Skip to main content

Blog number 1825. ಬದುಕಿದ್ದಾಗ ತೆಗಳಲಾರದವ ಆ ವ್ಯಕ್ತಿ ಸತ್ತ ಮೇಲೆ ಹೊಗಳಿದರೂ ತೆಗಳಿದರೂ ಅದಕ್ಕೆ ಪ್ರತಿಕ್ರಿಯಿಸಲು ಅವನಿರುವುದಿಲ್ಲ ಇದು ಸತ್ತವರನ್ನ ತೆಗಳುವ ವಿಕೃತ ಮನಸ್ಸಿನ ಆನಂದ ಮಾತ್ರ.

#ರವಿಬೆಳೆಗೆರೆ_ಯಾರನ್ನೂ_ಮೆಚ್ಚಿಸಲು_ಬರೆದವರಲ್ಲ_ಅವರು_ಹಠಮಾರಿ 

#ಆದರೆ_ಅವರ_ಬರವಣಿಗೆ_ಮೆಚ್ಚಿದವರು_ಅಪಾರ_ಸಂಖ್ಯೆಯಲ್ಲಿದ್ದಾರೆ.

#ರವಿಬೆಳೆಗೆರೆ_ಬರಹಗಳಿಂದ_ಮತ್ತು_ನನ್ನ_ಜನಪರ_ಹೋರಾಟಕ್ಕೆ_ಹಾಯ್_ಬೆಂಗಳೂರಲ್ಲಿ_ಬೆಂಬಲಿಸಿ_ಬರೆದ_ವರದಿಗಳಿಂದ

#ನಾನು_ರವಿಬೆಳೆಗೆರೆ_ಅಭಿಮಾನಿ

#ಪ್ರತಿವರ್ಷ_ಅವರ_ಸಂಸ್ಮರಣಾ_ದಿನ_ನಾನು_ಅವರನ್ನು_ಸ್ಮರಿಸಿ_ನನಗೆ_ತೋಚಿದ_ಅಕ್ಷರ_ನುಡಿನಮನ_ಅರ್ಪಿಸುತ್ತೇನೆ.

#ಇದನ್ನು_ಕೆಲ_ಗೆಳೆಯರು_ಸಹಿಸದೆ_ಕೆಟ್ಟದಾಗಿ_ಪ್ರತಿಕ್ರಿಯೆ_ಬರೆಯುವುದು_ಬೇಸರ_ಅನ್ನಿಸುತ್ತೆ.

#ಇದಕ್ಕೆ_ನನ್ನ_ಉತ್ತರಕ್ಕಿಂತ

#ಶಿವಮೊಗ್ಗದ_ಹೋರಾಟಗಾರ_ವಕೀಲ_ಮಿತ್ರರಾದ_ಶ್ರೀಪಾಲ್_ಬರೆದಿರುವ_ಪೋಸ್ಟ್

#ವ್ಯಕ್ತಿ_ಬದುಕಿದ್ದಾಗಲೇ_ತೆಗಳಲಾರದವರು_ಸತ್ತ_ಮೇಲೆ_ತೆಗಳುವುದು_ಸರಿ_ಅಲ್ಲ_ಎನ್ನುವುದು_ಸೂಕ್ತ_ಅನ್ನಿಸಿತು.

    ಇದು ವಾಸ್ತವ ಮತ್ತು ಸತ್ಯವಾದ ಮಾತು, ಹೊಗಳಿದರೂ ತೆಗಳಿದರೂ ಪ್ರತಿಕ್ರಿಯಿಸಲು ಸತ್ತವರು ಇರುವುದಿಲ್ಲ.
  ತೆಗಳಿ ತಮ್ಮ ವಿಕೃತ ಮನಸ್ಸು ಜಾಹೀರುಗೊಳಿಸಿ ಸಮಾಜದಲ್ಲಿ ಸಣ್ಣವರಾಗುವುದಕ್ಕಿಂತ,ಹೊಗಳಲಾಗದಿದ್ದಂತ ದ್ವೇಷ ಇದ್ದರೆ ಮೌನವಾಗಿದ್ದು ತಮ್ಮ ವೈಕ್ತಿತ್ವ ಕಾಪಾಡಿಕೊಳ್ಳಬೇಕಾದ್ದು ಸ್ವಸ್ಥ ಸಮಾಜದ ನಾಗರೀಕರ ಕತ೯ವ್ಯ ಕೂಡ.
    ಇದಕ್ಕಾಗಿ ಗಾದೆ ಒಂದು ಇದೆ #ತಲೆ_ತೂಕ_ತಪ್ಪಿದರೂ_ನಾಲಿಗೆ_ತೂಕ_ತಪ್ಪ_ಬಾರದು ಅಂತ.
   ಅಷ್ಟಕ್ಕೂ ರವಿಬೆಳೆಗೆರೆ ಅತೀತರಲ್ಲ, ಎಲ್ಲಾ ಗುಣ ಮತ್ತು ಅವಗುಣಗಳ ಮನುಷ್ಯ ಸಹಜ ತಪ್ಪು ಮತ್ತು ಒಪ್ಪುಗಳಿದ್ದವರೆ.
    ಜನ ಪರವಾಗಿದ್ದವರಿಗೆ ವ್ಯವಸ್ಥೆಯ ಭಾಗವಾಗಿರುವ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದಿಂದ ನೀಡುವ ತೊಂದರೆಗಳನ್ನ ಖಡಾಖಂಡಿತಾವಾಗಿ ಅವರಷ್ಟು ದೈಯ೯ವಾಗಿ ವಿರೋದಿಸಿ, ಜನಪರ ಹೋರಾಟಗಳಿಗೆ ನೀಡುತ್ತಿದ್ದ ನೈತಿಕ ದೈಯ೯ ಬೇರಾರಿಂದ ಸಾಧ್ಯವಾಗಿಲ್ಲ ಎನ್ನುವುದು ಅಷ್ಟೇ ಸತ್ಯ.
   ಇಂತಹ ಬೆಂಬಲದ ಬರಹದಿಂದ ಸಾವಿರಾರು ಮಾನನಷ್ಟ ಕೇಸ್ ಗಳಿಂದಲೂ ಇವರನ್ನು ಕುಗ್ಗಿಸಲಾಗಲಿಲ್ಲ.
  ಚಿತ್ರ ನಟಿಗೆ ಏಡ್ಸ್ ಬಂದಿದೆ  ಅಂತ ಬರದಿದ್ದೇ ಹಿಡಿದುಕೊಂಡು ಈಗಲೂ ಚೊರಿಯುತ್ತಾರೆ,ಅದು ಬರೆದ ಮರು ವಾರವೇ ಕ್ಷಮೆ ಯಾಚಸಿ ಆಗಿದೆ ಅದು ಮುಗಿದ ಅಧ್ಯಾಯ ಎಲ್ಲರ ವೃತ್ತಿ ಜೀವನದಲ್ಲಿ ಇಂತಹದ್ದೊಂದು ಆಗೇ ಆಗಿರುತ್ತದೆ ಅದಕ್ಕೆ ಒಂದು ಗಾದೆ ಮಾತಿದೆ ನಡೆಯುವವ ಎಡವುತ್ತಾನೆ.
 ರವಿ ಬೆಳೆಗೆರೆ ಯಾರನ್ನೂ ಮೆಚ್ಚಿಸಲು ಬರೆದವರಲ್ಲ ಅವರು ಹಠಮಾರಿ ಆದರೆ ಅವರ ಬರವಣಿಗೆ ಮೆಚ್ಚಿದವರು ಅಪಾರ ಸಂಖ್ಯೆಯಲ್ಲಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ