Skip to main content

Blog number 1825. ಬದುಕಿದ್ದಾಗ ತೆಗಳಲಾರದವ ಆ ವ್ಯಕ್ತಿ ಸತ್ತ ಮೇಲೆ ಹೊಗಳಿದರೂ ತೆಗಳಿದರೂ ಅದಕ್ಕೆ ಪ್ರತಿಕ್ರಿಯಿಸಲು ಅವನಿರುವುದಿಲ್ಲ ಇದು ಸತ್ತವರನ್ನ ತೆಗಳುವ ವಿಕೃತ ಮನಸ್ಸಿನ ಆನಂದ ಮಾತ್ರ.

#ರವಿಬೆಳೆಗೆರೆ_ಯಾರನ್ನೂ_ಮೆಚ್ಚಿಸಲು_ಬರೆದವರಲ್ಲ_ಅವರು_ಹಠಮಾರಿ 

#ಆದರೆ_ಅವರ_ಬರವಣಿಗೆ_ಮೆಚ್ಚಿದವರು_ಅಪಾರ_ಸಂಖ್ಯೆಯಲ್ಲಿದ್ದಾರೆ.

#ರವಿಬೆಳೆಗೆರೆ_ಬರಹಗಳಿಂದ_ಮತ್ತು_ನನ್ನ_ಜನಪರ_ಹೋರಾಟಕ್ಕೆ_ಹಾಯ್_ಬೆಂಗಳೂರಲ್ಲಿ_ಬೆಂಬಲಿಸಿ_ಬರೆದ_ವರದಿಗಳಿಂದ

#ನಾನು_ರವಿಬೆಳೆಗೆರೆ_ಅಭಿಮಾನಿ

#ಪ್ರತಿವರ್ಷ_ಅವರ_ಸಂಸ್ಮರಣಾ_ದಿನ_ನಾನು_ಅವರನ್ನು_ಸ್ಮರಿಸಿ_ನನಗೆ_ತೋಚಿದ_ಅಕ್ಷರ_ನುಡಿನಮನ_ಅರ್ಪಿಸುತ್ತೇನೆ.

#ಇದನ್ನು_ಕೆಲ_ಗೆಳೆಯರು_ಸಹಿಸದೆ_ಕೆಟ್ಟದಾಗಿ_ಪ್ರತಿಕ್ರಿಯೆ_ಬರೆಯುವುದು_ಬೇಸರ_ಅನ್ನಿಸುತ್ತೆ.

#ಇದಕ್ಕೆ_ನನ್ನ_ಉತ್ತರಕ್ಕಿಂತ

#ಶಿವಮೊಗ್ಗದ_ಹೋರಾಟಗಾರ_ವಕೀಲ_ಮಿತ್ರರಾದ_ಶ್ರೀಪಾಲ್_ಬರೆದಿರುವ_ಪೋಸ್ಟ್

#ವ್ಯಕ್ತಿ_ಬದುಕಿದ್ದಾಗಲೇ_ತೆಗಳಲಾರದವರು_ಸತ್ತ_ಮೇಲೆ_ತೆಗಳುವುದು_ಸರಿ_ಅಲ್ಲ_ಎನ್ನುವುದು_ಸೂಕ್ತ_ಅನ್ನಿಸಿತು.

    ಇದು ವಾಸ್ತವ ಮತ್ತು ಸತ್ಯವಾದ ಮಾತು, ಹೊಗಳಿದರೂ ತೆಗಳಿದರೂ ಪ್ರತಿಕ್ರಿಯಿಸಲು ಸತ್ತವರು ಇರುವುದಿಲ್ಲ.
  ತೆಗಳಿ ತಮ್ಮ ವಿಕೃತ ಮನಸ್ಸು ಜಾಹೀರುಗೊಳಿಸಿ ಸಮಾಜದಲ್ಲಿ ಸಣ್ಣವರಾಗುವುದಕ್ಕಿಂತ,ಹೊಗಳಲಾಗದಿದ್ದಂತ ದ್ವೇಷ ಇದ್ದರೆ ಮೌನವಾಗಿದ್ದು ತಮ್ಮ ವೈಕ್ತಿತ್ವ ಕಾಪಾಡಿಕೊಳ್ಳಬೇಕಾದ್ದು ಸ್ವಸ್ಥ ಸಮಾಜದ ನಾಗರೀಕರ ಕತ೯ವ್ಯ ಕೂಡ.
    ಇದಕ್ಕಾಗಿ ಗಾದೆ ಒಂದು ಇದೆ #ತಲೆ_ತೂಕ_ತಪ್ಪಿದರೂ_ನಾಲಿಗೆ_ತೂಕ_ತಪ್ಪ_ಬಾರದು ಅಂತ.
   ಅಷ್ಟಕ್ಕೂ ರವಿಬೆಳೆಗೆರೆ ಅತೀತರಲ್ಲ, ಎಲ್ಲಾ ಗುಣ ಮತ್ತು ಅವಗುಣಗಳ ಮನುಷ್ಯ ಸಹಜ ತಪ್ಪು ಮತ್ತು ಒಪ್ಪುಗಳಿದ್ದವರೆ.
    ಜನ ಪರವಾಗಿದ್ದವರಿಗೆ ವ್ಯವಸ್ಥೆಯ ಭಾಗವಾಗಿರುವ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದಿಂದ ನೀಡುವ ತೊಂದರೆಗಳನ್ನ ಖಡಾಖಂಡಿತಾವಾಗಿ ಅವರಷ್ಟು ದೈಯ೯ವಾಗಿ ವಿರೋದಿಸಿ, ಜನಪರ ಹೋರಾಟಗಳಿಗೆ ನೀಡುತ್ತಿದ್ದ ನೈತಿಕ ದೈಯ೯ ಬೇರಾರಿಂದ ಸಾಧ್ಯವಾಗಿಲ್ಲ ಎನ್ನುವುದು ಅಷ್ಟೇ ಸತ್ಯ.
   ಇಂತಹ ಬೆಂಬಲದ ಬರಹದಿಂದ ಸಾವಿರಾರು ಮಾನನಷ್ಟ ಕೇಸ್ ಗಳಿಂದಲೂ ಇವರನ್ನು ಕುಗ್ಗಿಸಲಾಗಲಿಲ್ಲ.
  ಚಿತ್ರ ನಟಿಗೆ ಏಡ್ಸ್ ಬಂದಿದೆ  ಅಂತ ಬರದಿದ್ದೇ ಹಿಡಿದುಕೊಂಡು ಈಗಲೂ ಚೊರಿಯುತ್ತಾರೆ,ಅದು ಬರೆದ ಮರು ವಾರವೇ ಕ್ಷಮೆ ಯಾಚಸಿ ಆಗಿದೆ ಅದು ಮುಗಿದ ಅಧ್ಯಾಯ ಎಲ್ಲರ ವೃತ್ತಿ ಜೀವನದಲ್ಲಿ ಇಂತಹದ್ದೊಂದು ಆಗೇ ಆಗಿರುತ್ತದೆ ಅದಕ್ಕೆ ಒಂದು ಗಾದೆ ಮಾತಿದೆ ನಡೆಯುವವ ಎಡವುತ್ತಾನೆ.
 ರವಿ ಬೆಳೆಗೆರೆ ಯಾರನ್ನೂ ಮೆಚ್ಚಿಸಲು ಬರೆದವರಲ್ಲ ಅವರು ಹಠಮಾರಿ ಆದರೆ ಅವರ ಬರವಣಿಗೆ ಮೆಚ್ಚಿದವರು ಅಪಾರ ಸಂಖ್ಯೆಯಲ್ಲಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...