Skip to main content

Blog number 1473. ರಾಜಕಾರಣದ ಒಳಗುಟ್ಟು ಭಾಗ - 16.ಲೋಕಸಭಾ ಚುನಾವಣೆ ಅಂಕಣ 2019 (30- ಏಪ್ರಿಲ್ -2019)

# ರಾಜಕಾರಣದ ಒಳಗುಟ್ಟು #
ಲೋಕಸಭಾ ಚುನಾವಣಾ ಅಂಕಣ 
ಭಾಗ - 16.
  
  ಕೋಲಾರ ಜಿಲ್ಲೆಯ ರಾಜಕಾರಣ ಬದಲಾಯಿಸಲಿರುವ ಕೊತ್ತೂರು ಮಂಜುನಾಥ್ ಎಂಬ ರಾಜಕಾರಣದ ಬೆಂಕಿ ಚೆಂಡು.

 
  ಈ ಸಾರಿ ಕೋಲಾರದ ಲೋಕಸಭಾ ಚುನಾವಣೆಯಲ್ಲಿ 7 ನೇ ಬಾರಿ ಸಂಸದರಾಗುವ ಅವಕಾಶ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪರಿಗೆ  ಅಷ್ಟು ಸುಲಭವಾಗಿಲ್ಲ.
  ಇವರ ಎದುರು ದಿಡೀರ್ ಆಗಿ ಬಿಜೆಪಿಯಿಂದ ಬೆಂಗಳೂರಿನ ಕಾಪೊ೯ರೇಟರ್ S. ಮುನಿಸ್ವಾಮಿಯವರನ್ನ ನಿಲ್ಲಿಸಲಾಗಿದೆ.
   ಕಾಂಗ್ರೇಸ್ ನವರು ಮೈತ್ರಿ ದಮ೯ ಮುರಿದಿದ್ದಾರೆ, ಇದಕ್ಕೆ ದೀಘ೯ವಾದ ಇತಿಹಾಸವು ಇದೆ.
  ಕೆ.ಹೆಚ್.ಮುನಿಯಪ್ಪ ಸತತ ಲೋಕಸಭೆಗೆ ಮೀಸಲು ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು ಆದರೆ ಇಡೀ ಜಿಲ್ಲೆಯಲ್ಲಿ ಬೇರಾರನ್ನು ಬೆಳೆಸಿದವರಲ್ಲ, ಸ್ವಂತ ಆಹ೯ತೆಯಿಂದ ಕಾಂಗ್ರೇಸ್ ರಾಜಕಾರಣದಲ್ಲಿ ಬೆಳೆದರೆ ಅವರ ರಾಜಕೀಯ ಜೀವನ ಮುಗಿಸುವ ತನಕ ವಿರಮಿಸದ ದುಷ್ಟ ರಾಜಕಾರಣ ಇವರದ್ದು.
  2013 ರಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರ ( ಮೀಸಲು ಕ್ಷೇತ್ರ)ದಿಂದ ಕಾಂಗ್ರೇಸ್ನಿಂದ ಸ್ಪದಿ೯ಸಲು ಕೊತ್ತುರು ಮಂಜುನಾಥ ಇಡೀ ಕ್ಷೇತ್ರ ಸ೦ಘಟನೆ ಮಾಡುತ್ತಾರೆ, ಅವರ ಸಂಘಟನಾ ಚತುರತೆ, ಜನಪ್ರಿಯತೆ ನೋಡಿದವರು ಮುನಿಯಪ್ಪರಿಗೆ ಚಾಡಿ ಚುಚ್ಚುತ್ತಾರೆ, ಮOಜುನಾಥಗೆ ಮುಳಬಾಗಿಲಿಂದ ಕಾಂಗ್ರೇಸ್ ನಿಂದ ಶಾಸಕನಾಗಿ ಮಾಡಿದರೆ ಮುಂದೆ ಅವರು ನಿಮ್ಮ ಲೋಕಸಭಾ ಸ್ಥಾನಕ್ಕೆ ಚ್ಯುತಿ ತರುತ್ತಾರೆ ಅಂತ, ಇದರಿಂದ ಮಂಜುನಾಥಗೆ ಕಾಂಗ್ರೇಸ್ ಟಿಕೇಟ್ ಸಿಗದಂತೆ ಮಾಡುತ್ತಾರೆ.
  ಇದನ್ನ ಸವಾಲಾಗಿ ಸ್ವೀಕರಿಸಿದ ಕೊತ್ತುರು ಮಂಜುನಾಥ ಪಕ್ಷೇತರ ಸ್ಪದೆ೯ ಮಾಡಿ ಎಲ್ಲಾ ರಾಷ್ಟ್ರಿಯ ಪಕ್ಷಗಳ ಠೇವಣಿ ಇಲ್ಲದಂತೆ ಮಾಡಿದರು,2015ರಲ್ಲಿ ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯರ ಒತ್ತಾಯಕ್ಕೆ ಕಾಂಗ್ರೇಸ್ ಸೇರುತ್ತಾರೆ.
  ಇವರನ್ನ ಸಂಪೂಣ೯ ರಾಜಕೀಯದಿಂದ ತೆಗೆಯುವ ಪ್ರಯತ್ನದಲ್ಲಿ ವಿಪಲರಾದ ವಿರೋದಿಗಳು ಇವರ ಜಾತಿ ದೃಡೀಕರಣದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತಾರೆ, ಬುಡಗ ಜಂಗಮ ಜಾತಿಯವರಲ್ಲ ಎಂದು ವಾದಿಸುತ್ತಾರೆ.
  2018ರಲ್ಲಿ ಇವರು ಕಾಂಗ್ರೇಸ್ ಅಧಿಕೃತ ಅಭ್ಯಥಿ೯ ಆಗಿ ನಾಮ ಪತ್ರ ಸಲ್ಲಿಸಿದಾಗ ಜೆಡಿಎಸ್ ಅಭ್ಯಥಿ೯ ನಾಮಪತ್ರ ಪರಿಶೀಲನೆಯಲ್ಲಿ ಆಕ್ಷೇಪಿಸುತ್ತಾರೆ, ಹಿಂದಿನ ಹೈ ಕೊಟ್೯ ಆದೇಶ ಮಂಡಿಸುತ್ತಾರೆ ಇವರ ನಾಮಪತ್ರ ರದ್ದಾಗುತ್ತದೆ.
  ಇದೆಲ್ಲದರ ತೆರೆಮರೆಯ ರೂವಾರಿ ಸಂಸದ ಮುನಿಯಪ್ಪ ತಮ್ಮ ಮಗಳು ನಂದಿನಿಯವರನ್ನ ಇಲ್ಲಿ ಪಕ್ಷೇತರ ಅಭ್ಯಥಿ೯ ಆಗಿ ನಾಮ ಪತ್ರ ಸಲ್ಲಿಸಿರುತ್ತಾರೆ, ಇವರ ನಾಮ ಪತ್ರ ರದ್ದಾಗಿದ್ದರಿಂದ ಕಾಂಗ್ರೇಸ್ ಪಕ್ಷ ತನ್ನ ಮಗಳಿಗೆ ಅವಕಾಶ ನೀಡುತ್ತೆ ಎಂಬ ಅವರ ನಂಬಿಕೆ ಹುಸಿ ಆಗುತ್ತೆ ಏಕೆಂದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೊತ್ತೂರು ಮಂಜುನಾಥ ಯಾರನ್ನ ಹೇಳುತ್ತಾರೋ ಅವರನ್ನ ಪಕ್ಷ ಬೆಂಬಲಿಸುತ್ತದೆ ಎನ್ನುತ್ತಾರೆ.
  ಮಂಜುನಾಥರ ಗೆಳೆಯ H.ನಾಗೇಶ್ ರನ್ನ ಪಕ್ಷೇತರವಾಗಿ ಗೆಲ್ಲಿಸುತ್ತಾರೆ, ರಾಜ್ಯದಲ್ಲಿ ಕಾಂಗ್ರೇಸ್ ಬಹುಮತ ಕಳೆದುಕೊಳ್ಳುವುದು ಗೊತ್ತಾಗಿ ಡಿ.ಕೆ. ಶಿವಕುಮಾರ್ ನಾಗೇಶ್ ರನ್ನ ಮಂತ್ರಿ ಮಾಡುವುದಾಗಿ ಕೊತ್ತುರು ಮಂಜುನಾಥರಿಗೆ ಭರವಸೆ ನೀಡಿ ಕೌಂಟಿ0ಗ್ ಮುಗಿಯುವ ಮೊದಲೆ ಅವರ ಕಾರಿನಲ್ಲಿ ಕರೆದೊಯ್ಯುತ್ತಾರೆ ನಂತರ JDS ಹೊಂದಾಣಿಕೆ ಆದಾಗ H. ನಾಗೇಶ್ ಗೆ, ರಮೇಶ್ ಕುಮಾರ್ ಗೆ ಮಂತ್ರಿ ಸ್ಥಾನ ಸಿಗದ೦ತೆ ವಿರೋದಿಗಳು ಯಶಸ್ವಿ ಆಗುತ್ತಾರೆ.
  ಹಾಗಾಗಿ ಈ ಬಾರಿ ಕೊತ್ತುರು ಮಂಜುನಾಥ,ಸ್ಪೀಕರ್ ರಮೇಶ್ ಕುಮಾರ್ ಮತ್ತು ಕೋಲಾರದ ಮುಖ೦ಡರೆಲ್ಲ ಸೇರಿ ದೆಹಲಿಗೆ ಹೋಗಿ ರಾಹುಲ್ ಗಾಂಧಿಗೆ ಮುನಿಯಪ್ಪರ ಬದಲು ಬೇರಾರನ್ನಾದರೂ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಅಂದಿದ್ದರು ಈ ಹಂತದಲ್ಲಿ ದೇವೇಗೌಡರ ಬೆಂಬಲದಿಂದ ಮುನಿಯಪ್ಪ ಪುನಃ ಕಾಂಗ್ರೇಸ್ ಅಭ್ಯಥಿ೯ ಆದರು ಇದರಿಂದ ಕೊತ್ತುರು ಮಂಜುನಾಥ ಯಡೂರಪ್ಪರ ಮುಖಾಂತರ ಅಮಿತ್ ಶಾಹರನ್ನ ಒಪ್ಪಿಸಿ S. ಮುನಿಸ್ವಾಮಿಯವರನ್ನ ಬಿಜೆಪಿಯಿಂದ ಅಭ್ಯಥಿ೯ ಮಾಡಿ ಚುನಾವಣೆ ಮುಗಿಸಿದ್ದಾರೆ.
  ಗುಪ್ತಾಚಾರ ವರದಿ ಕಾಂಗ್ರೇಸ್ ಮುನಿಯಪ್ಪರ ಗೆಲುವ ಕಷ್ಟ ಅನ್ನುತ್ತಿದೆ, ಈವರೆಗೆ ತುಳಿಸಿಕೊಂಡವರೆಲ್ಲ ಮುನಿಯಪ್ಪರನ್ನ ಎದುರಿಸಲಾರದೆ ಬದಿಗೆ ಸರಿದವರು ಕೊತ್ತುರು ಮಂಜುನಾಥ್ ಎಂಬ ಬೆಂಕಿ ಚೆಂಡಿನಂತ ಯುವ ಸ೦ಘಟಕ ಮುನಿಯಪ್ಪರನ್ನ ನೇರವಾಗಿ ಎದುರಿಸಿ ನಿಂತಿದ್ದರಿಂದ ಎಲ್ಲರೂ ಒಂದಾಗಿ ಮುನಿಯಪ್ಪರ ಸೋಲಿಗೆ ಕೈ ಜೋಡಿಸಿದ್ದಾರೆ.
  ಪಲಿತಾಂಶ ಏನೇ ಆಗಲಿ ಕೋಲಾರ ಜಿಲ್ಲೆಯ ರಾಜಕಾರಣ ಮುಂದಿನ ದಿನದಲ್ಲಿ ಬದಲಾಗಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ