Skip to main content

Blog number 1769. ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ಹತ್ತನೆ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅವರ ಅಣ್ಣ ತಿಮ್ಮಪ್ಪರ ಮಗ ಅಣ್ಣಪ್ಪರೊಡನೆ .

https://youtu.be/WmPDMvF5NgM?feature=shared

#ಕಾಗೋಡು_ಹೋರಾಟದ_ರೂವಾರಿ_ಹೆಚ್_ಗಣಪತಿಯಪ್ಪರ_ಪುಣ್ಯಸ್ಮರಣೆ.

#ಜನನ_3_ಆಗಸ್ಟ್_1924

#ಮರಣ_30_ಸೆಪ್ಟೆಂಬರ್_2014.

#ಕೆಂಜಿಗಾಪುರದಿಂದ_ಮು೦ಡುಗೋಡಿಗೆ_ಟಿಬೆಟಿಯನ್_ಕ್ಯಾಂಪ್_ವರ್ಗಾಯಿಸಿದವರು

#ಈ_ಸ್ಮರಣಾರ್ಥ_ನಮ್ಮ_ಊರಿನ_ಕೆಂಜಿಗಾಪುರ_ರಸ್ತೆಯ_ಸರ್ಕಾರಿ_ಶಾಲೆಯಲ್ಲಿ_ಗಣಪತಿಯಪ್ಪ_ರಂಗಮಂದಿರ_ಇದೆ.

#ಆಗಿನ_ಮುಖ್ಯಮಂತ್ರಿ_ಕಡಿದಾಳರು_ಸ್ವಾತಂತ್ರ್ಯ_ಹೋರಾಟಗಾರರಿಗೆ_ಕೆಂಜಿಗಾಪುರದಲ್ಲಿ_ಜಮೀನು_ನೀಡಿದ್ದರು

#ಈ_ಜಮೀನು_ತನ್ನಣ್ಣ_ತಿಮ್ಮಪ್ಪರಿಗೆ_ಬಿಟ್ಟುಕೊಟ್ಟಿದ್ದರು

#ಗಣಪತಿಯಪ್ಪರ_ಅಣ್ಣನ_ಮಗ_ಇದನ್ನು_ಸ್ಮರಿಸಿದ್ದಾರೆ.


   ಕೆಂಜಿಗಾಪುರದ ಅಣ್ಣಪ್ಪ ನಿನ್ನೆ ನನ್ನ ಆಫೀಸಿಗೆ ಬಂದಿದ್ದರು ಇವತ್ತು ಸಾಗರದ ಒಡ್ನಾಳದಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪರ ಹತ್ತನೆ ಪುಣ್ಯ ತಿಥಿ ಆಚರಣೆಯಲ್ಲಿ ಭಾಗವಹಿಸಲು ಹೋಗುವುದಾಗಿ ತಿಳಿಸಿದರು ಇವರು ಗಣಪತಿಯಪ್ಪರ ಅಣ್ಣ ತಿಮ್ಮಪ್ಪರ ಏಕೈಕ ಪುತ್ರ.
   ಈ ಸಂದರ್ಭದಲ್ಲಿ ಇವರು ತನ್ನ ಚಿಕ್ಕಪ್ಪ ತಮಗೆ ಮಂಜೂರಾದ ಫಲವತ್ತಾದ ಎರೆಡು ಬೆಳೆ ಬೆಳೆಯುವ ನೀರಾವರಿ ಜಮೀನು ತಮ್ಮ ತಂದೆಗೆ ಬಿಟ್ಟು ಕೊಟ್ಟಿದ್ದೇ ಈಗ ನಮ್ಮ ಆಸ್ತಿ ಮತ್ತು ಜೀವನಾದಾರ ಎಂದು ಸ್ಮರಣೆ ಮಾಡಿದರು ಈಗ ಅಣ್ಣಪ್ಪರ ಇಬ್ಬರು ಮಕ್ಕಳು ಸ್ವಂತ ಶ್ರಮದಿಂದ ಈ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದಾರೆ ಅಣ್ಣಪ್ಪರ ತಂಗಿ ತ್ರಿವೇಣಿ ಅಣ್ಣಪ್ಪರ ಜೊತೆಯೇ ವಾಸವಾಗಿದ್ದಾಳೆ, 64ರ ವಯೋಮಾನದ ಅಣ್ಣಪ್ಪರಿಗೆ ಅವರ ತಂದೆಯಂತೆಯೇ ನಿತ್ಯ ಪತ್ರಿಕೆ ಮತ್ತು ಪುಸ್ತಕ ಓದುವ ಅಬ್ಯಾಸ ನನ್ನ ಕಥಾ ಸಂಕಲ ಅವರಿಗೆ ಸಿಕ್ಕಿರಲಿಲ್ಲ ಅದನ್ನು ಈ ದಿನ ಕೇಳಿ ಪಡೆದಿದ್ದಾರೆ 
  ಈಗೆಲ್ಲ ಉಪಕಾರ ಸ್ಮರಣೆ ಮಾಡುವ ಜನ ಕಡಿಮೆಯೆ ಆದರೆ ಅಣ್ಣಪ್ಪ ಬಿನ್ನ ವ್ಯಕ್ತಿಯಾಗಿ ನನಗೆ ಕಾಣಿಸಿದರು ಮತ್ತು ಗಣಪತಿಯಪ್ಪರ ಉಪಕಾರ ಸ್ಮರಿಸಿದ ಕೆಲವೇ ಜನರಲ್ಲಿ ಒಬ್ಬರಾಗಿದ್ದಾರೆ.
  ಗಣಪತಿಯಪ್ಪರು ಬದುಕಿದ್ದಾಗ ಅವರಿಗೆ ಅವಮಾನ ಮಾಡಿದವರು, ಗೇಲಿ ಮಾಡಿದವರು, ವಿನಾಃ ತೊಂದರೆಕೊಟ್ಟವರು ನೂರಾರು ಮಂದಿ ಮತ್ತು ಅಂತಹ ನೂರಾರು ಘಟನೆ ನಮ್ಮ ಕಣ್ಣೆದುರಿಗೆ ಇದ್ದಾರೆ ಮತ್ತು ಇದೆ.
  1924 ರ ಆಗಸ್ಟ್ 3 ರಂದು ಸಿದ್ಧಾಪುರ ತಾಲ್ಲೂಕಿನ ಹೊಸೂರಿನಲ್ಲಿ ಕುರುವತ್ತಿ ಕನ್ನಪ್ಪ ಮತ್ತು ಕನ್ನಮ್ಮ ದಂಪತಿಗಳ ಕಿರಿಮಗನಾಗಿ ಜನಿಸಿದವರು ಗಣಪತಿಯಪ್ಪ ಮುಂದೆ ಇಡೀ ಭಾರತ ದೇಶದಲ್ಲಿ ಚರಿತ್ರೆಯಾದ ಭೂಮಿ ಹೋರಾಟವಾದ ಕಾಗೋಡು ಭೂಹೋರಾಟದ ನೇತಾರರಾದರು,ಲೋಹಿಯಾ ಜೇಪಿ ಮುಂತಾದ ಮಹಾನ್ ನಾಯಕರ ಪಾದ ಸ್ಪರ್ಶದಿಂದ ಈ ಭೂಮಿ ಪಾವನ ಆಯಿತು, ಈ ಹೋರಾಟದ ಮೂಸೆಯಿಂದ ಹೊರಬಂದ ಶಾಂತವೇರಿ ಗೋಪಾಲಗೌಡರು ಅವರ ಪ್ರಭಾವದಿಂದ ಬಂಗಾರಪ್ಪ, ಜೆ.ಹೆಚ್.ಪಟೇಲರು, ಕಾಗೋಡು ತಿಮ್ಮಪ್ಪ ಪ್ರಸಕ್ತ ರಾಜಕಾರಣದಲ್ಲಿ ಮೇರು ಪರ್ವತಗಳಾದರು.
   ಇವರ ಸಹೋದರ ಕುರುವತ್ತಿ ತಿಮ್ಮಪ್ಪರಿಗೆ ತಮಗೆ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರು ಮಂಜೂರು ಮಾಡಿದ್ದ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯತನ ಕೆಂಜಿಗಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಮೀನಿನ ಕೆಳಗಿನ ನೀರಾವರಿ ಜಮೀನು ಬಿಟ್ಟು ಕೊಟ್ಟು ಅವರ ಕುಟುಂಬ ಇಲ್ಲಿ ನೆಲಸಲು ಕಾರಣರಾದರು.
  ಈ ಜಮೀನು ಮಂಜೂರು ಆಗಲು ಕಾರಣವಿದೆ ಏನೆಂದರೆ ಆಗ ಸರ್ಕಾರ ಟಿಬೆಟ್ ಸಂತ್ರಸ್ಥರ ಪುನರ್ವಸತಿಗಾಗಿ ಆನಂದಪುರ೦ ಹೋಬಳಿ ಕೆಂಜಿಗಾಪುರ ಕೇಂದ್ರವಾಗಿಸಿ ಸುಮಾರು 8 ಸಾವಿರ ಎಕರೆ ಪ್ರದೇಶ ಗುರುತಿಸಿತ್ತು ಆಗ ಸ್ಥಳಿಯ ಶರಾವತಿ ಹಿರೇ ಬಾಸ್ಕರ ಆಣೆಕಟ್ಟು ಮುಳುಗಡೆ ಸಂತ್ರಸ್ಥರು ಇಲ್ಲಿ ನೆಲೆಸಿದ್ದರು ಅವರ ಪರವಾಗಿ ಗಣಪತಿಯಪ್ಪನವರು ತಮ್ಮ ರೈತ ಸಂಘದ ಮೂಲಕ ಹೋರಾಟ ಮಾಡಿದ್ದರು ಆ ರೈತರೆಲ್ಲ ಗಣಪತಿಯಪ್ಪರಿಗೆ ಮನವಿ ಮಾಡಿ ನಿಮ್ಮ ಗೆಳೆಯರಾದ ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ ಅವರಿಗೆ ಈ ಊರಿನಲ್ಲಿ ಟಿಬೇಟಿಯನ್ ಕ್ಯಾಂಪ್ ಮಾಡದಂತೆ ಮಾಡಿಸಿ ಇದರಿಂದ ನಾವೆಲ್ಲ ಇಲ್ಲಿಂದ ಇನ್ನೊಂದು ಸಾರಿ ಸಂತ್ರಸ್ತರಾಗಿ ಇನ್ನೆಲ್ಲಿಗೋ ಸ್ಥಳಾಂತರವಾಗುವುದರಿಂದ ತಪ್ಪಿಸಿ ಎಂದಿದ್ದರು.
  ಗೆಳೆಯ ಗಣಪತಿಯಪ್ಪರ ಮನವಿ ಪುರಸ್ಕರಿಸಿ ಟಿಬೇಟಿಯನ್ ಕ್ಯಾಂಪಿಗೆ ಮುಂಡುಗೋಡಿನಲ್ಲಿ ಜಮೀನು ಮಂಜೂರು ಮಾಡಿಸಿದ ಕಡಿದಾಳರು ಸ್ಥಳದಲ್ಲೇ ಸಾಗರ ತಾಲೂಕಿನ ಭೂ ರಹಿತ ಸ್ವಾತಂತ್ರ ಹೋರಾಟಗಾರರಿಗೆ ಕೆಂಜಿಗಾಪುರದಲ್ಲಿ ಜಮೀನು ಮಂಜೂರು ಮಾಡಿದ್ದರು.
   ಈ ಸ್ಮರಣಾರ್ಥವಾಗಿ ಕೆಂಜಿಗಾಪುರ ರಸ್ತೆಯ ಯಡೇಹಳ್ಳಿ ಸರ್ಕಾರಿ ಶಾಲಾ ಅವರಣದಲ್ಲಿ ರಂಗ ಮಂದಿರ ನಿರ್ಮಿಸಿ ಅದಕ್ಕೆ #ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪ_ರಂಗಮಂದಿರ ಎಂದು ನಾಮಕರಣ ಮಾಡಿ ಗಣಪತಿಯಪ್ಪ ದಂಪತಿಗಳಿಂದಲೇ ಉದ್ಘಾಟನೆ ಮಾಡಿಸಿದ್ದೆ ಇದು ನನ್ನ ಸಾರ್ಥಕ ಸ್ಮರಣೆಯಾಗಿ ದಾಖಲಾಗಿದೆ.
  ಈ ಬಗ್ಗೆ ಹೆಚ್ಚಿನ ಮಾಹಿತಿ ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://arunprasadhombuja.blogspot.com/2022/04/blog-no-830-1999-2000.html
  ಗಣಪತಿಯಪ್ಪರ ಸಹೋದರ ಕುರುವತ್ತಿ ತಿಮ್ಮಪ್ಪ ಮತ್ತು ಶ್ರೀಮತಿ ಮಲ್ಲಿಕಾ ( ಬೇಡಕಣಿ) ದಂಪತಿಗಳಿಗೆ ಏಕೈಕ ಪುತ್ರ ಅಣ್ಣಪ್ಪ, ಹೆಣ್ಣು ಮಕ್ಕಳು ಲಲಿತಾ, ರೇಣುಕಾ ಮತ್ತು ತ್ರಿವೇಣಿ 
  ಗಣಪತಿಯಪ್ಪರ ಸಹೋದರಿ ಕುಟುಂಬ ಸಿದ್ದಾಪುರದ ಬೇಡಕಣಿಯ ಶ್ರೀಮಂತ ಮನೆತನ, ಮಹಾತ್ಮಾ ಗಾಂಧೀಜಿ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆಸಿದ ಸಭೆಯಲ್ಲಿ ಗಾಂಧೀಜಿ ನೆರೆದ ಜನರಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಈ ಆಂದೋಲನಕ್ಕೆ ಆರ್ಥಿಕ ಸಹಾಯ ಯಾಚಿಸಿದಾಗ ಇವರ ಸಹೋದರಿ ಧರಿಸಿದ್ದ ಬಂಗಾರದ ಒಡವೆಯೆಲ್ಲ ತೆಗೆದು ಗಾಂಧೀಜಿಗೆ ಅರ್ಪಿಸಿದ್ದನ್ನು ಗಣಪತಿಯಪ್ಪನವರು ಅನೇಕ ಬಾರಿ ನೆನಪಿಸಿಕೊಂಡಿದ್ದರು, ನನ್ನ ನೆನಪು ಸರಿ ಇದ್ದರೆ ಈ ಸಹೋದರಿ ಮಗಳೇ ಮಲ್ಲಿಕಮ್ಮ ಇವರು ನಮ್ಮ ತಾಯಿಗೆ ಅತ್ಯಾಪ್ತರು ಆಗಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ