#ಕಡೂರು_ಕ್ಷೇತ್ರದಿಂದ_ಕಾಂಗ್ರೇಸ್_ಟಿಕೇಟು_ನಿರಾಕರಿಸಲಾಗಿದೆ
#ಜೆಡಿಎಸ್_ತ್ಯಜಿಸಿ_ಕಾಂಗ್ರೇಸ್_ಸೇರಿಸಿಕೊಳ್ಳುವಾಗ_ನೀಡಿದ_ಭರವಸೆ_ಹುಸಿ_ಆಯಿತು.
#ಚುನಾವಣಾ_ಸ್ಪರ್ದಿಗಳು_ಎರೆಡು_ಲಕ್ಷ_ಪಾವತಿ_ಮಾಡಲೇ_ಬೇಕೆಂಬ_ಕಾಂಗ್ರೇಸ್_ರೂಲ್ಸ್
#ದತ್ತಣ್ಣರ_ಜೆಡಿಎಸ್_ತೊರೆಯುವ_ಕಾಂಗ್ರೇಸ್_ಸೇರುವ_ತೀಮಾ೯ನ_ಎಲ್ಲೊ_ತಪ್ಪಾಗಿದೆ
ಜನ ಸಾಮಾನ್ಯ, ಅಹ೯ತೆ ಇದ್ದರೂ ಹಣ ಇಲ್ಲವೆಂದರೆ ಪಕ್ಷದ ಟಿಕೇಟಿಗೆ ಅಜಿ೯ ಸಲ್ಲಿಸ ಬಾರದೆಂಬ ಕರ್ನಾಟಕ ರಾಜ್ಯದ ಕಾಂಗ್ರೇಸ್ ಪಕ್ಷದ ತೀರ್ಮಾನವೇ ಟಿಕೇಟಿನ ಅರ್ಜಿ ಜೊತೆಗೆ 2 ಲಕ್ಷದ ಪಾವತಿ ಅನ್ನುವುದು ಸುಳ್ಳಲ್ಲ ಮತ್ತು ಸಂದರ್ಶನದಲ್ಲಿ 10 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಾ ಎಂಬ ಕಾಂಗ್ರೇಸ್ ಪಕ್ಷದ ಪ್ರಶ್ನೆಗಳ ಸಾಲಿನಲ್ಲಿ ಈಗ ಸಂಭಾವಿತ ದತ್ತಣ್ಣರಿಗೆ ಟಿಕೇಟು ಇಲ್ಲವಾಗಿದೆ.
ರಾಜ್ಯದಾದ್ಯಂತ ದತ್ತಣ್ಣ ಅಭಿಮಾನಿಗಳಿಗೆ ನಿರಾಶೆ ಆಗಿದೆ ದೇವೇಗೌಡರು ಈ ಶಿಷ್ಯನ ತಪ್ಪು ಮನ್ನಿಸಿ ಜೆಡಿಎಸ್ ನಿಂದ ಕಡೂರು ಅಭ್ಯರ್ಥಿ ಮಾಡುತ್ತಾರಾ? ಎಂಬ ನಿರೀಕ್ಷೆಯಲ್ಲಿದ್ದಾರೆ.
ದೇವೇಗೌಡರೇ ಮೇಷ್ಟರೇ ಎಂದು ಕರೆಯುತ್ತಿದ್ದ ಯಗಟಿ ಸೂರ್ಯನಾರಾಯಣ ವೆಂಕಟೇಶ್ ದತ್ತರನ್ನು YSV ದತ್ತಾ ಎಂತಲೇ ಜನ ಕರೆಯುತ್ತಾರೆ, ಗಣಿತ ಮತ್ತು ಬೌತಶಾಸ್ತ್ರ ಅಧ್ಯಾಪಕರಾಗಿದ್ದವರು ದತ್ತಣ್ಣ.
ಜೆ.ಡಿಎಸ್.ನಿಂದ 2006 ರಿಂದ 2012 ವಿದಾನ ಪರಿಷತ್ ಸದಸ್ಯರಾಗಿ, 2013 ರಿಂದ 2018 ವಿದಾನ ಸಭಾ ಸದಸ್ಯರಾಗಿದ್ದವರು.
ಕಳೆದ ಜನವರಿ 14 ರಂದು ಜೆಡಿಎಸ್ ಪಕ್ಷ ತ್ಯಜಿಸಿ ಈ ಬಾರಿಯ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಕಾಂಗ್ರೇಸ್ ನಿಂದ ಸ್ಪರ್ಧಿಸುವ ಮಹತ್ವಾಕಾಂಕ್ಷೆಯಿಂದ ಕಾ೦ಗ್ರೇಸ್ ಸೇರಿದ್ದರು, ಕಾಂಗ್ರೇಸ್ ಪಕ್ಷದ ದುರೀಣರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಭರವಸೆ ನೀಡಿದ್ದರು.
ಕಾಂಗ್ರೇಸ್ ಪಕ್ಷದಲ್ಲಿ ಎರೆಡು ಲಕ್ಷ ಹಣ ಪಾವತಿ ಮಾಡಿ ಟಿಕೇಟಿಗೆ ಅರ್ಜಿ ನೀಡಿದ್ದರು, ಪಕ್ಷದ ಆಂತರಿಕ ಸಮೀಕ್ಷೆ ಇವರ ಪರವಾಗಿದ್ದರೂ ದತ್ತಾರವರಿಗೆ ಟಿಕೇಟು ನಿರಾಕರಿಸಲಾಗಿದೆ, ಈ ಮೂಲಕ ದತ್ತಣ್ಣರಿಗೆ ಕಾಂಗ್ರೇಸ್ ಪಕ್ಷದಿಂದ ಅವಮಾನ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಟಿಕೇಟು ನಿರಾಕರಿಸಲು ಇವರ ಆಡಿಯೋ ಒಂದು ಕಾರಣ ಅದರಲ್ಲಿ ಸಿದ್ದರಾಮಯ್ಯ ಪರವಾಗಿ ಮತ್ತು ಡಿಕೆಶಿ ವಿರುದ್ಧ ಇವರು ಮಾತಾಡಿದ್ದು ಕಾರಣ ಅನ್ನುತ್ತಾರೆ.
ಇನ್ನೊಂದು ಕಾರಣ ಜೆಡಿಎಸ್ ವರಿಷ್ಟರು ದತ್ತಣ್ಣರಿಗೆ ಟಿಕೇಟು ನೀಡದಂತೆ ಕಾಂಗ್ರೇಸ್ ಗೆ ತಾಕೀತು ಮಾಡಿತ್ತು ಅನ್ನುತ್ತಾರೆ.
ಇದರ ಮಧ್ಯೆ ದತ್ತಣ್ಣ ಅವರಿಗೆ MLC ಮಾಡುತ್ತಾರೆ ಆದ್ದರಿಂದ ಟಿಕೇಟು ನಿರಾಕರಿಸಲಾಗಿದೆ ಎಂದೂ ಸುದ್ದಿ ಇದೆ ಆದರೆ 70 ರ ವಯೋಮಾನದ ದತ್ತಣ್ಣ ಜೆಡಿಎಸ್ ತೊರೆದು ತಪ್ಪು ಮಾಡಿದರಾ? ಅನ್ನಿಸುತ್ತೆ.
ಸಿದ್ದರಾಮಯ್ಯ ಒ0ದು ಕಾಲದ ತಮ್ಮ ಸಹೋದ್ಯೋಗಿಗೆ ಟಿಕೇಟು ಕೊಡಿಸಲಾಗದಷ್ಟು ಅಸಹಾಯಕರ? ಜೆಡಿಎಸ್ ಮಾತು ಕಾಂಗ್ರೇಸ್ ನಿರಾಕರಿಸಲಾಗಲಿಲ್ಲವಾ? ದತ್ತಣ್ಣರ ಆಡಿಯೋದಿಂದ ಡಿಕೆಶಿ ನಿಜಕ್ಕೂ ಸಿಟ್ಟಾದರ? ಮುಂತಾದ ಪ್ರಶ್ನೆಗಳು ಇದೆ.
ಇನ್ನೆರೆಡು ದಿನದಲ್ಲಿ ತಮ್ಮ ತೀಮಾ೯ನ ತಿಳಿಸುವುದಾಗಿ ದತ್ತಣ್ಣ ಹೇಳಿದ್ದಾರೆ ನೋಡಬೇಕು ಮರಳಿ ಜೆಡಿಎಸ್ ಸೇರಿ ಸ್ಪರ್ದೆ ಮಾಡುತ್ತಾರಾ ಎಂದು.
ಇಡೀ ರಾಜ್ಯದಲ್ಲಿ ದತ್ತಣ್ಣರ ಸರಳತೆಗೆ ಅಸಂಖ್ಯ ಅಭಿಮಾನಿಗಳಿದ್ದಾರೆ ಅವರೆಲ್ಲರಿಗೂ ದತ್ತಣ್ಣರಿಗೆ ಟಿಕೇಟು ಸಿಗದ ಬಗ್ಗೆ ಬೇಸರ ಇದೆ ಅದೇ ರೀತಿ ದತ್ತಣ್ಣರ ಅಭಿಮಾನಿಯಾದ ನನಗೂ ನಿರಾಸೆ ಆಗಿದೆ.
70 ರ ನಿವೃತ್ತಿ ವಯಸ್ಸಲ್ಲಿ MLC ಮಾಡುವ ಭರವಸೆ ನನಗೆ ಗ್ಯಾರಂಟಿ ಇಲ್ಲ, ಸಜ್ಜನ ರಾಜಕಾರಣಿ ದತ್ತಣ್ಣ ಟಿಕೇಟಿಗೆ ಪಾವತಿ ಮಾಡಿದ 2 ಲಕ್ಷ ಹಣ ಕಾಂಗ್ರೇಸ್ ಪಕ್ಷ ವಾಪಾಸು ನೀಡಲಿ ಅನ್ನಿಸಿದೆ (ಅದು ಸಾಧ್ಯವಿಲ್ಲ), ಜಾತಿ-ಹಣದ ಅಡ್ಜಸ್ಟ್ ಮೆಂಟ್ ರಾಜಕಾರಣದಲ್ಲಿ ದತ್ತಣ್ಣನಂತವರು ಅಪ್ರಸ್ತುತ ಅನ್ನುವುದು ಸಾಬೀತಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನನ್ನ ಕಛೇರಿಗೆ ದತ್ತಣ್ಣ ಬಂದಿದಾಗ ಬರೆದ ಬ್ಲಾಗ್ ಇಲ್ಲಿದೆ https://arunprasadhombuja.blogspot.com/2022/09/blog-number-953.html
Comments
Post a Comment