Skip to main content

Posts

Showing posts from April, 2023

Blog number 1477.ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-3.ಅಮಾವಾಸ್ಯೆಯ ನಡು ರಾತ್ರಿ ಕೊಪ್ಪಾದಿಂದ ತೀರ್ಥಳ್ಳಿ ಮಾರ್ಗದಲ್ಲಿ ಶ್ವೇತ ವಸ್ತ್ರ ದಾರಿಣಿ, ನೀಳ ಕೇಶದಾರಿ ಕಾರಿನ ಪ್ರಖರ ಬೆಳಕಲ್ಲಿ ಪಳಪಳಿಸಿದ ಅವಳ ನತ್ತಿನ ಮೂಗುತಿ ! ಅವಳಾರು?!

#ಅಮಾವಾಸ್ಯೆಯ_ಮಧ್ಯರಾತ್ರಿ_ಶ್ವೇತವಸ್ತ್ರದಾರಿಣಿ_ನೀಳಕೇಶದ_ಮೂಗಿನ_ನತ್ತಿನ_ಪಳಪಳಿಸುತ್ತಾ #ಕೊಪ್ಪ_ತೀರ್ಥಳ್ಳಿ_ರಸ್ತೆ_ಬದಿಯಲ್ಲಿ_ವೇಗವಾಗಿ_ನಡೆದವಳು_ಯಾರು ? #ಇವತ್ತಿಗೂ_ಉತ್ತರ_ಸಿಕ್ಕಿಲ್ಲ.    ಇದು ನಡೆದದ್ದು 1993ರಲ್ಲಿ ಅವತ್ತು ಅಮಾವಾಸ್ಯೆ, ಅವತ್ತು ಬೆಳಿಗ್ಗೆನೇ ತಾಳಗುಪ್ಪದ ಕೃಷ್ಣಮೂರ್ತಿ (ಅಂಬೇಡ್ಕರ್ ಸಂಘ ಇದ್ದಿದ್ದರಿಂದ ಇವರಿಗೆ ಅಂಬೇಡ್ಕರ ಕೃಷ್ಣಮೂರ್ತಿ ಅಂತ ಹೆಸರು) ಶಿವಮೊಗ್ಗದಿಂದ ಅಂಬಾಸಡರ್ ಟ್ಯಾಕ್ಸಿಯಲ್ಲಿ ಬಂದು ನನ್ನ ಕೊಪ್ಪಕ್ಕೆ ಕರೆದೊಯ್ದರು ಅಲ್ಲಿ ಪ್ರಖ್ಯಾತ ಜೋತಿಷಿ ಬಾಲಗೋಪಾಲರನ್ನು ಕರೆದುಕೊಂಡು ಕುಂದಾಪುರದ ಹಟ್ಟಿಯಂಗಡಿ ವಿನಾಯಕ ದೇವಸ್ಥಾನದಲ್ಲಿ ನಡೆಯುವ ವಿಶೇಷ ಗಣಹೋಮಕ್ಕೆ ಭಾಗವಹಿಸಲು ಹೋಗಿದ್ದೆವು.   ಹಟ್ಟಿಯಂಗಡಿಯಲ್ಲಿ ಹೋಮ ಹವನ ಮುಗಿಸಿ ಪುನಃ ಜೋತಿಷಿ ಬಾಲಗೋಪಾಲರನ್ನು ಕೊಪ್ಪದ ಅವರ ಮನೆಗೆ ತಲುಪಿಸುವಾಗ ಮಧ್ಯರಾತ್ರಿ ಒ0ದು ಗಂಟೆ ದಾಟಿತ್ತು.   ಅವರನ್ನು ಮನೆಗೆ ತಲುಪಿಸಿ ನನ್ನ ಮನೆಗೆ ತಲುಪಿಸಲು ಅಂಬಾಸಡರ್ ಟ್ಯಾಕ್ಸಿ ಕೊಪ್ಪದಿಂದ ತೀಥ೯ಹಳ್ಳಿ ಮಾರ್ಗವಾಗಿ ಹೊರಟಿತು.   ಟ್ಯಾಕ್ಸಿ ಡ್ರೈವರ್ ನಿದ್ದೆ ಮಾಡಬಾರದೆಂದು ನಾನು ಮುಂದಿನ ಸೀಟಲ್ಲಿ ರಸ್ತೆ ಸವೆಸಲು ಡ್ರೈವರ್ ಗೆ ಒಂದೊಂದು ಪ್ರಶ್ನೆ ಉರಳಿಸುವುದು ಮಾಡುತ್ತಿದ್ದೆ, ಹಿರಿಯ ಗೆಳೆಯರು ಹಿಂದಿನ ಸೀಟಲ್ಲಿ ಕುಳಿತಲ್ಲೇ ಅರೆ ಬರೆ ನಿದ್ದೆ ಮಾಡುತ್ತಿದ್ದರು.   ಕೊಪ್ಪ ದಾಟಿ ಕೆಲವು ಕಿಲೋ ಮೀಟರ್ ದಾಟಿರಬೇಕು ಕಾರಿನ ಬೆಳಕಿಗೆ ಕಣ್ಣು ಕುಕ್ಕುವಂತ

Blog number 1476. ಕೊರಾನಾ ಲಾಕ್ ಡೌನ್ ಡೈರಿ - 2020. ಲೆಟರ್ ನಂಬರ್ 28 (1 - ಮೇ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_28 #ದಿನಾ೦ಕ_02_ಮೇ_2020                        ಈ ಕೊರಾನಾ ಸಂಕಷ್ಟದಲ್ಲಿ       ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ.           #ಡಾ_ಟಿ_ಎಂ_ಎ_ಪೈ    ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ, ಸಿಂಡಿಕೇಟ್ ಬ್ಯಾ೦ಕ್, ಉದಯವಾಣಿ ಪತ್ರಿಕೆ ಇವತ್ತು ಸಾವಿರಾರು ಕೋಟಿಯ ಪ್ರತಿಷ್ಟಿತ ಸಂಸ್ಥೆ.   ಜನ ಹೇಳುವುದು ಇದು ಕಲ್ಲಿನ ಬೋಳು ಗುಡ್ಡ ಮಣ್ಣುಪಾಲು ಅಂತಿದ್ದರು ಅಲ್ಲಿ ಈ ಡಾಕ್ಟರ್ ಆಸ್ಪತ್ರೆ ಮಾಡುತ್ತಾರೆ ಅಂದಾಗ ಎಲ್ಲರೂ ಹಾಸ್ಯ ಮಾಡಿದ್ದರಂತೆ.   ಇವತ್ತು ಇದು ಅಂತರಾಷ್ಟ್ರಿಯವಾಗಿ ಘನತೆ ಹೊಂದಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಕೇಂದ್ರವೂ ಆಗಿದೆ.   ಕನಾ೯ಟಕ ರಾಜ್ಯದ ಮ೦ಗನ ಕಾಯಿಲೆಗೆ (kFD) ಇಲ್ಲಿ ಹೋದರೆ ಮಾತ್ರ ಬದುಕಿ ಬರುತ್ತಾರೆಂದರೆ ಇಲ್ಲಿನ ಚಿಕಿತ್ಸೆ ಬಗ್ಗೆ ಹೆಮ್ಮೆ ಪಡಬೇಕು.   ಕೊರಾನ ಕಾಯಿಲೆ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆ ಸಕಾ೯ರಕ್ಕೆ ಬಿಟ್ಟುಕೊಟ್ಟ ಮೊದಲ ಸಂಸ್ಥೆ ಇದು.   ಈಗಲೂ ಇಲ್ಲಿ ಆಥಿ೯ಕವಾಗಿ ದುಬ೯ಲರಿಗೆ ವಿಶೇಷ ಯೋಜನೆ ಪ್ಯಾಕೇಜ್ ಮತ್ತು ಆರೋಗ್ಯ ಕಾಡ್೯ ಗಳ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುತ್ತಾರೆ.   ಇಲ್ಲಿನ ಸಾಮಾನ್ಯವಾಡ್೯ಗಳು ಬೇರೆ ಆಸ್ಪತ್ರೆಗಳ ವಿಶೇಷವಾಡ್೯ ಗೆ ಸಮವಾಗಿದೆ, ಇಂದಿನ ಕಾಪೊ೯ರೇಟ್ ಆಸ್ಪತ್ರೆ

Blog number 1475. ಆನಂದಪುರಂ ಇತಿಹಾಸ ಭಾಗ-5

ಆನಂದಪುರಂ ಇತಿಹಾಸ ಭಾಗ_5. #ವಿದ್ಯಾಮಂತ್ರಿಗೆ_ವಿದ್ಯೆ_ಕಲಿಸಿದ_ಶಾಲೆ #ರಾಜ್ಯದ_ಶಿಕ್ಷಣಮಂತ್ರಿ_ಆಗಿದ್ದ_ಬದರಿನಾರಾಯಣ_ಆಯ್ಯಂಗಾರರು_ಓದಿದ್ದ #ಸಕಾ೯ರಿ_ಕಿರಿಯಪ್ರಾಥಮಿಕ_ಶಾಲೆಗೆ_ಈಗ_122_ವರ್ಷ.   #ಆನಂದಪುರದ_ಜಾಮಿಯ_ಮಸೀದಿ_ಎದುರಿನ_ಶಾಲೆ   ಆನಂದಪುರಂನ ಬದರಿನಾರಾಯಣ ಅಯ್ಯಂಗಾರರು ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ರಾಜ್ಯದ ರಾಜಕಾರಣದಲ್ಲಿ ತಮ್ಮ ಚಾಪು ಮೂಡಿಸಿದವರು ಇವರಿಂದ ಇವರ ಹುಟ್ಟೂರು ಆನಂದಪುರಂ ಕೂಡ ಪ್ರಸಿದ್ದಿ ಪಡೆಯಲು ಕಾರಣರಾದರು.   ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆನಂದಪುರದ ಹಾಲಿ ಜಾಮಿಯ ಮಸೀದಿಯ ಎದುರಿನ ಸಕಾ೯ರಿ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಮಾಡಿದ್ದು ಇತಿಹಾಸ.   ಇದು ಬ್ರಿಟೀಶ್ ಆಡಳಿತ ಕಾಲದಲ್ಲಿ ಯಡೇಹಳ್ಳಿ ಪ್ರವಾಸಿ ಮಂದಿರ ನಿರ್ಮಾಣದ ಸರಿ ಸುಮಾರು ಒಂದೇ ಕಾಲದಲ್ಲಿ ನಿರ್ಮಾಣ ಆಗಿರ ಬಹುದು.    ಈ ಶಾಲೆಗೆ 1999 ರಲ್ಲಿ ನೂರು ವರ್ಷ ಆಗಿತ್ತು ಆಗ ಈ ಶಾಲೆಯ ಶತಮಾನೋತ್ಸವ ಆಚರಿಸಬೇಕು, ವಿಶೇಷ ಅಂದರೆ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ನಮ್ಮ ಊರಿನ ಬದರಿನಾರಾಯಣ ಅಯ್ಯಂಗಾರರು ಈ ರಾಜ್ಯದ ವಿದ್ಯಾ ಮಂತ್ರಿ ಆಗಿದ್ದು ಎಂದು ನಾನು ಆಗ ಜಿಲ್ಲಾ ಪಂಚಾಯತ್  ಸದಸ್ಯನಾಗಿದ್ದಾಗ ಪ್ರಯತ್ನ ಮಾಡಿದಾಗ ಅದನ್ನು ಉದ್ದೇಶಪೂರ್ವಕವಾಗಿ ನಡೆಯದಂತೆ ತಡೆಯುವ ಪ್ರಯತ್ನದಿಂದ ನಾನು ಈ ಮಹತ್ತರ ಕಾಯ೯ಕ್ರಮ ನಡೆಸಲು ಸಾಧ್ಯವಾಗಲಿಲ್ಲ.   ಈಗ ಈ ಶಾಲೆಗೆ ಬಹುಶಃ 122 ನೇ ವಷಾ೯ಚಾರಣೆ.   ಈ ಶಾಲೆಯಲ್ಲಿ ಏ.ಕೆ.ಶೇಷಾಚಾರ್ (ಆ

Blog number 1474. ಮಾವಿನ ಅಪ್ಪೆಮಿಡಿ ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲವೇ ಇಲ್ಲ ಯಾಕೆ

https://youtu.be/6cQgjn0SC2k #ಈ_ವರ್ಷ_ಶಿವಮೊಗ್ಗ_ಜಿಲ್ಲೆಯಲ್ಲಿ_ಅಪ್ಪೆಮಿಡಿ_ಇಲ್ಲವಾ? #ಪರಿಸರ_ಅಸಮತೋಲನದಿಂದ_ಮಾವಿನ_ಹೂವು_ವಿಳಂಭ #ಅಪ್ಪೆ_ಮಿಡಿಗೆ_ಜಿಐ_ಟ್ಯಾಗ್_12_ವಷ೯ದ_ಹಿಂದೆಯೇ_ದೊರಕಿದೆ. #ಇನ್ನೂ_ಹದಿನೈದು_ದಿನ_ಕಾಯಬೇಕು_ಜೀರಿಗೆ_ಅಪ್ಪಮಿಡಿಗೆ . #ಕಳೆದ_ವಷ೯_ಮಾರ್ಚ್_ಕೊನೆಗೆ_ಅಪ್ಪೆಮಿಡಿ_ಸಿಕ್ಕಿತ್ತು. #ವಷ೯_ಪೂರ್ತಿ_ಊಟದ_ಜೊತೆ_ಉಪ್ಪಿನಕಾಯಿ_ನನಗೆ_ಬೇಕೇ_ಬೇಕು    ನಮ್ಮ ಭಾಗದಲ್ಲಿ ಅಪ್ಪೆಮಿಡಿ ಕೊಯ್ದು ತಂದು ಮಾರಾಟ ಮಾಡುವ ಪ್ರಸಿದ್ಧರನ್ನು ಪೆಬ್ರುವರಿ ತಿಂಗಳಿಂದ ನೆನಪಿಸುತ್ತಿದ್ದೆ ಅವರೆಲ್ಲ ಇನ್ನೂ ಮಾವಿನ ಹೂವು ಆಗಿಲ್ಲ ಅನ್ನುತ್ತಿದ್ದರು.    ಮಾರ್ಚ್ ತಿಂಗಳಲ್ಲಿ ಪುನಃ ನೆನಪು ಮಾಡಿದಾಗ ಅವರು ಹೇಳಿದ್ದು ಈ ಬಾರಿ ಒಂದೇ ಒಂದು ಮರದಲ್ಲೂ ಮಾವಿನ ಮಿಡಿ ಬಂದಿಲ್ಲ ಸಿಕ್ಕಿದರೆ ಮೊದಲಿಗೆ ನಿಮಗೆ ತಂದು ಕೊಡದೆ ಇರುವುದಿಲ್ಲ ಅಂದರು.    ಕಳೆದ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಅಪ್ಪೆಮಿಡಿ ಚೆಟ್ಟು ಮಾಡಿ ಕಾರ ಹಾಕಿದ್ದ ನೆನಪು ಈ ವರ್ಷ ಏಪ್ರಿಲ್ 30 ಆದರೂ ಅಪ್ಪೆಮಿಡಿ ಇಲ್ಲ.   ಬೆಳಗಾಂ ಬಾಗದಲ್ಲಿ ಮಾವಿನ ಹಣ್ಣಿನ ತೋಟದಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಕಳೆದ ತಿಂಗಳೇ ಬಂದಾಗಿದೆ ಸಮೀಪದ ರಿಪ್ಪನ್ ಪೇಟೆ ಮಾವಿನ ಅಪ್ಪೆಮಿಡಿ ಮಾರಾಟದ ಕೇಂದ್ರವಾದರೂ ಅಲ್ಲಿ ಪ್ರತಿ ವರ್ಷದಂತೆ ಮಾರಾಟಕ್ಕೆ ಅಪ್ಪಿ ಮಿಡಿ ಬರುತ್ತಿಲ್ಲ.     ಪಕ್ಕದ ಜಿಲ್ಲೆಯ ಲಭ್ಯವಿರುವ ಅಪ್ಪೆಮಿಡಿ ಮಾತ್ರ ಇಲ್ಲಿಗೆ ಮಾರಾಟಕ್ಕೆ ಬರುತ್ತದೆ

Blog number 1473. ರಾಜಕಾರಣದ ಒಳಗುಟ್ಟು ಭಾಗ - 16.ಲೋಕಸಭಾ ಚುನಾವಣೆ ಅಂಕಣ 2019 (30- ಏಪ್ರಿಲ್ -2019)

# ರಾಜಕಾರಣದ ಒಳಗುಟ್ಟು # ಲೋಕಸಭಾ ಚುನಾವಣಾ ಅಂಕಣ  ಭಾಗ - 16.      ಕೋಲಾರ ಜಿಲ್ಲೆಯ ರಾಜಕಾರಣ ಬದಲಾಯಿಸಲಿರುವ ಕೊತ್ತೂರು ಮಂಜುನಾಥ್ ಎಂಬ ರಾಜಕಾರಣದ ಬೆಂಕಿ ಚೆಂಡು.     ಈ ಸಾರಿ ಕೋಲಾರದ ಲೋಕಸಭಾ ಚುನಾವಣೆಯಲ್ಲಿ 7 ನೇ ಬಾರಿ ಸಂಸದರಾಗುವ ಅವಕಾಶ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪರಿಗೆ  ಅಷ್ಟು ಸುಲಭವಾಗಿಲ್ಲ.   ಇವರ ಎದುರು ದಿಡೀರ್ ಆಗಿ ಬಿಜೆಪಿಯಿಂದ ಬೆಂಗಳೂರಿನ ಕಾಪೊ೯ರೇಟರ್ S. ಮುನಿಸ್ವಾಮಿಯವರನ್ನ ನಿಲ್ಲಿಸಲಾಗಿದೆ.    ಕಾಂಗ್ರೇಸ್ ನವರು ಮೈತ್ರಿ ದಮ೯ ಮುರಿದಿದ್ದಾರೆ, ಇದಕ್ಕೆ ದೀಘ೯ವಾದ ಇತಿಹಾಸವು ಇದೆ.   ಕೆ.ಹೆಚ್.ಮುನಿಯಪ್ಪ ಸತತ ಲೋಕಸಭೆಗೆ ಮೀಸಲು ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು ಆದರೆ ಇಡೀ ಜಿಲ್ಲೆಯಲ್ಲಿ ಬೇರಾರನ್ನು ಬೆಳೆಸಿದವರಲ್ಲ, ಸ್ವಂತ ಆಹ೯ತೆಯಿಂದ ಕಾಂಗ್ರೇಸ್ ರಾಜಕಾರಣದಲ್ಲಿ ಬೆಳೆದರೆ ಅವರ ರಾಜಕೀಯ ಜೀವನ ಮುಗಿಸುವ ತನಕ ವಿರಮಿಸದ ದುಷ್ಟ ರಾಜಕಾರಣ ಇವರದ್ದು.   2013 ರಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರ ( ಮೀಸಲು ಕ್ಷೇತ್ರ)ದಿಂದ ಕಾಂಗ್ರೇಸ್ನಿಂದ ಸ್ಪದಿ೯ಸಲು ಕೊತ್ತುರು ಮಂಜುನಾಥ ಇಡೀ ಕ್ಷೇತ್ರ ಸ೦ಘಟನೆ ಮಾಡುತ್ತಾರೆ, ಅವರ ಸಂಘಟನಾ ಚತುರತೆ, ಜನಪ್ರಿಯತೆ ನೋಡಿದವರು ಮುನಿಯಪ್ಪರಿಗೆ ಚಾಡಿ ಚುಚ್ಚುತ್ತಾರೆ, ಮOಜುನಾಥಗೆ ಮುಳಬಾಗಿಲಿಂದ ಕಾಂಗ್ರೇಸ್ ನಿಂದ ಶಾಸಕನಾಗಿ ಮಾಡಿದರೆ ಮುಂದೆ ಅವರು ನಿಮ್ಮ ಲೋಕಸಭಾ ಸ್ಥಾನಕ್ಕೆ ಚ್ಯುತಿ ತರುತ್ತಾರೆ ಅಂತ, ಇದರಿಂದ ಮಂಜುನಾಥಗೆ ಕಾಂಗ್

Blog number 1472. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 26 (30 ಏಪ್ರಿಲ್ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_26 #ದಿನಾ೦ಕ_30_ಏಪ್ರಿಲ್_2020     #ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?      ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ  ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.    ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.   ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.   ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.   ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.   ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂದ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಹಾಗೆಯೆ ಲಾಕ್ ಡೌನ್ ಮು೦ದುವರಿಸಬೇಕಾದ್ದರಿ೦ದ 1ನೇ ತರಗತಿಯಿ೦ದ

Blog number 1471. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 27 (1 - ಮೇ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_27 #ದಿನಾ೦ಕ_01_ಮೇ_2020     #ಭಾರತ_ನವೀಕರಣಗೊಂಡು_ಮುOದಿನದಿನದಲ್ಲಿ_ಬಲಿಷ್ಟ್_ಭಾರತ_ಆಗಿ_ಹೊರಹೊಮ್ಮಲಿದೆ.       ಕೊರಾನ ವೈರಸ್ ನಿOದ ಇಡೀ ದೇಶ ಸ್ಥಬ್ದ, ಆಥಿ೯ಕ ಸಂಕಷ್ಟದಲ್ಲಿ ಸಾವು ನೋವು, ಉದ್ಯೋಗ ನಷ್ಟ ಇವುಗಳು ಯುದ್ಧ ಪೀಡಿತ ದೇಶಗಳಿಗಿಂತ ಸಮಸ್ಯೆ ಬೇರೆ ಆಗಿಲ್ಲ.    ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ ಆಶಾಭಾವನೆ ಇದೆ.     ಮಾಚ್೯ 25 ರಿಂದ ಲಾಕ್ ಡೌನ್ ಆಗಿದ್ದರಿಂದ ದೇಶ ಆಥಿ೯ಕ ಸಂಕಷ್ಟಕ್ಕೆ ಒಳಗಾದರೂ ಈ ಸಾಂಕ್ರಮಿಕ ರೋಗ ಹರಡುವುದನ್ನ ಒಂದು ರೀತಿಯಲ್ಲಿ ತಡೆಯಲಾಯಿತು.    ಜಪಾನ್ ದೇಶದ ಮೇಲೆ ಅಣು ಬಾಂಬ್ ಬಿದ್ದು ಆದೇಶ ಸಾಮಾಜಿಕ, ಆಥಿ೯ಕ ಮತ್ತು ರಾಜಕೀಯ ಸಂಕಷ್ಟಕ್ಕೆ ಈಡಾದದ್ದು ನಂತರ ಸ್ವಯಂ ಪ್ರೇರಣೆಯಿ೦ದ ಆದೇಶ ಸಂಪೂಣ೯ ಪುನರ್ ನಿಮಾ೯ಣವಾಗಿ ಇಡೀ ವಿಶ್ವಕ್ಕೆ ಮಾದರಿ ಆಗಿದೆ.    ಬೃಹತ್ ಭಾರತ ದೇಶ ಈ ಆರೋಗ್ಯ ತುತು೯ ಪರಿಸ್ಥಿತಿಯಿಂದ ಎಲ್ಲಾ ರೀತಿಯ ಸಂಕಷ್ಟದಲ್ಲಿದೆ ಆದರೆ ಮುಂದಿನ ದಿನದಲ್ಲಿ ಇದನ್ನೆಲ್ಲ ಮೀರಿ ವಿಶ್ವದಲ್ಲೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿದೆ.   ದೇಶದ ಆಥಿ೯ಕ ಸ್ಥಿರತೆ, ಕೃಷಿ, ಕೈಗಾರಿಕೆಗಳು ಮತ್ತು ತಂತ್ರಜ್ಞಾನದ ಆಧುನೀಕರಣದಿಂದ ಬದಲಾಗಲಿದೆ.ದೇಶದ ಆರೋಗ್ಯ, ಶಿಕ್ಷಣ, ಮಾರುಕಟ

Blog number 1470. ಆನಂದಪುರಂ ಇತಿಹಾಸ ಭಾಗ-4

# ಆನಂದಪುರಂ ಇತಿಹಾಸ ಭಾಗ_4 #ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.  ಮೊದಲ ಪತ್ನಿ ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಸುಂದರಮ್ಮ ಅವರ ಹೆಸರು ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.      ಮೊದಲ ಪುತ್ರ ಜಗನಾಥ ಅಯ್ಯಂಗಾರರು  ಮೃತರಾಗುತ್ತಾರೆ. ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.     ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ್ರೋತ್ಸವಕ್ಕೆ ಬಂದು ತಮ್ಮ ಭಕ್ತಿ ಸಮಪಿ೯ಸುತ್ತಾರೆ ಮತ್ತು ಇದಕ್ಕಾಗಿ ಕೆಲ ಲಕ್ಷ ರೂಪಾಯಿ ವ್ಯಯಿಸುತ್ತಾರೆ.     ವೆಂಕಟಚಲಯ್ಯಂಗಾರರ ಮಕ್ಕಳು ಮೊಮ್ಮಕ್ಕಳು ಕುಟುಂಬ ಸಮೇತ ಪ್ರತಿ ತಿಂಗಳು ಆನಂದಪುರಂಗೆ ಬರುತ್ತಾರೆ ಮತ್ತು ವಾರಗಟ್ಟಲೆ ಇಲ್ಲೇ ಉಳಿಯುತ್ತಾರೆ,ಮೂಲ ಮನೆ ಮತ್ತು ದೇವಾಲಯ ತುಂಬ

Blog number 1469. ನಮಗೆ ನಾವೇ ರೋಗ ಮುಕ್ತ ಉಪಾಯ ಪಾಲಿಸೋಣ.(30 April 2021))

#ನಾವು_ಜನಸಾಮಾನ್ಯರು_ನಮ್ಮ_ಕೈ_ನಮ್ಮ_ತಲೆಮೇಲೆ #ನಮಗೆ_ನಾವೇ_ರೋಗಮುಕ್ತ_ಉಪಾಯಗಳು_ಪಾಲಿಸೋಣ #ಸಕಾ೯ರ_ರಾಜಕೀಯ_ಪಕ್ಷ_ಎಲ್ಲಾ_ಚಿಂತಿಸಬೇಡಿ.   ಕಳೆದ ವರ್ಷ ಕೊರಾನಾ ಮೊದಲ ಅಲೆ ಇಷ್ಟು ಕತರ್ ನಾಕ್ ಆಗಿರಲಿಲ್ಲ ಆದರೆ ಸರ್ಕಾರ ಮತ್ತು ಜನತೆ ಹೆಚ್ಚು ಜಾಗೃತಿ ವಹಿಸಿದೆವು ಆಗ ಸ್ಯಾನಿಟೈಸರ್, ಮಾಸ್ಕಗಳು ತುಂಬಾ ಕೊರತೆ ಇತ್ತು. ಆದರೂ ನಾವೆಲ್ಲ ಗೆದ್ದೆವು.   ಈ ವರ್ಷದ ಕೊರಾನಾ ಎರಡನೆ ಅಲೆ ಅತ್ಯಂತ ಅಪಾಯಕಾರಿ ಈಗಾಗಲೇ ರೋಗ ಪೀಡಿತರಿಗೆ ದೇಶದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಜಾಗ ಖಾಲಿ ಇಲ್ಲ. ಆದರೆ ವ್ಯಾಕ್ಸಿನ್ ಬಂದಿದೆ, ಮಾಸ್ಕ ಮತ್ತು ಸ್ಯಾನಿಟೈಸರ್ ಗೆ ಕೊರತೆ ಇಲ್ಲ.   ಜೀವ ಕಳೆದುಕೊಂಡವರ ಅಂತ್ಯಕ್ರೀಯೆ ಮಾಡಲೂ ಸ್ಮಶಾನದಲ್ಲಿ ಸರತಿ ಸಾಲುಗಳಿದೆ ಎರಡರಿಂದ ಮೂರು ದಿನ ಅಂತ್ಯಸಂಸ್ಕಾರಕ್ಕೆ ಕಾಯಬೇಕಾಗಿದೆ.   ಹಣ, ಅಧಿಕಾರ ಮತ್ತು ಪ್ರಭಾವ ಇದ್ದರೂ ಬದುಕಲು ಸಾಧ್ಯವಿಲ್ಲ ಅಂತ ಸಾವು ನೋವಿನ ಸುದ್ದಿ ಕೇಳುತ್ತಲೇ ಇದೆ.     ಈ ಸಂದಭ೯ದಲ್ಲಿ ನಾವು ಈ ಸಕಾ೯ರಗಳನ್ನು ಅವುಗಳ ನಡೆಸುವ ಪಕ್ಷಗಳನ್ನು ಅವುಗಳ ಕ್ರೀಯಾಶೀಲತೆ ಅಥವ ಕರ್ತವ್ಯ ಲೋಪ ವಿಮರ್ಶೆ ಮಾಡುತ್ತಲೋ, ವ್ಯಾಕ್ಸಿನ್ ಬಗ್ಗೆ ಯೋಚಿಸುತ್ತಾ ಕುಳಿತು ಕೊಳ್ಳದೆ ನಮ್ಮ ಕುಟುಂಬದ ಆರೋಗ್ಯ ಕವಚ ನಿರ್ಮಿಸಿಕೊಂಡು ಬದುಕುವ ಬಗ್ಗೆ ಹೆಚ್ಚು ಯೋಚಿಸಬೇಕು.   #ನಮ್ಮ_ಕುಟುಂಬದ_ಆರೋಗ್ಯ_ಕವಚ   1. ತಕ್ಷಣದಿಂದ ನಿಮ್ಮ ನಿಮ್ಮ ಮನೆಯ ಗೇಟಿಗೆ ಬೀಗ ಹಾಕಿ ಯಾರೇ ಬರಲಿ, ಸಂಬಂದಿಗಳೇ ಬರಲಿ ಮನೆಯ

Blog number 1468. ಹುಳಿಗಳ ರಾಜ ಅಮಟಿ ಕಾಯಿ ಅದರ ಬಹು ಉಪಯೋಗಿ ಖಾದ್ಯಗಳು.

#ಹುಳಿಯ_ರಾಜ_ಅಮಟೆಕಾಯಿ #ನಮ್ಮ_ಮನೆಯ_ಅಮಟೆಕಾಯಿ_ಮರ_ಹೇಳುತ್ತದೆ_ಗೆಳೆತನ_ಕಥೆ #ವಿವಿದ_ಹಂತದ_ಅಮಟೆಕಾಯಿ_ಉಪ್ಪಿನಕಾಯಿಗಳು #ಹುಳಿ_ಸಿಹಿಯ_ಉಪ್ಪಿನಕಾಯಿ_ಹೀಗೆ_ತರಹಾವಾರಿ_ರುಚಿಯ_ಖಾದ್ಯಗಳು     ನಮ್ಮ ಮನೆಯ ಅಮಟೆಕಾಯಿ ಮರ ನನ್ನ ಮತ್ತು ನನ್ನ ಊರಿಗೆ 6 ಕಿಮಿ ದೂರದ ಘಂಟಿನ ಕೊಪ್ಪದ ಸ್ಟಾಮಿ ರಾವ್ ಗೆಳೆತನದ ಖಾಯಂ ನೆನಪಿನ ಮರ.    ಘಂಟಿನ ಕೊಪ್ಪದ ಹಿರೇನಾಯಕರ ಪುತ್ರ ಸ್ವಾಮಿ ರಾವ್ ಅವರ ಮನೆಯ ಅಮಟೆಕಾಯಿ ಮರದ ರೆಂಬೆ ತಂದು ನನ್ನ ಮನೆ ಹಿತ್ತಲಲ್ಲಿ ಅವರೇ 1997 ರಲ್ಲಿ ನಟ್ಟಿದ್ದರು ಅದು ಮೊದಲ ಫಸಲು ನೀಡಿದಾಗ ಅವರ ಮನೆಗೆ ಕಳಿಸಿದ್ದೆ.   ಈಗ ಸ್ವಾಮಿ ರಾವ್ ಇಹಲೋಕ ತ್ಯಜಿಸಿದ್ದಾರೆ ಆದರೆ ಅವರ ನೆನಪು ಸದಾ ಹಸಿರಾಗಿಡುವ ಅಮಟೆಕಾಯಿ ಮರ ಮತ್ತು ಅದರ ರೆಂಬೆಗಳನ್ನು ನನ್ನ ರಬ್ಬರ್ ತೋಟದ ಅಂಚಿನಲ್ಲಿ ನಾಟಿ ಮಾಡಿದ್ದರಿಂದ ಅಲ್ಲೂ ಪಸರಿಸಿದೆ.    ಮಾವಿನಕಾಯಿ ಮಿಡಿ ಆಗುವ ಕಾಲಕ್ಕೆ ಅಮಟೆಕಾಯಿ ಮಿಡಿಗಳು ಸಿಗುತ್ತದೆ ನಂತರ ವಿವಿದ ಹಂತದ ಬೆಳವಣಿಗೆಯ ಅಮಟೆಕಾಯಿ  ಮುಂದಿನ ಭೂಮಿ ಹುಣ್ಣಿಮೆ ತನಕ ಹಣ್ಣಾಗಿ ಸಿಗುತ್ತದೆ.    ಅಮಟಿ ಕಾಯಿಯ ಮಿಡಿ, ಹೋಳು, ಕೊಚ್ಚು ಈ ರೀತಿ ವಿವಿದ ಉಪ್ಪಿನ ಕಾಯಿ, ಅಮಟಿ ಕಾಯಿ ಬೆಳೆದು ಗೊರಟಾದಾಗ ಸಿಹಿ ಉಪ್ಪಿನಕಾಯಿ, ಮೇಲೋಗರ ಮಾಡಿದರೆ ಅಮಟೆಕಾಯಿ ಚಿಗುರು - ಹೂವಿನಿಂದ ಚಟ್ನಿ, ಗೊಜ್ಜು, ತಂಬುಳಿ ಆಗುತ್ತದೆ.    ಕೆಸುವಿನ ಸೊಪ್ಪು, ಹುರುಳಿ ಸಾರ್ ಮತ್ತು ಹಾಗಲ ಕಾಯಿ ಖ

Blog number 1467.ಆನಂದಪುರಂ ಇತಿಹಾಸ ಭಾಗ-3, ಕನಕಮ್ಮಳ್ ಆಸ್ಪತ್ರೆ

#ಬಾಗ_3                    #ಕನಕಮ್ಮಾಳ್_ಆಸ್ಪತ್ರೆ #ಅಯ್ಯಂಗಾರ್_ಕುಟುಂಬ_ಆನಂದಪುರಂ_ನಲ್ಲಿ_ಸ್ಥಾಪಿಸಿದ_ಆಸ್ಟತ್ರೆ. #ಈ_ಆಸ್ಪತ್ರೆ_ನಿಮಾ೯ಣದ_ಹಿಂದಿದೆ_ಒಂದು_ಮುಖ್ಯ_ಕಾರಣ        ರಾಮಕೃಷ್ಣ ಅಯ್ಯಂಗಾರರ ದಮ೯ ಪತ್ನಿ ಶೀಮತಿ ಕನಕಮ್ಮಾಳ್ ಅನಾರೋಗ್ಯದಿಂದ ಮರಣಿಸುತ್ತಾರೆ ಇದರಿಂದ ರಾಮಕೃಷ್ಣ ಅಯ್ಯಂಗಾರರು ತುಂಬಾ ದುಃಖಿತರಾಗುತ್ತಾರೆ, ಪತ್ನಿ ಕನಕಮ್ಮಾಳ್  ಅವರ ಆಭರಣ ಮಾರಾಟ ಮಾಡುತ್ತಾರೆ.      ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ದೊಡ್ಡ ಆಸ್ತಿ ಜಮೀನು ತೋಟ ಖರೀದಿಸುತ್ತಾರೆ.      ಆದರೆ ಇದು ರಾಮಕೃಷ್ಣ ಅಯ್ಯಂಗಾರರಿಗೆ ಸಮಾದಾನ ತರುವುದಿಲ್ಲ, ಮುದ್ದಿನ ಮಡದಿಯ ಹೆಸರು ಚಿರಸ್ಥಾಯಿ ಆಗುವಂತೆ ಮಾಡಬೇಕೆಂಬ ಅದಮ್ಯ ಆಸೆ ಅವರಲ್ಲಿ ಚಿಗುರೊಡೆದಿರುತ್ತದೆ.    ಹುಣಸಳ್ಳಿಯಲ್ಲಿ ಖರೀದಿಸಿದ್ದ ಆಸ್ತಿಯನ್ನು (ಜಮೀನು, ತೋಟ ಮನೆ) ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರುತ್ತಾರೆ, ಈಗಿನ ಆನಂದ ಪುರದಿಂದ ಬಟ್ಟೆಮಲ್ಲಪ್ಪ ರಸ್ತೆಯಲ್ಲಿ ಎಡ ಭಾಗದ ಹುಣಸಳ್ಳಿ ಶಾಲೆ ಅಕ್ಕ ಪಕ್ಕದ ಈ ಜಮೀನು ನೋಡ ಬಹುದು.   ಇದನ್ನು ಖರೀದಿಸಿದ ಸ್ವಾಮಿ ಗೌಡರ ಮಗ ಚಂದ್ರಶೇಖರ ಗೌಡರು ಆನಂದಪುರದಲ್ಲಿ ಪ್ರೌಡ ಶಾಲಾ ಶಿಕ್ಷಕರಾಗಿ, ನಂತರ ಹೊಸನಗರ ತಾಲ್ಲೂಕ್ ಬೋಡ್೯ ಅಧ್ಯಕ್ಷರಾಗಿ, ಒಂದು ಅವದಿಗೆ ಹೊಸನಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರೂ ಆಗಿ ಕಾರ್ಯನಿವ೯ಹಿಸಿದ ಸಜ್ಜನ ಜನಾನುರಾ

Blog number 1466. ಲೋಕ ಸಭಾ ಚುನಾವಣೆ ಅ೦ಕಣ 2019. ಭಾಗ - 15 (29- ಏಪ್ರಿಲ್ - 2019)

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ  ಭಾಗ - 15.  ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ್ದು ಕನಾ೯ಟಕದ ವಿಚಿತ್ರ ರಾಜಕಾರಣಕ್ಕೆ ಸಾಕ್ಷಿ.   ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಗೆದ್ದ ಕ್ಷೇತ್ರ ಹಾಲಿ ಬಿಜೆಪಿಯ ಶೋಭಾ ಕರOದ್ಲಾಜೆ ಸಂಸದರು.   ಈ ಕ್ಷೇತ್ರ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸ್ಪದೆ೯ಯ ಸಂದಭ೯ದಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.   ಬಿಜೆಪಿಯ ಆಂತರಿಕ ಸಂಘಟನೆ ಶೋಭಾ ಕರOದ್ಲಾಜೆ ವಿರುದ್ಧ ಇತ್ತು Go Back Shoba ಚಳವಳಿ ಕೂಡ ಪ್ರಾರಂಭ ಆಗಿತ್ತು ಈ ಸಂದಭ೯ದಲ್ಲಿ ಶೋಭಾ ಬದಲಿಸಿ ಜಯಪ್ರಕಾಶ್ ಹೆಗ್ಗಡೆಗೆ ಅವಕಾಶ ನೀಡಿದರೆ ಸುಲಭ ಜಯ ಎಂದು ಜಯಪ್ರಕಾಶರ ಪರವಾಗಿ ಲಾಬಿ ನಡೆದರೂ ಯಡೂರಪ್ಪ ಶೊಭಾರಿಗೆ ಟಿಕೇಟ್ ಕೊಡಿಸಿದರು.  ಈ ಸಂದಭ೯ದಲ್ಲಿ ಕಾಂಗ್ರೇಸ್ನಿಂದ ಯಾರೇ ಸ್ಪದಿ೯ಸಿದರು ಗೆಲ್ಲುತ್ತಾರೆOಬ ವಾತಾವರಣ ಇದ್ದಾಗಲೇ ಜೆಡಿಎಸ್ ಇಲ್ಲಿನ ಸೀಟ್ ಪಡೆಯಿತು.  ಆದರೆ ಜೆಡಿಎಸ್ ಗೆ ಸಮಥ್೯ ಅಭ್ಯಥಿ೯ ಇಲ್ಲದೆ ಉಡುಪಿ ಕ್ಷೇತ್ರದ ಮಾಜಿ ಶಾಸಕ , ಮಾಜಿ ಮಂತ್ರಿ ಕಾಂಗ್ರೇಸ್ ನ ಪ್ರಮೋದ್ ಮದ್ವರಾಜ್ರನ್ನ ಅಭ್ಯಥಿ೯ ಮಾಡಿ ಸ್ಪದೆ೯ ಗೆ ಇಳಿಸಿತ್ತು.  ಸಮೀಕ್ಷೆಗಳು ಇಲ್ಲಿ ಕಾಂಗ್ರೇಸ್ ಚಿನ್ನೆಯಲ್ಲಿ ಪ್ರಮೋದರು ನಿ೦ತಿದ್ದರೆ ಶೋಭಾ ಗೆಲುವು ಸಾಧ್ಯವಿರಲಿಲ್ಲ ಈಗ ಶೋಭಾ

Blog number 1465. ಮಲೆನಾಡಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ 39 ರಿಂದ 40 ಡಿಗ್ರಿ ಉಷ್ಣಾಂಶ ಆದರೆ ಕಾಂಕ್ರೀಟ್ ನಗರ ಬೆಂಗಳೂರಿನಲ್ಲಿ ಗರಿಷ್ಟ 32 ಡಿಗ್ರಿ ಯಾಕೆ?

#ಮೊನ್ನೆ_ಬೆ೦ಗಳೂರಲ್ಲಿ_ಗರಿಷ್ಟ_ಉಷ್ಣಾಂಶ_32_ಡಿಗ್ರಿ #ನಮ್ಮ_ಊರಲ್ಲಿ_39_ಡಿಗ್ರಿ_ಹೀಗೇಕೆ?    1985 ರಲ್ಲಿ ಹಾನಗಲ್ ತಾಲ್ಲೂಕಿನ ಚಿಕ್ಕಾ೦ಶಿ ಹೊಸೂರು ಎಂಬ ಊರಿಂದ  ಒಂದು ಹಳೆಯ ಗೋಡ್ಕೆ ಕಂಪನಿಯ ರೈಸ್ ಮಿಲ್ ಖರೀದಿಸಿ ತಂದು ಅದನ್ನು errection ಮಾಡಿಸುತ್ತಿದ್ದೆ ಆಗ ನನ್ನ ಪ್ರಾಯ 20 ವರ್ಷ, ರಿಪ್ಪನ್ ಪೇಟೆಯ ವೆಂಕಟರಮಣ ಆಚಾರ್ ರೈಸ್ ಮಿಲ್ ನ ರಿಡಲ್ ಮತ್ತು ಹಸ್ಕ್ ಪ್ಯಾನ್ ಯುನಿಟ್ ದುರಸ್ತಿ ಮಾಡುತ್ತಿದ್ದರು.   ಅವತ್ತು ನಮ್ಮ ಊರಲ್ಲಿ ಶಿವಮೊಗ್ಗದ ಪರಿಸರ ಪ್ರೇಮಿ ಸಂಘಟನೆಗಳು ಶಾಲಾ ಮಕ್ಕಳನ್ನು ಸೇರಿಸಿ " ಅರಣ್ಯ ನಾಶದಿ೦ದ ಮಳೆ ಬೆಳೆ ಸರ್ವನಾಶ " ಎ೦ಬ ಬ್ಯಾನರ್ ನಲ್ಲಿ ಜನ ಜಾಗೃತಿ ಮೆರವಣಿಗೆ ನಡೆಸಿದರು ಅವಾಗ ಯಾರೂ ನಿರೀಕ್ಷಿಸದ ಭಾರೀ ಮಳೆ ನಮ್ಮ ಊರಲ್ಲಿ ಆಯಿತು ಆಗ ಮರದ ಕೆಲಸದ ವೆಂಕಟರಮಣ ಆಚಾರ್ ತುಂಬು ಉತ್ಸಾಹದಿಂದ ತಮ್ಮ ಮರದ ಕೆಲಸದಲ್ಲಿ ಉಳಿಗೆ ಸುತ್ತಿಗೆಯ  ಏಟು ಹಾಕುತ್ತಾ ಪರಿಸರವಾದಿಗಳಿಗೆ ಗೇಲಿ ಮಾಡಿದ್ದರು... ಈಗ ಹೇಗೆ ಮಳೆ ಬಂತು ಅಂತ...   ಮೊನ್ನೆ 25- ಏಪ್ರಿಲ್ -2023 ಮಂಗಳವಾರ ಬೆಂಗಳೂರಿಗೆ ಹೋಗಿದ್ದೆ ಅಲ್ಲಿನ ಗರೀಷ್ಟ ಉಷ್ಣಾಂಶ 32 ಡಿಗ್ರಿ ಅದೇ ಸಮಯದಲ್ಲಿ ನಮ್ಮ ಆನಂದಪುರಂ ನಲ್ಲಿ 39 ಡಿಗ್ರಿ ಹೀಗೇಕೆ ?.   ಕಾಂಕ್ರಿಟ್ ಕಾಡಾಗಿರುವ ಬೆಂಗಳೂರು ಅರೆ ಮಲೆನಾಡಾಗಿರುವ ಆನಂದಪುರಂ ಇವುಗಳ ಭೂಗೋಳಿಕ ಪ್ರಸಕ್ತ ಪರಿಸ್ತಿತಿಯಲ್ಲಿ ಬೆಂಗಳೂರಲ್ಲಿ 38 ಡಿಗ್ರಿ ಇರಬೇಕಿತ್ತ

Blog number 1464. ಈ ವರ್ಷದ ಮೊದಲ ಹಲಸಿನ ಹಣ್ಣು ನಾನು ಮತ್ತು ನನ್ನ ಶಂಭೂರಾಮ ತಿಂದೆವು.

https://youtu.be/86g9zz-FE5w #ಸಾಸಿವೆಯಷ್ಟು_ಪ್ರೀತಿ_ಕೊಟ್ಟರೆ_ಬೆಟ್ಟದಷ್ಟು_ಪ್ರೀತಿ_ತೋರುವ_ಸಾಕುಪ್ರಾಣಿಗಳು . #ನಾನೂ_ಶ೦ಭೂರಾಮ_ಈ_ವರ್ಷದ_ಮೊದಲ_ಹಲಸಿನ_ಹಣ್ಣು_ಸವಿದೆವು #ಶಂಭೂರಾಮನ_ಅತ್ಯಂತ_ಇಷ್ಟದ_ಹಣ್ಣುಗಳ_ಪಟ್ಟಿಯಲ್ಲಿ_ಹಲಸಿನ_ಹಣ್ಣೂ_ಸೇರಿದೆ.     ಈ ವರ್ಷದ ಮೊದಲ ಹಲಸಿನ ಹಣ್ಣು ನಾನೂ ಮತ್ತು ನನ್ನ ವಾಕಿಂಗ್ ಗೆಳೆಯ ಶಂಭೂರಾಮ ಒಟ್ಟಾಗಿ ತಿಂದೆವು, ಇನ್ನೂ ಎರೆಡು ತಿಂಗಳು ಹಲಸಿನ ಹಣ್ಣು ಸಿಗುತ್ತದೆ.    ಸಾಕು ಪ್ರಾಣಿಗಳ ಸಹವಾಸ ಅವುಗಳು ನಮ್ಮನ್ನು ಅವಲಂಬಿಸುವುದು ನೋಡಿದರೆ ಮೇಲಿನ ನೂಡಿ ಸೂಕ್ತಿ ಎಷ್ಟು ಸತ್ಯ ಎಂದು ಅರಿವಾದೀತು.    ಇನ್ನೊಮ್ಮೆ ಓದಿ "ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ತೋರುವ ಸಾಕು ಪ್ರಾಣಿಗಳು" ....

Blog number 1463. ಕೊರಾನಾ ಲಾಕ್ ಡೌನ್ ಡೈರಿ 2020 ಲೆಟರ್ ನ೦ಬರ್-25 (28- ಏಪ್ರಿಲ್ 2020)

#ಮೂರು_ವರ್ಷದಲ್ಲಿ_ಮರೆತೇ_ಹೋದ_ಘಟನೆಗಳು... #ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_25 #ದಿನಾ೦ಕ_28_ಏಪ್ರಿಲ್_2020      #ಭಾರತೀಯ_ರೈಲ್ವೇ      #ಕೊರಾನಾ_ವೈರಸ್      #ದೀರ್ಘ_ಕಾಲದ_ರೈಲು_ಸ್ಥಗಿತ    ಬಾರತದಲ್ಲಿ ರೈಲು ಇಷ್ಟು ದೀಘ೯ಕಾಲ ಇಡೀ ದೇಶದಲ್ಲಿ ಸ್ಥಗಿತವಾಗಿರುವುದು ಇದೇ ಮೊದಲ ಸಲ.   13 ಲಕ್ಷಕ್ಕಿ೦ತ ಹೆಚ್ಚು ಉದ್ಯೋಗಸ್ಥರು ಭಾರತೀಯ ರೈಲ್ವೆಯಲ್ಲಿ ಕೆಲಸ ನಿವ೯ಹಿಸುತ್ತಾರೆ, ಪರೋಕ್ಷವಾಗಿ ಅಷ್ಟೇ ಜನರಿಗೆ ಒಂದಲ್ಲ ಒಂದು ರೀತಿ ಭಾರತೀಯ ರೈಲ್ವೆಯ ಪಯಾ೯ಯ ಉದ್ಯೋಗ ಲಭಿಸಿದೆ.   ಸುಮಾರು 7500 ರೈಲು ನಿಲ್ದಾಣದ ಮೂಲಕ ಇಡೀ ಭಾರತವನ್ನ ಜೋಡಿಸಿರುವ ರೈಲು ಭಾರತೀಯರ ಜೀವನಾಡಿ ಆಗಿದೆ.   ಸುಮಾರು ವಾಷಿ೯ಕ 2 ಲಕ್ಷ ಕೋಟಿ  ಆದಾಯ ತರುವ ಈ ಸಕಾ೯ರಿ ಸಂಸ್ಥೆ ಅತಿ ಕಡಿಮೆ ಹಣದಲ್ಲಿ ಜನ ಸಂಚಾರಕ್ಕೆ ಅನುವು ಮಾಡಿದೆ.   ಕನ್ಯಾಕುಮಾರಿಯಿ೦ದ ಕಾಶ್ಮಿರದ ಜಮ್ಮು ತಾವಿ ರೈಲು ನಿಲ್ದಾಣಕ್ಕೆ ಸುಮಾರು 400O ಕಿ.ಮಿ. ಕೇವಲ ರೂ 1270 ರಲ್ಲಿ ಪ್ರಯಾಣಿಸ ಬಹುದೆ೦ದರೆ ಬಾರತೀಯ ರೈಲ್ವೆ ಅಷ್ಟು ಜನ ಸ್ನೇಹಿ.    ವಿದ್ಯಾಥಿ೯ಗಳಿಗೆ, ಅಂಗವಿಕಲರಿಗೆ, ಚಿಕಿತ್ಸೆಗೆ ಹೋಗುವ ರೋಗಿಗಳಿಗೆ, ವೃದ್ದರಿಗೆ ಬಾರೀ ರಿಯಾಯಿತಿ ಇದೆ.    ಇಂತಹ ಭಾರತೀಯ ರೈಲನ್ನು ಕೊರಾನಾದಂತ ಕಣ್ಣಿಗೆ ಕಾಣದ ವೈರಸ್ ಸಂಪೂಣ೯ ನಿಲ್ಲಿಸಿದೆ ಅಂದರೆ ಯೋಚಿಸಲು ಸಾಧ್ಯವಿಲ್ಲ.     ಪ್ರತಿ ದಿನ ಕೇಂದ್ರ ಸಕಾ೯ರಕ್ಕೆ ಒಂದು ಅಂದಾಜಿನಂತೆ 600 ರಿಂದ 700 ಕೋಟಿ ನಷ್ಟ ಉoಟಾಗ

Blog number 1462. ಕ್ರಿಯಾಶೀಲ ಸಾದಕರು ಮಂಗಳೂರಿನ ಒಂದು ಕಾಲದ ಪ್ರಕ್ಯಾತ ABC ಎಂದೇ ಖ್ಯಾತಿ ಪಡೆದಿದ್ದ ಅತ್ರಿ ಬುಕ್ ಸೆಂಟರ್ ಅಶೋಕವರ್ಧನ ದಂಪತಿ ನಮ್ಮ ಊರಿನ ಚಂಪಕ ಸರಸ್ಸು ಸಂದರ್ಶಿಸಿದ್ದರು.

#ಕ್ರಿಯಾಶೀಲ_ಸಾಧಕರು_ಆತ್ರಿ_ಬುಕ್_ಸೆಂಟರ್_ಎನ್_ಅಶೋಕವದ೯ನ್ #ನಮ್ಮ_ಊರಿನ_ಚಂಪಕ_ಸರಸ್ಸು_ಬೇಟಿ  ಮಂಗಳೂರಿನ ABC ಅಂದ್ರೆ ಅತ್ರಿ ಬುಕ್ ಸೆಂಟರ್ ಮಾಲಿಕರಾದ ಎನ್.ಅಶೋಕವದ೯ನರು 2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ.   ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರ ಅಶೋಕ ವನ ಮಾಡಿದ್ದಾರೆ.   ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ, ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ.   ಅನೇಕ ಪುಸ್ತಕ ಕೂಡ ಬರೆದು ಪ್ರಕಟಿಸಿದ್ದಾರೆ, ಮೊನ್ನೆ ಹೆಗ್ಗೋಡಿನ ನಿನಾಸಂಗೆ ಬೈಕ್ ನಲ್ಲಿ #ಅಶೋಕವರ್ಧನ್ ದಂಪತಿ ಬಂದಾಗ ಗೆಳೆಯ #ಶೈಲೇಂದ್ರಬಂದಗದ್ದೆ ಚಂಪಕ ಸರಸ್ಸುವಿನ ಬಗ್ಗೆ ಹೇಳಿದ್ದರಿಂದ ದಂಪತಿಗಳು ನಮ್ಮ ಊರಿನ ನಾನೂರು ವರ್ಷದ ಸ್ಮಾರಕ ಚಂಪಕ ಸರಸ್ಸು ಸಂದರ್ಶಿಸಿ ಅವರ FB ಯಲ್ಲಿ ಬರೆದ ಲೇಖನ ಇಲ್ಲಿ ಶೇರ್ ಮಾಡಿದ್ದೇನೆ ಮತ್ತು ಅವರಿಗೆ ನನ್ನ ಕಾದಂಬರಿ " ಬೆಸ್ತರ ರಾಣಿ ಚಂಪಕಾ " ಅಂಚೆಯಲ್ಲಿ ಗೌರವ ಪ್ರತಿಯಾಗಿ ಕಳಿಸಿದ್ದೇನೆ ಮತ್ತು ಸ್ಮಾರಕ ಸಂದರ್

Blog number 1461. ಒಂಬತ್ತು ಲಕ್ಷ viewers ತಲುಪಿದ ನನ್ನ Shimoga district news page ನ ಒಂದು ಸುದ್ದಿ (27- ಏಪ್ರಿಲ್ -2019)

2010ರಲ್ಲಿ ನಾನು SHIMOGA DISTRICT NEWS ಅಂತ ಪೇಸ್ ಬುಕ್ ನಲ್ಲಿ ಜಿಲ್ಲೆಯ ಜನರಿಗಾಗಿ ಸುದ್ದಿ ಸಮಾಚಾರ ನೀಡಲು ಪ್ರಾರ೦ಭಿಸಿದ್ದೆ ಆದರೆ ಆಗ ಲ್ಯಾಪ್ ಟಾಪ್, PC ಗಳಲ್ಲಿ ಸಂಪಕ೯ ಮಾಡಬೇಕಾಗಿತ್ತು ಈಗ ಜೀಯೋ ಸಂಪಕ೯ ಬಂದ ಮೇಲೆ ಆಂಡ್ರಾಯಿಡ್ ಪೋನ್ಗಳ ಸ೦ಖ್ಯೆ ಜಾಸ್ತಿ ಆದ ಮೇಲೆ ಈ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಇದನ್ನ ಪುನಃ ಕಾಯಾ೯ರಂಭ ಮಾಡಿದೆ ಆದರೆ ಈ ಮಟ್ಟದಲ್ಲಿ ಜನರಿಗೆ ತಲುಪುವುದೆಂದು ಗೊತ್ತಿರಲಿಲ್ಲ.   ಪೇಸ್ ಬುಕ್ ನವರಿಂದ ಇದು ಪ್ರೇಸ್ಟೇಜಿಯಸ್ ಅಕೌ೦ಟ್ ಕಳೆದ ತಿಂಗಳಲ್ಲಿ 3 ಲಕ್ಷದ 60 ಸಾವಿರ ಜನರಿಗೆ ತಲುಪಿದೆ ಹೆಚ್ಚು ಸೆಕೂರಿಟಿ ಪಾಸ್ವಡ್೯ ಕೇಳಿದಾಗಲೆ ನನಗೆ ಅಶ್ಚಯ೯.   ಇವತ್ತು ಇದು ಅದರ 3 ಪಟ್ಟು ಅಂದರೆ 9 ಲಕ್ಷ ಜನರಿಗೆ ತಲುಪಿದೆ ಎಂದರೆ ಸೋಷಿಯಲ್ ಮೀಡೀಯ ಎಷ್ಟು ಶಕ್ತಿಶಾಲಿ ಅಲ್ಲವಾ?

Blog number 1460.ಕೋವಿಡ್ ಎರಡನೆ ಅಲೆಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿರಲಿಲ್ಲ

#ಕೊವಿಡ್_ಮೊದಲ_ಅಲೆಯಲ್ಲಿ_ಮದ್ಯದ_ಮಾರಾಟ_ಬಂದ್ #ಕೋವಿಡ್_ಎರಡನೆ_ಅಲೆಯಲ್ಲಿ_ಮದ್ಯ_ಮಾರಾಟಕ್ಕೆ_ಅನುಮತಿ   ಕಳೆದ ವರ್ಷ ಮಧ್ಯದ ಮಾರಾಟ ರದ್ದು ಮಾಡಿದ್ದರು ಇದರಿಂದ ಕೊರಾನಾ ಹರಡುವುದು ಕಡಿಮೆ ಆಗಲಿಲ್ಲ ಹೆಚ್ಚೇ ಆಗಿರಬಹುದು ಯಾಕೆಂದರೆ ಕುಡಿಯುವವರು ಮಧ್ಯ ಹುಡುಕಿಕೊಂಡು ತಿರುಗಾಡಿದ್ದೇ ಹೆಚ್ಚು, ಮಧ್ಯ ಕಾಳಸಂತೆಯಲ್ಲಿ ಹತ್ತುಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರು, ಕಳ್ಳಭಟ್ಟಿಯಂತ ಕಳಪೆ ಮದ್ಯವೂ ದೊಡ್ಡ ಪ್ರಮಾಣದಲ್ಲಿ ಮಾರಾಟವಾಯಿತು.   ನಿತ್ಯ ಮಧ್ಯಪಾನಕ್ಕೆ ಅಡಿಕ್ಟ್ ಆದವರು ಅಸಹನೆಯಿಂದ ಅನಾರೋಗ್ಯ ಪೀಡಿತರೂ ಆದ ಉದಾಹರಣೆ ನೂರಾರು.   ಮಧ್ಯಪಾನ ಅಗತ್ಯ ವಸ್ತು ಸೇವೆ (Essential goods and services) ವ್ಯಾಪ್ತಿಯಲ್ಲಿ ಬರುವುದರಿಂದ ಮಧ್ಯಪಾನ ಮಾರಾಟ ನಿಷೇದ ಮಾಡಬಾರದಿತ್ತು.   ಕಳೆದ ವರ್ಷ ಲಾಕ್ ಡೌನ್ ಮೊದಲು ಮತ್ತು ಲಾಕ್ ಡೌನ್ ತೆರವಿನ ನಂತರ ಮದ್ಯದ ಅಂಗಡಿ ಎದುರಿನ ಜನಸಂದಣಿ ಮದ್ಯದ ಅವಶ್ಯಕತೆ ಹೇಳಿತ್ತು.    ಈಗ ಎರಡನೆ ಅಲೆಯಲ್ಲಿ ಘೋಷಿಸಿರುವ ಕ್ಲೋಸ್ ಡೌನ್ (ಲಾಕ್ ಡೌನ್ ಸುದಾರಿತ ಹೆಸರು) ನಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಮಧ್ಯಪಾನಿಗಳಿಗೆ ಪಾರ್ಸಲ್ ದೊರೆಯುವಂತ ವ್ಯವಸ್ಥೆ ಸಕಾ೯ರ ಮಾಡಿದೆ.   ಇದರಿಂದ ಸರ್ಕಾರದ ಆದಾಯ, ಮಧ್ಯಪಾನಿಯ ಉತ್ಪಾದನ ಘಟಕಗಳ ಮತ್ತು ಮಾರಾಟ ಕೇಂದ್ರಗಳ ಆದಾಯಕ್ಕೆ ಚ್ಯುತಿ ಉಂಟಾಗುವುದಿಲ್ಲ ಎಲ್ಲದಕ್ಕಿಂತ ಮಧ್ಯಪಾನ ಮಾಡುವವರಿಗೆ ಮಧ್ಯ ಸಿಗುವುದಿಲ್ಲ ಎಂಬ ಕಾರಣದಿಂದ ಉಂಟಾಗುತ್ತಿದ್ದ

Blog number 1459.ಕೊರಾನಾ ಲಾಕ್ ಡೌನ್ ಡೈರಿ - 20 20. ಲೆಟರ್ ನಂಬರ್ 24 ( 27- ಏಪ್ರಿಲ್ -2020)

ಕಳೆದ ವರ್ಷ ಈ ಲೇಖನ ಬರೆದಾಗ ದೇಶದ ಆಥಿ೯ಕ ಪರಿಸ್ಥಿತಿ ಸರಿ ಆಗಲು ಒಂದು ವರ್ಷ ಬೇಕಂತ ಬರೆದಿದ್ದೆ ಕ್ಷಮಿಸಿ ಈ ವರ್ಷ ಎರಡನೆ ಅಲೆ ರಬಸದಿಂದ ಅಪ್ಪಳಿಸಿದೆ, ಮೂರನೆ ನಾಲ್ಕನೆ ಅಂತ ಸತತ ಅಲೆಗಳಾಗಿ ರೂಪಾಂತರ ಕೊರಾನಾ ವೈರಸ್ ಬರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ, ಈ ಕಳೆದ ವರ್ಷ ಇದ್ದ ನನ್ನ ಪ್ರೀತಿಯ ಹಾಯ್ ಬೆಂಗಳೂರು ವಾರಪತ್ರಿಕೆ ಈ ವಷ೯ ನಿಂತು ಹೋಯಿತು. #ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_24 #ದಿನಾ೦ಕ_27_ಏಪ್ರಿಲ್_2020      ಕೊರಾನಾ ವೈರಸ್ ಏನೇನಲ್ಲ ಆಪೋಷನ ತೆಗೆದುಕೊಂಡು ಹೋಗುತ್ತದೋ ಗೊತ್ತಿಲ್ಲ ಆದರೆ ಪತ್ರಿಕೆ, ಸಿನೆಮಾ ಮತ್ತು ಟಿವಿ ಚಾನಲ್ ಗಳು ಮಾತ್ರ ಇದಕ್ಕೆ ಬಲಿಯಾಗುವುದಂತು ಸುಳ್ಳಲ್ಲ.   ಪತ್ರಿಕೆಗಳು ಬೇಕು ಆದರೆ ಬೆಲೆ ಜಾಸ್ತಿ ಆಗಬಾರದೆಂದರೆ ಪತ್ರಿಕೆಗಳಿಗೆ ಜಾಹಿರಾತು ಬೇಕು,  ಉತ್ಪಾದನ ಸಂಸ್ಥೆಗೆ ಹೆಚ್ಚು ವ್ಯಾಪಾರ ಆಗಲು ಜಾಹಿರಾತು ನೀಡುವುದು ಅನಿವಾಯ೯ ಆದರೆ ಈಗ ಎಲ್ಲದೂ ತದ್ವಿರುದ್ಧ ಲಾಕ್ ಡೌನ್ ನಿಂದ ಉತ್ಪಾದನೆ ನಿಲ್ಲಿಸಿದ್ದಾರೆ, ವ್ಯಾಪಾರ ಮಾಡುವ ಮಾಲ್ ಪ್ರಾವಿಜನ್ ಸ್ಟೋರ್ ತೆರೆಯುವಂತಿಲ್ಲ ಆನ್ಲೈನ್ ಮಾರಾಟ ಮಾಡುವ ಕಮಷಿ೯ಯಲ್ ಕೋರಿಯರ್ ಇಲ್ಲ, ದೇಶ ವಿದೇಶದಿಂದ ಕಚ್ಚಾ ವಸ್ತು ಸಾಗಾಣಿಕೆ ಇಲ್ಲ, ತಯಾರಾದ ವಸ್ತು ಖರೀದಿಸುವವರೂ ಇಲ್ಲ ಹಾಗಾಗಿ ಉತ್ಪಾದನಾ ಸಂಸ್ಥೆಗೆ ಜಾಹಿರಾತು ಬೇಡ  ಜಾಹಿರಾತು ಇಲ್ಲದೆ ದಿನ ಪತ್ರಿಕೆ ಆದರೂ ಎಷ್ಟು ದಿನ ನಷ್ಟದಲ್ಲಿ ನಡೆಸಲು ಸಾಧ್ಯ?   ಪತ್ರಿಕೆ ಮಾರಾಟದ ಸ್

Blog number 1458. ದಿಡೀರ್ ಆನ್ ಲೈನ್ ಸಾಲ... ಜಂಗ್ಲಿ ರಮ್ಮಿಯಂತ ಆನ್ ಲೈನ್ ಜುಗಾರಿ... ಜೀವ ಕಳೆದುಕೊಳ್ಳುವ ಮುಗ್ದ ಯುವ ಜನರು ... ಲೋನ್ ಶಾರ್ಕ್ ಗಳ ಹಣದ ದಾಹ.

#ದೇಶದ_ಮುಗ್ದ_ಯುವಜನರ_ಗುರಿ_ಮಾಡಿ_ಅವರ_ಜೀವದ_ಜೊತೆ_ಚೆಲ್ಲಾಟ_ಆಡುತ್ತಿರುವ #ಇನ್_ಸ್ಟಂಟ್_ಆನ್_ಲೈನ್_ಲೋನ್_ಮತ್ತು_ಜಂಗ್ಲಿರಮ್ಮಿಯಂತ_ಆನ್_ಲೈನ್_ಗೇಮ್ #ಲೋನ್_ಶಾರ್ಕ್_ಅಂದರೆ_ಯಾರು ? #ದೇಶದ_ಕಾನೂನು_ಇವರಿಗಾಗಿ_ತಿದ್ದುಪಡಿ_ಮಾಡಲಾಗಿದೆ #ಪ್ರಾರಂಭದಲ್ಲಿ_ಚೀನಾ_ದೇಶದ_ಲೋನ್_ಶಾರ್ಕರ್_ಕಂಪನಿಗಳು_ಈಗ_ದೇಶದ_ಅಂಡರ್_ವರ್ಲ್ಡ್_ಹಿಡಿತದಲ್ಲಿ. #ಆತ್ಮಹತ್ಯೆಗೆ_ಶರಣಾಗುತ್ತಿರುವ_ಮುಗ್ದರು. #ಮಾದಕ_ಡ್ರಗ್_ಗಿಂತ_ಅಪಾಯಕಾರಿ_ಇನ್_ಸ್ಟಂಟ್_ಆ್ಯಪ್ #ಪೋಷಕರೆ_ಜಾಗೃತರಾಗಿ    ನಾನು ಈ ಹಿಂದೆ ಒಬ್ಬರು ಅತ್ಯುತ್ತಮ ಗ್ಲಾಸ್‌ ಮತ್ತು ACP ಕೆಲಸದ ಯುವಕನ ಬಗ್ಗೆ ತುಂಬಾ ಸಂತೋಷದಿಂದ ಅವನ ಕೆಲಸ ಮೆಚ್ಚಿ ಬರೆದಿದ್ದೆ ಇದರಿಂದ ಉದಯೋನ್ಮುಖ ಯುವ ಕೆಲಸಗಾರನಿಗೆ ಹೆಚ್ಚು ಪ್ರೊಜೆಕ್ಷನ್ ಸಿಗಲಿ ಎನ್ನುವ ಸದುದ್ದೇಶದಿ೦ದ ನಂತರ ನಮ್ಮ ಕಲ್ಯಾಣ ಮಂಟಪದಲ್ಲಿ ಹೆಚ್ಚುವರಿ ಕೆಲಸ ನೀಡಿದೆ ಆ ಕೆಲಸಕ್ಕಾಗಿ ಬೇಕಾಗುವ ಸಾಮಗ್ರಿಗಳ ಪಟ್ಟಿ ನೀಡಿ ಶಿವಮೊಗ್ಗದಿಂದ ತರಬೇಕು ಹಣ ಬೇಕು ಅಂದಾಗ ಅದಕ್ಕೆ ಬೇಕಾದ ಹಣ ನೀಡಿದೆ ಇವತ್ತಿಗೂ ಆತ ನಾಪತ್ತೆ ನಂತರ ಗೊತ್ತಾಗಿದ್ದು ಈತ ಜಂಗ್ಲಿ ರಮ್ಮಿ ಪ್ಲೇಯರ್ ಅಂತ ಇವನ ತಂದೆ ನಮ್ಮ ದೇವಾಲಯದ ರಥಶಿಲ್ಪಿ ಅವರು ಸಜ್ಜನರು ನಂತರ ಬೇರೆಯವರಿಂದ ಕೆಲಸ ಮಾಡಿಸಿದೆ.   ಮಲೆನಾಡಿನ ಯೋದ ಅಸ್ಸಾಂನಲ್ಲಿ ವಿಪರೀತ ಸಾಲ ಮಾಡಿ ಅದನ್ನು ತೀರಿಸಲಾಗದೆ ಮೆಷಿನ್ ಗನ್ನಿನಿಂದ ಆತ್ಮಹತ್ಯೆ ಸುದ್ದಿ, ನಮ್ಮ ಊರಿನ ಸಂಪನ್ನ ಯುವಕರು ಅನೇಕರು ಆತ್

Blog number 1457. ಕನ್ನಡದ ಮೊದಲ ಐಎಎಸ್ ಚಿತ್ರ ನಟ ಕೆ.ಶಿವರಾಂ ನನ್ನ ಅತಿಥಿ (24 ಏಪ್ರಿಲ್ 2019 )

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-14. (ಕೆ.ಅರುಣ್ ಪ್ರಸಾದ್)    ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಶ್ರೀನಿವಾಸ್ ಪ್ರಸಾದ್ ಸ್ಪದಿ೯ಸಬಾರದಿತ್ತು.    ಶ್ರೀನಿವಾಸ್ ಪ್ರಸಾದರ ಮೈಸೂರಿನಿ೦ದ ದೆಹಲಿ ತನಕದ ರಾಜಕಾರಣವೇ ರೋಚಕ, ಅವರು ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಗಾಗಿ ನಡೆದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪಾರ ನೇತೃತ್ವದ ಹೋರಾಟಕ್ಕೆ ಬೆಂಬಲಿಸಿದವರು, ಆಗಿನ ಉಪ ಪ್ರಧಾನಿ ಲಾಲ್ ಕೃಷ್ಣ ಅಧ್ವಾನಿಯವರಿಗೆ ಸಾಗರ ರೈಲು ನಿಲ್ದಾಣದ ಹೆಸರನ್ನ ರಾಮ ಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಪುನರ್ ನಾಮಕರಣಕ್ಕೆ ಕಾರಣರಾದವರು (ಅಂತಿಮ ಆಗಿದ್ದರು ಜಾರಿ ಆಗಿಲ್ಲ) ಈ ಬಾರಿ ರಾಜಕಾರಣದಿಂದ ನಿವೃತ್ತರಾದವರನ್ನ ಪುನಃ ಲೋಕಸಭೆಗೆ ಅಭ್ಯಥಿ೯ ಆಗಿ ಸ್ಪದಿ೯ಸಿದ್ದಾರೆ.   ಈ ಕ್ಷೇತ್ರದ ಹಾಲಿ ಸಂಸದ ದೃವ ನಾರಾಯಣ್ ಇವರ ಶಿಷ್ಯ ಇವರ ವಿರುದ್ಧ ಬಿಜೆಪಿಯಿಂದ ಸ್ಪದಿ೯ಸಲು ನಿವೃತ್ತಾ ಕನ್ನಡದಲ್ಲಿ ಐಎಎಸ್ ಮಾಡಿದ್ದ ಚಲನ ಚಿತ್ರ ನಟ ಕೆ.ಶಿವರಾಂಗೆ ಯಡೂರಪ್ಪ ತಯಾರಿ ಮಾಡಿದ್ದರು, 6 ತಿಂಗಳಲ್ಲಿ ಶಿವರಾಂ ಹವಾ ಹೆಚ್ಚಾಗಿ ದೃವ ನಾರಾಯಣ್ ಕಂಗಾಲಾಗಿದ್ದರು.  ಆಗಲೇ ದೃವನಾರಾಯಣರ ಆಪ್ತರು ಮತ್ತು ಶ್ರೀನಿವಾಸ ಪ್ರಸಾದರ ಆಪ್ತರು ದೃವ ನಾರಾಯಣ್ ಗೆಲ್ಲಬೇಕು ಮತ್ತು ಕೆ.ಶಿವರಾಂ ಸ್ಪದಿ೯ಸ ಬಾರದೆಂದು ನಾಟಕ ಒಂದನ್ನ ನಡೆಸಿದರು, ಶ್ರೀನಿವಾಸ ಪ್ರಸಾದರು ಸ್ಪದಿ೯ಸಿದರೆ ಸಲೀಸಾಗಿ ಗೆಲ್ಲುತ್ತಾರೆ ಮತ್ತು ಒಂದು ಕಾಲದಲ್ಲಿ ಶ್ರೀನಿವಾಸ್

Blog number 1456. ಆಪ್ತಮಿತ್ರ ಗೇರುಬೀಸಿನ ಜೇನುಕಲ್ಲಪ್ಪರ ಮಗ ಚೆನ್ನಪ್ಪ

#ಪ್ರತಿಯೊಬ್ಬರಿಗೂ_ಇಂತಹ_ಆಪ್ತಮಿತ್ರ_ಇದ್ದೇ_ಇರುತ್ತಾರೆ.      ಇದು ನನ್ನ ಆಪ್ತ ಮಿತ್ರನ ಕಥೆ ಇವರ ಹೆಸರು ಚೆನ್ನಪ್ಪ ಊರು ನಮ್ಮ ಮನೆಯಿ೦ದ 3 ಕಿ.ಮಿ.ಗೇರ್ ಬೀಸ್ ಅಂತ, ಇವರ ಅಪ್ಪ ಜೇನುಕಲ್ಲಪ್ಪ ಅಂತ ಈಗಿಲ್ಲ ಜೇನು ಕಲ್ಲಪ್ಪ ನಮ್ಮ ಊರಿಗಿಂತ ಹೊಳೆಆಚೆಯ ಕರೂರು ಬಾರಂಗಿ ಹೋಬಳಿಯಲ್ಲಿನ ಪರಿಶಿಷ್ಟ ಜಾತಿ ಜನರ ಕಾಲೋನಿಯಲ್ಲಿ ಹೆಸರುವಾಸಿ.    ವ್ಯವಹಾರ ವಿಸ್ತರಣೆಗಾಗಿ ನಮ್ಮ ದನದ ಕೊಟ್ಟಿಗೆ ತೆಗೆಯಬೇಕಾಯಿತು ಆಗ ನಮ್ಮಲ್ಲಿದ್ದ ಮಲೆನಾಡು ಗಿಡ್ಡ ದನ ಕರುಗಳನ್ನ ಜೇನುಕಲ್ಲಪ್ಪನಿಗೆ ಮತ್ತು ಸಮೀಪದ ಕೆರೆ ಹಿತ್ತಿಲು ಎoಬ ಹಳ್ಳಿಯಲ್ಲಿರುವ ನಮ್ಮ ಆಸ್ಥಾನ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರಿಗೆ ಹಂಚಿಕೊಟ್ಟಿದ್ದೆ.   ಚೆನ್ನಪ್ಪನನ್ನ ಇವರ ಅಪ್ಪ ತನ್ನ ಜಮೀನು ವ್ಯಾಜ್ಯ ಬಗೆಹರಿಸಲು ಹಣ ಹೊಂದಿಸಲು ಸಣ್ಣವಯಸ್ಸಲ್ಲಿಯೇ ಎಲ್ಲೆಲ್ಲೊ ಮುಂಗಡ ಪಡೆದು ಬಿಟ್ಟಿದ್ದ.   ಅಂತೂ ಕೊನೆಗೆ ಅಂದರೆ ಸುಮಾರು 25 ವಷ೯ದ ಕಾನೂನು ಹೋರಾಟದಲ್ಲಿ 10 ಎಕರೆ ನೀರಾವರಿ ಜಮೀನು ಪಡೆಯುವುದರಲ್ಲಿ ಯಶಸ್ವಿಯಾದ ಆದರೆ ಜೇನುಕಲ್ಲಪ್ಪನಿಗೆ ಇದ್ದ ಇಬ್ಬರು ಅಣ್ಣOದಿರಿಗೂ ಸೇರಿ ಜಂಟಿ ಖಾತೆ ಆಯಿತು ಆಗ ಮೂವರಿಗೂ ಸಮ ಹಿಸ್ಯೆ ಆಗಬೇಕಾದಾಗ ನಮ್ಮ ಮನೇಲಿ ಪಂಚಾಯಿತಿ ನಡೆಯಿತು ಸಾಗರದಿಂದ ಕುಗ್ವೆ ಶಿವಾನಂದ ಬOದಿದ್ದರು ಅಂತೂ ಅಂತಿಮವಾಗಿ ಜೇನುಕಲ್ಲಪ್ಪನಿಗ 4ಎಕರೆ ಉಳಿದ ಇಬ್ಬರು ಸಹೋದರರಿಗೆ ತಲಾ 3 ಎಕರೆ ಅಂತೆ ಒಪ್ಪಿಸಲಾಯಿತು, ಈ ಜಮೀನು ಪಡೆಯಲು ತನ್ನ ಜೀವಮಾನವನ್ನೆ ಜೇನುಕಲ್ಲ

Blog number 1355. ನಾರೀ ನಾರಾಯಣಪ್ಪ ಮಿತ ಬಾಷಿ, ಮಾದರಿ ಕೃಷಿಕ ಸಂಪನ್ನ ರೈತರು ಇನ್ನು ನೆನಪು ಮಾತ್ರ

#ಶ್ರದ್ದಾಂಜಲಿಗಳು #ನಾರಿ_ನಾರಾಯಣಪ್ಪ_ಹಾರ್ನಳ್ಳಿ #ಮಾಜಿ_ಮಂಡಲ್_ಪಂಚಾಯತ್_ಸದಸ್ಯರು_ಯಡೇಹಳ್ಳಿ #ಮಿತಬಾಷಿ_ಶ್ರಮಜೀವಿ_ಸಜ್ಜನ_ಕೃಷಿಕರು.   1985 ರಿಂದ 2000 ಇಸವಿ ತನಕ ನಾನು ನಮ್ಮ ಶ್ರೀ ಕೃಷ್ಣ ರೈಸ್ ಮಿಲ್ ಅಕ್ಕಿ ಗಿರಣಿ ಮಾಲಿಕ ಆಗ ಆನಂದಪುರಂ ಹೋಬಳಿ, ಪಕ್ಕದ ಹೊಸನಗರ ತಾಲ್ಲೂಕಿನ ಹರತಾಳು, ನಂಜವಳ್ಳಿ, ಹುಣಸಳ್ಳಿ, ನವಟೂರು, ಹಾಲುಗುಡ್ಡೆ, ಮಾದಾಪುರ ಈ ಕಡೆ ಶಿವಮೊಗ್ಗ ತಾಲ್ಲೂಕಿನ ಕುಣೇಹೊಸೂರು, ಸನ್ನಿ ವಾಸ, ತುಪ್ಪೂರು, ಬ್ಯಾಡನಳ್ಳ, ಚೊಡನಳ್ಳಗಳ ರೈತರು ತಾವು ಬೆಳೆದ ಭತ್ತ ತಂದು ನಮ್ಮ ಅಕ್ಕಿ ಗಿರಣಿಯಲ್ಲಿ ಅಕ್ಕಿ ಮಾಡಿ ಕೊಂಡು ಹೋಗುತ್ತಿದ್ದರು ಆದ್ದರಿಂದ ಈ ಪ್ರದೇಶದ ಪ್ರತಿ ಮನೆಗಳ ಒಡನಾಟವಿತ್ತು.   ಆ ಕಾಲದಲ್ಲಿ ಹೊಸೂರು ಗ್ರಾಮದ ಹಂದಿಗ ಹಾರ್ನಳ್ಳಿ ಭಾಗದ ನಾರೀ ನಾರಾಯಣಪ್ಪರ ಕುಟುಂಬ ದೊಡ್ಡದು ಇವರ ತಂದೆ ಮತ್ತು ಅವರ ಸಹೋದರರಾದ ಇವರ ಚಿಕ್ಕಪ್ಪಂದಿರೆಲ್ಲ ಸೇರಿದ ನೂರಕ್ಕೂ ಹೆಚ್ಚಿನ ಅವಿಭಕ್ತ ಕುಟುಂಬ, ದೊಡ್ಡದಾದ ಕೆಲವು ಅಂಕಣದ ಹುಲ್ಲಿನ ಮನೆ, ನೂರಾರು ದನ, ಎಮ್ಮೆಗಳು, ಎತ್ತು, ಕೋಣಗಳು, ಎತ್ತಿನಗಾಡಿಗಳು ಮತ್ತು ಈ ದೊಡ್ಡ ಕುಟುಂಬದ ಅಕ್ಷಯ ಪಾತ್ರೆಯಂತ ಭತ್ತ ಬೆಳೆಯುವ ಜಮೀನುಗಳು.    ಇಂತಹ ದೊಡ್ಡ ಕುಟುಂಬದ ಯಜಮಾನಿಕೆ ಇವರ ತಂದೆ ನಂತರ ಸಣ್ಣ ವಯಸ್ಸಲ್ಲೇ ನಾರೀ ನಾರಾಯಣಪ್ಪರಿಗೆ ಇವರ ನಾರೀಮನೆತನದ ಇವರ ದೊಡ್ಡಪ್ಪ ಚಿಕ್ಕಪ್ಪಂದಿರು ವಹಿಸಿಕೊಟ್ಟರು.    ಮಿತ ಬಾಷಿ, ಶ್ರಮಜೀವಿ, ಕೃಷಿಕರಾದ ನಾರೀ ನಾರಾಯಣಪ್ಪ ಅದನ್ನು

Blog number 1454. ಸಾಗರದ ಸುಪ್ರಸಿದ್ದ ಉರಗ ತಜ್ಞ ಮನ್ಮಥ್ ಕುಮಾರ್ ಸ್ಮರಣೆ

#ಶ್ರದ್ದಾ೦ಜಲಿಗಳು #ಮಲೆನಾಡಿನ_ಉರಗ_ತಜ್ಞ_ಮನ್ಮಥಕುಮಾರ್_ಇನ್ನು_ನೆನಪು_ಮಾತ್ರ    ಮನ್ಮಥ್ ಕುಮಾರ್ ಎಂದರೆ 1980 ರಿಂದ 90 ರ ದಶಕದಲ್ಲಿ ಒಂದು ಥರ ಹೀರೋ ಸಾಗರದಲ್ಲಿ, ಅವರು ಬೈಕ್ ಲ್ಲಿ ಹಾದು ಹೋದರೆ ವಿದ್ಯಾಥಿ೯ಗುಂಪುಗಳಲ್ಲಿ ಅವರೆ ನೋಡು ಮನ್ಮಥ ಕುಮಾರ್ ಅಂತ ಉದ್ಘೋಷ, ಹೆಸರಿಗೆ ತಕ್ಕ ಸ್ಪುರದ್ರೂಪಿ ಮನ್ಮಥ ಕುಮಾರ್ ಅಂತರ್ಮುಖಿ ಮತ್ತು ಅಥ೯ ಮಾಡಿಕೊಳ್ಳಲಾಗದ ವ್ಯಕ್ತಿತ್ವದವರು.   ಹವ್ಯಕ ಬ್ರಾಹ್ಮಣರಲ್ಲಿ ಅಪರೂಪದ ಉರಗ ಪ್ರೇಮಿ, ಈಗ ಎಲ್ಲೆಲ್ಲೂ ವಿಷ ಸರ್ಪಗಳನ್ನು ಹಿಡಿಯುವವರಿದ್ದಾರೆ ಸುಮಾರು 30-40 ವಷ೯ದ ಹಿಂದೆಯೇ ಮನೆ ಪ್ರವೇಶಿಸುತ್ತಿದ್ದ ಬೃಹತ್ ಕಾಳಿಂಗ ಸಪ೯ಗಳನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದ ಮನ್ಮಥ ಕುಮಾರ್ ಅಂದರೆ ವಿಸ್ಮಯ ವ್ಯಕ್ತಿತ್ವ.   ಆಗೆಲ್ಲ ಸೋಷಿಯಲ್ ಮೀಡಿಯ, ಟೀವಿ ಚಾನಲ್ ಇಲ್ಲದ್ದರಿಂದ ಇವರು ರಾಜ್ಯದಾದ್ಯಂತ ಈಗಿನ ಸ್ನೇಕ್ ಕ್ಯಾಚರ್ ರೀತಿ ಪ್ರಚಾರ ಪಡೆಯಲಿಲ್ಲ ಮತ್ತು ಮನ್ಮಥ ಕುಮಾರ್ ಕೂಡ ಪ್ರಚಾರದಿಂದಲೂ ಬಲು ದೂರವೇ ಇರುತ್ತಿದ್ದರು.   ಸಾಗರ ತಾಲ್ಲೂಕಿನ ಮುಂಡಿಗೆಸರ ವಾಸಿ ಆದ ಇವರು ಹಿಡಿದ ಕಾಳಿಂಗ ಸರ್ಪವೇ ಹತ್ತಿರ ಹತ್ತಿರ 500 ಇನ್ನು ನಾಗರ ಹಾವುಗಳ೦ತೂ ಕೆಲವು ಸಾವಿರ, ಇವರ ವಿಶೇಷ ಅಂದರೆ ವೈಲ್ಡ್ ಲೈಫ್ ಇಲಾಖೆ ಪರವಾನಿಗೆ ಹೊಂದಿರುವ ವಿರಳ ಸ್ನೇಕ್ ಕ್ಯಾಚರ್ ಲ್ಲಿ ಇವರು ಒಬ್ಬರು.   ಉಡುಪಿಯಲ್ಲಿ ಹಾವಿನ ವಿಷ ಮಾರಟ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಇವರು ಇರದಿದ್ದರೂ ಇವರನ್ನು ಸೇರಿ

Blog number 1453. ಕೊರಾನಾ ಮೊದಲ ಅಲೆಯಲ್ಲಿ ಸಾವು ನೋವು ಕಡಿಮೆ ಇದ್ದರೂ ಜೀವ ಭಯ ಇತ್ತು. ಎರಡನೆ ಅಲೆಯಲ್ಲಿ ಸಾವು - ನೋವಿನ ಸಂಖ್ಯೆ ಹತ್ತಾರು ಪಟ್ಟು ಹೆಚ್ಚುತ್ತಿದ್ದರು ಭಯ ಇಲ್ಲ. (25- ಏಪ್ರಿಲ್ 2021)

#ಅವತ್ತು_ಸಾವಿನ_ಭಯ_ಇತ್ತು.(25- ಏಪ್ರಿಲ್ -2020)  ಕಳೆದ ವರ್ಷ ಇವತ್ತಿನ ದಿನ ಇಡೀ ದೇಶದಲ್ಲಿ ಕೊರಾನಾ ಹರಡಿದ್ದು 24 942, ಸಾವು 780 ಅವತ್ತು ಕನಾ೯ಟಕ ರಾಜ್ಯದಲ್ಲಿ 489 ಜನರಿಗೆ ಪಾಸಿಟೀವ್ ಮತ್ತು 18 ಜನ ಮೃತರಾಗಿದ್ದರು ಅವತ್ತು ಇಡೀ ದೇಶದಲ್ಲಿ ಲಾಕ್ ಡೌನ್ ಆಗಿತ್ತು, ರೋಗ ನಿರೋದಕ ಚುಚ್ಚುಮದ್ದು ಬಂದಿರಲಿಲ್ಲ.      #ಇವತ್ತು_ಸಾವಿನ_ಭಯ_ಇಲ್ಲ (25- ಏಪ್ರಿಲ್ -2021)    ಈ ವಷ೯ ಇವತ್ತಿನ ಸಂಖ್ಯೆ ದೇಶದಾದ್ಯಂತ ಕಾಯಿಲೆ ಪೀಡಿತರು 3,46,786 ಸಾವು 2,694. ಕನಾ೯ಟಕದಲ್ಲಿ 29,438 ಮತ್ತು ಸಾವು 208. ಈಗ ದೇಶದಲ್ಲಿ ಚುಚ್ಚುಮದ್ದು ಲಭ್ಯ, ಲಾಕ್ ಡೌನ್ ಇಲ್ಲ.    #ಸ್ವಯ೦_ರೋಗ_ಬರದಂತೆ_ಜನಸಂಪರ್ಕದಿಂದ_ದೂರವಿದ್ದು #ಮಾಸ್ಕ್_ಸ್ಯಾನಿಟ್ಟೆಸರ್_ಬಳಸುವ_ಕಡ್ಡಾಯ_ಅಭ್ಯಾಸ_ಮುಂದಿನ_ಮೂರು_ತಿಂಗಳು_ಪಾಲಿಸಲೇ_ಬೇಕು

Blog number 1452. ಕೊರಾನಾ ಲಾಕ್ ಡೌನ್ ಡೈರಿ - 2020, ಲೆಟರ್ ನಂಬರ್ 23 (25- ಏಪ್ರಿಲ್ -2020)

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_23 #ದಿನಾ0ಕ_26_ಏಪ್ರಿಲ್_2020 *ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.    ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.   ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.   ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ  ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.    ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.   ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.   ಇಡೀ ದೇಶದಲ್ಲಿ 18 ಸಾವು ಆಗಿತ್ತು ಮತ್ತು

Blog number 1451.25- ಏಪ್ರಿಲ್ -2019 ಪ್ರಜಾವಾಣಿ - DH ಪ್ರಸರಣಾ ವಿಭಾಗದ ಜನರಲ್ ಮ್ಯಾನೇಜರ್ ಓಲಿವರ್ ಲೆಸ್ಲಿ, ಸಂಗಣ್ಣ ಪ್ರಕಾಶ್ ಮತ್ತು ಸಂಜಯ್ ನನ್ನ ಕಛೇರಿಯಲ್ಲಿ

# ಇವತ್ತಿನ ನನ್ನ ಅತಿಥಿಗಳು   ಇವತ್ತು ಬೆಳಿಗ್ಗೆ ಈ ಮಾಗ೯ದಲ್ಲಿ ಪ್ರಯಾಣಿಸುತ್ತಿದ್ದ ಪ್ರಜಾವಾಣಿ DH ನ ಪ್ರಸಾರಣಾ ವಿಭಾಗದ ಜನರಲ್ ಮ್ಯಾನೇಜರ್ - ಒಲಿವರ್ ಲೆಸ್ಲಿ, ಸಂಗಣ್ಣಾ ಪ್ರಕಾಶ್ ಮತ್ತು ಸ೦ಜೀವ್ ನನ್ನ ಕಚೇರಿಗೆ ಬಂದಿದ್ದರು.   ಗ್ರಾಮೀಣ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರ ಇಲ್ಲದೆ ಸ್ವತಂತ್ರವಾಗಿ ಲಾಡ್ಜ್, ರೆಸ್ಟೋರೆಂಟ್ಗಳನ್ನ 2012 ರಿಂದ ನಡೆಸುತ್ತಿರುವ ನನ್ನ ಸಾಹಸಕ್ಕೆ ಇಂತವರೆಲ್ಲರ ಪ್ರೇರಣೆ ಇದೆ.   ಪ್ರತಿ ದಿನ ಲಾಡ್ಜ್ ಗಾಗಿ 10 ಡೆಕ್ಕನ್ ಹೆರಾಲ್ಡ್ ಮತ್ತು 5 ಪ್ರಜಾವಾಣಿ ಖರೀದಿಸುತ್ತೇನೆ ಮತ್ತು ಉಚಿತವಾಗಿ ಉಳಿದವರಿಗೆ ನೀಡುತ್ತೇನೆ ಇದಕಾಗಿ ಪ್ರಜಾವಾಣಿ ಸಂಸ್ಥೆ ನನಗೆ ರಿಯಾಯಿತಿ ದರದಲ್ಲಿ ಪತ್ರಿಕೆಗಳನ್ನ ನೀಡುತ್ತದೆ.   ಇದರ ಜೊತೆ ವಿಜಯವಾಣಿ, ವಿಜಯ ಕನಾ೯ಟಕ, ಉದಯವಾಣಿ, ಕನ್ನಡ ಪ್ರಭ, ಸಂಯುಕ್ತ ಕನಾ೯ಟಕ, ಹೊಸದಿಗಂತ, ಜನ ಹೋರಾಟ, ಇಂಡಿಯನ್ ಎಕ್ಸ್ ಪ್ರೆಸ್, ವಾರಪತ್ರಿಕೆಗಳಾದ ತರಂಗ, ಸುಧಾ, ಹಾಯ್ ಬೆಂಗಳೂರು, ರೀಡಸ್೯ ಡೈಜೆಸ್ಟ್ ಸ್ವ೦ತಕ್ಕಾಗಿ ಬರುತ್ತದೆ.  ಆದರೆ ಪ್ರಜಾವಾಣಿ ಗುಂಪಿನೊಂದಿಗೆ  ಸಾಂಗತ್ಯ ಜಾಸ್ತಿ ಯಾಕೆಂದರೆ ನಾನು ಹುಟ್ಟುವುದಕ್ಕಿಂತ ಮುಂಚಿನಿಂದ (1965) ನಮ್ಮ ತಂದೆ ಪ್ರಜಾವಾಣಿ ಚಂದಾದಾರರು, ನನಗೆ 54 ವಷ೯ ಅಂದರೆ ಪ್ರಜಾವಾಣಿ ಮತ್ತು ನಮ್ಮ ಸಂಬಂಧಕ್ಕೆ ಮುಂದಿನ ವಷ೯ 55ರ ಮಹೋತ್ಸವ!