Skip to main content

Blog number 1748. ಒಂದು ಕಾಲದಲ್ಲಿ ಸಾಗರ ತಾಲ್ಲೂಕಿನ ಜನಪರ ಹೋರಾಟಗಾರರಿಗೆ ಸ್ಥಳಿಯ ಪತ್ರಿಕಾ ಸಂಪಾದಕರಿಗೆ ಅತ್ಯಾಪ್ತರಾಗಿದ್ದ ಕಾಮಾಕ್ಷಿ ಪ್ರಿಂಟರ್ ಉಲ್ಲಾಸ್ ಶೇಟ್ ಕುಟುಂಬ ನನ್ನ ಅತಿಥಿಗಳು.

#ಒಂದು_ಕಾಲದ_ಸಾಗರದ_ಕಾಮಾಕ್ಷಿ_ಪ್ರಿಂಟರ್_ಉಲ್ಲಾಸ್_ಕುಟು೦ಬ_ನನ್ನ_ಅತಿಥಿಗಳು

#ಅಕ್ಷರದ_ಮೊಳೆ_ಜೋಡಿಸುವ_ಆ_ಕಾಲದ_ಪ್ರಿಂಟಿಂಗ್_ಪ್ರೆಸ್

#ಮೂರು_ದಶಕಗಳ_ಕಾಲ_ಸಾಗರದ_ಸ್ಥಳಿಯ_ಪತ್ರಿಕೆಗಳಿಗೆ_ಜನಪರ_ಹೋರಾಟಗಳಿಗೆ_ಉಲ್ಲಾಸ್_ಬೆನ್ನೆಲುಬು_ಆಗಿದ್ದರು.


  1980 ರ ದಶಕದಲ್ಲಿ ಸಾಗರದಲ್ಲಿನ ಖ್ಯಾತ ವಕೀಲರಾದ ಮಂಜುನಾಥ ಶೆಟ್ಟರ ಮನೆ ಎದುರಿಗಿದ್ದ ಕಾಮಾಕ್ಷಿ ಪ್ರಿಂಟರ್ ಸ್ಥಳಿಯ ಪತ್ರಿಕೆಗಳು ನಿತ್ಯ ಅಚ್ಚಾಗುತ್ತಿದ್ದ ಕೇಂದ್ರವಾಗಿತ್ತು.
   ಎಲ್ಲಾ ಜನಪರ ಹೋರಾಟಗಳ ಸಂಘ ಸಂಸ್ಥೆಗಳ ಕರಪತ್ರ ಸುಂದರವಾಗಿ ಮುದ್ರಿಸಿ ಕೊಡುವ ಕೇಂದ್ರವೂ ಆಗಿತ್ತು.
   ಇದರ ಮಾಲಿಕರು ಉಲ್ಲಾಸ್ ಶೇಟ್ ಇವರು ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಪದವಿದರರು ತಮ್ಮ ಕಾಲೇಜ್ ಸಹಪಾಠಿ ಸಾಗರದ ಖ್ಯಾತ ನರಸಿಂಹ ಭಟ್ & ಕೊ ಸಂಸ್ಥೆಯ ಮತ್ತು ಲಾಲ್ ಬಹದ್ದೂರ್ ಕಾಲೇಜಿನ ಉಪನ್ಯಾಸಕರಾಗಿದ್ದ ರಮೇಶ್ ಭಟ್ ರ ಸಹೋದರಿಯನ್ನು ಪ್ರೇಮ ವಿವಾಹ ಆದವರು.
   ಈ ವಿವಾಹ 1980 ರ ದಶಕದಲ್ಲಿ ಸಾಗರದಲ್ಲಿ ದೊಡ್ಡ ಸುದ್ದಿ ಮಾಡಿತ್ತು ನಂತರ ಈ ದಂಪತಿ ಸ್ವತಂತ್ರವಾಗಿ ಬದುಕಲು ಪ್ರಿಂಟಿಂಗ್ ಉದ್ಯಮದಲ್ಲಿ ತುಂಬಾ ಕಷ್ಟ ಪಟ್ಟಿದ್ದರು.
    ಉಲ್ಲಾಸ್ ಆ ಕಾಲದಲ್ಲಿ ಪಟ್ಟ ಕಷ್ಟ ನಾನು ಕಣ್ಣಾರೆ ಕಂಡಿದ್ದೇನೆ, ಉಲ್ಲಾಸರಲ್ಲಿ ಮಾನವೀಯತೆ ಯಾವತ್ತೂ ಕಳೆದು ಹೋಗಲಿಲ್ಲ, ಅಂತಹ ಕಷ್ಟದಲ್ಲೂ ಜನಪರ ಹೋರಾಟಗಳಿಗೆ ಹಣವಿಲ್ಲದೆ ಕರಪತ್ರ ಮಾಡಿಕೊಡುತ್ತಿದ್ದ ದೊಡ್ಡ ಹೃದಯವಂತಿಕೆ ಅವರಲ್ಲಿತ್ತು ಇವರ ಸಹಾಯಕರಾಗಿ ಲೋಕೇಶ್ ಎಂಬುವವರು ಆ ದಿನಗಳಲ್ಲಿ ಕಾಮಾಕ್ಷಿ ಪ್ರಿಂಟರ್ ಲ್ಲಿದ್ದರು.
   ನಿನ್ನೆ ಉಲ್ಲಾಸ್ ದಂಪತಿಗಳು ತಮ್ಮ ಪುತ್ರ ಸೊಸೆ ಮತ್ತು ಮೊಮ್ಮಗಳ ಜೊತೆ ಚೌತಿ ಹಬ್ಬದ ಆಚರಣೆಗೆ ಬೆಂಗಳೂರಿಂದ ಸಾಗರಕ್ಕೆ ತೆರಳುವಾಗ ನನ್ನ ಕಛೇರಿಗೆ ಬಂದಿದ್ದರು.
  ಈ ದಂಪತಿಗಳು ಈಗ ಮಗ ಮತ್ತು ಸೊಸೆ ಜೊತೆಗೆ ಬೆಂಗಳೂರಲ್ಲಿ ನೆಲೆಸಿದ್ದಾರೆ ಇಬ್ಬರೂ ಬಿಪಿ ಶುಗರ್ ಯಾವುದೇ ಕಾಯಿಲೆ ಇಲ್ಲದೆ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ "ಯಾವುದೇ ಕೊರತೆ ಇಲ್ಲದಂತೆ ಮಗ ಸೊಸೆ ಸುಖವಾಗಿ ಇಟ್ಟಿದ್ದಾರೆ ಅದೇ ನಮಗೆ ನೆಮ್ಮದಿ" ಅಂದಾಗ ಅವರ ಕಣ್ಣಿನಲ್ಲಿ ಸಂತೃಪ್ತಿ ಕಂಡೆ.
   ಉಲ್ಲಾಸ್ ಬಗ್ಗೆ ಕೆಲ ವರ್ಷದ ಹಿಂದೆ ಬರೆದ ಪರಿಚಯ ಲೇಖನ ಈ ಲಿಂಕ್ ಕ್ಲಿಕ್ ಮಾಡಿ ಓದಿ
 https://arunprasadhombuja.blogspot.com/2021/01/blog-post_12.html

  ನಮ್ಮ ಮಲ್ಲಿಕಾ ವೆಜ್ ನಲ್ಲಿ ಬಿಸಿಬೇಳೆಬಾತ್ - ಗೋಬಿ ಮಂಚೂರಿ ಮತ್ತು ವೆಜ್ ತಾಲಿ ಉಣಬಡಿಸಿ ಅವರನ್ನು ಬೀಳ್ಕೊಟ್ಟೆ ಸುಮಾರು 25 ವರ್ಷದ ನಂತರದ ಇವರ ಬೇಟಿ ನನಗೆ ತುಂಬಾ ಸಂತೋಷ ನೀಡಿತು.
  ಉಲ್ಲಾಸ್ ಮಂಗಳವಾರ ಬೆಳಿಗ್ಗೆ ವಾಪಾಸ್ ಬೆಂಗಳೂರಿಗೆ ತೆರಳಲಿದ್ದಾರೆ ಅವರ ಸಂಪರ್ಕ ಸಂಖ್ಯೆ 99860 49924.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...