ಸುಲಿನ್ ಹೆಚ್ಚು ಉತ್ಪಾದಿಸಲು ಕಾರಣವಾಗುತ್ತದೆ.
  ಜೀರ್ಣಾಂಗ ಸರಿಪಡಿಸುತ್ತದೆ, ಮಲಬದ್ದತೆ, ಗ್ಯಾಸ್ಟ್ರಿಕ್, ಹೃದಯದ ಉರಿ ಶಮನವಾಗುತ್ತದೆ.
   ರಕ್ತ ಸಂಚಾರ ಸರಾಗಗೊಳಿಸಿ ದೇಹದ ಹಾರ್ಮೋನು ನಿಯಂತ್ರಣ, ಸ್ತ್ರೀಯರ ಗರ್ಭಕೋಶದ ಪೈಬ್ರಾಯಿಡ್ ನಿವಾರಣೆ ಮಾಡುತ್ತದೆ.
  ಮೆದುಳಿನ ಸ್ಟ್ರೆಸ್ - ಟೆನ್ಷನ್- ಆ್ಯಂಕ್ಸಿಟಿ ಕಡಿಮೆ ಮಾಡುವ ಹಾರ್ಮೋನ್ ಪ್ರಚೋದಿಸುತ್ತದೆ.
  ನಿದಾನವಾಗುವ ರಕ್ತ ಸಂಚಾರ ಸರಿಪಡಿಸುತ್ತದೆ, ಶ್ವಾಸಕೋಶದ ಸಾಮರ್ಥ್ಯ ವೃದ್ದಿ ಮಾಡುತ್ತದೆ, ತೂಕ ನಿಯಂತ್ರಣ, ನೆನಪಿನ ಶಕ್ತಿ, ಏಕಾಗ್ರತೆ ಜಾಸ್ತಿ ಮಾಡುತ್ತದೆ ಎಂದು ತನ್ನ ಸಂಶೋದನೆಗಳಿಂದ ತಿಳಿಸಿದೆ.
   ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ