Skip to main content

Blog number 1385. ಕುಣುಬಿ ಜನರು ಸಂರಕ್ಷಿಸಿಕೊ೦ಡು ಬಂದಿರುವ ಅಮೂಲ್ಯ ಗೆಡ್ಡೆ ಗೆಣಸುಗಳ ಭಂಡಾರ ನೋಡಿದರೆ ಅರಿವಾದೀತು ಅವರ ಜೀವ ವೈವಿಧ್ಯಗಳ ಕಾಳಜಿ.

#ಆನಂದಪುರಂ_ಇತಿಹಾಸ_ಸಂಖ್ಯೆ_91.

#ಸಾಗರ_ತಾಲ್ಲೂಕಿನ_ಮೊದಲ_ಕುಣುಬಿ_ಸಮಾಜದ_ಸಮಾವೇಷ_ಆನಂದಪುರಂನಲ್ಲಿ

#ಸರ್ಕಾರಗಳು_ಕುಣುಬಿ_ಜನಾಂಗ_ಕಡೆಗಾಣಿಸಿದೆ

#ಬೇರೆ_ರಾಜ್ಯದಲ್ಲಿ_ಪರಿಶಿಷ್ಟಪಂಗಡ

#ನಮ್ಮ_ರಾಜ್ಯದಲ್ಲಿ_ಇಲ್ಲ_ಆ_ಸವಲತ್ತು

#ಕುಣುಬಿ_ಜನಾಂಗ_ಸಂರಕ್ಷಿಸಿಕೊಂಡು_ಬಂದ_ಗೆಡ್ಡೆ_ಗೆಣಸು,

#ಜೊಯಿಡಾದ_ಮಹಾದೇವ_ಬುದೋ_ವೆಳಿಪ_ಮೊದಲ_ಮತ್ತು_ಏಕೈಕ_ರಾಜ್ಯಪ್ರಶಸ್ತಿ_ಪಡೆದವರು

#ಸಾಗರ_ತಾಲ್ಲೂಕಿನ_ಮರಾಠಿ_ಗ್ರಾಮದ_ಕುಣುಬಿ_ಜನರ_ಜಮೀನು_ಜೀವ_ವೈವಿಧ್ಯ_ತಾಣಕ್ಕೆ

#ಈ_ಬಾರಿಯ_ಸಾಗರ_ವಿದಾನಸಭಾ_ಚುನಾವಣೆ_ಬಹಿಷ್ಕರಿಸಿದ್ದಾರೆ.

#ಜೊಯಿಡಾದ_ಕುಣುಬಿ_ಜನರ_ಕೆಸವಿನ_ಬೀಜ_ತರಿಸಿದ_ಪತ್ರಕರ್ತ_ಶೃಂಗೇಶ್.

#ಶಿವಮೊಗ್ಗ_ಜಿಲ್ಲಾ_ಕುಣುಬಿ_ಜನಾಂಗದ_ಮೊದಲ_ಸಮಾವೇಷ_ಕೋಗಾರಿನ_ದೇವಗಾರು_ಗ್ರಾಮದಲ್ಲಿ.

    ಪತ್ರಕರ್ತ ಗೆಳೆಯರಾದ ಶೃಂಗೇಶ್ ರವಿ ಬೆಳೆಗೆರೆ ಅವರ ಹಾಯ್ ಬೆಂಗಳೂರಿನ ರೋವಿಂಗ್ ರಿಪೋರ್ಟರ್ ಅಂತ ಬೆಳಗೆರೆಯಿಂದಲೇ ಕರೆಸಿಕೊಂಡವರು, ಈಗ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ಸಂಪಾದಕರು.
  ಶೃಂಗೇರಿಯ ಪಿತ್ರಾರ್ಜಿತ ಅಡಿಕೆ ತೋಟದ ಕೃಷಿ ಮಾಡಿ ಅನುಭವದೊಂದಿಗೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದಲ್ಲಿ ಒಣ ಭೂಮಿ ಖರೀದಿಸಿ ಅನೇಕ ಕೃಷಿ ಪ್ರಯೋಗ ಮಾಡುತ್ತಿದ್ದಾರೆ.
  ಮೊನ್ನೆ ದೂರದ ಜೋಯಿಡಾದಿಂದ ಕುಣುಬಿ ಜನರು ಸಂರಕ್ಷಿಸಿಕೊಂಡು ಬಂದಿರುವ ಕೆಸುವಿನ ಬೀಜ ತರಿಸಿ ನಾಟಿ ಮಾಡಿಸುತ್ತಿದ್ದಾರೆ ನನಗಾಗಿ ಈ ಬೀಜದ ಕೆಸುವಿನ ಬೀಜ ನೀಡಿದ್ದಾರೆ.
  ನಾನು ಅವರಿಂದ ಮಾಹಿತಿ ಪಡೆದು ಬೀಜದ ಕೆಸುವಿನ ಮೊಳಕೆ ಪಾಟಿನಲ್ಲಿ ನಾಟಿ ಮಾಡಿದ್ದೇನೆ ಅದು ಬೀಜ ಮೊಳೆತು ಎಲೆ ಆಗಿ ದೊಡ್ಡದಾಗಲು 20 ರಿಂದ 25 ದಿನ ಬೇಕು, ಮೊದಲ ಮುಂಗಾರುಮಳೆಗೆ ಒಂದು ಅಡಿ ಆಳದ ಟ್ರೆಂಚ್ ಮಾಡಿ ಅದರ ಆಳದಲ್ಲಿ ಅದನ್ನು ನಾಟಿ ಮಾಡಿ ಒಣ ಎಲೆಗಳನ್ನು ಮುಚ್ಚಬೇಕು, ಕೆಸವಿನ ಗಿಡ ಮೇಲೆ ಬಂದಾಗಲೆಲ್ಲ ಮಣ್ಣು ಮುಚ್ಚುತ್ತಾ ಬರಬೇಕು.
    ಒಂದು ಅಡಿಗಿಂತ ಜಾಸ್ತಿ ಆದ ಮೇಲೆ ತೆಗೆದರೆ ಈ ಕೆಸುವಿನ ಗೆಡ್ಡೆ ಬಳಸಲು ಯೋಗ್ಯವಾಗುತ್ತದೆ.
  ಕೆಸುವಿನ ಗೆಡ್ಡೆಯಲ್ಲಿ ಪಿಷ್ಟದ ಅಂಶವಿರುವುದು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು, ಕೆಸುವಿನ ನಾರಿನಂಶ ಜೀರ್ಣಿಸುವುದಿಲ್ಲ, ಅದು ಜಠರದಲ್ಲಿ ಉಳಿದು ನಂತರ ಕರಳನ್ನು ತಲುಪಿ ಆರೋಗ್ಯಕರ ಬ್ಯಾಕ್ಟೀರಿಯ ಉತ್ಪತ್ತಿಗೆ ಸಹಾಯ ಮಾಡುತ್ತದೆ, ಇದು ಕರಳಿನ ಉರಿಯೂತ ಮತ್ತು ಕರಳು ಕ್ಯಾನ್ಸರ್ ತಡೆಯುವ ದಿವ್ಯ ಔಷದವಾಗಿದೆ.
   ಜೋಯಿಡಾ ತಾಲ್ಲೂಕಿನ ಜೋಯಿಡಾ ಮತ್ತು ರಾಮನಗರ ಈ ಗೆಡ್ಡೆ ಗೆಣಸುಗಳ ಪ್ರಮುಖ ಮಾರುಕಟ್ಟೆ .
    ಹೊರ ಪ್ರಪ೦ಚಕ್ಕೆ ಗೊತ್ತೇ ಇರದ ಗೆಡ್ಡೆ ಗೆಣಸು ಸಂರಕ್ಷಿಸಿಕೊಂಡು ಬಂದಿರುವ ಜೋಯಿಡಾ ತಾಲ್ಲೂಕಿನ ಡೇರಿಯಾ, ಡಿಗ್ಲಿ, ಬಜಾರ ಕುಣ೦ಗ, ನಿಗಂಡಿ, ತೇರಾಳಿ, ನುಜ್ಜಿ, ಕುಂಡಲ, ಬಾಡ ಪೋಲಿ, ದುಮಾಳ, ಕರ೦ಜೋಯಿಡಾ, ಅಣಶಿ, ಕುಂಬಾರವಾಡ, ಕುವೇಶಿ ಮುಂತಾದ ಹಳ್ಳಿಗಳ ಕುಣುಬಿ ಜನರ ಹಿತ್ತಲಲ್ಲಿ ಗೆಡ್ಡೆ ಗೆಣಸು ಬೆಳೆಯುತ್ತಾರೆ.
  ಕುಣುಬಿ ಜನರು ಗೆಣಸಿಗೆ ಕೋನ್ ಅನ್ನುತ್ತಾರೆ ಅವರಲ್ಲಿ ಲಭ್ಯವಿರುವ ತಳಿಗಳು ಆಳೆಕೋನ್, ದಯೇ ಕೊನ್, ತಾಂಬ್ಡೆ ಕೊನ್, ದುಕರ್ ಕೋನ್, ನಾಗರ್ ಕೋನ್, ಮಾ೦ಡೆಕೋನ್, ಆಳೆಕೋನ್,ಜೇನಿಕೊನ್, ಹುಂಡು, ಕಾಳ್ಳೆಪೆರೊ, ದುರತಾಳಿ, ಕಾಟೆ ಕಣಗಾ, ಝಾಡಾಕಣಗಾ, ತಾರೇಟಿ ಕಣಗಾ ತಳಿಗಳು ಇದೆ.
  ಕುಣುಬಿ ಜನ ಸಂರಕ್ಷಿಸಿಕೊಂಡು ಬಂದಿರುವ ಕೆಸುವಿನ ಗೆಡ್ಡೆಗೆ ಮುಡ್ಲಿ ಅನ್ನುತ್ತಾರೆ ಇವರಲ್ಲಿ ಲಭ್ಯವಿರುವ ದಾವಾ ಮುಡ್ಲಿ, ಚೆಡ್ವಾಲಿ ಮುಡ್ಲಿ, ರಕ್ಯಾಮುಡ್ಲಿ, ಕುಣುಬಿ ಮುಡ್ಲಿ ಪ್ರಸಿದ್ಧಿ ಆಗಿದೆ.
   ಇಂತಹ ಕುಣುಬಿ ಜನಾ೦ಗ ಸಂರಕ್ಷಿಸಿದ ಗೆಡ್ಡೆ ಗೆಣಸುಗಳಲ್ಲಿ 38 ಜಾತಿಯ ಗೆಡ್ಡೆ ಗೆಣಸು ಗುರುತಿಸುವ ಕುಣುಬಿ ಜನಾಂಗದ ಮಹಾದೇವ ಬುದೋ ವೇಳಿಪ್ ಗೆ 2021 ರ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ ರಾಜ್ಯ ಪ್ರಶಸ್ತಿ ಕುಣುಬಿ ಜನಾಂಗದಲ್ಲಿ ಪಡೆದ 92 ರ ವಯೋಮಾನದ ಇವರು ಮೊದಲ ಮತ್ತು ಏಕೈಕ ವ್ಯಕ್ತಿ ಆಗಿದ್ದಾರೆ.
  ಪಕ್ಕದ ಗೋವಾದಲ್ಲಿ ಪರಿಶಿಷ್ಟ ಪಂಗಡ ಸವಲತ್ತು ಪಡೆದ ಈ ಗುಡ್ಡಗಾಡು ಕುಣುಬಿ ಜನಾಂಗದವರಿಗೆ ಕನಾ೯ಟಕ ರಾಜ್ಯದಲ್ಲಿ ಈ ಸವಲತ್ತು ಇಲ್ಲ ಇದಕ್ಕಾಗಿ ಮೊದಲ ಬಾರಿಗೆ 1995ರಲ್ಲಿ ಸಾಗರ ತಾಲ್ಲೂಕ್ ಕುಣುಬಿ ಜನಾಂಗದ ಸಮಾವೇಶ ಆನಂದಪುರಂನ ಶ್ರೀರಂಗನಾಥ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಆಗಿನ ಜಿಲ್ಲಾ ಸಹಕಾರಿ ಸಂಘಗಳ ರಿಜಿಸ್ಟಾರ್ ಆಗಿದ್ದ ನನ್ನ ಗುರುಗಳಾದ ಕಾಳೇಶ್ವರ ದಮ೯ಪ್ಪರಿಂದ ಉದ್ಘಾಟಿಸಿದ್ದೆವು, ಆಗ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯ ಈ ಸಮಾವೇಷದ ರೂವಾರಿ ಕಿರಿಯ ಗೆಳೆಯ ಬಳ್ಳಿಬೈಲು ಮಂಜಪ್ಪ ಈಗ ಸಾಗರದಲ್ಲಿ ವಕೀಲರಾಗಿ ರಾಷ್ಟ್ರ ಮಟ್ಟದಲ್ಲಿ ಕುಣುಬಿ ಜನರ ಸಂಘಟನೆ ಮಾಡಿ ರಾಜ್ಯದಲ್ಲಿ ಕುಣುಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ.
  ಜೋಯಿಡಾ ತಾಲ್ಲೂಕಿನ ಬಹುಸಂಖ್ಯಾತ ಕುಣುಬಿ ಜನರ ಜನಜಾಗೃತಿಯ ಕಾಯ೯ಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ನಾವೆಲ್ಲ ಸೇರಿ 1997 ರಲ್ಲಿ ಶಿವಮೊಗ್ಗ ಜಿಲ್ಲಾ ಕುಣುಬಿ ಜನಾ೦ಗದ ಜಿಲ್ಲಾ ಸಮಾವೇಷ ಸಾಗರ ತಾಲೂಕು ಮತ್ತು ಭಟ್ಕಳದ ಅಂಚಿನ ಕೋಗಾರು ಸಮೀಪದ ದೇವಗಾರು ಎಂಬ ಕುಗ್ರಾಮದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಸಿದ್ದು ಒಂದು ದಾಖಲೆ.
  ತಾಲೂಕಿನ ಶರಾವತಿ ನದಿಯಾಚೆಯ ಕುಣುಬಿ ಜನವಸತಿ ಕೇಂದ್ರಗಳು ಮತ್ತು ಅವರ ಜಮೀನುಗಳು ಜೀವ ವೈವಿದ್ಯ ತಾಣ ಮತ್ತು ಸಿ೦ಗಳೀಕ ಅಭಯಾರಣ್ಯಕ್ಕಾಗಿ ರಾಜ್ಯ ಸಕಾ೯ರ ಮರಾಠಿ, ಆವಿಗೆ ಇತ್ಯಾದಿ ಗ್ರಾಮಗಳ ಸುಮಾರು 3800 ಎಕರೆ ಪ್ರದೇಶ ಅರಣ್ಯ ಎಂದು ಘೋಷಿಸಿ ಕುಣುಬಿ ಜನರ ಕೃಷಿ ಜಮೀನಿನ ಪಹಣಿಯಲ್ಲಿ ಅರಣ್ಯ ಎಂದು ಬದಲಿಸಿದೆ.
  2012ರಲ್ಲಿ ಈ ಬಗ್ಗೆ ಜನಜಾಗೃತಿ ಮಾಡಿ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗಳಿಗೆ ಆಗಿನ ಸಾಗರ ತಾಲ್ಲೂಕಿನ ಜಾತ್ಯಾತೀತ ಜನತಾದಳದ ಅಧ್ಯಕ್ಷನಾದ ನಾನು ಮತ್ತು ಸಾಗರ ಪಟ್ಟಿಣ ಜಾತ್ಯಾತೀತ ಜನತಾದಳದ ಅಧ್ಯಕ್ಷ ಮ೦ಜುನಾಥ್ ಸೇರಿಕೊಂಡು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀಕಾಂತ್ ಮೂಲಕ ಮನವಿ ಮಾಡಿದಾಗ ಸ್ಥಳಿಯ ರಾಜಕೀಯ ಪಕ್ಷಗಳು ನಮ್ಮನ್ನು ಗೇಲಿ ಮಾಡಿದ್ದವು ಮತ್ತು ಮುಗ್ದ ಕುಣುಬಿ ಜನ ಅವರನ್ನು ನಂಬಿದರು.
  ಇವತ್ತು ಆವಿಗೆ ಗ್ರಾಮದ ಜನಪರ ಹೋರಾಟಗಾರ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹಾಳಸಸಿ ಚಂದ್ರಕುಮಾರ್ ಜೈನ್ ಕುಣುಬಿ ಜನರ ಪಹಣಿ ಅರಣ್ಯ ಎಂದು ಬದಲಾದ ಸುದ್ದಿ ತಿಳಿಸಿದಾಗ ಬೇಸರ ಅನ್ನಿಸಿತು.
  ಸಿಂಗಳೀಕ ಸಂರಕ್ಷಣೆಯಷ್ಟೇ ವಿಶೇಷ ಕಾಳಜಿ ಈ ಗುಡ್ಡಗಾಡು ಜನಾಂಗವಾದ ಕುಣುಬಿ ಜನಾಂಗದ ಬಗ್ಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಅದನ್ನು ಸರ್ಕಾರದ ಗಮನ ಸೆಳೆಯಲಿಕ್ಕಾಗಿ ಈ ಭಾರಿಯ ಸಾಗರ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಾಕಿದ್ದಾರೆ.
   ಅರಣ್ಯ ನಾಶ ಮಾಡದ ಈ ಜನಾಂಗ ಎನ್ನುವುದಕ್ಕೆ ಇವರು ಸಂರಕ್ಷಿಸಿಕೊಂಡು ಬಂದಿರುವ ಗೆಡ್ಡೆ ಗೆಣಸುಗಳ ಅಮೂಲ್ಯ ಭಂಡಾರವೇ ಸಾಕ್ಷಿ ಆಗಿದೆ ಈ ಬಗ್ಗೆ ಜನಪರ ಸಂಘಟನೆಗಳು ಇವರಿಗೆ ದ್ವನಿಯಾಗಬೇಕಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ