Blog number 1371. ಸಾಗರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅತ್ಯುತ್ತಮವಾದ ಐ ಲವ್ ನಮ್ಮ ಸಾಗರ ಗ್ರೂಪ್ ನೀಡಿರುವ ಉತ್ಸಾಹಿ ಯುವಕ ಅಂಜನ್ ಅಮರನಾಥ್ ಕಾಯ್ಕಿಣಿ.
#ಅವರ_ಐ_ಲವ್_ನಮ್ಮ_ಸಾಗರ_ಪೇಸ್_ಬುಕ್_ಗ್ರೂಪ್_ದಾಖಲೆಯ_ವೀಕ್ಷಕರನ್ನು_ಹೊಂದಿದೆ
#33_ಸಾವಿರ_ಸದಸ್ಯರಿದ್ದಾರೆ.
#ಅವರ_ಸಹೋದರಿ_ವಿವಾಹ_ಆಮಂತ್ರಣ_ನೀಡಲು_ಅವರಿಬ್ಬರೂ_ಬಂದಿದ್ದರು.
#ಸಾಗರದ_ಒಂದು_ಕಾಲದ_ಬಸ್_ನಿಲ್ದಾಣದ_ಪ್ರಮುಖ_ಪತ್ರಿಕೆಗಳು_ಸಿಗುತ್ತಿದ್ದ_ಜಾಗ
#ಇವರ_ತಂದೆ_ಅಮರನಾಥ_ಕಾಯ್ಕಿಣಿಯವರದ್ದು.
#ಕಾಯ್ಕಿಣಿ_ಅಂಗಡಿಯಲ್ಲಿ_ಸಿಗದ_ಪತ್ರಿಕೆಯೇ_ಇಲ್ಲ_ಎಂದು_ಪ್ರಸಿದ್ದಿ_ಪಡೆದಿದ್ದರು.
ಐ ಲವ್ ನಮ್ಮ ಸಾಗರ ಎಂಬ ಪೇಸ್ ಬುಕ್ ಗ್ರೂಪ್ ಇವತ್ತಿನವರೆಗೂ ದಾಖಲೆಯ ವೀಕ್ಷಕರನ್ನು ಹೊಂದಿರುವ ಮತ್ತು ಸುಮಾರು 33 ಸಾವಿರ ಸದಸ್ಯರಿರುವ ಏಕೈಕ ಮತ್ತು ನಂಬರ್ ಒನ್ ಗ್ರೂಪ್ ಆಗಿದೆ.
ಈ ಗ್ರೂಪ್ ನಲ್ಲಿ ಸಾಗರಕ್ಕೆ ಸಂಬಂದಪಟ್ಟ ಸಾಹಿತ್ಯ ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಪಟ್ಟ ಸುದ್ದಿ ಮತ್ತ ಲೇಖನಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿದ್ದಾರೆ ಅಷ್ಟೆ ಅಲ್ಲ ಇಲ್ಲಿ ಪ್ರಕಟ ಮಾಡುವ ಲೇಖನ ಅಡ್ಮಿನ್ ಅಂಜನ್ ಕಾಯ್ಕಿಣಿ ಪರಿಶೀಲಿಸಿ ಅನುಮೋದಿಸುತ್ತಾರೆ.
ಹತ್ತು ನಿಯಮಗಳೂ ಈ ಗ್ರೂಪಿನ ಸದಸ್ಯರಾಗುವಾಗ ಪಾಲಿಸಲೇ ಬೇಕು ಈ ಮೂಲಕ ಈ ಗ್ರೂಪ್ ಅನಾವಶ್ಯಕ ಅಪವಾದದಿಂದ ದೂರವಾಗಿ ಆಸಕ್ತರಿಗೆ ಸಾಗರದ ಮಾಹಿತಿ ಕಣಜವಾಗಿದೆ.
ಇವರ ತಂದೆ ಕೆಲವು ದಶಕಗಳ ಕಾಲ ಸಾಗರದಲ್ಲಿ ನಾಡಿನ ಎಲ್ಲಾ ಪತ್ರಿಕೆಗಳನ್ನು ಸಾಗರದ ಮುಖ್ಯ ನಿಲ್ದಾಣದ ಎದುರು ಅವರ ಅಂಗಡಿಯಲ್ಲಿ ಒಂದೇ ಛಾವಣಿಯ ಅಡಿಯಲ್ಲಿ ಲಭ್ಯವಿರುವಂತೆ ಮಾಡಿದ್ದರಿಂದ ಸಾಗರ ತಾಲ್ಲುಕಿನಾದ್ಯಂತ ಪತ್ರಿಕೆ ಓದುಗರಿಗೆ ಸಾಹಿತ್ಯಾಸಕ್ತರಿಗೆ ಇವರ ಅಂಗಡಿ ಪ್ರಸಿದ್ದಿ ಆಗಿತ್ತು ಮತ್ತು #ಕಾಯ್ಕಿಣಿ_ಪೇಪರ್_ಅಂಗಡಿ ಎಂದೇ ಹೆಸರು ಉಳಿದಿದೆ ಈಗ ಬಸ್ ನಿಲ್ದಾಣ ಸ್ಥಳಾಂತರವಾಗಿದೆ, ಈ ಸ್ಥಳಕ್ಕೆ ಹಳೇ ಬಸ್ ನಿಲ್ದಾಣ ಎಂಬ ಹೆಸರು ಬಂದಿದೆ.
ಇವರ ಏಕೈಕ ಪುತ್ರ ಅಂಜನ್ ಅಮರನಾಥ್ ಕಾಯ್ಕಿಣಿ ಪದವಿದರರಾಗಿ ಅನೇಕ ವ್ಯವಹಾರದ ಜೊತೆ ಸಾಗರದ ಜನತೆಗಾಗಿ ಅತ್ಯುತ್ತಮವಾದ ಸಾಮಾಜಿಕ ಜಾಲ ತಾಣವಾದ #ಐ_ಲವ್_ನಮ್ಮ_ಸಾಗರ ನೀಡಿದ್ದಕ್ಕೆ ಅಭಿನಂದಿಸುತ್ತೇನೆ.
ಎರೆಡು ತಿಂಗಳ ಹಿಂದೆ ಅಣ್ಣ ತಂಗಿ ನನ್ನ ಕಛೇರಿಗೆ ಬಂದಾಗ ಇವರ ಪೋಟೋಗಳು ತೆಗೆದಿದ್ದೆ ಆದರೆ ಆ ಪೋಟೋಗಳು ಹೇಗೋ ಗೊತ್ತಾಗದೆ ಡಿಲಿಟ್ ಆಗಿ ಬಿಟ್ಟಿತ್ತು.
ಮೊನ್ನೆ ಅಂಜನ್ ಕಾಯ್ಕಿಣಿ ಬಂದಿದ್ದರು ಇವರ ಸಹೋದರಿ ಅನುಷಾರ ವಿವಾಹ ಆಮಂತ್ರಣ ನೀಡಲು, ಇದೇ ತಿಂಗಳ 30 ನೇ ತಾರೀಖು (30 ಏಪ್ರಿಲ್ 2023 ಭಾನುವಾರ) ಸಾಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವೀರ ವಿಠಲ ಸಭಾಭವನದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.
ಇವರ ಸಹೋದರಿಯಾದ ಮದುಮಗಳೇ ಸ್ಟತಃ ಸಹೋದರನ ಜೊತೆ ವಿವಾಹ ಆಮಂತ್ರಣ ನೀಡಿದ್ದರಿಂದ ಮತ್ತು ಇವರ ತಂದೆ ಅಮರನಾಥ್ ಕಾಯ್ಕಿಣಿ ಸಾಗರದ ಸಮಸ್ತ ಪತ್ರಿಕಾ ಬಳಗಕ್ಕೆ ಸಹಕಾರಿಯಾದ್ದರಿಂದ ವಿವಾಹ ಮುಹೂರ್ತದಲ್ಲಿ ಭಾಗವಹಿಸಲೇ ಬೇಕು.
Comments
Post a Comment