#ನಮ್ಮೂರ_ವರಸಿದ್ದಿ_ವಿನಾಯಕ_ಸ್ವಾಮಿ_18ನೇ_ವರ್ಷದ_ರಥೋತ್ಸವ. #ರೈಲ್ವೆ_ಬ್ರಾಡ್_ಗೇಜ್_ಮಾಗ೯_ವಿದ್ಯುದೀಕರಣದಿಂದ #ರಥದ_ಎತ್ತರ_ಕಡಿಮೆಗೊಳಿಸ_ಬೇಕಾದ_ಅನಿವಾರ್ಯತೆ #ನಮ್ಮೂರ_ರಥ_ಶಿಲ್ಪಿ_ವೆಂಕಟರಮಣ_ಆಚಾರ್ #ನಮ್ಮೂರ_ರಥ_ದಾನಿ_ಕೆಂಜಿಗಾಪುರ_ಶ್ರೀಧರ_ಭಟ್ಟರು #ರಥದ_ಗೋಪುರದ_ಮೇಲ್ಚಾವಣೆ_ಮಾಡಿದವರು_ಆನಂದಪುರಂ_ನರಸಿಂಹಾಚಾರ್ https://youtu.be/cuRSj3DxAkE?feature=shared ಇದೇ ಫೆಬ್ರುವರಿ 13ರ ಮಂಗಳವಾರ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ 18ನೇ ವರ್ಷದ ಬ್ರಹ್ಮ ರಥೋತ್ಸವ ನಡೆಯಲಿದೆ ಈ ಸಂದರ್ಭದಲ್ಲಿ ಒಂದು ಸಮಸ್ಯೆ ಉದ್ಭವಾಯಿತು ಅದೇನೆಂದರೆ ರಥ ರಾಜಭೀದಿ ಉತ್ಸವ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯ ಯಡೇಹಳ್ಳಿ ವೃತ್ತದ ವರೆಗೆ ಪ್ರತಿ ವರ್ಷ ಬರುತ್ತದೆ ಆದರೆ ಈ ಎರ್ಷ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ರೈಲು ಮಾರ್ಗ ವಿದ್ಯುದೀಕರಣಗೊಳಿಸಿದ್ದರಿಂದ ರೈಲ್ವೆ ಇಲಾಖೆ ರೈಲ್ವೆ ಗೇಟ್ ಸಮೀಪ ಎರಡು ಕಡೆ 15 ಅಡಿಗಿಂತ ಎತ್ತರದ ವಾಹನ ಸಂಚರಿಸದಂತೆ ಬ್ಯಾರಿಕೇಡ್ ಹಾಕಿದೆ. ಇದರಿಂದ ನಮ್ಮ ದೇವಾಲಯದ ರಥ 22 ಅಡಿ ಎತ್ತರ ಇರುವುದರಿಂದ ರಥ ರಾಜಭೀದಿ ಉತ್ಸವಕ್ಕೆ ತಡೆಯಾಗಿದೆ ಆದರೆ ಪ್ರತಿ ವರ್ಷದಂತೆ ರಥ ರಾಜಭೀದಿ ಉತ್ಸವ ಈ ಮಾರ್ಗದಲ್ಲಿ ನಡೆಸಲೇಬೇಕೆಂದರೆ ನಮ್ಮ ದೇವಾಲಯದ ರಥದ ಎತ್ತರ ಕಡಿಮೆಗೊಳಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ನಿನ್ನೆ ಈ ರಥ ನಿರ್ಮಿಸ...