Blog number 2280.#ಮಾನವನಾಗಿ_ಹುಟ್ಟಿದ_ಮೇಲೆ_ಏನೇನು_ಕಂಡೆ#ಸಾಯೋ_ತನಕ_ಸಂಸಾರದೊಳಗೆ_ಗಂಡಾ_ಗುಂಡಿ#ಹೇರಿಕೊಂಡು_ಹೋಗೋದಿಲ್ಲ_ಸತ್ತಾಗ_ಬಂಡಿ#ಇರೋದರೊಳಗೆ_ಒಮ್ಮೆ_ನೋಡು_ಜೋಗದ್_ಗುಂಡಿ#ಪ್ರಸಿದ್ಧ_ಲಾವಣಿ_ಬರೆದವರು_ಮೂಗೂರು_ಮಲ್ಲಪ್ಪನವರು
#ಮಾನವನಾಗಿ_ಹುಟ್ಟಿದ_ಮೇಲೆ_ಏನೇನು_ಕಂಡೆ #ಸಾಯೋ_ತನಕ_ಸಂಸಾರದೊಳಗೆ_ಗಂಡಾ_ಗುಂಡಿ #ಹೇರಿಕೊಂಡು_ಹೋಗೋದಿಲ್ಲ_ಸತ್ತಾಗ_ಬಂಡಿ #ಇರೋದರೊಳಗೆ_ಒಮ್ಮೆ_ನೋಡು_ಜೋಗದ್_ಗುಂಡಿ #ಪ್ರಸಿದ್ಧ_ಲಾವಣಿ_ಬರೆದವರು_ಮೂಗೂರು_ಮಲ್ಲಪ್ಪನವರು #ಈ_ಲಾವಣಿ_ಸಂಗ್ರಹಿಸಿದವರು_ಜನಪದ_ಇತಿಹಾಸ_ತಜ್ಞ_ತರೀಕೆರೆ_ವಕೀಲರಾದ_ಕೆ_ಆರ್_ಲಿಂಗಪ್ಪನವರು. #ಡಾ_ರಾಜಕುಮಾರ್_ಜೀವನ_ಜೈತ್ರ_ಸಿನಿಮಾದಲ್ಲಿ_ಈ_ಹಾಡು_ಸ್ವತಃ_ಹಾಡಿದ್ದಾರೆ. https://youtu.be/QvRIOhCBWzI?si=s_kqOjjzfA2cVjTh ಮೂಗೂರು ಮಲ್ಲಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಳುಕೊಪ್ಪ ಸಮೀಪದ ಸಿರಿಯಾಳ ಕೊಪ್ಪ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರು. ಚಿಕ್ಕಮಗಳೂರು ಕಡೂರು ಶಾಲೆಗಳನ್ನು ಕೂಡ ದಕ್ಷತೆಯಿಂದ ಪಾಠ ಮಾಡುತ್ತಿದ್ದಂತಹ ಮೇಷ್ಟ್ರು,ತಾನು ಪಾಠ ಮಾಡುತ್ತಿದ್ದ ಮಕ್ಕಳಿಗೆ ಸಂಗೀತ ಲಯ ಭಾಷೆಯ ಸೊಗಡು ಸೊಗಸು ಜೊತೆಗೆ ಸುಲಲಿತವಾಗಿ ಹಾಡಿನ ಮೂಲಕ ನಾಡಿನ ಹಿರಿಮೆಯನ್ನು ಮಕ್ಕಳ ಮನದಲ್ಲಿ ನೆಟ್ಟ ಮೇಷ್ಟ್ರು. ಮೂಗೂರು ಮಲ್ಲಪ್ಪನವರು ತಮ್ಮ ವಿದ್ಯಾರ್ಥಿಗಳಿಗೆ ಜೋಗ ಜಲಪಾತ ತೋರಿಸಲು ಬಂದಾಗ ಅವರ ಮನದಲ್ಲಿ ಮೂಡಿದ ಈ ಸುಂದರ ಹಾಡು ಇದನ್ನು ಸಂಗ್ರಹಿಸಿ ಪ್ರಕಟಿಸಿದವರು ಜನಪದ ಇತಿಹಾಸ ತಜ್ಞ ವಕೀಲರು ಆದ ತರೀಕೆರೆಯ ಕೆಆರ್ ಲಿಂಗಪ್ಪನವರು. ಆಗಿನ ಮೈಸೂರು ಸರ್ಕಾರ ದಿನಾಂಕ 24 - ಜನವರಿ- 1965 ...