Skip to main content

Blog number 1474. ಮಾವಿನ ಅಪ್ಪೆಮಿಡಿ ಶಿವಮೊಗ್ಗ ಜಿಲ್ಲೆಯಲ್ಲಿ ಇಲ್ಲವೇ ಇಲ್ಲ ಯಾಕೆ

https://youtu.be/6cQgjn0SC2k

#ಈ_ವರ್ಷ_ಶಿವಮೊಗ್ಗ_ಜಿಲ್ಲೆಯಲ್ಲಿ_ಅಪ್ಪೆಮಿಡಿ_ಇಲ್ಲವಾ?

#ಪರಿಸರ_ಅಸಮತೋಲನದಿಂದ_ಮಾವಿನ_ಹೂವು_ವಿಳಂಭ

#ಅಪ್ಪೆ_ಮಿಡಿಗೆ_ಜಿಐ_ಟ್ಯಾಗ್_12_ವಷ೯ದ_ಹಿಂದೆಯೇ_ದೊರಕಿದೆ.

#ಇನ್ನೂ_ಹದಿನೈದು_ದಿನ_ಕಾಯಬೇಕು_ಜೀರಿಗೆ_ಅಪ್ಪಮಿಡಿಗೆ .

#ಕಳೆದ_ವಷ೯_ಮಾರ್ಚ್_ಕೊನೆಗೆ_ಅಪ್ಪೆಮಿಡಿ_ಸಿಕ್ಕಿತ್ತು.

#ವಷ೯_ಪೂರ್ತಿ_ಊಟದ_ಜೊತೆ_ಉಪ್ಪಿನಕಾಯಿ_ನನಗೆ_ಬೇಕೇ_ಬೇಕು


   ನಮ್ಮ ಭಾಗದಲ್ಲಿ ಅಪ್ಪೆಮಿಡಿ ಕೊಯ್ದು ತಂದು ಮಾರಾಟ ಮಾಡುವ ಪ್ರಸಿದ್ಧರನ್ನು ಪೆಬ್ರುವರಿ ತಿಂಗಳಿಂದ ನೆನಪಿಸುತ್ತಿದ್ದೆ ಅವರೆಲ್ಲ ಇನ್ನೂ ಮಾವಿನ ಹೂವು ಆಗಿಲ್ಲ ಅನ್ನುತ್ತಿದ್ದರು.
   ಮಾರ್ಚ್ ತಿಂಗಳಲ್ಲಿ ಪುನಃ ನೆನಪು ಮಾಡಿದಾಗ ಅವರು ಹೇಳಿದ್ದು ಈ ಬಾರಿ ಒಂದೇ ಒಂದು ಮರದಲ್ಲೂ ಮಾವಿನ ಮಿಡಿ ಬಂದಿಲ್ಲ ಸಿಕ್ಕಿದರೆ ಮೊದಲಿಗೆ ನಿಮಗೆ ತಂದು ಕೊಡದೆ ಇರುವುದಿಲ್ಲ ಅಂದರು.
   ಕಳೆದ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಅಪ್ಪೆಮಿಡಿ ಚೆಟ್ಟು ಮಾಡಿ ಕಾರ ಹಾಕಿದ್ದ ನೆನಪು ಈ ವರ್ಷ ಏಪ್ರಿಲ್ 30 ಆದರೂ ಅಪ್ಪೆಮಿಡಿ ಇಲ್ಲ.
  ಬೆಳಗಾಂ ಬಾಗದಲ್ಲಿ ಮಾವಿನ ಹಣ್ಣಿನ ತೋಟದಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ಕಳೆದ ತಿಂಗಳೇ ಬಂದಾಗಿದೆ ಸಮೀಪದ ರಿಪ್ಪನ್ ಪೇಟೆ ಮಾವಿನ ಅಪ್ಪೆಮಿಡಿ ಮಾರಾಟದ ಕೇಂದ್ರವಾದರೂ ಅಲ್ಲಿ ಪ್ರತಿ ವರ್ಷದಂತೆ ಮಾರಾಟಕ್ಕೆ ಅಪ್ಪಿ ಮಿಡಿ ಬರುತ್ತಿಲ್ಲ.
    ಪಕ್ಕದ ಜಿಲ್ಲೆಯ ಲಭ್ಯವಿರುವ ಅಪ್ಪೆಮಿಡಿ ಮಾತ್ರ ಇಲ್ಲಿಗೆ ಮಾರಾಟಕ್ಕೆ ಬರುತ್ತದೆ ಅದನ್ನು ಉಪ್ಪಿನಕಾಯಿ ತಯಾರಕರು ಖರೀದಿಸುತ್ತಿದ್ದಾರೆ ಅನ್ನುವ ವದಂತಿ ಬೇರೆ ಬಂದಿದ್ದರಿಂದ ಈ ವಷ೯ದ ಮಾವಿನ ಮಿಡಿ ಉಪ್ಪಿನಕಾಯಿ ಆಸೆ ಬಿಟ್ಟಿದ್ದೆ ಆದರೂ ಅಪ್ಪೆಮಿಡಿ ಉಪ್ಪಿನಕಾಯಿ ಅಂದರೆ ನನಗೆ ಜೀವ ಆದ್ದರಿಂದ ಅರಸಾಳು ಬಾಗದಲ್ಲಿ (ಮಾಲ್ಗುಡಿ ರೈಲ್ವೆ ಸ್ಟೇಷನ್ ಖ್ಯಾತಿಯ ಊರು) ಸಿಗುವ ಅಪ್ಪೆಮಿಡಿಗೆ ಗೆಳೆಯರಿಂದ ಹೇಗಾದರೂ ಮಾಡಿ ತಲಾಷ್ ಮಾಡಿ ಕೊಡಿಸಲು ವಿನಂತಿಸಿದ್ದೆ.
   ನಿನ್ನೆ ಗೆಳೆಯರ ಸತತ ಪ್ರಯತ್ನದಿಂದ ಸ್ವಲ್ಪ ಅಪ್ಪೆಮಿಡಿ ಸಿಕ್ಕಿದೆ, ಬಹುಶಃ ಇಷ್ಟು ಶ್ರೇಷ್ಟವಾದ ಅಪ್ಪೆಮಿಡಿ ಹಿಂದಿನ ಯಾವ ವಷ೯ದಲ್ಲೂ ನನಗೆ ಸಿಕ್ಕಿರಲಿಲ್ಲ ಈ ಅಪ್ಪೆಮಿಡಿ ದೊರಕಿಸಿ ಕೊಟ್ಟ ಮಿತ್ರ ಮಂಡಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
   ಜೀರಿಗೆ ಅಪ್ಪೆಮಿಡಿ 15 ದಿನ ಕಾಯಿರಿ ಸಂಗ್ರಹಿಸಿ ಕೊಡುವ ಭರವಸೆಯೂ ಸಿಕ್ಕಿದೆ.
   ಈ ವಷ೯ ಶಿವಮೊಗ್ಗ ಜಿಲ್ಲೆಯ ತಾಪಮಾನ 40 ಡಿಗ್ರಿಗೆ ತಲುಪಿದೆ ಈ ಎಲ್ಲಾ ಪರಿಸರ ಅಸಮತೋಲನ ಶಿವಮೊಗ್ಗ ಜಿಲ್ಲೆಯಲ್ಲಿ ಮಾವಿನ ಪಸಲಿನ ಕೊರತೆಗೆ ಕಾರಣ ಇರಬಹುದು, ಕೆಲವೇ ಕೆಲವು ಮಾವಿನ ಮರದಲ್ಲಿ ತುಂಬಾ ವಿಳಂಭವಾಗಿ ಹೂವು ಆಗಿದೆ ಅದರ ಅಪ್ಪೆಮಿಡಿಗಳು ಮೇ ತಿಂಗಳ 15ರ ವರೆಗೆ ಕಾಯಬೇಕು ಈ ರೀತಿ ಮಾವಿನ ಮಿಡಿ ಕೊರತೆ ಆದ ವರ್ಷನೇ ಮಾವಿನ ಅಪ್ಪೆಮಿಡಿ ಉಪ್ಪಿನಕಾಯಿ ರುಚಿ ಜಾಸ್ತಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...