Blog number 3341. ವಿದಾನ ಸೌದದ ಹಿರಿಯ ಪತ್ರಕರ್ತ ಆರ್.ಟಿ. ವಿಠಲಮೂರ್ತಿ ನನ್ನ ಹೋರಾಟ ಮತ್ತು ನನ್ನ ಕಥಾ ಸಂಕಲನದ ಬಗ್ಗೆ ಬರೆದಿದ್ದಾರೆ
#ಆರ್_ಟಿ_ವಿಠಲಮೂರ್ತಿ ನನ್ನ ಬಗ್ಗೆ ಬರೆದಿದ್ದಾರೆ ನೋಡಿ.... ....ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು.... ....ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ, ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು..... #hibangalore #rtvittalmurthy #Andolana #vidanasouda #BangalorePressClub #sagar #shivamogga #bangalore #karnataka #PressMeet #PressClub #Byregowda #agriculture #govtofkarnataka #horticulture #Lokayukta #Anticorruptiondrive ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆರ್.ಟಿ. ವಿಠಲ ಮೂರ್ತಿ ರಾಜ್ಯದ ರಾಜದಾನಿ ಬೆಂಗಳೂರಿನ ವಿಧಾನ ಸೌದದಲ್ಲಿ ಈಗ ಹಿರಿಯ ಪತ್ರಕರ್ತರು, ರವಿ ಬೆಳಗೆರೆ ಅವರ ಆತ್ಮೀಯ ಗೆಳೆಯರಾಗಿದ್ದವರು. ಅವರು ನನ್ನ ಕಥಾ ಸಂಕಲನ ಓದಿ ಬರೆದ ಅಭಿಪ್ರಾಯಗಳು ಇಲ್ಲಿದೆ. ನನ್ನ ಹೋರಾಟದ ಜೀವನದಲ್ಲಿ ಅವರ ಉಪಕಾರ ಮರೆಯಲು ಸಾಧ್ಯವೇ ಇಲ್ಲ. ನನ್ನ ಹೋರಾಟವಾದ ಸಾಗರ ತಾಲ್ಲೂಕಿನ ಕೃಷಿ ಇಲಾಖೆಯ ಭ್ರಷ್ಟಾಚಾರ ಬಯಲು ಮಾಡಲು ಅಂದು ಅವರು 17 - ಸೆಪ್ಟೆಂಬರ್-1995ರಲ್ಲಿ ವೈಕುಂಠರಾಜು ಅವರ #ವಾರಪತ್ರಿಕೆ ಯಲ್ಲಿ ಬರೆದ ವರದಿ ದಿನಾಂಕ 6...