Skip to main content

Blog number 1476. ಕೊರಾನಾ ಲಾಕ್ ಡೌನ್ ಡೈರಿ - 2020. ಲೆಟರ್ ನಂಬರ್ 28 (1 - ಮೇ -2020)

#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_28
#ದಿನಾ೦ಕ_02_ಮೇ_2020

               
       ಈ ಕೊರಾನಾ ಸಂಕಷ್ಟದಲ್ಲಿ       ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ.

          #ಡಾ_ಟಿ_ಎಂ_ಎ_ಪೈ


   ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ, ಸಿಂಡಿಕೇಟ್ ಬ್ಯಾ೦ಕ್, ಉದಯವಾಣಿ ಪತ್ರಿಕೆ ಇವತ್ತು ಸಾವಿರಾರು ಕೋಟಿಯ ಪ್ರತಿಷ್ಟಿತ ಸಂಸ್ಥೆ.
  ಜನ ಹೇಳುವುದು ಇದು ಕಲ್ಲಿನ ಬೋಳು ಗುಡ್ಡ ಮಣ್ಣುಪಾಲು ಅಂತಿದ್ದರು ಅಲ್ಲಿ ಈ ಡಾಕ್ಟರ್ ಆಸ್ಪತ್ರೆ ಮಾಡುತ್ತಾರೆ ಅಂದಾಗ ಎಲ್ಲರೂ ಹಾಸ್ಯ ಮಾಡಿದ್ದರಂತೆ.
  ಇವತ್ತು ಇದು ಅಂತರಾಷ್ಟ್ರಿಯವಾಗಿ ಘನತೆ ಹೊಂದಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಕೇಂದ್ರವೂ ಆಗಿದೆ.
  ಕನಾ೯ಟಕ ರಾಜ್ಯದ ಮ೦ಗನ ಕಾಯಿಲೆಗೆ (kFD) ಇಲ್ಲಿ ಹೋದರೆ ಮಾತ್ರ ಬದುಕಿ ಬರುತ್ತಾರೆಂದರೆ ಇಲ್ಲಿನ ಚಿಕಿತ್ಸೆ ಬಗ್ಗೆ ಹೆಮ್ಮೆ ಪಡಬೇಕು.
  ಕೊರಾನ ಕಾಯಿಲೆ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆ ಸಕಾ೯ರಕ್ಕೆ ಬಿಟ್ಟುಕೊಟ್ಟ ಮೊದಲ ಸಂಸ್ಥೆ ಇದು.
  ಈಗಲೂ ಇಲ್ಲಿ ಆಥಿ೯ಕವಾಗಿ ದುಬ೯ಲರಿಗೆ ವಿಶೇಷ ಯೋಜನೆ ಪ್ಯಾಕೇಜ್ ಮತ್ತು ಆರೋಗ್ಯ ಕಾಡ್೯ ಗಳ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುತ್ತಾರೆ.
  ಇಲ್ಲಿನ ಸಾಮಾನ್ಯವಾಡ್೯ಗಳು ಬೇರೆ ಆಸ್ಪತ್ರೆಗಳ ವಿಶೇಷವಾಡ್೯ ಗೆ ಸಮವಾಗಿದೆ, ಇಂದಿನ ಕಾಪೊ೯ರೇಟ್ ಆಸ್ಪತ್ರೆಗಳ ಹಣದ ಹಪಾಹಪಿ, ರಾ೦ಗ್ ಡಯಾಗ್ನೈಸ್ ಇಲ್ಲಿಲ್ಲ.
  ನಮ್ಮ ತಂದೆ ನಾವು ಸಣ್ಣವರಿದ್ದಾಗ ಹೇಳುತ್ತಿದ್ದ ಘಟನೆ ನೆನಪಾಗುತ್ತೆ ನಮ್ಮ ಊರಿನ ಹಿರಿಯರಾದ ಪುಟ್ಟ ಶೇರೆಗಾರರ ಆರೋಗ್ಯ ಹದಗೆಟ್ಟಾಗ ಅವರನ್ನ ನಮ್ಮ ತಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರಂತೆ ಆಗ ದಿನಾ ಸಂಜೆ ವಯೋವೃದ್ಧರಾದ ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ಸುಮ್ಮನೆ ಒಂದು ಸುತ್ತು ಬರುತ್ತಿದ್ದರಂತೆ, ನಮ್ಮ ತಂದೆ ಅವರಿಗೆ ವಂದಿಸಿದಾಗ ಅವರು ಎಲ್ಲಿ೦ದ ಬ೦ದಿದ್ದು ಇತ್ಯಾದಿ ವಿಚಾರಿಸಿದ್ದರOತೆ ಆಗ ನಮ್ಮ ತಂದೆ ಇಷ್ಟು ಒಳ್ಳೆಯ ಚಿಕಿತ್ಸೆಯ ಆಸ್ಪತ್ರೆ ತಾವು ನಿಮಿ೯ಸಿದ್ದರಿಂದ ದೂರದ ನಮಗೆಲ್ಲರಿಗೂ ಅನುಕೂಲ ಆಯಿತು ಅಂದಾಗ ಅವರು ಒಂದು ಕಥೆ ಹೇಳಿದರOತೆ...
  ಒಬ್ಬ ಒಂದು ದೊಡ್ಡ ಮರವನ್ನು ಹತ್ತಿ ಅಲ್ಲಿ೦ದ ಹಾರುತ್ತೇನೆ ಅಂದಾಗ ಅಲ್ಲಿದ್ದವರೆಲ್ಲ ಹುಚ್ಚಾ ಬಿದ್ದು ಸಾಯುತ್ತೀಯ, ಕೈಕಾಲು ಮುರುದು ಕೊಳ್ಳುತ್ತೀಯ ಅಂತೆಲ್ಲ ಬೈಯ್ದರಂತೆ, ಆತ ಯಾರ ಮಾತು ಕೇಳದೆ ಆ ಮರದ ತುದಿಯಿ೦ದ ಹಾರಿ ಕುಪ್ಪಳಿಸಿ ಎದ್ದಾಗ ಅವನಿಗೆ ಹಾರದಂತೆ ಭಯ ಹುಟ್ಟಿಸಿದವರೆ ಓಡಿಬಂದು ಅವನಿಗೆ ಅಬಿನಂದಿಸಿ ಶೂರ ದೀರಾ ಅ೦ದರ೦ತೆ ಹಾಗೆ ಆಯಿತು ನನ್ನ ಜೀವನ ಅದರ ಭಾಗವೇ ಈ ಆಸ್ಪತ್ರೆ ಅಂದರಂತೆ.
  ಎಂತಹ ಜೀವನದ ಪಾಠ ಈ ಕಥೆಯಲ್ಲಿದೆ ಮತ್ತು ಅಂತಹ ಸಾದಕರ ಬಾಯಲ್ಲಿ ಬಂದದ್ದರ ಅಥ೯ ಕೂಡ ಸಣ್ಣದಲ್ಲ.
  ಈಗಲೂ ಇಂತಹ ಕನಸುಗಾರರ ಸಲಹೆ ಸಹಕಾರದಲ್ಲಿ ಸಕಾ೯ರ ಜನರಿಗೆ ಆರೋಗ್ಯ ನೀಡುವ ಯೋಜನೆಗಳನ್ನ ತಂದರೆ ಎಂತಹ  ಆರೋಗ್ಯ ತುತು೯ ಪರಿಸ್ಥಿತಿ ಸವಾಲು ಬಂದರೂ ಎದುರಿಸಲು ಸಾಧ್ಯವಿದೆ.
  ಡಾ.ಟಿ.ಎಂ.ಎ.ಪೈ ಸದಾ ಸ್ಮರಣಿಯರು ಅವರು ಕನಾ೯ಟಕದವರು ಎಂಬುದು ನಮಗೆಲ್ಲ ಹೆಮ್ಮೆಯಲ್ಲವೆ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...