Blog number 1769. ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ಹತ್ತನೆ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅವರ ಅಣ್ಣ ತಿಮ್ಮಪ್ಪರ ಮಗ ಅಣ್ಣಪ್ಪರೊಡನೆ .
https://youtu.be/WmPDMvF5NgM?feature=shared #ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರ_ಪುಣ್ಯಸ್ಮರಣೆ. #ಜನನ_3_ಆಗಸ್ಟ್_1924 #ಮರಣ_30_ಸೆಪ್ಟೆಂಬರ್_2014. #ಕೆಂಜಿಗಾಪುರದಿಂದ_ಮು೦ಡುಗೋಡಿಗೆ_ಟಿಬೆಟಿಯನ್_ಕ್ಯಾಂಪ್_ವರ್ಗಾಯಿಸಿದವರು #ಈ_ಸ್ಮರಣಾರ್ಥ_ನಮ್ಮ_ಊರಿನ_ಕೆಂಜಿಗಾಪುರ_ರಸ್ತೆಯ_ಸರ್ಕಾರಿ_ಶಾಲೆಯಲ್ಲಿ_ಗಣಪತಿಯಪ್ಪ_ರಂಗಮಂದಿರ_ಇದೆ. #ಆಗಿನ_ಮುಖ್ಯಮಂತ್ರಿ_ಕಡಿದಾಳರು_ಸ್ವಾತಂತ್ರ್ಯ_ಹೋರಾಟಗಾರರಿಗೆ_ಕೆಂಜಿಗಾಪುರದಲ್ಲಿ_ಜಮೀನು_ನೀಡಿದ್ದರು #ಈ_ಜಮೀನು_ತನ್ನಣ್ಣ_ತಿಮ್ಮಪ್ಪರಿಗೆ_ಬಿಟ್ಟುಕೊಟ್ಟಿದ್ದರು #ಗಣಪತಿಯಪ್ಪರ_ಅಣ್ಣನ_ಮಗ_ಇದನ್ನು_ಸ್ಮರಿಸಿದ್ದಾರೆ. ಕೆಂಜಿಗಾಪುರದ ಅಣ್ಣಪ್ಪ ನಿನ್ನೆ ನನ್ನ ಆಫೀಸಿಗೆ ಬಂದಿದ್ದರು ಇವತ್ತು ಸಾಗರದ ಒಡ್ನಾಳದಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪರ ಹತ್ತನೆ ಪುಣ್ಯ ತಿಥಿ ಆಚರಣೆಯಲ್ಲಿ ಭಾಗವಹಿಸಲು ಹೋಗುವುದಾಗಿ ತಿಳಿಸಿದರು ಇವರು ಗಣಪತಿಯಪ್ಪರ ಅಣ್ಣ ತಿಮ್ಮಪ್ಪರ ಏಕೈಕ ಪುತ್ರ. ಈ ಸಂದರ್ಭದಲ್ಲಿ ಇವರು ತನ್ನ ಚಿಕ್ಕಪ್ಪ ತಮಗೆ ಮಂಜೂರಾದ ಫಲವತ್ತಾದ ಎರೆಡು ಬೆಳೆ ಬೆಳೆಯುವ ನೀರಾವರಿ ಜಮೀನು ತಮ್ಮ ತಂದೆಗೆ ಬಿಟ್ಟು ಕೊಟ್ಟಿದ್ದೇ ಈಗ ನಮ್ಮ ಆಸ್ತಿ ಮತ್ತು ಜೀವನಾದಾರ ಎಂದು ಸ್ಮರಣೆ ಮಾಡಿದರು ಈಗ ಅಣ್ಣಪ್ಪರ ಇಬ್ಬರು ಮಕ್ಕಳು ಸ್ವಂತ ಶ್ರಮದಿಂದ ಈ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದಾರೆ ಅಣ್ಣಪ್ಪರ ತಂಗಿ ತ್ರಿವೇಣಿ ಅಣ್ಣಪ್ಪರ ಜೊತ...